ಅಮೆರಿಕಾದ ಮಿಷಿಗನ್ ನಲ್ಲಿ ಯಕ್ಷ ಪ್ರಿಯರ ಮನಸೆಳೆದ ಶ್ರೀ ದೇವಿ ಮಹಾತ್ಮೆ – ಭೀಷ್ಮ ಪರ್ವ


Team Udayavani, Oct 16, 2019, 3:55 PM IST

Devi-Mahathme-USA-730

‘ಯಕ್ಷಧ್ರುವ ಪಟ್ಲ ಫೌಂಡೇಶನ್’ ಯು.ಎಸ್.ಎ. ಇದರ ಆಶ್ರಯದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವು ಮಿಷಿಗನ್‌ ನ ಡೆಟ್ರಾಯಿಟ್‌ ಸಮೀಪದ ಟ್ರಾಯ್ ನಗರದಲ್ಲಿರುವ ದೇವಸ್ಥಾನದ ಸಭಾಭವನದಲ್ಲಿ ಸಂಪನ್ನಗೊಂಡಿತು. ಈ ಭಾಗದಲ್ಲಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ತುಳು ಭಾಷಿಗರ ಸಂಘ ಮಿಷಿಗನ್ ತುಳುವಾಸ್’ ಹಾಗೂ ‘ಪಂಪ ಕನ್ನಡ ಕೂಟ’ದ ಸಹಯೋಗದೊಂದಿಗೆ ಈ ಅಪೂರ್ವ ಯಕ್ಷಗಾನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಈ ಭಾಗದಲ್ಲಿ ಆಯೋಜಿಸಲಾಗಿತ್ತು.

ಆದಿಮಾಯೆ ಮತ್ತು ತ್ರಿಮೂರ್ತಿಗಳ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನ ಸಮರ್ಥ ಹಿಮ್ಮೆಳ ಮತ್ತು ಮುಮ್ಮೇಳಗಳ ಪ್ರಸ್ತುತಿಯೊಂದಿಗೆ ಪ್ರಸಂಗದ ಅಂತ್ಯದವರೆಗೆ ಯಕ್ಷಪ್ರಿಯರ ಮನಸ್ಸನ್ನು ಸೆಳೆದಿಡುವಲ್ಲಿ ಯಶಸ್ವಿಯಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಶ್ರೀ ಸತೀಶ್ ಶೆಟ್ಟಿಯವರ ಕಂಚಿನ ಕಂಠಸಿರಿ ಪ್ರಸಂಗಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿತು. ಮದ್ದಳೆಯಲ್ಲಿ ಜಯರಾಮ ಭಟ್ ಹಾಗೂ ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯರು ಸಮರ್ಥ ಹಿಮ್ಮೇಳ ಸಾಥ್ ಗೆ ಕಾರಣರಾದರು. ಚಕ್ರತಾಳದಲ್ಲಿ ಸ್ಥಳೀಯ ಕಲಾವಿದ ಅನಿರುದ್ಧ ರಾವ್ ಸಹಕರಿಸಿದರು.

ಮಹಾವಿಷ್ಣುವಿನ ವೇಷಧಾರಿಯಾಗಿ ಖ್ಯಾತ ಯಕ್ಷಗಾನ ಕಲೋಪಾಸಕ ಶ್ರೀ ಎಂ. ಎಲ್. ಸಾಮಗರು ಅಪ್ರತಿಮ ಮಾತುಗಾರಿಕೆಯಿಂದ ಸಭಿಕರ ಗಮನ ಸೆಳೆದರು. ಸ್ಥಳೀಯ ಕಲಾವಿದರಾದ ಪುರುಷೋತ್ತಮ ಮರಕಡ ಬ್ರಹ್ಮನಾಗಿಯೂ, ಪ್ರಶಾಂತ ಕುಮಾರ್ ಈಶ್ವರನಾಗಿಯೂ ಮತ್ತು ವೆಂಕಟೇಶ ಪೊಳಲಿ ಆದಿಮಾಯೆಯಾಗಿಯೂ ಪಾತ್ರೋಚಿತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾದರು.

ಪಾರಂಪರಿಕ ಶೈಲಿಯ ವೇಷದಲ್ಲಿ ಮಿಂಚುತ್ತಿದ್ದ ಮಹಿಷಾಸುರನ ಒಡ್ಡೋಲಗವು ಸಭೆಯ ಮಧ್ಯದಿಂದ ಮೊದಲ್ಗೊಂಡು ಪ್ರೇಕ್ಷಕರ ಸುತ್ತ ಉದ್ದಗಲಕ್ಕೂ ದೀರ್ಘವಾಗಿ ಸಾಗಿತು. ಮಹಿಷಾಸುರನ ವೇಷಧಾರಿ ಚಂದ್ರಶೇಖರ ಪೂಜಾರಿಯವರ ಅಬ್ಬರದ ಮಹಿಷ ಪ್ರಸಂಗಕ್ಕೊಂದು ಗಂಭೀರತೆಯ ಮೆರುಗನ್ನು ನೀಡುವಲ್ಲಿ ಯಶಸ್ವಿಯಾಯಿತು.

ಮಾಲಿನಿಯ ಪಾತ್ರದಲ್ಲಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿಯವರು ತಮ್ಮ ಒನಪು ವೈಯಾರದ ವೇಷದಿಂದ ಗಮನ ಸೆಳೆದರೆ ದೇವೇಂದ್ರನ ಪಾತ್ರದಲ್ಲಿ ಶ್ರೀ ಮೋಹನ ಬೆಳ್ಳಿಪಾಡಿಯವರು ಮಿಂಚಿದರು. ಮಹೇಶ ಮಣಿಯಾಣಿಯವರ ಹಾಸ್ಯ ಸಭೆಯನ್ನು ನಡಗಡಲ್ಲಿ ತೇಲಿಸುವಲ್ಲಿ ಯಶಸ್ವಿಯಾಯಿತು. ಸ್ಥಳೀಯ ಬಾಲಕಿ ಕು. ಅಭೀಷ್ಟ ಹೆಬ್ಬಾರ್ ಅಗ್ನಿಯ ವೇಷದಲ್ಲಿ ಪ್ರಶಂಸಾರ್ಹ ಅಭಿನಯವನ್ನು ನೀಡಿದಳು. ಇನ್ನು ಈ ಪ್ರಸಂಗದ ಪ್ರಮುಖ ಆಕರ್ಷಣೆಯ ಅಷ್ಟಭುಜೆ ಶ್ರೀ ದೇವಿಯ ಪಾತ್ರದಲ್ಲಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಭಕ್ತಿ ರಸಪೂರ್ಣವಾಗಿ ಅಭಿನಯಿಸಿ ಯಕ್ಷಪ್ರೇಮಿಗಳ ಕರಾಡತನದ ಮೆಚ್ಚುಗೆಗೆ ಪಾತ್ರರಾದರು.

ಯಕ್ಷಗಾನ ಕಾರ್ಯಕ್ರಮದ  ದಿನದಂದು ಇದೇ ತಂಡದ ಕಲಾವಿದರಿಂದ ‘ಭೀಷ್ಮ ಪರ್ವ’ ಎಂಬ ಪೌರಾಣಿಕ ತಾಳಮದ್ದಳೆ ಪ್ರಸಂಗ ಇಲ್ಲಿನ ನೋವೈಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಿತು. ಭೀಷ್ಮಾಚಾರ್ಯರಾಗಿ ಹಿರಿಯ ಕಲಾವಿದ ಎಂ. ಎಲ್. ಸಾಮಗರು ತಮ್ಮ ವಿದ್ವತ್ ಪೂರ್ಣ ಮಾತಿನಿಂದ ಕೇಳುಗರ ಗಮನ ಸೆಳೆದರು. ಪ್ರಸ್ತುತ ಅಮೇರಿಕಾ ಪ್ರವಾಸದಲ್ಲಿರುವ ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಕಾರಂತರು ಶ್ರೀ ಕೃಷ್ಣನ ಪಾತ್ರ ವಹಿಸಿ ಭೀಷ್ಮನ ಮಾರ್ಮಿಕ ಪ್ರಶ್ನೆಗಳಿಗೆ ಸಮಯೋಚಿತ ಪ್ರತಿಕ್ರಿಯೆ ನೀಡುವ ಮೂಲಕ ಗಮನ ಸೆಳೆದರು.

ದುರ್ಯೋಧನನಾಗಿ ಶ್ರೀ ಮೋಹನ ಬೆಳ್ಳಿಪಾಡಿ, ಅರ್ಜುನನಾಗಿ ಶ್ರೀ ಚಂದ್ರಶೇಖರ ಪೂಜಾರಿಯವರು ತಮ್ಮ ಪಾತ್ರನಿರ್ವಹಣೆಯ ಮೂಲಕ ಸಭಿಕರ ಗಮನಸೆಳೆದರು. ಹಿಮ್ಮೆಳದಲ್ಲಿ ದೇವಿ ಮಹಾತ್ಮೆ ಪ್ರಸಂಗದ ಕಲಾವಿದರೇ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಪ್ರಸಂಗಕ್ಕೊಂದು ವಿಶೇಷ ಮೆರುಗನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸ್ಥಳೀಯ ಕಲಾವಿದ ಅನಿರುದ್ಧ ರಾವ್ ತಬಲಾವನ್ನು ಹಿಮ್ಮೇಳದೊಂದಿಗೆ ನುಡಿಸಿ ನವೀನಾನುಭವ ನೀಡಿದರು.

– ಅರುಣ್ ರಾವ್ ಆರೂರು, ಮಿಷಿಗನ್, ಯು.ಎಸ್.ಎ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.