ವಾಹನ ವಿಮೆ ಇರಲಿ ಮಾಹಿತಿ


Team Udayavani, Nov 4, 2019, 5:00 AM IST

kiru-lekhana-3

ವಿಮೆಗೆ ಒಳಪಡದ ವಾಹನವನ್ನು ಓಡಿಸುವುದನ್ನು ಕೂಡ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ದಂಡದ ಮೊತ್ತದಲ್ಲಿ ದ್ವಿಚಕ್ರವಾಹನ ಒಂದರ ವಿಮೆ ಸಲೀಸಾಗಿ ಬಂದುಬಿಡುತ್ತದೆ. ವಾಹನ ವಿಮೆಗಳ ಕುರಿತು ಎಲ್ಲ ಸವಾರರೂ ತಿಳಿದುಕೊಂಡಿರಬೇಕು. ಈ ಕುರಿತು ಮಾಹಿತಿ ಇಲ್ಲಿದೆ.

ವಾಹನ ವಿಮೆಯಲ್ಲಿ ಮೂರನೇ ವ್ಯಕ್ತಿ ವಿಮೆ ಮತ್ತು ಸಮಗ್ರ ಮೋಟಾರು ವಿಮೆ ಎಂಬ ಎರಡು ವಿಧಗಳಿವೆ. ಇದರಲ್ಲಿ ಅಘಘಾತಕ್ಕೀಡಾದಾಗ ಗಾಯಗೊಳ್ಳುವ, ಪ್ರಾಣ ಕಳೆದುಕೊಳ್ಳುವ ವ್ಯಕ್ತಿ, ಹಾನೀಗಿಡಾಗುವ ಆಸ್ತಿಗೆ ವಿಮೆಗೆ ಒದಗಿಸುತ್ತದೆ. ಸಮಗ್ರ ಮೋಟಾರು ವಿಮೆಯೂ ಅಪಘಾತಗೊಂಡ ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸಲಾಗುತ್ತದೆ. ಬಂಪರ್‌ಟು ಬಂಪರ್‌ ವಿಮೆ ಮಾಡಿಸಿದರೆ ಕಾರಿನ ಎ.ಸಿ., ಮ್ಯೂಸಿಕ್‌ಸಿಸ್ಟಂ ಹಾಗೂ ಇತರ ಆ್ಯಕ್ಸೆಸರೀಸ್‌ಗಳು ಸಹ ವಿಮೆ ವ್ಯಾಪ್ತಿಗೆ ಒಳಪಡುತ್ತವೆ.

ನೋ ಕ್ಲೇಮು ಬೋನಸ್‌(ಎನ್‌ಸಿಬಿ)
ನಿಮ್ಮ ವಾಹನ ಒಮ್ಮೆಯೂ ಕೂಡ ಅಪಘಾತವಾಗದಿದ್ದರೆ ಅದು ನೋ ಕ್ಲೇಮುಬೋನಸ್‌ ವ್ಯಾಪ್ತಿಗೆ ಬರುತ್ತದೆ. ನೀವು ಅಪಘಾತ ಎಸಗದೆ, ಯಾವುದೇ ಕ್ಲೇಮುಗಳನ್ನು ಮಾಡದೆ ಪ್ರತಿ ವರ್ಷ ಪಾಲಿಸಿ ರಿನೀವಲ್‌ ಮಾಡಿಸುತ್ತಿದ್ದರೆ, ವರ್ಷದಿಂದ ವರ್ಷಕ್ಕೆ ನಿಮ್ಮ ಪಾಲಿಸಿಯ ಪ್ರೀಮಿಯಂ ಮೊತ್ತದಲ್ಲಿ ಶೇ. 20ರಿಂದ 50ರಷ್ಟು ಕಡಿಮೆಯಾಗುತ್ತದೆ. ಒಂದೊಮ್ಮೆ ನೀವು ಐದು ವರ್ಷ ಯಾವುದೇ ಅಪಘಾತ ಎಸಗದೇ, ಯಾವುದೇ ಕ್ಲೇಮು ಮಾಡದೇ ವಾಹನ ನಿರ್ವಹಿಸಿದ್ದೇ ಆದರೆ, ವಿಮಾ ಕಂಪೆನಿ ನಿಮಗೆ ಶೇ. 50ರಷ್ಟು ಡಿಸ್ಕೌಂಟ್‌ ನೀಡಬಹುದು.

ಸುಲಭ ವಿಮೆ
ಪ್ರಸ್ತುತವಾಗಿ ವಾಹನ ವಿಮೆ ಮಾಡಿಸುವುದು ಕಷ್ಟದ ಕೆಲಸವೇನಿಲ್ಲ. ಎಲ್ಲವೂ ಡಿಜಿಟಲ್‌ ಆಗಿರುವುದರಿಂದ ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ವಾಹನ ವಿಮೆ ಮಾಡಿಸಬಹುದು.

ಕಂಪ್ಯೂಟರ್‌ ಅಥವಾ ಮೊಬೈಲ್‌ ಮೂಲಕ ಪಾಲಿಸಿ ಬಜಾರ್‌ ರೀತಿಯ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟರೆ, ಜಗತ್ತಿನಲ್ಲಿರುವ ಎಲ್ಲ ವಿಮಾ ಕಂಪೆನಿಗಳು, ಅವುಗಳು ನೀಡುತ್ತಿರುವ ಆಫರ್‌ಗಳು, ನಿಮ್ಮ ವಾಹನಕ್ಕೆ ವಿವಿಧ ಕಂಪೆನಿಗಳು ಕೋಟ್‌ ಮಾಡಿರುವ ಪ್ರೀಮಿಯಂ ಮೊತ್ತ, ಪ್ರಯೋಜನಗಳು ಸೇರಿ ಎಲ್ಲ ಅಂಶಗಳು ಕ್ಷಣಾರ್ಧದಲ್ಲಿ ಕಣ್ಣೆದುರಿಗೆ ಬರುತ್ತವೆ.

ಹಣ ಪಾವತಿ ಮಾಡಿದ ಒಂದು ನಿಮಿಷದ ಒಳಗೆ ಪಾಲಿಸಿ ದಾಖಲೆಗಳು ನಿಮ್ಮ ಇಮೇಲ್‌ ವಿಳಾಸಕ್ಕೆ ಬರುತ್ತದೆ. ಇದಾದ ವಾರದೊಳಗೆ ವಿಮೆಯ ಅಸಲಿ ಪತ್ರಗಳು ಕೊರಿಯರ್‌ ಮೂಲಕ ನಿಮ್ಮ ಮನೆಗೆ ಬರುತ್ತವೆ. ಹೀಗಾಗಿ, ಆನ್‌ಲೈನ್‌ಮೂಲಕ ವಿಮೆ ಖರೀದಿಸುವುದು ಅತ್ಯಂತ ಸುಲಭ ಮಾರ್ಗ. ಆನ್‌ ಲೈನ್‌ ಮೂಲಕ ವಿಮೆ ಖರೀದಿಸುವುದರ ದೊಡ್ಡ ಲಾಭವೆಂದರೆ, ಇಲ್ಲಿ ನಿಮಗೆ ಹೆಚ್ಚು ಆಯ್ಕೆಗಳಿರುತ್ತವೆ. ಹೀಗಾಗಿ, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುವ ಪಾಲಿಸಿಯನ್ನು ನೀವು ಖರೀದಿಸಬಹುದು.

ವಿಮೆ ಕ್ಲೇಮು ಆಗುವುದು ಹೇಗೆ?
ವಿಮಾ ಕಂಪೆನಿ ಕೇಳುವ ಎಲ್ಲ ದಾಖಲೆಗಳನ್ನು ನೀವು ಒದಗಿಸಿದ ಮಾತ್ರಕ್ಕೆ ಕೆಲಸ ಮುಗಿಯಿತು ಎಂದು ನಿಟ್ಟುಸಿರು ಬಿಡುವಂತಿಲ್ಲ. ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ ಅನಂತರವೂ, ಕಂಪೆನಿಯು ಓರ್ವ ಸರ್ವೇಯರ್‌ನ್ನು ನೇಮಿಸುತ್ತದೆ. ಸತ್ಯಾಸತ್ಯತೆ ತಿಳಿಯಲು ಆತ ವಿಮೆಗೆ ಒಳಪಟ್ಟ ನಿಮ್ಮ ಕಾರು, ಬೈಕ್‌ ವಾಹನವನ್ನು ಖುದ್ದು ಪರಿಶೀಲಿಸುತ್ತಾನೆ. ಅನಂತರ ವಾಹನದ ರಿಪೇರಿಗೆ ತಗುಲಬಹುದಾದ ಮೊತ್ತವನ್ನು ಅಂದಾಜಿಸುತ್ತಾನೆ. ಈ ಸರ್ವೆಯರ್‌ ಬಂದು ವಾಹನ ಪರಿಶೀಲಿಸಿದ ಬಳಿಕವೇ ನೀವು ವಾಹನವನ್ನು ರಿಪೇರಿಗೆ ಕೊಡಬೇಕು. ಮೊದಲೇ ರಿಪೇರಿ ಮಾಡಿಸಿದ್ದರೆ ನಿಮ್ಮ ವಿಮಾ ಮೊತ್ತ ಬರುವುದಿಲ್ಲ. ಒಂದೊಮ್ಮೆ ನಿಮ್ಮ ವಾಹನ ಕಳವಾಗಿದ್ದಲ್ಲಿ ವಿಮಾ ಕಂಪೆನಿಯ ಪ್ರತಿನಿಧಿಯ ಜತೆ, ವಾಹನ ಕಳವಾದ ಸ್ಥಳದ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬೇಕು. ವಾಹನದೊಂದಿಗೆ ಅಸಲಿ ಆರ್‌ಸಿ ಕೂಡ ಕಳುವಾಗಿದ್ದರೆ, ಸಂಬಂಧಿಸಿದ ಆರ್‌ಟಿಒದಲ್ಲೂ ದೂರು ದಾಖಲಿಸಿ ಮತ್ತೂಂದು ಆರ್‌ಸಿ ಪಡೆಯಬೇಕು. ಇಷ್ಟೆಲ್ಲ ಮಾಡಿದ ಅನಂತರ ಪೊಲೀಸರು ಮತ್ತು ಆರ್‌ಟಿಒ ವಾಹನ ಹುಡುಕಲು ಇಂತಿಷ್ಟು ಸಮಯ ನಿಗದಿಯಾಗಿರುತ್ತದೆ. ಆ ಸಮಯ ಮುಗಿಯುವವರೆಗೂ ವಿಮೆ ಹಣ ನಿಮ್ಮ ಕೈ ಸೇರುವುದಿಲ್ಲ. ಇದಕ್ಕೆ ತಿಂಗಳುಗಳೇ ತಗಲುತ್ತವೆ.

ಕ್ಲೇಮುಗೆ ಬೇಕಾದ ದಾಖಲೆ
· ವಿಮಾ ಪಾಲಿಸಿಯ ಅಸಲಿ ದಾಖಲೆ
· ವಾಹನದ ನೋಂದಣಿಗೆ ಸಂಬಂಧಿಸಿದ ದಾಖಲೆ(ಆರ್‌ಸಿ)
· ವಾಹನ ಮಾಲಕರ ಚಾಲನ ಪರವಾನಿಗಿ (ಡಿಎಲ್‌)
· ವಾಹನ ಅಪಘಾತಕ್ಕೀಡಾದ ಬಗ್ಗೆ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿ ಪಡೆದ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ಪ್ರತಿ
· ವಾಹನ ರಿಪೇರಿ ಮಾಡಿಸಿದ್ದಕ್ಕೆ ಪ್ರತಿಯಾಗಿ ನೀವು ಪಾವತಿಸಿದ ಹಣದ ಅಧಿಕೃತ, ಸವಿವರವಾದ ಬಿಲ್‌

-   ಬಸವರಾಜ ಕೆ. ಜಿ.

ಟಾಪ್ ನ್ಯೂಸ್

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.