ನನ್ನೂರಿನ ದೇಗುಲವೂ ಗಂಗಾ ತೀರವೂ


Team Udayavani, Mar 16, 2020, 5:23 AM IST

ನನ್ನೂರಿನ ದೇಗುಲವೂ ಗಂಗಾ ತೀರವೂ

ನನಗೆ ಮನಸ್ಸಿಗೆ ಬೇಸರವಾದಾಗಲೆಲ್ಲಾ ದೇಗುಲಕ್ಕೆ ಹೋಗುವ ಅಭ್ಯಾಸವಿದೆ. ನಮ್ಮ ಮನೆಯವರಲ್ಲದೇ, ಸುತ್ತಲಿನವರೂ ಸಹ ನನ್ನನ್ನು ಕಂಡು, ಯಾವಾಗಲೂ ದೇವಸ್ಥಾನದಲ್ಲೇ ಇರುತ್ತೀಯಲ್ಲಾ, ಸ್ವಾಮಿ ಆಗಿಬಿಡು ಎಂದು ಛೇಡಿಸಿದ್ದೂ ಇದೆ. ಅಂಥ ಹೊತ್ತಿನಲ್ಲಿ ಎಷ್ಟೊ ಬಾರಿ ಅದೇ ಸರಿ ಎನ್ನಿಸುವುದಿದೆ. ಆದರೂ ಯಾರ ಮಾತಿಗೂ ನನಗೆ ಉತ್ತರ ಕೊಟ್ಟು ಅಭ್ಯಾಸವಿಲ್ಲ.

ನನ್ನ ಮನೆ ಬಳಿಯೇ ಇರುವ ದೇವಸ್ಥಾನವದು. ಅದರಲ್ಲೂ ಸಂಜೆಯ ಹೊತ್ತಿಗೆ ಹೋಗಿ ಒಂದಿಷ್ಟು ಹೊತ್ತು ಕಳೆಯುತ್ತೇನೆ. ಆ ಹೊತ್ತಿನಲ್ಲಿ ಪೂಜೆಗೆ ಇನ್ನೂ ಸಿದ್ಧವಾಗಿರುವುದಿಲ್ಲ ; ಜನರಾರೂ ಬಂದಿರುವುದಿಲ್ಲ. ಅದು ಹಳೆಯ ದೇವಸ್ಥಾನ.

ಸಂಜೆಯ ಹೊತ್ತಿಗೆ ಹೋಗಿ ಕುಳಿತಾಗ ಆ ದಿವ್ಯ ಮೌನ ಪಾಸಿಟಿವ್‌ ಎನಿಸುವುದುಂಟು. ಅದಕ್ಕೇ ಅದು ಖುಷಿ. ಸಂಪೂರ್ಣ ದಿವ್ಯ ಮೌನದಲ್ಲಿ ಬೀಸಿ ಬರುವ ಗಾಳಿಯ ಶಬ್ದವೂ ಕೇಳಲಾಗುತ್ತದೆ. ಹಲವು ಬಾರಿ, ಹಾಗೆಯೇ ಗೋಡೆಗೆ ಒರಗಿದ್ದುಂಟು. ಎಂಥದ್ದೇ ಮನೆಯಲ್ಲಿ ಗಲಾಟೆ ಇದ್ದರೂ, ಕೆಲಸದ ಒತ್ತಡವಿದ್ದರೂ ಆ ಮೌನದಲ್ಲಿ ಖುಷಿ ಸಿಗುತ್ತದೆ.
ಇದೇ ಖುಷಿ ನನಗೆ ಸಿಕ್ಕಿದ್ದು ಕಾಶಿಯಲ್ಲಿ. ಅಂದು ಬೆಳಗ್ಗೆ. ಗಂಗಾ ನದಿಯ ವಿಹಾರಕ್ಕೆಂದು ಹೊರಟಿದ್ದೆ. ಬೆಳಗ್ಗೆ 5.30 ಸಮಯ. ಒಂದು ಘಾಟ್‌ ಬಳಿ ನಡೆದು ಹೋಗುತ್ತಿದ್ದೆ ; ಕುಳಿತುಕೊಳ್ಳಬೇಕೆನಿಸಿತು. ಕುಳಿತುಕೊಂಡೆ. ಸುತ್ತಲೂ ಕತ್ತಲು, ಸಣ್ಣಗಿರುವ ದಾರಿದೀಪದ ಬೆಳಕಷ್ಟೇ. ಗಾಳಿಯೂ ಚೆನ್ನಾಗಿ ಬೀಸುತ್ತಿತ್ತು. ಒಮ್ಮೆ ಕುಳಿತವನಿಗೆ ಮತ್ತೆಲ್ಲೂ ಹೋಗಬೇಕೆನಿಸಲೇ ಇಲ್ಲ. ಥೇಟ್‌ ನನ್ನ ಊರಿನ ದೇವಸ್ಥಾನದ ಸುಖವೇ ಅಲ್ಲೂ ಸಿಕ್ಕಿತು. ಆ ದಿವ್ಯ ಮೌನ, ಆ ಪಾಸಿಟಿವ್‌ನೆಸ್‌.

ಇದು ಐದು ವರ್ಷದ ಹಿಂದಿನ ಕಥೆ. ಈಗ ಕಷ್ಟಪಟ್ಟಾದರೂ ವರ್ಷಕ್ಕೊಮ್ಮೆ ಕಾಶಿಗೆ ಭೇಟಿ ಮಾಡುತ್ತೇನೆ, ಗಂಗಾ ತೀರದಲ್ಲಿ ಕುಳಿತುಕೊಳ್ಳಲಿಕ್ಕೆ. ಒಮ್ಮೆ ಮಾತ್ರ ಕೆಲಸದ ಒತ್ತಡದಿಂದ ತಪ್ಪಿ ಹೋಯಿತು. ಅದಕ್ಕೆ ವರ್ಷವಿಡೀ ಪರಿತಪಿಸಿದ್ದಿದೆ. ತೀರ್ಥಕ್ಷೇತ್ರ ಸುಮ್ಮನಲ್ಲ ಎಂದೆನಿಸಿದ್ದು ಆಗಲೇ.

- ಪರಶುರಾಮ್‌, ಉಡುಪಿ

ಟಾಪ್ ನ್ಯೂಸ್

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Protest across the state if Ramanagara name is changed: pramod muthalik

Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

belagavBelagavi; ಮುಂದುವರಿದ ವರುಣಾರ್ಭಟ; ಮುಳುಗಡೆಯಾಯ್ತು 40 ಸೇತುವೆಗಳು

Belagavi; ಮುಂದುವರಿದ ವರುಣಾರ್ಭಟ; ಮುಳುಗಡೆಯಾಯ್ತು 40 ಸೇತುವೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.