ವಿಘ್ನ ನಿವಾರಕ ಸಿದ್ಧ ಪ್ರದಾಯಕ ಶರಣು ಸಿದ್ಧಿ ವಿನಾಯಕ


Team Udayavani, Aug 19, 2017, 1:47 PM IST

8.jpg

ವಿಘ್ನೇಶ್ವರ, ವಿಘ್ನನಿವಾರಕ, ವಿನಾಯಕ, ಗಣಪತಿ, ಗಜಾನನ ಎಂತೆಲ್ಲಾ  ಕರೆಸಿಕೊಳ್ಳುವ ಮಹಾಗಣಪತಿ ನೆಲೆಸಿರುವ ಪಾವನ ಪುಣ್ಯ ಕ್ಷೇತ್ರವೇ ಗೋಕರ್ಣ. ಈ ಮಹಾಗಣಪತಿ ದೇವಸ್ಥಾನದಿಂದ ಪ್ರಸಿದ್ಧ ಮಹಾಬಲೇಶ್ವರ  ದೇವಸ್ಥಾನವು ಅನತಿ ದೂರದಲ್ಲಿದೆ ಇಲ್ಲಿರುವ  ಗಣೇಶನನ್ನು ಸಿದ್ಧ  ಗಣೇಶ ಎಂತಲೂ ಕರೆಯಲಾಗುತ್ತದೆ. ಅತ್ಯಂತ ಪುರಾತನವಾದ ಈ ಗಣೆೇಶನ  ದೇವಾಲಯದ ಇನ್ನೊಂದು ವೈಶಿಷ್ಟ್ಯವೇನೆಂದರೆ  ಇಲ್ಲಿ  ಪ್ರತಿಷ್ಠಾಪಿತ‌ನಾಗಿರುವ  ಗಣೆೇಶನಿಗೆ  ಬರೀ ಎರಡು  ಕೈಗಳು  ಮಾತ್ರ  ಇವೆ.  ಪುರಾಣ ಪ್ರಸಿದ್ಧ‌ವಾದ  ಈ ದೇಗುಲದಲ್ಲಿ  ಗಣಪತಿ  ಬಂದು ನೆಲೆಸಲು ಕಾರಣ ತಿಳಿಸುವ ಒಂದು ಐತಿಹ್ಯವೇ ಇದೆ.

 ಸ್ಥಳ ಪುರಾಣ 
ಇಲ್ಲಿನ ಸ್ಥಳ  ಪುರಾಣ   ಈ ರೀತಿ ಇದೆ.  ಹಿಂದೆ ತ್ರೇತ್ರಾಯುಗದ ಸಮಯದಲ್ಲಿ   ರಾವಣನು  ಶಿವನನ್ನು  ಕುರಿತು ಘೋರ ತ‌ಪಸ್ಸನ್ನಾಚರಿಸುತ್ತಿದ್ದನು. ಅವನ  ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದಾಗ  ರಾವಣನು  ತನ್ನ  ತಾಯಿಗೋಸ್ಕರ  ಪೂಜಿಸಲು ಆತ್ಮಲಿಂಗವನ್ನು ಕೊಡುವಂತೆ ಶಿವನನ್ನು ಕೇಳಿಕೊಳ್ಳುತ್ತಾನೆ.   ಆಗ  ಶಿವ  “ತಥಾಸ್ತು’ ಅನ್ನುತ್ತಾನೆ. ಇದರಿಂದ ಚಿಂತಿತರಾದ ದೇವತೆಗಳು  ಆತ್ಮಲಿಂಗದ ಬಲದಿಂದ ರಾವಣನು ಇನ್ನಷ್ಟು  ಪರಾಕ್ರಮಶಾಲಿಯಾಗಿ  ತಮ್ಮನ್ನೆಲ್ಲಾ  ಸೋಲಿಸಿಬಿಡುತ್ತಾನೆ ಎಂಬ ಭಯದಲ್ಲಿ  ಅದನ್ನು  ತಪ್ಪಿಸಲು  ಗಣೇಶನ ಮೊರೆ ಹೋಗುತ್ತಾರೆ.   ಆಗ ಗಣೇಶನು  ಒಬ್ಬ  ಬ್ರಾಹ್ಮಣ  ಬಾಲಕನ  ರೂಪ ತಾಳಿ  ಈ ಕ್ಷೇತ್ರದಲ್ಲಿ  ಬಂದು ನಿಲ್ಲುತ್ತಾನೆ.   ರಾವಣನು  ಕೈಲಾಸದಿಂದ  ಆತ್ಮಲಿಂಗವನ್ನು  ಪಡೆದುಕೊಂಡು ಇದೇ ಮಾರ್ಗವಾಗಿ ಲಂಕೆಗೆ  ತೆರಳುತ್ತಿದ್ದಾಗ  ದೇವತೆಗಳು  ತಮ್ಮ ಪ್ರಭಾವದಿಂದ ಸೂರ್ಯನನ್ನು  ಮರೆಮಾಚಿ ಸಂಜೆಯ  ವಾತಾವರಣ ಸೃಷ್ಟಿ ಮಾಡುತ್ತಾರೆ. ಶಿವನ ಅನನ್ಯ ಭಕ್ತನಾಗಿದ್ದ ರಾವಣ ಸಂಧ್ಯಾವಂದನೆ ಮಾಡುವ  ಸಮಯವಾಯಿತು ಎಂದು ಭಾವಿಸುತ್ತಾನೆ. ಸಂಧ್ಯಾವಂದನೆಗೂ ಮೊದಲು ಸ್ನಾನ ಮಾಡಿ ಬರಲು ಹೊರಡುವ ಮುನ್ನ,  ಅಲ್ಲಿಯೇ  ನಿಂತಿದ್ದ ಬಾಲಕನಿಗೆ  ಆತ್ಮಲಿಂಗವನ್ನು  ಹಿಡಿದುಕೊಳ್ಳಲು  ಹೇಳಿ ಹೋಗುತ್ತಾನೆ.  ಬಾಲಕನ ರೂಪದಲ್ಲಿದ್ದ  ಗಣೇಶ ಮೂರು ಸಾರಿ ಕೂಗಿದಾಗ ನೀನು ಬರದಿದ್ದರೆ   ಈ ಲಿಂಗವನ್ನು  ಕೆಳಗಿಡುವುದಾಗಿ ಹೇಳಿಯೇ ಲಿಂಗವನ್ನು  ಹಿಡಿದುಕೊಳ್ಳುತ್ತಾನೆ.   ಸ್ವಲ್ಪ  ಸಮಯದಲ್ಲಿಯೇ  ಈ ಲಿಂಗ ತುಂಬಾ ಭಾರವಾಗಿದೆ. ನನಗೆ ಹಿಡಿದುಕೊಳ್ಳಲು ಕಷ್ಟವಾಗುತ್ತಿದೆ.  ಬೇಗ ಬಂದು ತೆಗೆದುಕೋ ಎಂದು ಕೂಗಿಕೊಳ್ಳುತ್ತಾನೆ. ಆಗ ತಾನೆ ಎರಡು ಮುಳುಗು ಹಾಕಿದ್ದ ರಾವಣ, ಲಿಂಗವನ್ನು ನೆಲಕ್ಕಿಡಬೇಡ ಎಂದು ಜೋರಾಗಿ ಕೂಗಿ ಹೇಳಿ, ಅವಸರದಲ್ಲೇ ಮೂರನೇ ಬಾರಿ ಮುಳುಗು ಹಾಕಿ ಓಡೋಡಿ ಬರುತ್ತಾನೆ. ಆ ವೇಳೆಗೆ ಬಾಲಕನ ರೂಪದಲ್ಲಿದ್ದ ಗಣಪತಿ, ಶಿವನ ಆತ್ಮಲಿಂಗವನ್ನು ನೆಲಕ್ಕ ಇಟ್ಟು ಬಿಡುತ್ತಾನೆ. ಈ ಅನಿರೀಕ್ಷಿತ ಘಟನೆಯಿಂದ ದಿಗೂ¾ಢನಾದ ರಾವಣ, ಲಿಂಗವನ್ನು ಎತ್ತಲು ಸಾಕಷ್ಟು  ಪ್ರಯತ್ನಿಸಿದರೂ ಲಿಂಗ ಮೇಲೇಳಲೇ ಇಲ್ಲ. ಇದರಿಂದ  ಕೋಪಗೊಂಡ ರಾವಣ ಬಾಲಕನ ರೂಪದಲ್ಲಿದ್ದ  ಗಣೇಶನ ತಲೆಯ ಮೇಲೆ ಜೋರಾಗಿ ಗುದ್ದುತ್ತಾನೆ. ಇನ್ನು  ಏನಾದರೂ ಅನಾಹುತ ನಡೆಯುತ್ತದೆಂದು ಎಲ್ಲ  ದೇವತೆಗಳೂ  ಪ್ರಕಟಗೊಳ್ಳುತ್ತಾರೆ.ಆಗ ರಾವಣ ಇದೆಲ್ಲಾ  ದೇವತೆಗಳೇ  ಆಡಿದ ನಾಟಕವೆಂದು ತಿಳಿದು ದುಃಖೀತನಾಗುತ್ತಾನೆ.ಅಲ್ಲದೇ ತಾನು ಹೊಡೆದದ್ದು ಶಿವನ ಪುತ್ರನಾದ ಗಣೇಶನಿಗೆ  ಎಂದು ತಿಳಿದು ಬೇಸರಗೊಂಡು ಹೊರಟುಹೋಗುತ್ತಾನೆ.ಆಗಿನಿಂದ ಇಲ್ಲಿಯೇ  ಇದೇ ರೂಪದಲ್ಲಿ  ನೆಲೆಸಿದ  ಗಣೇಶನ  ಈ ವಿಗ್ರಹ  ಅಪರೂಪವಾಗಿದ್ದು ಎರಡು ಕೈಗಳನ್ನುಮಾತ್ರ ಹೊಂದಿದೆ.  ಈ  ವಿಗ್ರಹದ ತಲೆಯ ಮೇಲೆ  ರಾವಣನು ಗುದ್ದಿದ  ಕುರುಹೂ ಇದೆ.ಈ ದೇಗುಲ ಪುಟ್ಟದಾದರೂ ಇದರ ಐತಿಹ್ಯ ಬಹಳ ಸ್ವಾರಸ್ಯಕರವಾಗಿದೆ.ಬೇಡಿ ಬಂದ ಭಕ್ತರಿಗೆ ಎಲ್ಲವನ್ನೂ  ಕರುಣಿಸುವ  ಇತನಿಗೆ ಸಿದ್ಧ ಗಣಪತಿ ಎಂದು ಕರೆಯಲಾಗುತ್ತದೆ.

ತಲುಪುವ  ಮಾರ್ಗ
ದೇಶದ ನಾನಾ ಭಾಗಗಳಿಂದ ಮಹಾಬಲೇಶ್ವರಕ್ಕೆ  ತಲುಪಲು  ಸಾಕಷ್ಟು ಬಸ್‌, ರೈಲು  ಸಂಪರ್ಕಗಳಿವೆ.ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾದ  ದಾಬೊಲಿಮ್‌ ವಿಮಾನ ನಿಲ್ದಾಣ.ಹತ್ತಿರದ ರೈಲು ನಿಲ್ದಾಣವೆಂದರೆ  ಗೋಕರ್ಣದಿಂದ  20 ಕಿ.ಮೀ ಅಂತರದಲ್ಲಿರುವ  ಅಂಕೋಲಾ.

 ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.