‘ಬಿಎಸ್ಎನ್ಎಲ್ ಅಗ್ರ ಕಂಪೆನಿಯಾಗಿಸುವುದೇ ನಮ್ಮ ಗುರಿ’
Team Udayavani, Jan 10, 2020, 8:37 AM IST
ಚೆನ್ನೈ: ನಷ್ಟದಲ್ಲಿರುವ ಬಿಎಸ್ಎನ್ಎಲ್ ಸಂಸ್ಥೆಯನ್ನು ದೇಶದ ಅಗ್ರಗಣ್ಯ ಕಂಪೆನಿಗಳಲ್ಲೊಂದಾಗಿಸುವುದೇ ಕೇಂದ್ರ ಸರ್ಕಾರದ ಗುರಿ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಚೆನ್ನೈ ನಡುವೆ ಸಾಗರದಾಳದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಿಎಸ್ಎನ್ಎಲ್ ನಮ್ಮ ಸರಕಾರದ ಆಸ್ತಿ. ಅದನ್ನು ನಷ್ಟದಿಂದ ಮೇಲೆತ್ತಿ, ದೇಶದ ಅಗ್ರಗಣ್ಯ ಕಂಪೆನಿಗಳಲ್ಲೊಂದಾ ಗಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ’ ಎಂದರು.
‘ಬಿಎಸ್ಎನ್ಎಲ್ ಕೇವಲ ಮೊಬೈಲ್ ಅಥವಾ ಟೆಲಿಫೋನ್ ಸೇವೆ ನೀಡುವ ಕಂಪೆನಿಯಲ್ಲ. ವಿವಿಧ ಯೋಜನೆಗಳಲ್ಲಿ, ಕಾರ್ಯಾಚರಣೆಗಳಲ್ಲಿ ಸರಕಾರ ಅಳವಡಿಸಿಕೊಳ್ಳುವ ತಂತ್ರಗಾರಿಕೆಯ ಬೆನ್ನೆಲುಬು.
ಒಡಿಶಾ ಹಾಗೂ ದೇಶದ ಇತರೆಡೆ ಪ್ರವಾಹ ಪರಿಸ್ಥಿತಿ ಏರ್ಪಟ್ಟಾಗ, ಜನರ ರಕ್ಷಣೆಗೆ ಅಲ್ಲಿ ಹೋಗಿದ್ದ ಸೇನಾ ತುಕಡಿಗಳ ನಡುವಿನ ಸಂಪರ್ಕ ಸಾಧನವಾಗಿದ್ದೇ ಬಿಎಸ್ಎನ್ಎಲ್ನ ಸೇವೆ. ಈಗ, ಚೆನ್ನೈ-ಲಕ್ಷದ್ವೀಪದ ನಡುವೆ ಸಮುದ್ರದಾಳದಲ್ಲಿ 1,224 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುವ ಆಪ್ಟಿಕಪ್ ಫೈಬರ್ ಕೇಬಲ್ ಯೋಜನೆಯ ಹೊಣೆಯನ್ನೂ ಬಿಎಸ್ಎನ್ಎಲ್ ಹೊತ್ತಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!