ಸಿಂಪಲ್ ಆಗಿ ವೆಜಿಟೆಬಲ್ ಮಂಚೂರಿಯನ್ ಮಾಡೋದು ಹೇಗೆ ?
Team Udayavani, Aug 25, 2018, 5:14 PM IST
ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ವೀಕೆಂಡ್ಗೆ ಮನೆಯಲ್ಲೇ ಕೂತು ಚೈನೀಸ್ ಫುಡ್ ತಿನ್ನಬೇಕು ಎಂಬ ಆಸೆ ನಿಮಗಾಗಿದ್ದರೆ ವೆಜಿಟೆಬಲ್ ಮಂಚೂರಿಯನ್ ತಯಾರಿಸಿ ನೋಡಿ ತುಂಬಾ ಸಿಂಪಲ್. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ವೆಜಿಟೆಬಲ್ ಮಂಚೂರಿಯನ್ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ…
ಬೇಕಾಗುವ ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಕ್ಯಾಬೇಜ್, ಕಾಲಿಫ್ಲವರ್, ಈರುಳ್ಳಿ ಹೂವು ಒಟ್ಟಿಗೆ 3 ಕಪ್,ಕಾನ್ಫ್ಲೋರ್ 2 ದೊಡ್ಡ ಚಮಚ, ಮೈದಾ 2 ದೊಡ್ಡ ಚಮಚ, ಉಪ್ಪು ರುಚಿಗೆ.
ಮಾಡುವ ವಿಧಾನ:
ತರಕಾರಿಗೆ ಉಪ್ಪು ಸೇರಿಸಿ ಬೆರಸಿ ಕಾನ್ಫ್ಲೋರ್, ಮೈದಾ ಹಾಕಿ ಗಟ್ಟಿಯಾಗಿ ವಡೆ ಹಿಟ್ಟಿನಂತೆ ಕಲಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಲಸಿಟ್ಟ ತರಕಾರಿ ಮಿಶ್ರಣವನ್ನು ದೊಡ್ಡ ನೆಲ್ಲಿಕಾಯಿ ಗಾತ್ರದಲ್ಲಿ ಬಿಸಿ ಎಣ್ಣೆಗೆ ಬಿಡಿ. ಗರಿಗರಿಯಾಗಿ ಕರಿದು ಎಣ್ಣೆ ಬಸಿದು ಎತ್ತಿಡಿ. ಕರಿದ ವಡೆಗಳನ್ನು (ವೆಜ್ಬಾಲ್ಸ್)ಗೆ ಹಾಕಿಡಿ.
ಮಂಚೂರಿಯನ್ ಸಾಸ್ಗೆ ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ 2 ದೊಡ್ಡ ಚಮಚ, ವಿನೆಗರ್ 2 ದೊಡ್ಡಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ 1 ದೊಡ್ಡ ಚಮಚ, ಸಣ್ಣಗೆ ಹೆಚ್ಚಿದ ಶುಂಠಿ 1 ದೊಡ್ಡ ಚಮಚ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 1ಚಮಚ, ಸೋಯಾ ಸಾಸ್ 2 ದೊಡ್ಡ ಚಮಚ.,ಸೂಪ್ ಕ್ಯೂಬ್ಸ್ 3, ಎಣ್ಣೆ 2 ದೊಡ್ಡ ಚಮಚ, ರೆಡ್ ಚಿಲ್ಲಿ ಸಾಸ್ 3 ಚಮಚ, ಟೊಮೆಟೊ ಕೆಚಪ್ 2 ಚಮಚ, ಕಾನ್ಫ್ಲೋರ್ 2 ದೊಡ್ಡ ಚಮಚ, ಮತ್ತು ನೀರು 4 ಕಪ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ.
ಮಾಡುವ ವಿಧಾನ:
ನೀರು ಮತ್ತು ಕಾನ್ಫ್ಲೋರ್ ಬೆರಸಿಡಿ. ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿಕಾಯಿ ಹಾಕಿ ಕೈಯಾಡಿಸಿ ಬಾಡಿದರೆ ಸಾಕು. ತದನಂತರ ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ವಿನೇಗರ್ ಮಿಕ್ಸ್ ಮಾಡಿ. ನೀರು , ಕಾನ್ಫ್ಲೋರ್ ಮಿಶ್ರಣ ಮತ್ತು ಸೂಪ್ ಕ್ಯೂಬ್ಸ್ ಹಾಕಿ ಕುದಿಸಿ. ತದನಂತರ ಫ್ರೈ ಮಾಡಿಟ್ಟ ತರಕಾರಿ ಉಂಡೆ ಹಾಕಿ ಮಿಕ್ಸ್ ಮಾಡಿ ನಂತರ ಕೊತ್ತಂಬರಿ ಸೊಪ್ಪಿನ ಚೂರು ಹಾಕಿದರೆ ವೆಜಿಟೆಬಲ್ ಮಂಚೂರಿಯನ್ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್