ಒತ್ತಡ ನಿವಾರಣೆ ಸುಲಭ


Team Udayavani, Jun 18, 2019, 5:00 AM IST

t-18

ಬ್ಯುಸಿ ಲೈಫಿನಲ್ಲಿ ಒತ್ತಡ ಸರ್ವ ಸಾಮಾನ್ಯ. ಕೆಲಸ ಅಪೂರ್ಣವಾದಾಗ ಒತ್ತಡ, ಕೆಲಸ ಹೆಚ್ಚಾಗಿದ್ದಾಗ ಒತ್ತಡ ಹೀಗೇ ಒತ್ತಡ ಎಂಬುದು ನಮ್ಮ ಮನಸ್ಸು ಹೊಕ್ಕಲು ಸಾವಿರಾರರು ಕಾರಣಗಳಿರುತ್ತವೆ. ಬದುಕಿನಲ್ಲಿ ಸಾವಿರಾರು ಯೋಚನೆಗಳು ನಮ್ಮನ್ನು ಆವರಿಸಿಕೊಂಡು ಮಾಡುವ ಕೆಲಸಗಳನ್ನು ಸರಿಯಾಗಿ ಮಾಡದಂತೆ ನಮ್ಮನ್ನು ತಡೆಯುತ್ತವೆ. ಒತ್ತಡವೇ ಜೀವನ ಎಂಬುದು ಸದ್ಯದ ಸ್ಥಿತಿ. ದಿನನಿತ್ಯದ ಒತ್ತಡದಿಂದ ಹೊರಬರಲು ನಾವು ಸಾಕಷ್ಟು ಒದ್ದಾಡುತ್ತೇವೆ ಕೂಡ. ಪ್ರತಿದಿನ ಒತ್ತಡದಿಂದ ಹೊರಬರಲು ಇಲ್ಲಿದೆ ಸರಳ ವಿಧಾನ

ಇಷ್ಟವಾದ ಸಂಗೀತ ಆಲಿಸಿ
ಒತ್ತಡ ಸಂದರ್ಭಗಳು ಕೆಲಸಗಳನ್ನು ಮಾಡಲು ಅಡ್ಡಿ ಮಾಡುವುದಲ್ಲದೆ ಹೆಚ್ಚು ಕೆಲಸ ಮಾಡುವಲ್ಲಿ ವಿಫ‌ಲರಾಗುವಂತೆ ಮಾಡಿ ಬಿಡುತ್ತವೆ. ಆಗ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಇಷ್ಟವಾಗುವ ಸಂಗೀತವನ್ನು ಆಲಿಸಿ, ಆಗ ತಲೆಯಲ್ಲಿ ಬೇರೆ ಯಾವ ಯೋಚನೆಗಳು ಬರಲಾರವು. ಆಲಿಸುವ ಸಂಗೀತದ ಬಗ್ಗೆ ಮಾತ್ರ ಗಮನವಿದ್ದರೆ ಒತ್ತಡ ತನ್ನಿಂದ ತಾನಾಗಿಯೇ ಕಡಿಮೆಯಾಗತ್ತದೆ.

ಆಳವಾದ ಉಸಿರಾಟ
ಒತ್ತಡಕ್ಕೊಳಗಾದಾಗ ನಮ್ಮ ದೇಹ ಕಾರ್ಟಿಸೋಲ್‌ ಎಂಬ ಹಾರ್ಮೋನ್‌ ಬಿಡುಗಡೆ ಮಾಡುತ್ತದೆ. ಆಗ ನಮ್ಮ ಹೃದಯ ಬಡಿತ ಚುರುಕುಗೊಳ್ಳುತ್ತದೆ. ಇದರಿಂದ ಉಸಿರಾಟ ತೀವ್ರವಾಗಿ ಒತ್ತಡ ಹೆಚ್ಚಾಗುತ್ತದೆ. ಇದನ್ನು ತಡೆಯಲು ದೀರ್ಘ‌ವಾಗಿ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡಬೇಕು. ಇದನ್ನು 5 ರಿಂದ 6 ಬಾರಿ ಮಾಡಿ ಇದರಿಂದ ಮನಸ್ಸು ನಿರಾಳಗೊಳ್ಳುತ್ತದೆ.

ಸ್ವಲ್ಪ ವಿರಾಮ ನೀಡಿ
ಕೆಲಸ ಮಾಡುವಾಗ ತುಂಬಾ ಒತ್ತಡ ಕಂಡು ಬಂದಲ್ಲಿ ಮೊಬೈಲ್‌, ಲ್ಯಾಪ್‌ ಟಾಪ್‌ಗಳನು ಆಫ್ ಮಾಡಿ, ಎಲ್ಲವನ್ನು ಮರೆತು ಸ್ವಲ್ಪ ಸಮಯ ಬೇರೆ ಯಾವುದಾದರೂ ಖುಷಿ ಕೊಡುವ ಕಾರ್ಯದಲ್ಲಿ ತೊಡಗಿ ಅಥವಾ ಹತ್ತಿರದಲ್ಲಿರುವ ಪಾರ್ಕ್‌ಗಳಿಗೆ ಒಮ್ಮೆ ಹೋಗಿ ಬನ್ನಿ ಇದರಿಂದ ಒತ್ತಡದಿಂದ ಹೊರಬರಲು ಸಾಧ್ಯ ಸ್ನಾಯುಗಳಿಗೆ ವಿಶ್ರಾಂತಿ ನೀಡಿ ದಿನ ವೀಡಿ ಕೆಲಸ ಮಾಡಿ ದಣಿದಿರುತ್ತೀರಿ ಅಂತಹ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ವಿಶ್ರಾಂತಿ ಬೇಕಿರುತ್ತದೆ ಸ್ವಲ್ಪ ಸಮಯವಾದರೂ ಸ್ನಾಯುಗಳಿಗೆ ವಿಶ್ರಾಂತಿ ನೀಡಿ ಇದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಆನಂದ ಸಿಗುತ್ತದೆ. ದೇಹಕ್ಕಾದ ಒತ್ತಡ ಹಾಗೂ ಮನಸ್ಸಿನ ಒತ್ತಡದಿಂದ ಕೊಂಚ ವಿಶ್ರಾಂತಿ ದೊರಕುತ್ತದೆ.

ಧ್ಯಾನ ಮಾಡಿ
ಎಲ್ಲ ರೋಗಗಳಿಗೂ ರಾಮಬಾಣ ಧ್ಯಾನ. ಯಾವುದೇ ಕೆಲಸಗಳ ಕುರಿತು ತಲೆಕೆಡಿಸಿಕೊಳ್ಳದೆ ಒಂದಷ್ಟು ನಿಮಿಷ ಧ್ಯಾನದ ಸ್ಥಿತಿಯಲ್ಲಿ ಕುಳಿತರೆ ದಿನಾ ಉಲ್ಲಾಸದಿಂದ ಕೂಡಿರಲು ಸಾಧ್ಯ. ದಿನಾ ಬೆಳಗ್ಗೆ ಕೆಲವು ನಿಮಿಷವಾದರೂ ಧ್ಯಾನದಿಂದ ಆತಂಕ ಕಡಿಮೆಯಾಗುತ್ತದೆ. ಅದಲ್ಲದೆ ಒತ್ತಡದಲ್ಲಿರುವಾಗ ಬಹು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಧ್ಯಾನದಿಂದ ಕ್ರಿಯಾಶೀಲರಾಗಲು ಸಾಧ್ಯ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.