ದುಬೈ: ಕೆಲವು ರಾಷ್ಟ್ರಗಳಿಗೆ ವಿಸಾ ಲಭ್ಯ
Team Udayavani, Mar 15, 2020, 11:45 PM IST
ದುಬೈ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕೆಲವು ವಿದೇಶಗಳ ವಿಮಾನಗಳಿಗೆ ದುಬೈ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಲವು ದೇಶಗಳ ವಿಮಾನಗಳು ದುಬೈಗಳಿಗೆ ಹಾರಾಟ ನಡೆಸಲಿಲ್ಲ. ಜತೆಗೆ ವಿದೇಶಗಳಿಂದ ಬರುವ ಎಲ್ಲಾ ನಾಗರಿಕ ವಿಸಾಗಳನ್ನು ನಿಷೇಧಿಸಿತ್ತು.
ಎಮಿರೇಟ್ಸ್ ರವಿವಾರ ಹೊಸ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ವಿಸಾ ನಿಷೇಧಗಳ ಪಟ್ಟಿಯಿಂದ ಕೆಲವು ರಾಷ್ಟ್ರಗಳನ್ನು ತೆಗೆದು ಹಾಕಲಾಗುತ್ತದೆ ಎಂದಿದ್ದಾರೆ. ಮಾರ್ಚ್ 17ರಂದು ದುಬೈ ಎಲ್ಲಾ ರಾಷ್ಟ್ರಗಳ ವಿಸಾವನ್ನು ರದ್ದುಮಾಡಿತ್ತು. ಇದೀಗ ಕೆಲವು ರಾಷ್ಟ್ರಗಳಿಗೆ ವಿನಾಯಿತಿ ನೀಡಲಾಗಿದೆ.
ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೂನಿ, ಬಲ್ಗೇರಿಯಾ, ಕೆನಡಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಾಂಗ್ ಕಾಂಗ್, ಹಂಗೇರಿ, ಐಸ್ಲ್ಯಾಂಡ್, ಐರ್ಲೆಂಡ್, ಇಟಲಿ (ರೊಮ್ನಿಂದ ಮಾತ್ರ), ಜಪಾನ್, ಲಾಟ್ವಿಯಾ ,ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷ್ಯಾ, ಮಾಲ್ಟಾ, ಮೊನಾಕೊ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಯಾನ್ ಮರಿನೋ, ಸಿಂಗಾಪುರ್, ಸ್ಲೋವಾಕಿಯಾ, ಸ್ಲೊವೇನಿಯಾ, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ವ್ಯಾಟಿಕನ್, ಯುನೈಟೆಡ್ ಕಿಂಗ್ಡಂ, ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ವಿಸಾ ನೀಡಲಾಗಿದೆ.
ಥರ್ಮಲ್ ಸ್ಕ್ರೀನಿಂಗ್ ಮತ್ತು ಮೂಗಿನ ಸ್ಕ್ಯಾನ್ಗೆ ಕೆಲವು ರಾಷ್ಟ್ರಗಳ ಪ್ರಯಾಣಿಕರು ಒಳಗಾಗಗಬೇಕಾಗುತ್ತದೆ. ದುಬೈ ಹೆಲ್ತ್ ಅಥಾರಿಟಿಯ (ಡಿಎಚ್ಎ) ವಿಮಾನ ನಿಲ್ದಾಣ ವೈದ್ಯಕೀಯ ಕೇಂದ್ರ ತಂಡವು ಇದನ್ನು ನಡೆಸಲಿದೆ. ಇಟಲಿ, ಲೆಬಾನನ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ, ಸಿರಿಯಾ ಮತ್ತು ಥಾಯ್ಲೆಂಡ್ ಆ ದೇಶಗಳು.
ಮುಂದಿನ ಆದೇಶದ ವರೆಗೆ ಕೆಲವು ರಾಷ್ಟ್ರಗಳಿಂದ ಬರುವ ಎಲ್ಲಾ ನಿಗದಿತ ಪ್ರಯಾಣಿಕರ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಹೆÅàನ್, ಇರಾಕ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇಟಲಿ, ರೋಮ್ ಹೊರತುಪಡಿಸಿ, ಕುವೈತ್, ಲೆಬನಾನ್, ಬೀಜಿಂಗ್ ಹೊರತುಪಡಿಸಿ ಪೀಪಲ್ಸ… ರಿಪಬ್ಲಿಕ್ ಆಫ್ ಚೀನಾ, ಸಿರಿಯಾ, ಟರ್ಕಿ ಆ ರಾಷ್ಟ್ರಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ