ನಿಮ್ಮ ಬಾಯ್‌ಫ್ರೆಂಡ್‌ಗೆ ಒಂದು ಟೆಸ್ಟ್‌


Team Udayavani, Feb 14, 2018, 11:45 AM IST

by-fr.jpg

ಪ್ರೀತಿ ಆಯ್ತು. ಅವನೊಂದಿಗೆ ಕೈಕೈ ಹಿಡಿದು ಸುತ್ತಾಡಿದ್ದೂ ಆಯ್ತು. ಮಾಲ್‌ನಲ್ಲಿ ಸಿನಿಮಾ ನೋಡುತ್ತಾ, ಭುಜಕ್ಕೆ ಭುಜ ಆನಿಸಿ ಪಾಪ್‌ಕಾರ್ನ್ ತಿಂದಿದ್ದೂ ಆಯ್ತು. ಈಗ ಈಕೆಯ ಹೃದಯದಲ್ಲಿ ಪ್ರೀತಿ ಮಾಗಿದೆ. ಅದನ್ನು ಸಾವಿರ ಸಲ ಅವನಲ್ಲಿ ಹೇಳಿಕೊಂಡಿದ್ದಾಳೆ ಕೂಡ. ಆದರೆ ಆತನದ್ದು ಒಂದೇ ರಾಗ, “ಇಷ್ಟು ಬೇಗ ಮದ್ವೆ ಬೇಡ’ ಅಂತ. ಆಕೆಯ ಎದೆಯಲ್ಲಿ ಢವಢವ. ಇವನ ಪ್ರೀತಿ ನಿಜನಾ? ಇಲ್ಲಾ ಕೈ ಕೊಡ್ತಾನಾ? ಇಂಥ ವೇಳೆ ಬಾಯ್‌ಫ್ರೆಂಡ್‌ ಅನ್ನು ಟೆಸ್ಟ್‌ ಮಾಡೋದು ಹೇಗೆ? ಇಲ್ಲಿವೆ ಕೆಲವು ಟೆಕ್ನಿಕ್ಸ್‌…

1. ಅವನ ಫ್ಯಾಮಿಲಿ ಪ್ರೋಗ್ರಾಮ್‌ಗೆ ನೀವು ಆಹ್ವಾನಿತರಲ್ಲವೇ?
ಒಂದು ವೇಳೆ ನಿಮ್ಮ ಪ್ರೀತಿಯನ್ನು ಆತ ಗೌರವಿಸಿದ್ದೇ ಆದಲ್ಲಿ, “ಇವಳೂ ನನ್ನ ಕುಟುಂಬದ ಭಾಗ’ ಎಂದು ನಿಮ್ಮನ್ನು ಗೌರವಿಸುತ್ತಿರುತ್ತಾನೆ. ಆತನ ಕುಟುಂಬದ ಯಾವುದೇ ಶುಭಸಮಾರಂಭದಲ್ಲೂ ನಿಮ್ಮ ಉಪಸ್ಥಿತಿಯನ್ನು ಬಯಸುತ್ತಿರುತ್ತಾನೆ. ಇಲ್ಲ ಹುಡುಗನ ಮನೇಲಿ ಏನ್‌ ಕಾರ್ಯಕ್ರಮ ನಡೀತೋ ನಂಗೆ ಗೊತ್ತೇ ಇಲ್ಲ ಅಂತ ನೀವಿದ್ದರೆ, ಆತನ ಪ್ರೀತಿಯನ್ನು ಒರೆಗೆ ಹಚ್ಚುವುದು ಒಳ್ಳೇದು.

2. ಭವಿಷ್ಯದ ಬಗ್ಗೆ ಹೇಳಿಕೊಳ್ಳುತ್ತಿಲ್ಲವೇ?
ನೀನು ಚಿನ್ನ, ನೀನು ರನ್ನ, ನಿನ್ನ ಕಣ್ಣು ಐಶ್ವರ್ಯಾ ರೈ ಥರಾ ಇದೆ… ಹೀಗೆಲ್ಲ ಹೊಗಳಿ ಆತ ಅಟ್ಟಕೇರಿಸುತ್ತಿದ್ದಾನಾ? ಸಂತೋಷ. ಆದರೆ, ಒಂದು ಅನುಮಾನವೂ ಇರಲಿ. ಯಾಕೆ ಗೊತ್ತಾ? ಮದುವೆಯಾಗ ಬಯಸುವ ಹುಡುಗರು ಯಾವತ್ತೂ ಭವಿಷ್ಯದ ಕನಸುಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿರುತ್ತಾರೆ.

3. ನಿಮ್ಮ ಕನಸಿನ ಭಾಗವಾಗಿದ್ದಾನಾ?
ಆತನ ಕೈಕೈ ಹಿಡಿದು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿಕೊಳ್ತೀರಿ, ಕೆಲಸದ ಬಗ್ಗೆ ಹೇಳಿಕೊಳ್ತೀರಿ, ನಾಳೆ ನಾನು ಹೀಗಿರಬೇಕು- ಹಾಗಿರಬೇಕು ಅಂತೆಲ್ಲ ಕನಸುಗಳನ್ನು ಅವನೆದುರು ಹರವಿಡುತ್ತೀರಿ. ಹೀಗೆಲ್ಲ ಹೇಳುವಾಗ ಆತ ಇದಕ್ಕೆ ಸ್ಪಂದಿಸುತ್ತಿದ್ದಾನಾ? ಗಮನಿಸಿ. ಇದಕ್ಕೆ ಪೂರಕವಾಗಿ ಮಾತಾಡುತ್ತಿದ್ದಾನಾ? ನೋಡಿ. ಇಲ್ಲಾಂದ್ರೆ, ಆತ ಕೈಕೊಡಲು ಅರ್ಹ.

4. ಅವನೇನಾದ್ರು ಬಚ್ಚಿಡ್ತಿದ್ದಾನಾ?
ಆತ ತನ್ನ ಅಕ್ಕ- ತಂಗಿಯರು, ಗೆಳೆಯ- ಗೆಳತಿಯರ ಎದುರು “ಇವಳು ನನ್ನ ವುಡ್‌ಬಿ. ಇವಳನ್ನು ನಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದೀನಿ, ಮುಂದೆ ಮದ್ವೆ ಆಗ್ತಿàನಿ’ ಅಂತ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾನಾ? ಒಂದು ವೇಳೆ ತನ್ನ ಪ್ರೇಮವನ್ನು ನಿಗೂಢವಾಗಿ ಇಟ್ಟಿದ್ದಾನೆ ಅಂತಾದರೆ, ಕಿವಿಹಿಂಡಿ ಬುದ್ಧಿ ಹೇಳಿ. ಪ್ರೀತಿಯನ್ನು ಗಟ್ಟಿ ಮಾಡಿಕೊಳ್ಳಿ.

5. ಗಂಡನ ಗುಣಗಳು ಅವನಲ್ಲಿ ಕಾಣುತ್ತಿವೆಯಾ?
ನೀವು ಪ್ರೀತಿಸುತ್ತಿರುವ ಹುಡುಗನೊಳಗೆ ಒಬ್ಬ ಆದರ್ಶ ಗಂಡನ ವ್ಯಕ್ತಿತ್ವವನ್ನು ಹುಡುಕುವ ಪ್ರಯತ್ನ ಮಾಡಿ. ಆತನ ಪ್ರತಿ ನಡತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿರಿ. ಇಲ್ಲಾ, ಇವನು ಪ್ರೀತಿ ಅಂತ ಹೇಳಿ ನಾಟಕ ಆಡ್ತಿದ್ದಾನೆ ಅಂತನ್ನಿಸಿದರೆ, ಆದಷ್ಟು ಬೇಗ ಆ ಸುಳಿಯಿಂದ ಹೊರಬನ್ನಿ.

6. ಲಿವ್‌ ಇನ್‌ ಅಂತ ಕತೆ ಹೊಡೀತಾನಾ?
ನೀವು ಇಷ್ಟಪಟ್ಟ ಹುಡುಗನಿಗೆ ಲಿವ್‌ ಇನ್‌ ಸಂಬಂಧದಲ್ಲಿ ಹೆಚ್ಚು ಆಸಕ್ತಿ ಇದೆಯಾ? ಮದುವೆ ಸಂಪ್ರದಾಯವನ್ನು ಆತ ಗೌರವಿಸುತ್ತಿದ್ದಾನಾ? ಈ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಿ. ಅದ್ಧೂರಿ ಮದುವೆ ಅಲ್ಲದಿದ್ದರೂ, ಸರಳ ಮದುವೆಗಾದರೂ ಅವನ ಒಲವು ಇದೆಯಾ ಎಂಬುದನ್ನಾದರೂ ಪರಿಶೀಲಿಸಿ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.