ಹೂಕೋಸು, ಕ್ಯಾಬೇಜ್‌ ಕೃಷಿ

ಬಾಳಿಲದ ಗೃಹಿಣಿಯ ಪ್ರಯೋಗ ಯಶಸ್ಸು

Team Udayavani, Feb 23, 2020, 4:29 AM IST

ram-22

ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪೋಷಣೆ ಮಾತ್ರ ನೀಡಿ ಬೆಳೆದ ವಿಷರಹಿತ ಕ್ಯಾಬೇಜ್‌ ಮತ್ತು ಹೂಕೋಸ್‌ ಗಿಡಗಳಲ್ಲಿ ಬೆಳೆಲದ ಬೆಳೆ ಖಾದ್ಯ ಸವಿಯಲು ಸಿದ್ಧವಾಗಿದೆ.

ವಾಟ್ಸ್‌ ಆ್ಯಪ್‌ ಪ್ರೇರಣೆ
ಸುಳ್ಯ ತಾಲೂಕಿನ ಬಾಳಿಲದ ಪ್ರಗತಿಪರ ಕೃಷಿಕ ನೆಟ್ಟಾರು ಗೋಪಾಲಕೃಷ್ಣ ಭಟ್ಟರ ಪತ್ನಿ ವಿಜಯಕುಮಾರಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಒಂದರಲ್ಲಿ ಬಂದ ಸಂದೇಶವೊಂದರಿಂದ ಪ್ರೇರಿತರಾಗಿ ಕ್ಯಾಬೇಜ್‌ ಮತ್ತು ಹೋಕೋಸು ಬೆಳೆಯನ್ನು ತನ್ನ ಮನೆಯಲ್ಲೂ ಬೆಳೆಯುವ ಉತ್ಸಾಹ ತೋರಿ ಯಶಸ್ಸು ಕಂಡವರು. ಬೆಟ್ಟಂಪಾಡಿ ಹರಿಕೃಷ್ಣ ಕಾಮತ್‌ ಅವರ ಮನೆಯಿಂದ ಈ ಎರಡೂ ಬೆಳೆಗಳ ತರಕಾರಿ ಬೀಜಗಳನ್ನು ತಂದು ಕೃಷಿ ಆರಂಭಿಸಿದ್ದರು.

ಸಾವಯವ ಪೋಷಣೆ
ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳಾದ ಇವುಗಳನ್ನು ಋತುಮಾನಕ್ಕೆ ತಕ್ಕಂತೆ ನವೆಂಬರ್‌ ತಿಂಗಳ ಮೊದಲ ವಾರ ಬಿತ್ತನೆ ಮಾಡಿದರು. ಮೊದಲ ಪ್ರಯೋಗವಾದ ಕಾರಣ ತಲಾ 15 ಬೀಜಗಳನ್ನು ಮಾತ್ರ ಬಿತ್ತನೆ ಮಾಡಿದರು. ಇವುಗಳ ಪೈಕಿ 5 ಕ್ಯಾಬೇಜು ಹಾಗೂ 10 ಹೂಕೋಸು ಗಿಡಗಳು ಸೊಂಪಾಗಿ ಬೆಳೆದವು. ಕೆಂಪು ಮಣ್ಣು, ಮರಳು, ಸುಡುಮಣ್ಣಿನ ಮಿಶ್ರಣದಲ್ಲಿ ಬೆಳೆಸಿದ ಈ ಗಿಡಗಳಿಗೆ ಪ್ರತಿನಿತ್ಯ ನೀರಿನ ಜೊತೆ ಹುಳಿ ಬರಿಸಿದ ಬೇವಿನ ಹಿಂಡಿ, ಸೆಗಣಿ ನೀರಿನಿಂದ ಶುದ್ಧ ಸಂಪೂರ್ಣ ಸಾವಯವ ಪೋಷಣೆ ನೀಡಿದ್ದಾರೆ.

ಸಿದ್ಧವಾಗಿದೆ ಬೆಳೆ
ಸಾವಯವ ಪೋಷಣೆಯಿಂದ ಬೆಳೆದ ಗಿಡದಲ್ಲಿ ಮೂರೇ ತಿಂಗಳಲ್ಲಿ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆದು ಕೊಯ್ಯಲು ಸಿದ್ಧವಾಗಿದೆ. ಈ ತಿಂಗಳಲ್ಲಿ ಬಾಳಿಲದ ವಿಜಯ ಕುಮಾರಿಯವರ ಮನೆಗೆ ಭೇಟಿ ನೀಡುವ ಆಸಕ್ತ ಕೃಷಿಕರಿಗೆ ಸಾವಯವವಾಗಿ ಬೆಳೆಸಿದ ಹೂಕೋಸಿನಿಂದ ಮಾಡಿದ ಖಾದ್ಯಗಳನ್ನು ಸವಿಯುವ ಭಾಗ್ಯ ಸಿಗಲಿದೆ.

ಮೊದಲ ಪ್ರಯೋಗ ಯಶಸ್ಸು
ಕರಾವಳಿಯ ಹವಾಮಾನಕ್ಕೆ ಒಗ್ಗದ ಹೂಕೋಸು ಮತ್ತು ಕ್ಯಾಬೇಜ್‌ ನಮ್ಮ ಮನೆಯಂಗಳದಲ್ಲಿ ಸೊಂಪಾಗಿ ಬೆಳೆದು ಫ‌ಲ ನೀಡಿರುವುದು ಖುಷಿ ತಂದಿದೆ. ಮೊದಲ ಪ್ರಯೋಗವಾದ ಕಾರಣ ಸೀಮಿತ ಮಟ್ಟಕ್ಕೆ ಬೆಳೆ ಸಿಕ್ಕಿದೆ.
– ವಿಜಯಕುಮಾರಿ , ಗೃಹಿಣಿ

ಉಮೇಶ್‌ ಮಣಿಕ್ಕಾರ

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.