ಯುವಕರಲ್ಲಿ ವೈಜ್ಞಾನಿಕ ಕುತೂಹಲ ಹುಟ್ಟುಹಾಕಿದ ‘ಚಂದ್ರಯಾನ 2’
Team Udayavani, Nov 6, 2019, 1:01 AM IST
ಕೋಲ್ಕತಾ: ‘ಚಂದ್ರಯಾನ-2’ ಯೋಜನೆ ಒಂದು ಯಶಸ್ವಿ ವೈಜ್ಞಾನಿಕ ಕಾರ್ಯಾಚರಣೆಯಾಗಿದ್ದು, ಈ ಯೋಜನೆ ಭಾರತೀಯ ಯುವ ಜನತೆಯಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಯನ್ನು ಹುಟ್ಟುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಕೋಲ್ಕತಾದಲ್ಲಿ ಮಂಗಳವಾರದಿಂದ ಆರಂಭಗೊಂಡ ‘ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್’ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ‘ಚಂದ್ರಯಾನ-2 ಯೋಜನೆಗಾಗಿ ನಮ್ಮ ವಿಜ್ಞಾನಿಗಳು ಕಷ್ಟಪಟ್ಟು ದುಡಿದರು. ಯೋಜನೆಯ ಒಂದು ಹೆಜ್ಜೆಯನ್ನು ಅಂದುಕೊಂಡಂತೆ ಇಡಲಾಗಿಲ್ಲ, ನಿಜ. ಆದರೆ, ವಿಶಾಲ ದೃಷ್ಟಿಯಿಂದ ಹೇಳುವುದಾದರೆ, ಅದೊಂದು ಯಶಸ್ವಿ ಯೋಜನೆಯಾಗಿದ್ದು, ಭಾರತದ ವೈಜ್ಞಾನಿಕ ಸಾಧನೆಗಳಲ್ಲಿ ಅದೂ ಒಂದು” ಎಂದು ಮೋದಿ ತಿಳಿಸಿದರು.
ವೈಜ್ಞಾನಿಕ ಸಂಶೋಧನೆಗಳ ನಿಖರವಾದ ಫಲ ಸಿಗಬೇಕೆಂದರೆ ದೀರ್ಘಕಾಲದವರೆಗೆ ಕಾಯಬೇಕು ಎಂದ ಅವರು, ‘ಯಾವುದೇ ಸಂಶೋಧನೆಯ ಫಲ 2 ನಿಮಿಷದಲ್ಲಿ ನೂಡಲ್ಸ್ ತಯಾರಿಸಿದ ಹಾಗೆ ಸಿಗುವುದಿಲ್ಲ ಅಥವಾ ಪಿಜ್ಜಾ ಅಂಗಡಿಗೆ ಹೋಗಿ ಪಿಜ್ಜಾ ಖರೀದಿಸಿದಂತೆಯೂ ಅಲ್ಲ ಎಂದ ಅವರು, ವಿಜ್ಞಾನದಲ್ಲಿ ಕೇವಲ ಪ್ರಯತ್ನಗಳು ಮಾತ್ರ ಇರುತ್ತವಷ್ಟೆ. ವೈಫಲ್ಯಗಳು ಇರುವುದಿಲ್ಲ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ