ಭಿನ್ನಮತ ಕರಗಿಸಿದ ಮದುವೆ
Team Udayavani, Sep 18, 2017, 7:30 AM IST
ಚೆನ್ನೈ: ತಮಿಳುನಾಡಿನ ರಾಜಕೀಯವೇ ಅಂಥಾದ್ದು. ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ರಾಜಕೀಯ ಲಾಭಶೋಧಿಸಿ, ಅದನ್ನು ಸಾಧಿಸುತ್ತಾರೆ. ಎಐಡಿಎಂಕೆಯ ಭಿನ್ನಮತೀಯ ನಾಯಕ ಟಿ.ಟಿ.ವಿ.ದಿನಕರನ್ ಬಣದ ಪ್ರಭಾವಿ ನಾಯಕ ಎನ್.ತಲವಿ ಸುಂದರಂ ಅವರನ್ನು ತಮ್ಮ ಬಳಿಗೆ ಸೆಳೆಯುವಲ್ಲಿ ಸಿಎಂ ಪಳನಿಸ್ವಾಮಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಅವರು ಬಳಕೆ ಮಾಡಿಕೊಂಡದ್ದು ಸುಂದರಂ ಪುತ್ರಿಯ ಮದುವೆ!
ದಿನಕರನ್ ಬಣದ 19 ಮಂದಿ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಮೇಲೆ ವಿಶ್ವಾಸ ಕಳೆದುಕೊಂಡಿ ರುವುದಾಗಿ ಹೇಳಿ ದೂರು ಸಲ್ಲಿಸಲು ತೆರಳಬೇಕಾಗಿತ್ತು. ಆದರೆ ಕೆಲವೊಂದು ತಾತ್ವಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸುಂದರಂ ಅವರು ಶಾಸಕರ ನಿಯೋಗದ ಜತೆಗೆ ತೆರಳಿರಲಿಲ್ಲ. ಇದರಿಂದ ಕ್ರುದ್ಧಗೊಂಡ ದಿನಕರನ್ ಹೊಸದಿಲ್ಲಿಯಲ್ಲಿ ತಮಿಳುನಾಡಿನ ಶಾಶ್ವತ ರಾಯಭಾರಿ ಸ್ಥಾನದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಸುಂದರಂ ಅವರು ಮುಖ್ಯಮಂತ್ರಿ ಪಳನಿ ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು. ಆದರೆ ಪಳನಿ ಅವರು ಅದನ್ನು ಸ್ವೀಕರಿಸದೆ ಹರಿದು ಹಾಕಿದರು.
ಅಷ್ಟೇ ಅಲ್ಲ, ನೀವು ಮೊದಲು ನಿಮ್ಮ ಪುತ್ರಿಯ ಮದುವೆಯ ಕೆಲಸದಲ್ಲಿ ನಿರತರಾಗಿ. ಸದ್ಯಕ್ಕೆ ಪಕ್ಷದ ಬೆಳವಣಿಗೆ ಬಗ್ಗೆ ಯೋಚಿಸುವುದು ಬೇಡ ಎಂದು ಹೇಳಿ ಕಳುಹಿಸಿದ್ದರು. ಜತೆಗೆ ಸೆ.8, 10ರಂದು ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಸಿಎಂ ಪಳನಿ ಅವರು ಪನ್ನೀರ್ ಸೇರಿ ಸಂಪುಟ ಸದಸ್ಯರ ಸಮೇತ ತೆರಳಿ ಆಶೀರ್ವದಿಸಿದ್ದರು. ಇದರಿಂದ ಸಂತೋಷಗೊಂಡ ಸುಂದರಂ ಬಂಡಾ ಯದ ಯೋಚನೆ ಕೈಬಿಟ್ಟು ಸುಮ್ಮನಾಗಿ ದ್ದಾರೆ. ಅತ್ತಕಡೆ ದಿನಕರನ್ಗೆ ಮರ್ಮಾಘಾತ ನೀಡುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್
MUST WATCH
ಹೊಸ ಸೇರ್ಪಡೆ
Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…
Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶುಕ್ತಿಜಾ
KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್