ಮೂಲಾ ನಕ್ಷತ್ರದವರಿಗೆ ನಿಜವಾಗಿಯೂ ತೊಂದರೆ ಇದೆಯಾ?


Team Udayavani, Apr 14, 2018, 2:30 PM IST

256.jpg

 ಮೂಲ ಎಂದರೆ ಎಲ್ಲಕ್ಕಿಂತ ಮೊದಲು ಎಂದರ್ಥ. ಎಲ್ಲಕ್ಕಿಂತ ಮೊದಲಲ್ಲಿ ಹಲವು ಅಡಚಣೆಗಳು ಪ್ರತಿಯೊಂದು ಕೆಲಸದಲ್ಲೂ ಇರುತ್ತವೆ. ಅದನ್ನು ನಿಗ್ರಹಿಸಿಕೊಳ್ಳುವ ಕ್ರಿಯಾಶೀಲತೆ ಜೊತೆಯಾದರೆ ಆರಂಭದ ಆಘಾತಗಳಿಂದ ಪಾರಾಗಲು ಸಾಧ್ಯವಿದೆ. ಹೆಣ್ಣು ಮೂಲಾ ನಕ್ಷತ್ರದಲ್ಲಿ ಜನಿಸಿದ್ದಾಳೆ ಎಂದ ಮಾತ್ರಕ್ಕೆ ಆಕೆಯಿಂದ ಒಂದಿಡೀ ಕುಟುಂಬಕ್ಕೆ ಕೆಡುಕಾಗುತ್ತದೆ ಎಂಬ ಮಾತಿಗೆ ಯಾವುದೇ ಅರ್ಥವಿಲ್ಲ, ಆಧಾರವೂ ಇಲ್ಲ….

  ವಾಸ್ತವಗಳು ಏನೋ ಇರುತ್ತವೆ. ನಂಬಿಕೆಗಳೂ ನಮ್ಮನ್ನು ಹಣ್ಣು ಮೂಡುತ್ತವೆ. ವಿಜ್ಞಾನಿಗಳು ಭೂಕಂಪ ನಡೆದಾಗ ಸುನಾಮಿ ಅಲೆಗಳು ಅಪ್ಪಳಿಸಬಹುದೆಂಬ ಸೂಚನೆ ಕೊಡುತ್ತಲೇ ಇರುತ್ತಾರೆ. ಕೊಟ್ಟ ಸೂಚನೆಗಳೆಲ್ಲ ನೂರಾರು ಸಲ ಸುಳ್ಳೇ ಆದ ಉದಾಹರಣೆಗಳು ಉಂಟು. ಇದರ ಅರ್ಥ ವಿಜ್ಞಾನವನ್ನು ಮೂರ್ಖತನದಿಂದ ಕೂಡಿದ, ಅಜ್ಞಾನದ ಪರಮಾವಧಿ ಮೊತ್ತವನ್ನು ನಮ್ಮ ಮೇಲೆ ಹೇರಿದ ಅನರ್ಥಕಾರಕ ವಿಚಾರ ಎಂದು ಮೂದಲಿಸಲಾಗದು. ಏಕೆಂದರೆ ಸಮುದ್ರದ, ಸಾಗರದ ಆಳದಿಂದ ಎದ್ದೇಳುವ ನೀರಿನ ಅಲೆಗಳನ್ನು ತಡೆಯುವ ದೈತ್ಯ ಶಕ್ತಿಯ  ವಿಚಾರವನ್ನು ವಿಜ್ಞಾನ ತಿಳಿದಿರುವುದಿಲ್ಲ. ಅದನ್ನು ತಿಳಿಯಲು ಅದು ಇನ್ನೂ ಸ್ವಲ್ಪ ಕಾಲವನ್ನು ತೆಗೆದು ಕೊಳ್ಳಬಹುದು. ಜ್ಯೋತಿಷ್ಯ ವಿಜ್ಞಾನವೂ ಹಲವಾರು ವಿಚಾರಗಳನ್ನು ಪ್ರತಿಪಾದಿಸಿದೆ. ನಷ್ಟ, ಕಷ್ಟ, ವ್ಯಕ್ತಿತ್ವಕ್ಕೆ ಧಕ್ಕೆ, ಸಾಲ, ಶೂಲ, ಅವಘಡ, ರೋಗ, ರುಜಿನ, ಬಂಧನ ಭಯ, ಧನ ನಷ್ಟ , ಏಳ್ಗೆಯೇ ಇರದ ಶುಷ್ಕ ಕಾಲಾವಧಿ, ಎಲ್ಲಾ ಇದ್ದೂ ಏನೂ ಇಲ್ಲ ಎಂದು ಸಂಚು ಹೂಡುವ ಏನೋ ಒಂದು ಪ್ರಾರಬ್ಧ, ಕೆಲವು ತೀವ್ರವಾದ  ದೋಷ, ಯಾರದೋ ಶಾಪ, ಆತ್ಮೀಯರ ಅಗಲುವಿಕೆ, ಕಟ್ಟ ಕಡೆಗೆ ವ್ಯಕ್ತಿಯ ಸಾವು ಸಂಭವಿಸಲಿದೆ ಎಂಬುದನ್ನೆಲ್ಲಾ ಮುಂಚೆ ತಿಳಿದು, ವಿಶ್ಲೇಷಿಸಿ, ಭಾರತೀಯ ಜ್ಯೋತಿಷ್ಯ ವಿಜ್ಞಾನ ತಿಳಿಸುತ್ತದೆ. ಇವು ಇನ್ನೂ ಕೆಲವು ಅನ್ಯಕಾರಣಗಳಿಂದ ಊಹಿಸಿದಂತೆ ಸಂಭವಿಸದೇ ಉಳಿದ ಉದಾಹರಣೆಗಳು ಇವೆ. ಹೀಗಂದ ಮಾತ್ರಕ್ಕೆ, ಜ್ಯೋತಿಷ್ಯ ವಿಜ್ಞಾನವನ್ನು ನಿರಾಕರಿಸುವುದು ಸೂಕ್ತವಲ್ಲ. 

 ಮೂಲ ನಕ್ಷತ್ರ ಕೇತು, ನಕ್ಷತ್ರ ದೇವತೆ
 ಮೂಲಾ ನಕ್ಷತ್ರದ ವ್ಯಾಪ್ತಿ ಧನಸ್ಸು ರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ. ಧನಸ್ಸು ಯುದ್ಧಗಳಿಂದಾಗಿ ಭಯವನ್ನು, ಆಯುಧವಾಗಿ ರಕ್ಷೆಯನ್ನೂ, ಯುದ್ಧ ಅಥವಾ ರಕ್ಷಣೆಯ ಸಂದರ್ಭದಲ್ಲಿ ಜೀವನಾಶವನ್ನಾಗಲೀ, ರಕ್ತಪಾತ, ನೋವು ಇತ್ಯಾದಿಗಳನ್ನು ಉಂಟು ಮಾಡುವುದರಿಂದ ಇದು ಅಗ್ನಿ ರಾಶಿ. ಆದರೆ ಈ ರಾಶಿಯ ಯಜಮಾನ, ಜ್ಞಾನಕ್ಕೆ ಕಾರಣನಾಗಿರುವ ಸಂತಾನಕ್ಕೆ ಕೊಂಡಿ ಕೂಡಿಸುವ, ಧನಾಗಮನಕ್ಕೆ ಸಿದ್ಧಿ ಕೊಡುವ, ವಿಕೃತಿಗಳನ್ನು ಆಕೃತಿಗೆ ತಂದು ನಿಲ್ಲಿಸುವ ಗುರು. ಗುರುವು ಒಡೆಯನಾದ ಈ ರಾಶಿಯ ಒಟ್ಟೂ ಕ್ಷೇತ್ರ ವ್ಯಾಪ್ತಿ 30 ಡಿಗ್ರಿಗಳಲ್ಲಿ ಮೊದಲು 13 ಅಂಶ, 30 ಕಲೆಗಳನ್ನು ಮೂಲಾ ನಕ್ಷತ್ರ ಹೊಂದಿರುತ್ತದೆ. ಮೂಲಾ ನಕ್ಷತ್ರವು ಸ್ತ್ರೀಯರ ಪಾಲಿಗೆ ಒಳಿತಿನ ನಕ್ಷತ್ರವಲ್ಲ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಪ್ರತಿಪಾದಿಸುತ್ತದೆ ಎಂದು ಹಲವರು ಹೇಳುತ್ತಾರೆ. ಮೂಲಾ ನಕ್ಷತ್ರದ ಹುಡುಗಿ ಮಗನಿಗೆ ಮದುವೆಯಾಗಿ ಬಂದರೆ ಅತ್ತೆ-ಮಾವನ ಜೀವಕ್ಕೆ ಕೇಡು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ ಎಂಬುದು ಸತ್ಯ. ಆದರೂ ವಾಸ್ತವವಾಗಿ, ಇನ್ನಿತರ ಎಷ್ಟೋ ಕಾರಣಗಳಿಂದ ದೋಷಗಳು ನಿವಾರಣೆ ಆಗುತ್ತವೆ ಎಂಬುದೂ ಅಷ್ಟೇ ಸತ್ಯ. ಮೊತ್ತ ಮೊದಲಾಗಿ ಮೂಲಾ ನಕ್ಷತ್ರದ ಸೊಸೆಯಂದಿರು ತಾವು ಮದುವೆಯಾಗಿ ಬಂದ ಮನೆಯ ಆರ್ಥಿಕ ಬಲಾಡ್ಯತೆಯನ್ನು, ಸಂಸಾರದೊಳಗಿನ ಸಂತೋಷವನ್ನು ಜಾಸ್ತಿ ಮಾಡಿದ ಉದಾಹರಣಗಳೇ ಹೇರಳವಾಗಿವೆ. ಕಾರಣ ಇಷ್ಟೇ, ಮೂಲಾ ನಕ್ಷತ್ರವನ್ನು ಒಳಗೊಳ್ಳುವ ಮನೆಯಾದ ಧನಸ್ಸು ರಾಶಿಯ ಅಧಿಪತಿ ಗುರುವು ದುರುಂತಗಳನ್ನು ತಪ್ಪಿಸುವುದು ಮಾತ್ರವಲ್ಲ; ತನ್ನ ಶಕ್ತಿ ಪ್ರಭಾವಗಳಿಂದ ಮೂಲಾ ನಕ್ಷತ್ರದ ದೋಷಗಳನ್ನು ನಿಯಂತ್ರಿಸುತ್ತಾನೆ. ತನ್ನದೃಷ್ಟಿಯ ಫ‌ಲವಾದ ಸಾಮರ್ಥಯಗಳ ಮೂಲಕ ಸಕಾರಾತ್ಮಕ ಪರಿಣಾಮಗಳನ್ನೂ ಒದಗಿಸುತ್ತಾನೆ. ಗುರು ಹಾಗೂ ಕೇತು ಶಾಂತಿಯನ್ನು ಮಾಡಿಸುವುದರ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಗುರು ಹಾಗೂ ಕೇತು ತೀರಾ ನಿವಾರಣಾ ಸ್ತೋತ್ರ ಪಠಣಗಳ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಗುರುವೂ, ಕೇತುವೂ  ಬಲಯುತರಾಗಿ ಇದ್ದಾಗ, ಗುರು ಶಾಂತಿ, ಕೇತು ಶಾಂತಿಯೂ ಆದಾಗ ನಕ್ಷತ್ರ ದೇವತೆ ನಿಯತಿಯ ದೋಷಗಳೂ ಕರಗಿ, ಹೊಸ ಬದಲಾವಣೆಗೆ ತೆರೆದುಕೊಳ್ಳಲು ಸಹಾಯವಾಗುತ್ತದೆ. 

  ಅಲಕ್ಷ್ಮೀ ಮತ್ತು ಮೂಲಾ ನಕ್ಷತ್ರ
 ನಮ್ಮಲ್ಲಿ ಅಲಕ್ಷ್ಮೀ  ಎಂಬ ಪದ ಒಮ್ಮೊಮ್ಮೆ ಭಾರೀ ಸದ್ದು ಮಾಡುತ್ತಿರುತ್ತದೆ. ಲಕ್ಷ್ಮೀ ಎಂಬುದು ಇದೆ. ಇವಳೇ ಮಹಾಮಾಯೆ. ಜಗತ್ತಿನ ಜನನಕ್ಕೆ ಕಾರಣಳಾಗಿ, ಇಂಥ ಒಂದು ಬೃಹತ್‌ ವಿಶ್ವವನ್ನು ತನ್ನ ಮಾಯೆಯಿಂದ ಸೃಷ್ಟಿಗೊಳಿಸಿದ ಮಹಾನ್‌ ತಾಯಿ  ಇವಳು. ಇವಳೇ ಪ್ರಚಂಡ ಶಕ್ತಿಯಾಗಿ, ಮಾತೆಯಾಗಿ,  ಹರಿಹರ ಬ್ರಹ್ಮಾದಿಗಳು ಅಣುವಿನ ರೂಪದಲ್ಲಿದ್ದ ತ್ರೀಮೂರ್ತಿಗಳನ್ನು ವಿರಾಟ್‌ ಸ್ವರೂಪಕ್ಕೆ ಹಿಗ್ಗಿಸಿದವಳು ಎಂಬ ವಿಸ್ತಾರವಾದ ವಿವರಣೆ ನಮ್ಮ ಪುರಾಣಗಳಲ್ಲಿ ಬರುತ್ತದೆ. ಇವಳು ಶಂಖ, ಚಕ್ರ, ಗದಾ ಹಸ್ತಳಾಗಿದ್ದಾಳೆ ಎಂಬುದು ನಮ್ಮ ಭಾರತೀಯ ಆಷೇìಯವಾದ ನಂಬಿಕೆ ಇದೆ.   ಜಗತ್ತಿನಲ್ಲಿ ಸಕಲ ಗ್ರಹ, ನಕ್ಷತ್ರಾದಿಗಳ ಚಲನಶೀಲತೆಯ ವೇಗದಿಂದಾಗಿ ಒಂದು ರೀತಿಯ ಶಂಖನಾದ ಕೇಳಿ ಬರುತ್ತದೆ. ಸೂರ್ಯನ ಪರಿಭ್ರಮಣದ ಸುತ್ತಲಿನ ಬಿರುಸತನದ ಕಾರಣವಾಗಿ, ಸೂರ್ಯನ ಮೂಲಕವೇ ಓಂ ಎನ್ನುವ ಶಬ್ದ ಚೈತನ್ಯದ ಮೂಲಕ ಚಿಮ್ಮಿಕೊಳ್ಳುತ್ತದೆ ಎಂಬುದನ್ನು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ  ಇತ್ತೀಚೆಗೆ ತನ್ನ ವರದಿಯಲ್ಲಿ ತಿಳಿಸಿದೆ. ವಿಜ್ಞಾನದ ಸಂಶೋಧನೆಗಳು ಆಶ್ಚರ್ಯಕಾರಕ ರೀತಿಯಲ್ಲಿ ಭಾರತೀಯರು ನಂಬಿದ ವಿಚಾರಗಳನ್ನೇ ಪ್ರಪಂಚದ, ವಿಶ್ವದ ವಿಚಾರವಾಗಿ ಹೌದು, ಇದು ಸತ್ಯ ಎಂಬಂತೆ ಆಗಾಗ ಹೊರ ಹಾಕುತ್ತಿರುತ್ತವೆ. 

  ಅಲಕ್ಷ್ಮೀ ಎಂಬ ಕಲ್ಪನೆಯನ್ನು ಕೂಡ ಕ್ರಿಯಾಶೀಲತೆಯಿಂದ ಇರದಿದ್ದರೆ ಲಕ್ಷ್ಮೀಯೇ ಅಲಕ್ಷ್ಮೀಯಾಗಿ ದರಿದ್ರವು ಆವರಿಸಿಕೊಳ್ಳುತ್ತದೆ ಎಂಬುದನ್ನು ವ್ಯಾಖ್ಯಾನಿಸಿದೆ. ಹೊರತೂ ಅಲಕ್ಷ್ಮೀ ಎಂಬುದು ವಾಸ್ತವದಲ್ಲಿ ಇಲ್ಲ. ನಮ್ಮ ದುರಾದೃಷ್ಟಗಳೆಲ್ಲ ಅಲಕ್ಷ್ಮೀ ಎಂಬ ಶಬ್ದದಿಂದ ಗುರುತಿಸಲ್ಪಟ್ಟಿದೆ. ಮೂಲ ನಕ್ಷತ್ರದ ದೇವತೆ, ನಿಯತಿ ಎಂಬ ದೇವತೆ ಹೌದು. ಆದರೆ ಅದು ಅಲಕ್ಷ್ಮೀಯಲ್ಲ. ಮೂಲ ಎಂದರೆ ಎಲ್ಲಕ್ಕಿಂತ ಮೊದಲು ಎಂದರ್ಥ. ಎಲ್ಲಕ್ಕಿಂತ ಮೊದಲಲ್ಲಿ ಕೆಲವು ಅಡಚಣೆಗಳು ಎಲ್ಲಾ ಕೆಲಸದಲ್ಲೂ ಇರುತ್ತದೆ. ಅದನ್ನು ತೊಡೆದು ಒಳಿತಿಗೆ ದಾರಿ ಮಾಡಿಕೊಳ್ಳುವ ಕ್ರಿಯಾಶೀಲತೆ ಜೀವನ ಶೈಲಿಯಲ್ಲಿ ಸಮ್ಮಿಳಿತವಾದಾಗ ಹೆಣ್ಣು ಮೂಲಾ ನಕ್ಷತ್ರದಲ್ಲಿ ಜನಿಸಿದ ಮಾತ್ರಕ್ಕೆ ಕೆಟ್ಟದ್ದನ್ನು, ಅತ್ತೆ ಮಾವಂದಿರ ಸಾವನ್ನು, ಗಂಡನ ಸಹೋದರರಿಗೆ ಕೇಡನ್ನು ತರುವುದಿಲ್ಲ. ಗುರು ಹಾಗೂ ಇತರ ಉತ್ತಮ ಯೋಗಕಾರಕ ಗುರುಗಳು ಅಕಸ್ಮಾತ್ತಾಗಿ ದೋಷ ( ದೋಷ ಒದಗುವುದು ಶೇ. ನೂರರಲ್ಲಿ ತೀರಾ ಎಂದರೂ ತೀರಾ ಸಣ್ಣ ಭಾಗ) ಒದಗಿದರೂ ತೊಡೆದು ಹಾಕುವ ಶಕ್ತಿ ಪಡೆದಿರುತ್ತಾರೆ. 

 ಸುನಾಮಿ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತವೆ ಎಂಬ ಎಚ್ಚರಿಕೆಯಂತೆ. ಆದರೆ ಸುನಾಮಿಯನ್ನು ತಡೆಯುವ ಶಕ್ತಿಗಳು ಇನ್ನೆಷ್ಟೋ ಕಾರ್ಯಕಾರಣ ಸಂಬಂಧಗಳಿಂದ ನಿಷ್ಕ್ರಿಯವಾಗುತ್ತವೆ. ಮೂಲಾ ನಕ್ಷತ್ರದ ದೋಷಗಳೂ ಕೂಡ ಇದೇ ರೀತಿ ಅನ್ಯ ಅನೇಕ, ಅಧಿಕ ಸಂಯೋಜನೆಗಳ ಫ‌ಲವಾಗಿ ಜಾತಕದಲ್ಲಿ ನಿವಾರಣೆ ಆಗಿರುತ್ತದೆ. ಸೂಕ್ತವಾದುದನ್ನು ಗ್ರಹಿಸಿ ಹೇಳುವ ಜ್ಯೋತಿಷಿ ದೋಷಗಳು ಪರಿಹಾರವಾಗಿವೆ ಎಂಬುದನ್ನು ಗುರುತಿಸಿ ಹೇಳಬಲ್ಲ. ಸೂಕ್ತ, ಸರಳ, ಹೊರೆಯಾಗದ ಪರಿಹಾರಗಳ ಬಗೆಗೂ ಬೆಳಕು ಚೆಲ್ಲಬಲ್ಲ. 

ಅನಂತ ಶಾಸ್ತ್ರಿ 

ಟಾಪ್ ನ್ಯೂಸ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.