ನನ್ನೂರಿನ ದೇಗುಲವೂ ಗಂಗಾ ತೀರವೂ


Team Udayavani, Mar 16, 2020, 5:23 AM IST

ನನ್ನೂರಿನ ದೇಗುಲವೂ ಗಂಗಾ ತೀರವೂ

ನನಗೆ ಮನಸ್ಸಿಗೆ ಬೇಸರವಾದಾಗಲೆಲ್ಲಾ ದೇಗುಲಕ್ಕೆ ಹೋಗುವ ಅಭ್ಯಾಸವಿದೆ. ನಮ್ಮ ಮನೆಯವರಲ್ಲದೇ, ಸುತ್ತಲಿನವರೂ ಸಹ ನನ್ನನ್ನು ಕಂಡು, ಯಾವಾಗಲೂ ದೇವಸ್ಥಾನದಲ್ಲೇ ಇರುತ್ತೀಯಲ್ಲಾ, ಸ್ವಾಮಿ ಆಗಿಬಿಡು ಎಂದು ಛೇಡಿಸಿದ್ದೂ ಇದೆ. ಅಂಥ ಹೊತ್ತಿನಲ್ಲಿ ಎಷ್ಟೊ ಬಾರಿ ಅದೇ ಸರಿ ಎನ್ನಿಸುವುದಿದೆ. ಆದರೂ ಯಾರ ಮಾತಿಗೂ ನನಗೆ ಉತ್ತರ ಕೊಟ್ಟು ಅಭ್ಯಾಸವಿಲ್ಲ.

ನನ್ನ ಮನೆ ಬಳಿಯೇ ಇರುವ ದೇವಸ್ಥಾನವದು. ಅದರಲ್ಲೂ ಸಂಜೆಯ ಹೊತ್ತಿಗೆ ಹೋಗಿ ಒಂದಿಷ್ಟು ಹೊತ್ತು ಕಳೆಯುತ್ತೇನೆ. ಆ ಹೊತ್ತಿನಲ್ಲಿ ಪೂಜೆಗೆ ಇನ್ನೂ ಸಿದ್ಧವಾಗಿರುವುದಿಲ್ಲ ; ಜನರಾರೂ ಬಂದಿರುವುದಿಲ್ಲ. ಅದು ಹಳೆಯ ದೇವಸ್ಥಾನ.

ಸಂಜೆಯ ಹೊತ್ತಿಗೆ ಹೋಗಿ ಕುಳಿತಾಗ ಆ ದಿವ್ಯ ಮೌನ ಪಾಸಿಟಿವ್‌ ಎನಿಸುವುದುಂಟು. ಅದಕ್ಕೇ ಅದು ಖುಷಿ. ಸಂಪೂರ್ಣ ದಿವ್ಯ ಮೌನದಲ್ಲಿ ಬೀಸಿ ಬರುವ ಗಾಳಿಯ ಶಬ್ದವೂ ಕೇಳಲಾಗುತ್ತದೆ. ಹಲವು ಬಾರಿ, ಹಾಗೆಯೇ ಗೋಡೆಗೆ ಒರಗಿದ್ದುಂಟು. ಎಂಥದ್ದೇ ಮನೆಯಲ್ಲಿ ಗಲಾಟೆ ಇದ್ದರೂ, ಕೆಲಸದ ಒತ್ತಡವಿದ್ದರೂ ಆ ಮೌನದಲ್ಲಿ ಖುಷಿ ಸಿಗುತ್ತದೆ.
ಇದೇ ಖುಷಿ ನನಗೆ ಸಿಕ್ಕಿದ್ದು ಕಾಶಿಯಲ್ಲಿ. ಅಂದು ಬೆಳಗ್ಗೆ. ಗಂಗಾ ನದಿಯ ವಿಹಾರಕ್ಕೆಂದು ಹೊರಟಿದ್ದೆ. ಬೆಳಗ್ಗೆ 5.30 ಸಮಯ. ಒಂದು ಘಾಟ್‌ ಬಳಿ ನಡೆದು ಹೋಗುತ್ತಿದ್ದೆ ; ಕುಳಿತುಕೊಳ್ಳಬೇಕೆನಿಸಿತು. ಕುಳಿತುಕೊಂಡೆ. ಸುತ್ತಲೂ ಕತ್ತಲು, ಸಣ್ಣಗಿರುವ ದಾರಿದೀಪದ ಬೆಳಕಷ್ಟೇ. ಗಾಳಿಯೂ ಚೆನ್ನಾಗಿ ಬೀಸುತ್ತಿತ್ತು. ಒಮ್ಮೆ ಕುಳಿತವನಿಗೆ ಮತ್ತೆಲ್ಲೂ ಹೋಗಬೇಕೆನಿಸಲೇ ಇಲ್ಲ. ಥೇಟ್‌ ನನ್ನ ಊರಿನ ದೇವಸ್ಥಾನದ ಸುಖವೇ ಅಲ್ಲೂ ಸಿಕ್ಕಿತು. ಆ ದಿವ್ಯ ಮೌನ, ಆ ಪಾಸಿಟಿವ್‌ನೆಸ್‌.

ಇದು ಐದು ವರ್ಷದ ಹಿಂದಿನ ಕಥೆ. ಈಗ ಕಷ್ಟಪಟ್ಟಾದರೂ ವರ್ಷಕ್ಕೊಮ್ಮೆ ಕಾಶಿಗೆ ಭೇಟಿ ಮಾಡುತ್ತೇನೆ, ಗಂಗಾ ತೀರದಲ್ಲಿ ಕುಳಿತುಕೊಳ್ಳಲಿಕ್ಕೆ. ಒಮ್ಮೆ ಮಾತ್ರ ಕೆಲಸದ ಒತ್ತಡದಿಂದ ತಪ್ಪಿ ಹೋಯಿತು. ಅದಕ್ಕೆ ವರ್ಷವಿಡೀ ಪರಿತಪಿಸಿದ್ದಿದೆ. ತೀರ್ಥಕ್ಷೇತ್ರ ಸುಮ್ಮನಲ್ಲ ಎಂದೆನಿಸಿದ್ದು ಆಗಲೇ.

- ಪರಶುರಾಮ್‌, ಉಡುಪಿ

ಟಾಪ್ ನ್ಯೂಸ್

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.