ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಗಜಕರ್ಣ
Team Udayavani, Jun 8, 2018, 6:00 AM IST
ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್, ತೆಕ್ಕಟ್ಟೆ, ಗೀತಾನಂದ ಫೌಂಡೇಶನ್ ಕೋಟ, ರಂಗ ಸಂಪದ ಕೋಟ, ಯಶಸ್ವಿ ಕಲಾವೃಂದ (ರಿ.)ಕೊಮೆ, ಇವರ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನಡೆದ “ರಂಗ ರಂಗು-2018′ ರಂಗ ತರಬೇತಿ ಶಿಬಿರದಲ್ಲಿ 18ದಿನಗಳ ತರಬೇತಿ ಹೊಂದಿದವರ ಜೂನಿಯರ್ ವಿಭಾಗದ ನಾಟಕ ಪ್ರದರ್ಶನ ಗಮನ ಸೆಳೆಯುವಂತಿತ್ತು. ಬಿಳಿಗೆರೆ ಕೃಷ್ಣಮೂರ್ತಿಯವರ ಕೃತಿ , ರಂಗಕರ್ಮಿ ರೋಹಿತ್ ಎಸ್. ಬೆ„ಕಾಡಿ ಬಳಗದವರ ತರಬೇತಿಯಲ್ಲಿ ಸಿದ್ಧಗೊಂಡ ಅದ್ಭುತವಾದ ನೆರಳು ಬೆಳಕಿನ ಸಂಯೋಜನೆಯ ಕಲಾತ್ಮಕ ನಾಟಕ “ಗಜಕರ್ಣ’ಯಶಸ್ವಿಯಾಗಿ ಮೂಡಿಬಂದಿದೆ.
ವೇಗದ ಬದುಕಿನಲ್ಲಿ ಮಾನವ ತನ್ನ ಸ್ವಾರ್ಥ ಚಿಂತನೆಯಿಂದ ಪ್ರಕೃತಿಯನ್ನೇ ನಾಶ ಮಾಡಿ ಕಾಂಕ್ರಿಟ್ ಕಾನನವನ್ನು ನಿರ್ಮಿಸಿ ಪ್ರಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದ್ದಾನೆ. ಪ್ರಕೃತಿ ಮನುಷ್ಯನೊಬ್ಬನ ಸ್ವತ್ತಲ್ಲ , ಬದಲಾಗಿ ಎಂಬತ್ತು ಕೋಟಿ ಜೀವರಾಶಿಗಳಿಗೆ ಸೇರಿದ್ದು, ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ನಿಸರ್ಗದಲ್ಲಿನ ಗಾಳಿ, ನೀರು ಎಲ್ಲ ಕಲುಷಿತಗೊಳ್ಳುತ್ತಿದ್ದು ಪ್ರಕೃತಿ ಕೂಗು, ಕೊರಗು ಹೇಗಿರಬಹುದು ? ಈ ಪ್ರಶ್ನೆಯೊಂದಿಗೆ ರೂಪುಗೊಂಡ ನಾಟಕ ಗಜಕರ್ಣ. ಇಡೀ ನಾಟಕ ಕೇಂದ್ರ ಬಿಂದುವಾದ ಅಗಲ ಕಿವಿಯ ಅರಿವುಗಾರನಾಗಿ ಈ ಪ್ರಕೃತಿಯ ವಿರುದ್ಧ ಅಟ್ಟಹಾಸ ಮೆರೆಯುತ್ತಿರುವ ಈ ಮನುಕುಲಕ್ಕೆ ಕಟ್ಟ ಕಡೆಯ ಸಂದೇಶ ನೀಡಿ, ಸಮಾಜಕ್ಕೆ ಅರಿವು ಮೂಡಿಸುವ ಆಶಯದೊಂದಿಗೆ ಅಭಿವ್ಯಕ್ತಿಗೊಂಡಿದೆ.
ನಾನೇ ಅರಿವುಗಾರನಾಗಿ ಬರುತ್ತೇನೆ ಎಂದು ಬರುವ ಮಕ್ಕಳ ಪ್ರೀತಿಯ ಗಣೇಶನ ನೆರವಿನಿಂದ ಪ್ರಕೃತಿ ಮೂಲ ನದಿ, ಕಾಡು, ಬೆಟ್ಟ , ಆಕಾಶ ಮುಂತಾದವುಗಳ ಕೊರಗನ್ನು ಎಳೆಯ ಮನಸ್ಸಿನಿಂದ ಹಿರಿಯ ಮನಸ್ಸುಗಳಿಗೆ ಈ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದಿಂದಾಗಿ ಆಗಬಹುದಾದ ಅನಾಹುತಗಳ ಬಗೆಗೆ ವಿಭಿನ್ನವಾಗಿ ಎಚ್ಚರಿಸುವ ದೃಶ್ಯಗಳು ಇಡೀ ನಾಟಕದ ಜೀವಾಳವಾಗಿದೆ.
ನಾಟಕದಲ್ಲಿ ಕೇಡಾಪುರ ಇಂದಿನ ಆಧುನಿಕ ಸಿಟಿಯಾಗಿದೆ. ಈ ಕೇಡಾಪುರದಿಂದ ಪುರಾತನ ರಾಜನ ಕಾಲಕ್ಕೆ ಹೋಗುವ ಗಜಕರ್ಣ ಇಲ್ಲಿನ ವಾಸ್ತವ ಸ್ಥಿತಿಯನ್ನು ಹೇಳುತ್ತಾನೆ. ಕೇಡಾಪುರದಲ್ಲಿ ಮಕ್ಕಳು ಮೊದಲಿಗೆ ಕಿವಿಗಳನ್ನು ಎಳೆದು ಅಮಾನವೀಯವಾಗಿ ಆಟವಾಡಿದರೆ , ದೊಡ್ಡವರು ಇವನ ಕಿವಿಗಳಿಗೆ ಪ್ರಕೃತಿಯ ಮಾತು ಕೇಳಿಸಿಕೊಳ್ಳುವ ಮಾಂತ್ರಿಕ ಶಕ್ತಿ ಇದೆ ಎಂದು ಅರಿತು ಪ್ರಕೃತಿಯ ಗುಟ್ಟನ್ನು ತಿಳಿಯಲು ಗಜಕರ್ಣನನ್ನು ಪೀಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗಜಕರ್ಣ ಊರುಬಿಟ್ಟು ಹೊರಟು ಕಾಡುದಾರಿಯಲ್ಲಿ ಎದುರಾಗುವ ಪ್ರಕೃತಿಯ ಮಕ್ಕಳು , ಪ್ರಕೃತಿ ನಾಶದ ಬಗ್ಗೆ ಆಗುವ ವಿಕೋಪಗಳ ಬಗ್ಗೆ ಎಚ್ಚರಿಸುವ ದೃಶ್ಯಗಳು ಹಾಗೂ ತೆರೆಯ ಹಿಂದೆ ತೇಲಿ ಬರುವ ಪರಿಸರ ಗೀತೆ ಪ್ರೇಕ್ಷಕನನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ಯುತ್ತದೆ.ಅಗಲ ಕಿವಿಯ ಅರಿವುಗಾರನಾದ ಗಜಕರ್ಣನ ಮಾತಿಗೆ ಪ್ರೇರೇಪಿತರಾದ ಮಕ್ಕಳು ದೊಡ್ಡವರ ಮಾತು ಕೇಳದಾದರೂ, ಈ ಭುವಿಯೊಳಗಿನ ಚಿನ್ನ ತೋರಿಸುವಂತೆ ಪೀಡಿಸುತ್ತಾರೆ ನಂತರ ಅನ್ಯ ಮಾರ್ಗವಿಲ್ಲದೆ ಅಗಲ ಕಿವಿಯ ಅರಿವುಗಾರ ಗಜಕರ್ಣ ನಿಧಿ ಇರುವ ಜಾಗವನ್ನು ತೋರಿಸಿದಾಗ ಜನರೆಲ್ಲ ಚಿನ್ನ ಅಗೆಯುತ್ತಿದ್ದಾಗ ರಾಜಭಟರು ಗಜಕರ್ಣನನ್ನು ಸೆರೆಹಿಡಿದು ರಾಜರ ಬಳಿಗೆ ಕರೆದಾಗ ಈ ಕತೆಯನ್ನು ರಾಜನ ಬಳಿ ಹೇಳುತ್ತಾನೆ.
ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?