ಒಂದೆಡೆ ಖುಷಿ ಮತ್ತೂಂದೆಡೆ ಬೇಜಾರು


Team Udayavani, Mar 23, 2018, 7:30 AM IST

10.jpg

ಹೌದು, ಆವತ್ತು ಸರ್‌ ಹೇಳಿದ್ದು ನಿಜವಾಗಿಯೂ ಸತ್ಯ. ನಮ್ಮ ಜೀವನದಲ್ಲಿ ಖುಷಿ ಮತ್ತು ದುಃಖ ಈ ಎರಡೂ ಭಾವನೆಗಳು ಒಮ್ಮೆಲೇ ಬರುವುದಿಲ್ಲ. ಒಂದೊಮ್ಮೆ ಅಂಥ ಕ್ಷಣ ಬಂದಿದ್ದರೂ ಅದು ನಮ್ಮ ಜೀವನದಲ್ಲಿ ಮರೆಯಲಾಗದ ಅದ್ಭುತ ಕ್ಷಣ. ಈಗ ನನ್ನ ಜೀವನದಲ್ಲೂ ಇಂತಹ ದಿನಗಳು ಬಂದಿವೆ. ಅಂತೂ ಕಷ್ಟಪಟ್ಟು ಡಿಗ್ರಿ ಮುಗಿಸಿದ್ದಾಯ್ತು, ಇನ್ನು ನನ್ನ ಜೀವನವನ್ನು ನಾನೇ ರೂಪಿಸಿಕೊಳ್ಳಬಹುದು ಎಂದು ಸಂತೋಷವಾದರೂ ಇಷ್ಟು ದಿನದ ಒಡನಾಟ, ಸರಿಯಾದ ಸಮಯಕ್ಕೆ ಮಾರ್ಗದರ್ಶನ ನೀಡಿದ ಗುರುಗಳು, ಸುಖ-ದುಃಖ ಗಳನ್ನು ಹಂಚಿಕೊಂಡ ಗೆಳೆಯರು- ಹೀಗೆ ನನ್ನ ಜೀವನದ ಒಂದು ಭಾಗವೇ ಆಗಿದ್ದ ಕಾಲೇಜನ್ನು ಇನ್ನು ಕೆಲವೇ ದಿನಗಳಲ್ಲಿ ಬಿಟ್ಟು ಹೋಗಬೇಕಾದ ಸತ್ಯವನ್ನು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ.

ನನಗೆ ಇವತ್ತಿಗೂ ಸರಿಯಾಗಿ ನೆನಪಿದೆ- ಆವತ್ತು ಪದವಿಯ ಮೊದಲನೆಯ ದಿನವೆಂದು ಭಯಮಿಶ್ರಿತ ಸಂತಸದಲ್ಲಿ ಹೊಸ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಾಗಲೇ ವರುಣನ ಆರ್ಭಟ ಆರಂಭವಾಗಿತ್ತು. ಹೀಗೆ ವರುಣನ ಶುಭ ಆಗಮನದಿಂದ ಆರಂಭವಾದ ನನ್ನ ಕಾಲೇಜು ಜೀವನ ಇಂದು ವರುಣನ ಆಗಮನದ ಸಮಯಕ್ಕೆ ಮುಕ್ತಾಯವಾಗುತ್ತಿದೆ. ಅಂದಿನಿಂದ ಇಂದಿನವರೆಗಿನ ಮೂರು ವರುಷಗಳ ಪ್ರಯಾಣದಲ್ಲಿ ಅದೆಷ್ಟೋ ಹೊಸ ಮನಸ್ಸುಗಳ ಪರಿಚಯವಾಗಿ ಅವರಿಂದು ನನ್ನ ಮನಸ್ಸಿಗೆ ಹತ್ತಿರವಾಗಿದ್ದಾರೆ.

ನನ್ನ ಜೀವನದಲ್ಲಾದ ಒಂದು ತಿರುವು ಎಂದರೆ ನಾನು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು. ಪಿಯುಸಿಯಲ್ಲಿ ವಾಣಿಜ್ಯ ವಿದ್ಯಾರ್ಥಿನಿಯಾದ ನಾನು ಹೇಗೋ ಅನಿರೀಕ್ಷಿತವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡ ನಂತರ ನನಗೆ ತಿಳಿಯಿತು, ದುಡ್ಡಿನ ಲೆಕ್ಕಚಾರಕ್ಕೂ ಮಿಗಿಲಾಗಿ ಮಾನವ ಸಂಬಂಧಗಳಿಗೆ ಬೆಲೆ ಕೊಡುವ, ಮಾನವನ ಭಾವನೆಗಳಿಗೆ ಸ್ಪಂದಿಸುವ ಕಲಾವಿಷಯದಲ್ಲಿ ಏನೋ ಆಕರ್ಷಣೆ ಇದೆಯೆಂದು.

ಪಠ್ಯಪುಸ್ತಕವನ್ನು ಬಿಟ್ಟು ಬೇರೆ ಪುಸ್ತಕವನ್ನು ಓದುವುದರಿಂದ ಸುಮ್ಮನೆ ಸಮಯ ವ್ಯರ್ಥ ಎಂದುಕೊಂಡಿದ್ದ ನನಗೆ ಇತರ ಪುಸ್ತಕಗಳನ್ನು ಓದುವಂತೆ ಒತ್ತಡ ಹೇರಿ ಪುಸ್ತಕದ ರುಚಿಯನ್ನು ಹಿಡಿಸಿ, ಬರವಣಿಗೆಯ ಪರಿಚಯ ಮಾಡಿಕೊಟ್ಟವರು ಕೆಲವರಾದರೆ, ಎಂತಹ ಒತ್ತಡ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೆ ಹಸನ್ಮುಖೀಯಾಗಿದ್ದು ನನ್ನಲ್ಲಿ ಪ್ರಭಾವ ಬೀರಿದವರು ಇನ್ನೂ ಕೆಲವರು. ಹೀಗೆ, ನನಗೆ ಶೈಕ್ಷಣಿಕ ಪರೀಕ್ಷೆಯನ್ನು ಎದುರಿಸುವ ಜೊತೆಗೆ ಜೀವನ ಪರೀಕ್ಷೆಯನ್ನು ಎದುರಿಸಲು ಮಾರ್ಗದರ್ಶನ ನೀಡಿದ ಉಪನ್ಯಾಸಕರಿಗೆ ಎಂದಿಗೂ ಚಿರಋಣಿ.

ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳಲ್ಲೂ ಖುಷಿಪಡುತ್ತ, ಗೆದ್ದಾಗ ಪ್ರಶಂಸಿಸಿ, ಸೋತಾಗ ಧೈರ್ಯ ನೀಡಿ, ಸುಖ-ದುಃಖಗಳನ್ನು ಹಂಚಿಕೊಂಡ ನನ್ನ ಸ್ನೇಹಿತರು ಇನ್ನೂ ನನ್ನ ಜೊತೆ ಇರುವುದು ಕೇವಲ ಕೆಲವೇ ದಿನಗಳು. ಅಗಲುವಿಕೆ ಅನಿವಾರ್ಯವಾದರೂ ಇಷ್ಟು ದಿನದ ಸಿಹಿ ಒಡನಾಟ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣಗಳು. 

ಕೊನೆಯದಾಗಿ ಹೇಳುವುದೇನೆಂದರೆ ನಾನು ತಿಳಿದೋ ತಿಳಿಯದೆಯೋ   ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ ಪ್ಲೀಸ್‌ ನನ್ನನ್ನು ಕ್ಷಮಿಸಿ ಬಿಡಿ.

ಸಂಧ್ಯಾ ಜಿ. ಶೆಟ್ಟಿ ಪತ್ರಿಕೋದ್ಯಮ ವಿಭಾಗ  ಎಂ.ಜಿ.ಎಂ. ಕಾಲೇಜು, ಉಡುಪಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.