ಆ ನೆನಪಿನ ದಿನಗಳು


Team Udayavani, Dec 14, 2018, 6:00 AM IST

14.jpg

ಜೂನ್‌ ತಿಂಗಳು ಬಂತೆಂದರೆ ಮಕ್ಕಳಿಗೆ ಬೇಜಾರು. ರಜೆಯ ಸೊಬಗನ್ನು ಆನಂದಿಸಿ ಮರಳಿ ಶಾಲೆಯ ಕಡೆಗೆ ಪಯಣ ಮಾಡಬೇಕೆಂಬ ಬೇಜಾರು ಒಂದೆಡೆಯಾದರೆ, ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಖುಷಿ. ಗೆಳೆಯ-ಗೆಳತಿಯರು ಸಿಗುತ್ತಾರೆ. ಅವರಲ್ಲಿ ರಜೆಯ ಸಂತೋಷದ ಕ್ಷಣ ಹಂಚಿಕೊಳ್ಳಲು ಕಾತರ. ಹೊಸ ಕ್ಲಾಸ್‌ರೂಮ್‌, ಹೊಸ ವಿಷಯ, ಬ್ಯಾಗ್‌, ಬುಕ್ಸ್‌ , ಛತ್ರಿ ಎಲ್ಲವೂ ಹೊಸದೆಂಬ ಸಂತೋಷದಿಂದ ಶಾಲೆಗೆ ತಯಾರಾಗುತ್ತೇವೆ.

ನಾನು ಬೆಳ್ತಂಗಡಿ ತಾಲೂಕಿನ “ಎಳನೀರು’ ಎಂಬ ಗ್ರಾಮದಿಂದ ಕಳಸ ಎಂಬ ಸಣ್ಣ ಪಟ್ಟಣಕ್ಕೆ ಶಾಲೆಗೆ ಹೋಗಬೇಕಿತ್ತು. ಸುಮಾರು 18 ಕಿ.ಮೀ. ದೂರ. ವರುಣನ ಆರ್ಭಟದ ಮಧ್ಯೆ ಶಾಲೆಗೆ ಹೋಗುವುದೆಂದರೆ ಅರ್ಧ ಸ್ನಾನ ಮಾಡಿದ ಹಾಗೆಯೇ ಸರಿ. ಹೆಸರೇ ಹೇಳಿದ ಹಾಗೆ “ಎಳನೀರು’ ಜಲಧಾರೆಯ ಊರು. ನೇತ್ರಾವತಿ ನದಿ ಉಮಗಸ್ಥಾನ. ಅನೇಕ ಫಾಲ್ಸ್‌ ಹೊಂದಿರುವ ಪುಟ್ಟ  ಗ್ರಾಮ. ನೇತ್ರಾವತಿ ನದಿ ದಾಟಲು ಮರದ ಸೇತುವೆಯಿತ್ತು. ಅದು ಅಡಿಕೆ ಮರದಿಂದ ಮಾಡಲಾಗಿತ್ತು. ಈ ಸೇತುವೆ ದಾಟುವುದೇ ಒಂದು ಸಾಹಸದ ವಿಷಯ. ಈ ಸೇತುವೆ ದಾಟಿ ಶಾಲೆಗೆ ಹೋಗಬೇಕಿತ್ತು. ಶಾಲೆಗೆ ಹೋಗಲು ಸೋಮಾರಿತನವಾದಾಗ ಶಾಲೆಯಲ್ಲಿ ಮಾರನೇ ದಿನ ಹೇಳುವ ಕಾರಣ ಎಂದರೆ, ಮಳೆಯಿಂದ ನದಿತುಂಬಿ ಸೇತುವೆ ಮೇಲೆ ನೀರು ಬಂದಿತ್ತು, ನದಿ ದಾಟಲು ಆಗಲಿಲ್ಲ ಎಂದು. ಈ ಕಾರಣ ಹೇಳಿ ಮಳೆಗಾಲದಲ್ಲಿ ಶಾಲೆಗೆ ರಜಾ ಹಾಕಿ ಮನೆಯಲ್ಲಿ ಇರುತ್ತಿದ್ದೆವು.

ರಜೆ ಮಾಡಿ ಮನೆಯಲ್ಲಿದ್ದರೂ ಒಂದೆಡೆ ಭಯ. ಹೋಮ್‌ವರ್ಕ್‌ನ ಚಿಂತೆ, ನೋಟ್ಸ್‌ ಇನ್‌ಕಂಪ್ಲೀಟ್‌ ಆಗುತ್ತದೆ ಎಂಬ ಯೋಚನೆ. ಆದರೆ, ಶಾಲೆಗೆ ರಜೆ ಘೋಷಿಸಿದ ದಿನ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಇನ್ನೊಂದೆಡೆ ಶಾಲೆ ತಲುಪಿದ ನಂತರ ಮಳೆಯ ಕಾರಣದಿಂದ ಶಾಲೆಗೆ ರಜೆ ಎಂಬ ವಿಷಯ ಗೊತ್ತಾಗುತ್ತಿತ್ತು. ಪುನಃ ನದಿ ದಾಟಿ ಮನೆಗೆ ಹೋಗುವ ಆತುರ.

ಆ ದಿನಗಳ ನೆನಪನ್ನು ಮೆಲುಕು ಹಾಕುತ್ತಿದ್ದರೆ ಬರೆಯಲಾರದಷ್ಟು ನೆನಪುಗಳಿವೆ, Childhood days are golden days  ಅನ್ನೋ ಹಾಗೆ. ನೆನಪುಗಳು ಮಾತ್ರ ಮರುಕಳಿಸುತ್ತಿರುತ್ತವೆ.

ಪಾವನಾ ಜೈನ್‌
ಮಿಲಾಗ್ರಿಸ್‌ ಕಾಲೇಜು,ಉಡುಪಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.