ಚಕ್ಕುಲಿ ಸ್ಪೆಷಲ್‌


Team Udayavani, Aug 31, 2018, 6:00 AM IST

18.jpg

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತೆ ಬಂದಿದೆ. ನಮ್ಮೂರಿನಲ್ಲಿ ಈ ಹಬ್ಬವನ್ನು ಸಂಭ್ರಮ, ಸಡಗರ, ಭಕ್ತಿಭಾವಗಳಿಂದ ಆಚರಿಸುತ್ತೇವೆ. ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ವಿವಿಧ ಬಗೆಯ ಲಡ್ಡುಗಳನ್ನು ಮಾಡಿ ನೈವೇದ್ಯ ಮಾಡಿ ನಂತರ ತಿಂದು ಸಂಭ್ರಮಿಸುತ್ತೇವೆ. ಈ ಬಾರಿ ಹಲವು ಬಗೆಯ ಚಕ್ಕುಲಿಗಳನ್ನು ಮಾಡಿ ಸವಿಯೋಣ.

ಅವಲಕ್ಕಿ ಚಕ್ಕುಲಿ
ಬೇಕಾಗುವ ಸಾಮಗ್ರಿ :
1 ಕಪ್‌ ಅವಲಕ್ಕಿ , 1/4 ಕಪ್‌ ಗೋಧಿಹಿಟ್ಟು , 1/4 ಕಪ್‌ ಅಕ್ಕಿಹಿಟ್ಟು , 1 ಚಮಚ ಖಾರದ ಪುಡಿ, ಚಿಟಿಕೆ ಇಂಗು, 1 ಚಮಚ ಜೀರಿಗೆ, ಕರಿಯಲು ಬೇಕಾದಷ್ಟು ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲು ಅವಲಕ್ಕಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಗೋಧಿಹಿಟ್ಟು , ಅಕ್ಕಿಹಿಟ್ಟು , ಉಪ್ಪು , ಜೀರಿಗೆ, ಖಾರದ ಪುಡಿ, 2ರಿಂದ 3 ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಚಕ್ಕುಲಿ ಅಚ್ಚಿಗೆ ಸ್ವಲ್ಪ ಹಿಟ್ಟು ಹಾಕಿ ಪೇಪರಿನ ಮೇಲೆ ವೃತ್ತಾಕಾರವಾಗಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆದರೆ ಗರಿಗರಿ ಚಕ್ಕುಲಿ ಕೃಷ್ಣನ ನೈವೇದ್ಯಕ್ಕೆ ಸಿದ್ಧ.

ಪಾಲಕ್‌ ಚಕ್ಕುಲಿ
ಬೇಕಾಗುವ ಸಾಮಗ್ರಿ:
1 ಕಟ್ಟು ಪಾಲಕ್‌ ಸೊಪ್ಪು , 1/2 ಕಪ್‌ ಬೆಳ್ತಿಗೆ ಅಕ್ಕಿ , 1/2 ಕಪ್‌ ಉದ್ದಿನಬೇಳೆ, 1-2 ಹಸಿಮೆಣಸು, ಓಮದಕಾಳು ಸ್ವಲ್ಪ , ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಪಾಲಕ್‌ ಸೊಪ್ಪನ್ನು  ಚೆನ್ನಾಗಿ ತೊಳೆದು, ಹಸಿಮೆಣಸು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಉದ್ದಿನಬೇಳೆ, ಅಕ್ಕಿಯನ್ನು ಬೇರೆ ಬೇರೆಯಾಗಿ ಹುರಿದು ನುಣ್ಣಗೆ ಪುಡಿ ಮಾಡಿ ನಂತರ ಪಾಲಕ್‌ ಪೇಸ್ಟ್‌ , ಓಮದಕಾಳು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಚಕ್ಕುಲಿ ಅಚ್ಚಿಗೆ ಹಾಕಿ ಪೇಪರಿನ ಮೇಲೆ ವೃತ್ತಾಕಾರವಾಗಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಚಕ್ಕುಲಿ ಸವಿಯಲು ಸಿದ್ಧ.

ದಿಢೀರ್‌ ಚಕ್ಕುಲಿ
ಬೇಕಾಗುವ ಸಾಮಗ್ರಿ:
1 ಕಪ್‌ ಅಕ್ಕಿಹಿಟ್ಟು , 1/2 ಕಪ್‌ ಕಡಲೆಹಿಟ್ಟು , 1/4 ಚಮಚ ಅರಸಿನ, 1 ಚಮಚ ಜೀರಿಗೆ, 1/4 ಚಮಚ ಓಮ, 1/2 ಚಮಚ ಕರಿಮೆಣಸು ಪುಡಿ, 1/4 ಕಪ್‌ ಬೆಣ್ಣೆ , ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ , ಚಿಟಿಕೆ ಇಂಗು.

ತಯಾರಿಸುವ ವಿಧಾನ: ವೊದಲು ಅಕ್ಕಿಹಿಟ್ಟು , ಕಡಲೆಹಿಟ್ಟನ್ನು ಬೆರೆಸಿ. ನಂತರ ಇದಕ್ಕೆ ಜೀರಿಗೆ, ಓಮ, ಕರಿಮೆಣಸು ಪುಡಿ, ಅರಸಿನ ಪುಡಿ, ಇಂಗು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಬೆಣ್ಣೆಯನ್ನು ಬಿಸಿ ಮಾಡಿ ಹಾಕಿ, ನಂತರ ಗಂಟಿಲ್ಲದಂತೆ ಕಲಸಿ. ಬಿಸಿನೀರು ಹಾಕಿ ಹಿಟ್ಟು ಕಲಸಿ. 30 ನಿಮಿಷ ನೆನೆಸಿ. ನಂತರ ಕೈಗೆ ಎಣ್ಣೆ ಪಸೆ ಮಾಡಿ ಉಂಡೆ ಮಾಡಿ ಚಕ್ಕುಲಿ ಒರಳಿನಲ್ಲಿ ಹಾಕಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿ ಚಕ್ಕುಲಿ ಸವಿಯಲು ಬಲು ರುಚಿ.

ಆಲೂ ಚಕ್ಕುಲಿ 
ಬೇಕಾಗುವ ಸಾಮಗ್ರಿ:
4-5 ಆಲೂಗಡ್ಡೆ , ಅಕ್ಕಿಹಿಟ್ಟು – 3 ಕಪ್‌, 1/2 ಚಮಚ ಇಂಗು, 1 ಚಮಚ ಬೆಣ್ಣೆ, 1/2 ಚಮಚ ಕರಿಮೆಣಸು ಪುಡಿ, ಉಪ್ಪು ರುಚಿಗೆ ತಕ್ಕಷ್ಟು , ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ. ನಂತರ ಸಿಪ್ಪೆ ತೆಗೆದು, ಅಕ್ಕಿಹಿಟ್ಟು ಸೇರಿಸಿ ಗಂಟಿಲ್ಲದಂತೆ ಬೆರೆಸಿ. ನಂತರ ಇದಕ್ಕೆ ಇಂಗು, ಖಾರದ ಪುಡಿ, ಕರಿಮೆಣಸು ಪುಡಿ, ಬೆಣ್ಣೆ-ಉಪ್ಪು ಸೇರಿಸಿ ಗಂಟಿಲ್ಲದಂತೆ ಕಲಸಿ. ಚಕ್ಕುಲಿ ಒರಳಿನಲ್ಲಿ ಹಾಕಿ ಚಕ್ಕುಲಿ ಒತ್ತಿ ಕಾದ ಎಣ್ಣೆಯಲ್ಲಿ ಕರಿದರೆ ಗರಿ ಗರಿಯಾದ ಆಲೂ ಚಕ್ಕುಲಿ ಸಿದ್ಧ.
ಮುಳ್ಳುಸೌತೆ ಚಕ್ಕುಲಿ

ಬೇಕಾಗುವ ಸಾಮಗ್ರಿ: 3 ಕಪ್‌ ತುರಿದ ಎಳೆ ಮುಳ್ಳುಸೌತೆ, 2 ಕಪ್‌ ಬೆಳ್ತಿಗೆ ಅಕ್ಕಿ , 1 ಚಮಚ ಜೀರಿಗೆ, 1/4 ಕಪ್‌ ಬೆಣ್ಣೆ , ಕರಿಯಲು ಬೇಕಾದಷ್ಟು ಎಣ್ಣೆ ,  ಉಪ್ಪು ರುಚಿಗೆ ತಕ್ಕಷ್ಟು .
ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ತೊಳೆದು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. ನಂತರ ಬಾಣಲೆಯನ್ನು ಹಾಕಿ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ ತುರಿದ ಮುಳ್ಳುಸೌತೆ ಬಾಣಲೆಗೆ ಹಾಕಿ ನೀರು ಆರುವವರೆಗೆ ಬೇಯಿಸಿ ಇಳಿಸಿ. ನಂತರ ಇದಕ್ಕೆ ಹುರಿದ ಅಕ್ಕಿಹಿಟ್ಟು , ಉಪ್ಪು , ಜೀರಿಗೆ, ಬೆಣ್ಣೆ ಹಾಕಿ. ಗಟ್ಟಿ ಹಿಟ್ಟು ಮಾಡಿ ಚಕ್ಕುಲಿ ಒತ್ತಿ ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ಗರಿಗರಿ ಘಮಘಮಿಸುವ ಚಕ್ಕುಲಿ ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.