ಹಾಸ್ಟೆಲ್ ಜೀವನ
Team Udayavani, Mar 15, 2019, 12:30 AM IST
ಚಿಕ್ಕಂದಿನಿಂದಲೂ ಕೂಡು ಕುಟುಂಬದಲ್ಲಿ ಬೆಳೆದ ನನಗೆ ಹಾಸ್ಟೆಲ್ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಆದರೂ ಒಲ್ಲದ ಮನಸ್ಸಿನಿಂದ ಮನೆಬಿಟ್ಟ ನನಗೆ ಎಡಬಿಡದೆ ಕಾಡಿದ್ದು ಅಮ್ಮನ ನೆನಪು. ಮನೆಗೆ ಕಾಲ್ ಮಾಡಿ ಮಾತಾಡೋಣವೆಂದರೆ ಮೊಬೈಲೂ ಇರಲಿಲ್ಲ! ಓದಿನ ಸಮಯ ಮುಗಿಯುವುದನ್ನೇ ಕಾದು ಕುಳಿತಿರುತ್ತಿದ್ದ ನಾನು ಹಾಸ್ಟೆಲ್ನಲ್ಲಿ ಬೆಲ್ ರಿಂಗಣಿಸುತ್ತಿದ್ದಂತೆ ಕಾಲ್ ಮಾಡಲು ಓಡುತ್ತಿದ್ದೆ. ಆದರೆ, ನನ್ನ ಕೊಠಡಿಯಿಂದ ಕಾಯಿನ್ ಬಾಕ್ಸ್ ಇರುವಲ್ಲಿ ಬರುವಷ್ಟರಲ್ಲಾಗಲೇ ಹತ್ತು ಜನ ನಿಂತಿರುತ್ತಿದ್ದರು. ಪ್ರತಿಯೊಬ್ಬರೂ ಐದು ನಿಮಿಷ ಮಾತನಾಡಿದರೂ ಐವತ್ತು ನಿಮಿಷವಾಗುತ್ತದೆ ;ಅಷ್ಟರಲ್ಲಿ ಸ್ನಾನ ಮುಗಿಸಿ ಬರೋಣವೆಂದುಕೊಂಡರೆ ಅಲ್ಲೂ ಮಾರುದ್ದ ಲೈನ್ ಇರುತ್ತಿತ್ತು.
ಆರಂಭದಲ್ಲಿ ಯಾವ ರೀತಿ ಸಮಯ ನಿರ್ವಹಿಸಬೇಕೆಂಬುದೇ ತಿಳಿಯುತ್ತಿರಲಿಲ್ಲ. ಆದರೆ, ಕ್ರಮೇಣ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡುವುದನ್ನು ರೂಢಿಸಿಕೊಂಡೆ. ಮೊದ ಮೊದಲು ಅಲರಾಂ ಆಫ್ ಮಾಡಿ ಮಲಗುತ್ತಿದ್ದ ನಾನು ನಂತರದ ದಿನಗಳಲ್ಲಿ ಅಲಾರಂ ಇಲ್ಲದೇ ಏಳುವುದನ್ನೂ ಕಲಿತಿದ್ದೆ. ನಾನು ಬೆಳಗ್ಗಿನ ಓದುವ ವೇಳೆಯಲ್ಲಿ ಓದುವುದೇ ಅಪರೂಪವಾಗಿತ್ತು, ಅಂತಹದ್ದರಲ್ಲಿಯೂ ಏನಾದರೂ ಓದೋಣವೆಂಬ ಇಚ್ಛೆಯಿಂದ ಓದಲು ಕುಳಿತರೆ ಅದೆಲ್ಲಿರುತ್ತಿದ್ದಳೊ ಆ ನಿದ್ರಾದೇವಿ! ಕಣ್ತೆರೆಯಲಾರದಷ್ಟು ನಿದ್ರೆಭರಿಸುತ್ತಿದ್ದಳು. ಅಂತೂ ಇಂತೂ ಒಂದು ವಾರ ಕಳೆದು ಭಾನುವಾರ ಬಂತೆಂದರೆ ಎಲ್ಲಿಲ್ಲದ ಸಂತೋಷವಿರುತ್ತಿತ್ತು. ಆದರೆ ಭಾನುವಾರದ ಬೆಳಗಿನ ತಿಂಡಿ ಮಸಾಲೆದೋಸೆ. ನಾವು ಎಂಟು ಗಂಟೆಯಿಂದಲೇ ಸಾಲಿನಲ್ಲಿ ನಿಂತರೆ ಒಂಬತ್ತು ಗಂಟೆಗಾದರೂ ದೋಸೆ ಸಿಗುತ್ತಿತ್ತು!
ಇದೀಗ ನಾನು ಹಾಸ್ಟೆಲ್ ಸೇರಿ ತಿಂಗಳುಗಳೇ ಕಳೆದಿದೆ. ಹಾಸ್ಟೆಲ್ ನನಗೆ ಸಾಕಷ್ಟು ಒಳ್ಳೆಯ ವಿಚಾರಗಳನ್ನು ಕಲಿಸಿದೆ. ಬೆಳಗ್ಗೆ ಬೇಗ ಏಳುವ ಅಭ್ಯಾಸವಾದದ್ದು , ಕಾಲ್ ಮಾಡುವುದಕ್ಕಾಗಿ, ಕೆಲವೊಮ್ಮೆ ಸ್ನಾನಕ್ಕಾಗಿ, ತಿಂಡಿಗಾಗಿ ದೇವರ ದರ್ಶನಕ್ಕೆ ನಿಂತಂತೆ ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಲ್ಲುವುದೂ ಅಭ್ಯಾಸವಾಗಿದೆ !
ಸಿಂಧೂ ಹೆಗಡೆ
ಪ್ರಥಮ ಬಿಎ ಎಸ್ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ