ಅಪ್ಪಾ… ಐ ಲವ್‌ ಯೂ ಪಾ… 


Team Udayavani, Jul 6, 2018, 6:00 AM IST

u-12.jpg

ನಾನು ನೋಡಿದ ಮೊದಲ ವೀರ… ಬಾಳು ಕಲಿಸಿದ ಸಲಹೆಗಾರ – ಈ ಮಧುರ ಹಾಡಿನ ಸಾಲುಗಳನ್ನು ಓದುತ್ತಲೇ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಖಂಡಿತ ತಿಳಿದೀತು. ಹೌದು, ಜನಕ, ಪಿತ, ಡ್ಯಾಡಿ, ಅಬ್ಬು, ಬಾಬಾ- ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಏಕಮೇವ, ಸರಳಮಾತಿನಲ್ಲಿ ಹೇಳಬೇಕೆಂದರೆ ಅಪ್ಪ. ತಾನು ಎಲ್ಲಾ ಕಡೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ದೇವರು ತಾಯಿಯನ್ನು ಸೃಷ್ಟಿಸಿದ. ಅಂತೆಯೇ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲವೆಂದು ತಂದೆಯನ್ನು ಸೃಷ್ಟಿಸಿದ. ಪ್ರತಿ ತಂದೆಯೂ ತನ್ನ ಮಗಳಲ್ಲಿ ಅವರ ತಾಯಿಯ ಛಾಯೆಯನ್ನು ಕಾಣಲು ಬಯಸಿದರೆ, ಮಗಳು ತನ್ನ ಜೀವನ ಸಂಗಾತಿಯಲ್ಲಿ ತಂದೆಯು ನೀಡುತ್ತಿದ್ದ ಪ್ರೀತಿಗಾಗಿ ಹುಡುಕುತ್ತಾಳೆ. ಬೇರೆ ಬೇರೆ ಜಾತಿ-ಮತದವರು ವಿಭಿನ್ನ ರೀತಿಯಲ್ಲಿ ತಮ್ಮ ತಂದೆಯನ್ನು ಸಂಭೋದಿಸಿದರೂ ಸಹ, ಈ ಸಂಬಂಧದಲ್ಲಿರುವ ನಿಸ್ವಾರ್ಥ ಪ್ರೀತಿ ಎಲ್ಲಾ ಜಾತಿ-ಮತಗಳಿಗೂ ಒಂದೇ. ತನ್ನ ಕೂಸಿನ ಖುಷಿಯಲ್ಲೇ ಆನಂದ ತಂದುಕೊಳ್ಳುವ ಪ್ರೀತಿಯ ಸಂಕೇತ ಅಪ್ಪ.

ತಂದೆಯೆಂದರೆ ಮಗಳ ಮೊದಲ ಪ್ರೀತಿ ಹಾಗೂ ಮಗನ ಮೊದಲ ಹೀರೋ ಎಂದರ್ಥ. ಸಾಮಾನ್ಯವಾಗಿ ಅಪ್ಪಂದಿರಿಗೆ ಹೆಣ್ಣು ಮಕ್ಕಳೆಂದರೆ ಹೆಚ್ಚು ಪ್ರೀತಿ, ಅಕ್ಕರೆ. ಅಂತೆಯೇ ನನ್ನ ತಂದೆಯೂ ಸಹ “ಮಗಳು ಬೇಕು’ ಎಂದು ಪ್ರತಿ ವ್ಯಾಮೋಹ ಹೊಂದಿದ್ದರು ಎಂದು ಅಜ್ಜಿ ಯಾವಾಗಲೂ ಹೇಳುತ್ತಾರೆ. ನವಮಿಯಂದು ಹುಟ್ಟಿದ ನನಗೆ ಆ ಶಿವನ ಸತಿಯ ನಾಮದ ಅರ್ಥವುಳ್ಳ ಶಿವರಂಜನಿ ಎಂಬ ಹೆಸರು ನೀಡಿದರು. “ಏನಿದು! ಇಷ್ಟು ಉದ್ದ ಹೆಸರು!’ ಎಂದು ಅಂದು ಶುರುವಾದ ನನ್ನ ಉದ್ಗಾರ ಇಂದಿಗೂ ನಿಲ್ಲಲಿಲ್ಲ. ಕೆಲಸದ ವ್ಯವಹಾರದ ಸಲುವಾಗಿ ಅಪ್ಪ ಮನೆಯಿಂದ  ದೂರ ಇರಬೇಕಾಗಿತ್ತು. ನಾನು ಅವರನ್ನು ಭೇಟಿ ಮಾಡುತ್ತಿದ್ದದ್ದು ವಾರಾಂತ್ಯದಲ್ಲಿ ಮಾತ್ರ. ಶನಿವಾರ ಬಂತೆಂದರೆ ನನ್ನ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಬೆಳಗ್ಗೆ ಬೇಗನೆ ಎದ್ದು , “”ಅಪ್ಪ ಇವತ್ತು ಬರ್ತಾರಾ? ಅವರು ಬರುವಾಗ ಎಷ್ಟು ಹೊತ್ತಾಗುತ್ತೆ?” ಅಂತ ಕೇಳಿದ್ದನ್ನೇ ಕೇಳಿ ಅಮ್ಮನ ತಲೆ ತಿನ್ನುತ್ತಿದ್ದೆ. ಅಪ್ಪನಿಗೂ ಸಹ ತನ್ನ ಪುಟ್ಟ ರಾಜಕುಮಾರಿಯನ್ನು ನೋಡುವ ತವಕ. ಬಂದೊಡನೆ ನನ್ನನ್ನು ಎತ್ತಿಕೊಂಡು, ಮುದ್ದಾಡಿ, ನನ್ನ ಇಡೀ ವಾರದ ಕಥೆಗಳನ್ನು, ಅಮ್ಮನ ಬಗ್ಗೆ ದೂರುಗಳನ್ನು ಕೇಳಿ, ಮಗಳು ಮಾಡಿದ್ದೇ ಸರಿ ಎಂದು ಅತ್ತು ಹೇಳುವವರೆಗೂ ನನಗೆ ಸಮಾಧಾನವಿರುತ್ತಿರಲಿಲ್ಲ. ಆ ಎರಡು ದಿನಗಳನ್ನು ಮೋಜಿನಿಂದ ಕಳೆದು, ಮತ್ತೆ ಅಪ್ಪನಿಗೆ “ಟಾಟಾ’ ಹೇಳುವ ಸಮಯ ಬಂದಾಗ ಮನೆಯಲ್ಲಿ ಎಲ್ಲರ ಕಣ್ಣಂಚಿನಲ್ಲೂ ಹನಿ ಜಾರಲು ತಯಾರಾಗಿರುತ್ತಿತ್ತು. ಪ್ರತಿ ಬಾರಿಯೂ ಸಹ ಅಪ್ಪನ ಕೈಹಿಡಿದು, ಹೆಜ್ಜೆ ಬೆಸೆಯುತ್ತಾ ನಡೆದಾಗ ಮನಸ್ಸಿಗೆ ಆಗುವ ಸಂತಸವನ್ನು ಬರಿಯ ಶಬ್ದಗಳಲ್ಲಿ ಬಣ್ಣಿಸಲು ಖಂಡಿತ ಸಾಧ್ಯವಿಲ್ಲ. “ನೀನು ನಿನ್ನ ತಂದೆಯ ಜೆರಾಕ್ಸ್‌ ಕಾಪಿ’ ಎಂದು ಬಂಧು-ಮಿತ್ರರು ಹೇಳಿದರಂತೂ ಮನಸ್ಸು  ಖುಷಿಯಿಂದ ಹುಚ್ಚು ನೃತ್ಯಮಾಡಲು ಪ್ರಾರಂಭಿಸುತ್ತದೆ.

ಕ್ಷಣಮಾತ್ರದಲ್ಲಿ ಹತ್ತು ವರ್ಷಗಳು ಕಳೆದವು. ಈಗ ಎಲ್ಲವೂ ಬದಲಾಗಿದೆ. ಅಂದು ಕ್ಲಿಕ್ಕಿಸಿದ ಫೋಟೋಗಳನ್ನೆಲ್ಲಾ ನೋಡಿ, ಇಂದೂ ಸಹ ಅಪ್ಪ ಮಕ್ಕಳಂತೆ ಮುಗ್ಧ ನಗೆ ಬೀರುತ್ತಾರೆ. ಇಂದು ಯಾರ ಬಳಿಯೂ ಸಮಯವಿಲ್ಲವಾಗಿದೆ. ಅಪ್ಪ ಅವರ ಕೆಲಸದಲ್ಲಿ ಮಗ್ನರಾಗಿದ್ದಾರೆ. ನಾನು ನನ್ನ ಓದಿನಲ್ಲಿ ಬ್ಯುಸಿ. ಅಂದಿನಂತೆ ಗಂಟೆಗಟ್ಟಲೆ ಹರಟೆಯಿಲ್ಲ, ಅಮ್ಮನ ಬಗ್ಗೆ ದೂರುಗಳಿಲ್ಲ, ಹೆಗಲ ಸವಾರಿಯಿಲ್ಲ, ಸಂಜೆಯ ವಾಕಿಂಗ್‌ ಇಲ್ಲ. ಇದ್ಯಾವುದೂ ಇಲ್ಲದಿದ್ದರೂ ಸಹ ಒಂದು ವಿಷಯ ಅಂದಿನಂತೆಯೇ ಉಳಿದಿದೆ. ಹೌದು, ಆ ಪ್ರೀತಿ, ವಾತ್ಸಲ್ಯ, ಅಕ್ಕರೆ! ನಮ್ಮಲ್ಲಿ ಯಾರೂ ಬಾಯ್ಬಿಟ್ಟು ಇದನ್ನು ಹೇಳದಿದ್ದರೂ ಸಹ ಆ ನಿಷ್ಕಲ್ಮಶ, ಶುಭ್ರ ಕಣ್ಣುಗಳು ಎಲ್ಲವನ್ನೂ ಹೇಳಿಬಿಟ್ಟವು!

ಶಿವರಂಜನಿ, ದ್ವಿತೀಯ ಪಿಯುಸಿ ಗೋವಿಂದದಾಸ ಪದವಿಪೂರ್ವ ಕಾಲೇಜು, ಸುರತ್ಕಲ್‌
 

ಟಾಪ್ ನ್ಯೂಸ್

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

7-Panaji

Panaji: ಬಿಚೋಲಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ…

Gadag; Vinay came from England and voted

Gadag; ಇಂಗ್ಲೆಂಡ್‌ನಿಂದ ಆಗಮಿಸಿ ಮತದಾನ ಮಾಡಿದ ಗದಗದ ವಿನಯ್

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.