ಉಳಿದದ್ದು ಕಂಡಂತೆ!


Team Udayavani, Sep 12, 2018, 6:00 AM IST

2.jpg

ಸಂಸ್ಕೃತ ಸುಭಾಷಿತದ ಸಾಲೊಂದು ಹೀಗೆ ಹೇಳುತ್ತದೆ -ಕುಭೋಜನಂ ಉಷ್ಣತಯಾ ವಿರಾಜತೇ’. ಅಂದರೆ, ತಣಿದ/ ಸಪ್ಪೆ /ನೀರಸ  ಅಡುಗೆಯನ್ನು ಬಿಸಿಮಾಡಿದರೆ ಮರುಭೋಜನಕ್ಕೆ ಯೋಗ್ಯವಾಗುತ್ತದೆ. ಇದು, ತೀರಾ ಸಾಮಾನ್ಯ. ಇಂದಿನ ದುಬಾರಿ ಕಾಲದಲ್ಲಿ, ಒಂದು ಹೊತ್ತಿನದು ಮಿಕ್ಕರೆ ಅದನ್ನೇ ಮತ್ತೂಂದು ಹೊತ್ತಿಗೆ ಬಳಸುವುದು ಜಾಣತನವೇ. ನಿನ್ನೆ ಉಳಿದ ಪದಾರ್ಥಗಳನ್ನು ನಾಳೆಗೆ ಹೊಸ ತಿನಿಸನ್ನಾಗಿಸಿ ಉಣ್ಣಬಹುದು. ಯಾವ್ಯಾವ ಆಹಾರ ಪದಾರ್ಥಗಳನ್ನು ಹೇಗೆಲ್ಲಾ ಬಳಸಬಹುದು ಎಂದು ಇಲ್ಲಿದೆ ನೋಡಿ…

1. ಅನ್ನ
ಇದನ್ನು ತಕ್ಷಣ ಬಳಸುವ ಉದ್ದೇಶವಿದ್ದರೆ, ಈರುಳ್ಳಿ ಅಥವಾ ಲಿಂಬೆಹಣ್ಣಿನ ಚಿತ್ರಾನ್ನ ತಯಾರಿಸಿ.ಇಲ್ಲವಾದರೆ, ಕುಕ್ಕರ್‌ನಲ್ಲಿ ಅನ್ನ ಹಾಕಿ ಸ್ವಲ್ಪ ನೀರು ಹಾಕಿ ಕಿವಿಚಿಕೊಳ್ಳಿ, ಅನಂತರ ಅನ್ನದ ಪ್ರಮಾಣಕ್ಕೆ ತಕ್ಕಷ್ಟು ಹೆಸರುಬೇಳೆ ತೊಳೆದು ಹಾಕಿ, ಹೆಸರುಬೇಳೆ ಪ್ರಮಾಣದ 5- 6ರಷ್ಟು ನೀರು, ಹೆಚ್ಚಿದ ಮೆಣಸಿನ ಕಾಯಿ, ಹಿಡಿ ಕಾಯಿತುರಿ, ಚಿಟಿಕೆ ಅರಿಶಿಣ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಬೇವು, ಜೀರಿಗೆ, ಮೆಣಸು, ಇಂಗು ಹಾಕಿ ಒಗ್ಗರಣೆ ಹಾಕಿ ಕುಕ್ಕರ್‌ ಮುಚ್ಚಿ, ಮೂರು ವಿಷಲ್‌ ಕೂಗಿಸಿದರೆ ಹುಗ್ಗಿ ತಯಾರು. 

ನೀವು ಸಿಹಿ ಪ್ರಿಯರಾಗಿದ್ದರೆ, ಉಳಿಕೆ ಅನ್ನವನ್ನು ಅಷ್ಟೇ ಪ್ರಮಾಣದ ಬೆಲ್ಲ, ಕಾಯಿತುರಿ, ಏಲಕ್ಕಿಪುಡಿ, ತುಸು ತುಪ್ಪ ಹಾಕಿ ಮಿಶ್ರಣ ಮಾಡಿ ದಪ್ಪ ತಳದ ಪಾತ್ರೆಯಲ್ಲಿಟ್ಟು ಸಣ್ಣ ಉರಿಯಲ್ಲಿ ಚೆನ್ನಾಗಿ ತಿರುವಿ. ಒಂದಕ್ಕೊಂದು ಚೆನ್ನಾಗಿ ಹೊಂದಿಕೊಂಡ ನಂತರ, ಸಿಹಿಕಾಯನ್ನ ಸವಿಯಲು ಸಿದ್ಧವಾಗುತ್ತದೆ. 

2. ಕಡಲೆ ಬೇಳೆ, ಹೆಸರು ಬೇಳೆ ಕೋಸಂಬರಿ 
ಕೋಸಂಬರಿ ಬಹಳ ಬೇಗ ಹಳಸಿಹೋಗುವ ಪದಾರ್ಥ. ಹಬ್ಬ ಹರಿದಿನಗಳಲ್ಲಿ ತಯಾರಿಸಿದ ಕೋಸಂಬರಿ ಮಿಕ್ಕಿದರೆ ಇನ್ಮುಂದೆ ಚಿಂತೆ ಬೇಡ. ಕೋಸಂಬರಿಯನ್ನು ತರಿತರಿಯಾಗಿ ರುಬ್ಬಿ, ದೋಸೆ ಹೆಂಚಿನ ಮೇಲೆ ಹುಯ್ದು ಖಾರದ ದೋಸೆ ಮಾಡಿ. ಗಟ್ಟಿಯಾಗಿ ರುಬ್ಬಿ ಖಾರದ ವಡೆಯಂತೆ, ಇಡ್ಲಿ ತಟ್ಟೆಯಲ್ಲಿ ಬೇಯಿಸಿ ಅಥವಾ ಎಣ್ಣೆಯಲ್ಲಿ ಕರಿದು ತಿನ್ನಬಹುದು. 

3.ಗಟ್ಟಿ ತರಕಾರಿಯ ಪಲ್ಯ
ಬೀಟ್‌ರೂಟ್‌, ಆಲೂಗಡ್ಡೆ, ಬಟಾಣಿ, ನವಿಲುಕೋಸು ಇತ್ಯಾದಿ ಗಟ್ಟಿ ತರಕಾರಿಗಳ ಪಲ್ಯ ಉಳಿದಾಗ, ಅವುಗಳನ್ನು ಬೋಂಡಾ ಹಿಟ್ಟಿನಲ್ಲಿ ಅದ್ದಿ, ಕರಿದರೆ ವೆಜ್‌ ಬೋಂಡಾ ತಯಾರು. 

4.ಹಪ್ಪಳ ಸಂಡಿಗೆ
ಹಪ್ಪಳ ಸಂಡಿಗೆಗಳು ಕ್ರಮೇಣ ಗರಿಮುರಿ ಕಳೆದು ಮೆತ್ತಗಾದಾಗ, ಅವುಗಳನ್ನು ತುಸು ಪುಡಿ ಮಾಡಿ ತಿಳಿಸಾರಿಗೆ ಬೆರೆಸಿದರೆ ಒಳ್ಳೆಯ ರುಚಿ ಕೊಡುತ್ತದೆ. ಅನ್ನಕ್ಕೆ ಸಾದಾ ಒಗ್ಗರಣೆ ಹಾಕಿ, ಪುಡಿಯಾದ ಹಪ್ಪಳ,ಸಂಡಿಗೆಗಳನ್ನು ಕಲಸಿದರೆ ಅದು ಇನ್ನೊಂದು ರೀತಿಯ ರುಚಿಕರ  ತಿನಿಸಾಗುತ್ತದೆ. 

ಕೆ.ವಿ. ರಾಜಲಕ್ಷ್ಮಿ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.