ಟೀಮ್ ಇಂಡಿಯಾದಲ್ಲಿ ಪುನರಾಗಮನ ಪರ್ವ
Team Udayavani, Mar 9, 2020, 7:30 AM IST
ಅಹ್ಮದಾಬಾದ್: ಸುನೀಲ್ ಜೋಶಿ ಸಾರಥ್ಯದ ನೂತನ ಆಯ್ಕೆ ಸಮಿತಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗಾಗಿ ರವಿವಾರ ಭಾರತ ತಂಡವನ್ನು ಅಂತಿಮಗೊಳಿಸಿತು. ನಾನಾ ಸಮಸ್ಯೆಗಳಿಂದ ಬೇರ್ಪಟ್ಟಿದ್ದ ಬಹುತೇಕ ಆಟಗಾರರು ತಂಡಕ್ಕೆ ಮರಳಿದ್ದು ಈ ಆಯ್ಕೆಯ ವಿಶೇಷ. ಇವರೆಂದರೆ ಆರಂಭಕಾರ ಶಿಖರ್ ಧವನ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಪೇಸರ್ ಭುವನೇಶ್ವರ್ ಕುಮಾರ್.
ಇದೇ ವೇಳೆ ನ್ಯೂಜಿಲ್ಯಾಂಡ್ ಸರಣಿ ವೇಳೆ ಅಷ್ಟೇನೂ ಯಶಸ್ಸು ಕಾಣದ ಶಿವಂ ದುಬೆ, ಮಾಯಾಂಕ್ ಅಗರ್ವಾಲ್ ಮತ್ತು ಕೇದಾರ್ ಜಾಧವ್ ಅವರನ್ನು ಕೈಬಿಡಲಾಗಿದೆ. ಉಪನಾಯಕ ರೋಹಿತ್ ಇನ್ನೂ ಚೇತರಿಸದ ಕಾರಣ ಆಯ್ಕೆಗೆ ಪರಿಗಣಿಸಲ್ಪಡಲಿಲ್ಲ. ಹೀಗಾಗಿ ಪೃಥ್ವಿ ಶಾ ತಂಡದಲ್ಲಿ ಮುಂದುವರಿದಿದ್ದಾರೆ. ಪೇಸ್ ಬೌಲರ್ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಅನುಭವಿ ಭುವನೇಶ್ವರ್ಗಾಗಿ ಶಾದೂìಲ್ ಠಾಕೂರ್ ಅವರನ್ನು ಕೈಬಿಡಲಾಯಿತು. 35ರ ಕೇದಾರ್ ಜಾಧವ್ ಅವರನ್ನು ಹೊರಗಿರಿಸಿದ ಕಾರಣ ಶುಭಮನ್ ಗಿಲ್ ಏಕದಿನ ತಂಡದಲ್ಲಿ ಸ್ಥಾನ ಪಡೆದರು.
ಸರಣಿಯ 3 ಪಂದ್ಯಗಳು ಧರ್ಮಶಾಲಾ (ಮಾ. 12), ಲಕ್ನೊ (ಮಾ. 15) ಮತ್ತು ಕೋಲ್ಕತಾದಲ್ಲಿ (ಮಾ. 18) ನಡೆಯಲಿವೆ.
ಪಾಂಡ್ಯ ಪ್ರಚಂಡ ಫಾರ್ಮ್
ಹಾರ್ದಿಕ್ ಪಾಂಡ್ಯ ಆಗಮನದಿಂದ ಭಾರತ ತಂಡದಲ್ಲಿ ಉತ್ತಮ ಸಮತೋಲನ ಕಂಡುಬರಲಿದೆ. ನ್ಯೂಜಿಲ್ಯಾಂಡ್ ಎದುರಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಪಾಂಡ್ಯ ಏಕದಿನ ಪಂದ್ಯವನ್ನು ಆಡಿಲ್ಲ. ಅವರು ಬೆನ್ನುನೋವಿನಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಡಿ.ವೈ. ಪಾಟೀಲ್ ಕಾರ್ಪೊರೇಟ್ ಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ನೈಜ ಆಟಕ್ಕೆ ಮುದುರಿಕೊಂಡಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಶುಭಮನ್ ಗಿಲ್, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ