ಬ್ರೇಕ್‌ಫಾಸ್ಟ್‌ ಬಿಟ್ಟರೆ ಕೆಟ್ಟಿರಿ…


Team Udayavani, Aug 15, 2018, 6:00 AM IST

x-1.jpg

ಕಾಲೇಜಿಗೆ, ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚಿನವರು ಬೆಳಗ್ಗಿನ ತಿಂಡಿಯನ್ನು ಮಿಸ್‌ ಮಾಡ್ತಾರೆ. ತೂಕ ಇಳಿಸುವ ಹಠಕ್ಕೆ ಬಿದ್ದು, ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎಂಬ ಸೋಮಾರಿತನದಿಂದ ಲೇಟಾಗಿ ಎದ್ದು, ಅಯ್ಯೋ ಲೇಟಾಯ್ತು, ತಿಂಡಿ ತಿನ್ನೋಕೆ ಟೈಮಿಲ್ಲ ಅನ್ನುತ್ತಾ ಬ್ರೇಕ್‌ಫಾಸ್ಟ್‌ಗೆ ಬ್ರೇಕ್‌ ಹಾಕುವವರೂ ಇದ್ದಾರೆ. ಆದರೆ, ಬೆಳಗ್ಗೆ ಒಂದು ಹೊತ್ತು ತಿನ್ನದಿದ್ದರೆ ಏನೇನಾಗುತ್ತದೆ ಅಂತ ನಿಮಗೆ ಗೊತ್ತಾ? 

1. ಹೃದಯಕ್ಕೆ ಪೆಟ್ಟು 
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಬೆಳಗ್ಗೆ ನಿಯಮಿತವಾಗಿ ತಿಂಡಿ ತಿನ್ನುವವರಿಗಿಂತ, ತಿನ್ನದೇ ಇರುವವರಲ್ಲಿ ಹೃದಯಾಘಾತದ ಅಪಾಯ ಶೇ.27ರಷ್ಟು ಹೆಚ್ಚಿರುತ್ತದೆಯಂತೆ! ಬೆಳಗ್ಗೆ ಆರೋಗ್ಯಯುತ ಆಹಾರ ಸೇವನೆಯಿಂದ ಪಾರ್ಶ್ವವಾಯು, ಹೃದಯಾಘಾತವನ್ನು ತಡೆಯಬಹುದು ಎನ್ನುತ್ತದೆ ಆ ಸಂಶೋಧನೆ.  

2. ಟೈಪ್‌-2 ಸಕ್ಕರೆ ಕಾಯಿಲೆ
ಸಿಹಿನಿದ್ದೆಯ ಆಸೆಗೆ ಬಿದ್ದು ತಿಂಡಿ ಬಿಟ್ಟಿರೋ, ಸಕ್ಕರೆ ಕಾಯಿಲೆಯನ್ನು ಬರಮಾಡಿಕೊಳ್ಳಲು ಸಿದ್ಧರಾಗಿ. ಬೆಳಗ್ಗೆ ಹೊಟ್ಟೆಯನ್ನು ಖಾಲಿ ಬಿಡುವುದರಿಂದ, ಟೈಪ್‌ 2 ಡಯಾಬಿಟೀಸ್‌ಗೆ ತುತ್ತಾಗುವ ಅಪಾಯ ಶೇ.54ರಷ್ಟು ಅಧಿಕವಿರುತ್ತದೆಯಂತೆ.

3. ತೂಕ ಹೆಚ್ಚಳ
ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಯುತ್ತದೆ ಎಂಬುದು ಅನೇಕರ ತಪ್ಪುಕಲ್ಪನೆ. ಆದರೆ, ಬೆಳಗ್ಗೆ ಏನೂ ತಿನ್ನದಿದ್ದರೆ ನಿಮ್ಮ ಹಸಿವು ಹೆಚ್ಚಿ, ನಂತರ ಸಿಕ್ಕಿದ್ದೆಲ್ಲವನ್ನೂ ತಿನ್ನುವ ತುಡಿತ ಉಂಟಾಗುತ್ತದೆ. ಆಮೇಲೆ ದಿನವಿಡೀ ನಿಮಗೇ ತಿಳಿಯದಂತೆ ಹೆಚ್ಚೆಚ್ಚು ಕ್ಯಾಲೊರಿ ಸೇವಿಸುತ್ತೀರಿ. ಇದರಿಂದ ದೇಹದ ತೂಕ ಹೆಚ್ಚುತ್ತದೆ.

4. ಮೈಗ್ರೇನ್‌ ಪಕ್ಕಾ
ರಾತ್ರಿಯಿಡೀ ಖಾಲಿಯಿರುವ ಹೊಟ್ಟೆಗೆ ಬೆಳಗ್ಗೆ ಸರಿಯಾದ ಆಹಾರ ಸಿಗಬೇಕು. ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆಯಾಗುತ್ತದೆ. ಆ ಪರಿಸ್ಥಿತಿಯನ್ನು ಸರಿದೂಗಿಸಲು ಕೆಲವು ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಅಷ್ಟೇ ಅಲ್ಲ, ರಕ್ತದೊತ್ತಡವೂ ಹೆಚ್ಚಿ, ಮೈಗ್ರೇನ್‌ ತಲೆನೋವು ಶುರುವಾಗುತ್ತದೆ. 

5. ಕೂದಲು ಉದುರುವಿಕೆ
ಕೂದಲುದುರುವ ಸಮಸ್ಯೆ ಕಾಡಿದಾಗ, ಎಲ್ಲರೂ ಶ್ಯಾಂಪೂ, ಎಣ್ಣೆಯ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಆಗ ನೀವು ಗಮನ ಹರಿಸಬೇಕಾಗಿದ್ದು ನಿಮ್ಮ ಬೆಳಗ್ಗಿನ ತಿಂಡಿಯ ಮೇಲೆ. ಬೆಳಗಿನ ತಿಂಡಿಯಲ್ಲೇ ಕೂದಲಿನ ಆರೋಗ್ಯ ಅಡಗಿದೆ. ಹೊಟ್ಟೆಯನ್ನು 12ಕ್ಕೂ ಹೆಚ್ಚು ಗಂಟೆಗಳ ಕಾಲ ಖಾಲಿಬಿಟ್ಟರೆ, ಪ್ರೊಟೀನ್‌ ಪೂರೈಕೆಯಲ್ಲಿ ವ್ಯತ್ಯಯವಾಗಿ ಕೂದಲು ಉದುರುತ್ತದೆ. 

6. ತಲೆನೋವು, ನಿತ್ರಾಣ
ಪೆಟ್ರೋಲ್‌ ಇಲ್ಲದಿದ್ದರೆ ಗಾಡಿ ಹೇಗೆ ಓಡುವುದಿಲ್ಲವೋ, ಹಾಗೆಯೇ ಬೆಳಗ್ಗೆ ಸರಿಯಾದ ಆಹಾರ ಹೊಟ್ಟೆಗೆ ಬೀಳದಿದ್ದರೆ ದೇಹಕ್ಕೂ ಸುಸ್ತು ಕಾಡುತ್ತದೆ. ತಲೆನೋವು, ತಲೆ ತಿರುಗುವುದು, ಆಲಸಿತನವೂ ಜೊತೆಯಾಗಿ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀಳುತ್ತದೆ. 

ಟಾಪ್ ನ್ಯೂಸ್

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Jharkhand 32 crore discovery case: Two arrested

Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.