ಏನಿದು ‘ಮಾಮ್’ ಕಥೆ? : ಹೆಚ್ಚುವರಿ ಎದೆ ಹಾಲನ್ನು ನವಜಾತ ಶಿಶುಗಳಿಗೆ ನೀಡುವ ಮಹಾತಾಯಿ ರುಶೀನಾ!


Team Udayavani, Jan 2, 2020, 8:56 PM IST

Rushina-Super-MOM-730

ಅಹಮದಾಬಾದ್: ನವಜಾತ ಶಿಶುಗಳಿಗೆ ತಮ್ಮ ಬೆಳವಣಿಗೆಯ ಹಲವು ಸಮಯದವರೆಗೆ ತಾಯಿಯ ಎದೆಹಾಲೇ ಅತ್ಯಮೂಲ್ಯವಾದ ಆಹಾರ. ಆದರೆ ಬಹಳಷ್ಟು ಹೆರಿಗೆ ಪ್ರಕರಣಗಳಲ್ಲಿ ವೈದ್ಯಕೀಯ ಕಾರಣಗಳಿಂದ ಮತ್ತು ಬಾಣಂತಿಯಲ್ಲಿ ಸಾಕಷ್ಟು ಪ್ರಮಾಣದ ಎದೆಹಾಲು ಉತ್ಪತ್ತಿಯಾಗದೇ ಇರುವುದರಿಂದ ಮತ್ತು ತಾಯಿಯ ಅನಾರೋಗ್ಯದ ಕಾರಣದಿಂದ ಹಲವಾರು ನವಜಾತ ಶಿಶುಗಳು ತಾಯಿ ಹಾಲಿನಿಂದ ವಂಚಿತವಾಗುತ್ತಿವೆ.

ಆದರೆ ಇಲ್ಲೊಬ್ಬರು ಈ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿರುವ ರುಶೀನಾ ಡಾಕ್ಟರ್ ಮರ್ಫಾತಿಯಾ ಎಂಬ 29 ವರ್ಷದ ಮಹಿಳೆಯೊಬ್ಬರು ತಮ್ಮ ಮಗುವಿಗೆ ನೀಡಿ ಮಿಕ್ಕಿದ ಎದೆಹಾಲನ್ನು ನಗರದ ಆಸ್ಪತ್ರೆಗಳ ನವಜಾತ ತುರ್ತು ನಿಗಾ ಘಟಕದಲ್ಲಿ ದಾಖಲಾಗಿರುವ ಶಿಶುಗಳಿಗೆ ಉಣಿಸುವ ಮಾದರಿ ಕಾರ್ಯವೊಂದನ್ನು ಪ್ರಾರಂಭಿಸಿದ್ದಾರೆ. ಇದುವರೆಗೆ ಈ ಮಹಾತಾಯಿ 12 ಲೀಟರ್ ಗಳಷ್ಟು ಎದೆಹಾಲನ್ನು, ತಾಯಿ ಹಾಲಿನ ಅಗತ್ಯವಿರುವ ನವಜಾತ ಶಿಶುಗಳಿಗೆ ಉಣಿಸಿದ್ದಾರೆ.

ಮಾತ್ರವಲ್ಲದೇ ‘ಸೂಪರ್ ಮಾಮ್’ ರುಶೀನಾ ಅವರ ಈ ಕಾರ್ಯದಿಂದ ಪ್ರೇರಣೆ ಪಡೆದು ‘ಅಪರ್ಣಾ ನವಜಾತ ಶಿಶು ಪಾಲನಾ ಕೇಂದ್ರ’ ಎಂಬ ಸಂಸ್ಥೆಯೊಂದು ಇವರ ಜೊತೆ ಕೈಜೋಡಿಸಿದೆ. ಈ ಸಂಸ್ಥೆ ಇದೀಗ ‘ತಾಯಿಯ ಸ್ವಂತ ಹಾಲು’ (ಮದರ್ಸ್ ಓನ್ ಮಿಲ್ಕ್- ಮಾಮ್) ಎಂಬ ಹೆಸರಿನ ಬ್ಯಾಂಕ್ ಒಂದನ್ನು ಸ್ಥಾಪಿಸಿದೆ.

ಈ ಬ್ಯಾಂಕ್ ಮೂಲಕ ಹೆಚ್ಚುವರಿ ಎದೆಹಾಲನ್ನು ಹೊಂದಿರುವ ತಾಯಂದಿರು ನೀಡಿದ ಹಾಲನ್ನು ಸಂಗ್ರಹಿಸಿ ಅವುಗಳನ್ನು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಷೆ ಪಡೆಯುತ್ತಿರುವ ನವಜಾತ ಶಿಶುಗಗಳಿಗೆ ಉಣಿಸುವ ಪ್ರಶಂಸಾರ್ಹ ಕಾರ್ಯವನ್ನು ಅಪರ್ಣಾ ಸಂಸ್ಥೆ ಕಳೆದೊಂದು ವರ್ಷದಿಂದ ಪರಿಣಾಮಕಾರಿಯಾಗಿ ಮಾಡುತ್ತಿದೆ.

ಇವರ ಈ ಕಾರ್ಯಕ್ಕೆ ಇದೀಗ ಹಲವಾರು ಸಮಾನ ಮನಸ್ಕ ತಾಯಂದಿರೂ ಜೊತೆಯಾಗಿರುವುದು ವಿಶೇಷ. ಈಗಾಗಲೇ ಸುಮಾರು 250 ತಾಯಂದಿರು ಅಪರ್ಣಾ ‘ಮಾಮ್ ಬ್ಯಾಂಕ್’ ನಲ್ಲಿ ಸದಸ್ಯರಾಗಿದ್ದಾರೆ. ಇಲ್ಲಿ ಈಗಾಗಲೇ 90 ಲೀಟರ್ ಗಳಷ್ಟು ತಾಯಿ ಎದೆಹಾಲನ್ನು ಸಂಗ್ರಹಿಸಿ ಪ್ರತೀ ಮಗುವಿಗೆ ತಲಾ 150 ಎಂ.ಎಲ್.ನಂತೆ ಸುಮಾರು 600 ಫೀಡಿಂಗ್ ಗಳನ್ನು ಈಗಾಗಲೇ ಮಾಡಿಯಾಗಿದೆ.

ತಮ್ಮ ಮಕ್ಕಳಿಗೆ ಉಣಿಸಿ ಹೆಚ್ಚುವರಿ ಎದೆಹಾಲನ್ನು ಹೊಂದಿರುವ ಮಹಿಳೆಯರು ತನ್ನ ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ರುಶೀನಾ ಅವರು ಎದೆಹಾಲುಣಿಸುವ ತಾಯಂದಿರಿಗೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ರುಶೀನಾ ಅವರ ಕಾರ್ಯದಿಂದ ಪ್ರೇರಣೆ ಪಡೆದು ತಮಿಳುನಾಡಿನಲ್ಲಿ ಇಬ್ಬರು ಎದೆಹಾಲುಣಿಸುವ ತಾಯಂದಿರು ಎದೆಹಾಲು ನೀಡುವಿಕೆ ಶಿಬಿರಗಳನ್ನು ನಡೆಸಿ ಆ ಮೂಲಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಿಶುಗಳ ಜೀವ ಉಳಿಸುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ರುಶೀನಾ ಅವರ ಈ ಕಾರ್ಯಕ್ಕೆ ಬೆಲೆಕಟ್ಟಲಾಗದು. 600 ಗ್ರಾಂನಿಂದ 1.5 ಕೆ.ಜಿ.ವರೆಗೆ ತೂಗುವ ಮತ್ತು ಸೋಂಕುಬಾಧಿತ ಸಾಧ್ಯತೆ ಅಧಿಕವಾಗಿರುವ ನವಜಾತ ಶಿಶುಗಳಿಗೆ ಈಕೆಯ ಎದೆಹಾಲು ಸಂಜೀವಿನಿಯಾಗಿದೆ ಎಂದು ಅಪರ್ಣಾ ನವಜಾತ ಶಿಶು ಪಾಲನಾ ಸಂಸ್ಥೆಯ ಶಿಶುವೈದ್ಯರಾಗಿರುವ ಡಾ. ಆಶೀಶ್ ಮೆಹ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ನಾರ್ವೆ ಮತ್ತು ಫಿನ್ ಲ್ಯಾಂಡ್ ದೇಶಗಳಲ್ಲಿ ಎದೆ ಹಾಲುಣಿಸುವ ತಾಯಂದಿರು ತಮ್ಮಲ್ಲಿರುವ ಹೆಚ್ಚುವರಿ ಎದೆ ಹಾಲನ್ನು ಅಗತ್ಯ ನವಜಾತ ಶಿಶುಗಳಿಗೆ ನೀಡುವ ಕಾರ್ಯ ರಕ್ತದಾನದ ರೀತಿಯಲ್ಲೇ ನಡೆದುಕೊಂಡು ಬರುತ್ತಿದೆ. ಈ ವಿಧಾನ ನಮ್ಮಲ್ಲೂ ಹೆಚ್ಚು ಪ್ರಚಾರಕ್ಕೆ ಬಂದಲ್ಲಿ ತಾಯಿ ಎದೆಹಾಲಿನಿಂದ ವಂಚಿತವಾಗುವ ಅದೆಷ್ಟೋ ನವಜಾತ ಶಿಶುಗಳಿಗೆ ವರದಾನವಾದೀತು.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.