ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಗಜಕರ್ಣ 


Team Udayavani, Jun 8, 2018, 6:00 AM IST

c-6.jpg

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್‌, ತೆಕ್ಕಟ್ಟೆ, ಗೀತಾನಂದ ಫೌಂಡೇಶನ್‌ ಕೋಟ, ರಂಗ ಸಂಪದ ಕೋಟ, ಯಶಸ್ವಿ ಕಲಾವೃಂದ (ರಿ.)ಕೊಮೆ, ಇವರ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನಡೆದ “ರಂಗ ರಂಗು-2018′ ರಂಗ ತರಬೇತಿ ಶಿಬಿರದಲ್ಲಿ 18ದಿನಗಳ ತರಬೇತಿ ಹೊಂದಿದವರ ಜೂನಿಯರ್‌ ವಿಭಾಗದ ನಾಟಕ ಪ್ರದರ್ಶನ ಗಮನ ಸೆಳೆಯುವಂತಿತ್ತು. ಬಿಳಿಗೆರೆ ಕೃಷ್ಣಮೂರ್ತಿಯವರ ಕೃತಿ , ರಂಗಕರ್ಮಿ ರೋಹಿತ್‌ ಎಸ್‌. ಬೆ„ಕಾಡಿ ಬಳಗದವರ ತರಬೇತಿಯಲ್ಲಿ ಸಿದ್ಧಗೊಂಡ ಅದ್ಭುತವಾದ ನೆರಳು ಬೆಳಕಿನ ಸಂಯೋಜನೆಯ ಕಲಾತ್ಮಕ ನಾಟಕ “ಗಜಕರ್ಣ’ಯಶಸ್ವಿಯಾಗಿ ಮೂಡಿಬಂದಿದೆ.

ವೇಗದ ಬದುಕಿನಲ್ಲಿ ಮಾನವ ತನ್ನ ಸ್ವಾರ್ಥ ಚಿಂತನೆಯಿಂದ ಪ್ರಕೃತಿಯನ್ನೇ ನಾಶ ಮಾಡಿ ಕಾಂಕ್ರಿಟ್‌ ಕಾನನವನ್ನು ನಿರ್ಮಿಸಿ ಪ್ರಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದ್ದಾನೆ. ಪ್ರಕೃತಿ ಮನುಷ್ಯನೊಬ್ಬನ ಸ್ವತ್ತಲ್ಲ , ಬದಲಾಗಿ ಎಂಬತ್ತು ಕೋಟಿ ಜೀವರಾಶಿಗಳಿಗೆ ಸೇರಿದ್ದು, ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ನಿಸರ್ಗದಲ್ಲಿನ ಗಾಳಿ, ನೀರು ಎಲ್ಲ ಕಲುಷಿತಗೊಳ್ಳುತ್ತಿದ್ದು ಪ್ರಕೃತಿ ಕೂಗು, ಕೊರಗು ಹೇಗಿರಬಹುದು ? ಈ ಪ್ರಶ್ನೆಯೊಂದಿಗೆ ರೂಪುಗೊಂಡ ನಾಟಕ ಗಜಕರ್ಣ. ಇಡೀ ನಾಟಕ ಕೇಂದ್ರ ಬಿಂದುವಾದ ಅಗಲ ಕಿವಿಯ ಅರಿವುಗಾರನಾಗಿ ಈ ಪ್ರಕೃತಿಯ ವಿರುದ್ಧ ಅಟ್ಟಹಾಸ ಮೆರೆಯುತ್ತಿರುವ ಈ ಮನುಕುಲಕ್ಕೆ ಕಟ್ಟ ಕಡೆಯ ಸಂದೇಶ ನೀಡಿ, ಸಮಾಜಕ್ಕೆ ಅರಿವು ಮೂಡಿಸುವ ಆಶಯದೊಂದಿಗೆ ಅಭಿವ್ಯಕ್ತಿಗೊಂಡಿದೆ.

ನಾನೇ ಅರಿವುಗಾರನಾಗಿ ಬರುತ್ತೇನೆ ಎಂದು ಬರುವ ಮಕ್ಕಳ ಪ್ರೀತಿಯ ಗಣೇಶನ ನೆರವಿನಿಂದ ಪ್ರಕೃತಿ ಮೂಲ ನದಿ, ಕಾಡು, ಬೆಟ್ಟ , ಆಕಾಶ ಮುಂತಾದವುಗಳ ಕೊರಗನ್ನು ಎಳೆಯ ಮನಸ್ಸಿನಿಂದ ಹಿರಿಯ ಮನಸ್ಸುಗಳಿಗೆ ಈ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದಿಂದಾಗಿ ಆಗಬಹುದಾದ ಅನಾಹುತಗಳ ಬಗೆಗೆ ವಿಭಿನ್ನವಾಗಿ ಎಚ್ಚರಿಸುವ ದೃಶ್ಯಗಳು ಇಡೀ ನಾಟಕದ ಜೀವಾಳವಾಗಿದೆ.

ನಾಟಕದಲ್ಲಿ ಕೇಡಾಪುರ ಇಂದಿನ ಆಧುನಿಕ ಸಿಟಿಯಾಗಿದೆ. ಈ ಕೇಡಾಪುರದಿಂದ ಪುರಾತನ ರಾಜನ ಕಾಲಕ್ಕೆ ಹೋಗುವ ಗಜಕರ್ಣ ಇಲ್ಲಿನ ವಾಸ್ತವ ಸ್ಥಿತಿಯನ್ನು ಹೇಳುತ್ತಾನೆ. ಕೇಡಾಪುರದಲ್ಲಿ ಮಕ್ಕಳು ಮೊದಲಿಗೆ ಕಿವಿಗಳನ್ನು ಎಳೆದು ಅಮಾನವೀಯವಾಗಿ ಆಟವಾಡಿದರೆ , ದೊಡ್ಡವರು ಇವನ ಕಿವಿಗಳಿಗೆ ಪ್ರಕೃತಿಯ ಮಾತು ಕೇಳಿಸಿಕೊಳ್ಳುವ ಮಾಂತ್ರಿಕ ಶಕ್ತಿ ಇದೆ ಎಂದು ಅರಿತು ಪ್ರಕೃತಿಯ ಗುಟ್ಟನ್ನು ತಿಳಿಯಲು ಗಜಕರ್ಣನನ್ನು ಪೀಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗಜಕರ್ಣ ಊರುಬಿಟ್ಟು ಹೊರಟು ಕಾಡುದಾರಿಯಲ್ಲಿ ಎದುರಾಗುವ ಪ್ರಕೃತಿಯ ಮಕ್ಕಳು , ಪ್ರಕೃತಿ ನಾಶದ ಬಗ್ಗೆ ಆಗುವ ವಿಕೋಪಗಳ ಬಗ್ಗೆ ಎಚ್ಚರಿಸುವ ದೃಶ್ಯಗಳು ಹಾಗೂ ತೆರೆಯ ಹಿಂದೆ ತೇಲಿ ಬರುವ ಪರಿಸರ ಗೀತೆ ಪ್ರೇಕ್ಷಕನನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ಯುತ್ತದೆ.ಅಗಲ ಕಿವಿಯ ಅರಿವುಗಾರನಾದ ಗಜಕರ್ಣನ ಮಾತಿಗೆ ಪ್ರೇರೇಪಿತರಾದ ಮಕ್ಕಳು ದೊಡ್ಡವರ ಮಾತು ಕೇಳದಾದರೂ, ಈ ಭುವಿಯೊಳಗಿನ ಚಿನ್ನ ತೋರಿಸುವಂತೆ ಪೀಡಿಸುತ್ತಾರೆ ನಂತರ ಅನ್ಯ ಮಾರ್ಗವಿಲ್ಲದೆ ಅಗಲ ಕಿವಿಯ ಅರಿವುಗಾರ ಗಜಕರ್ಣ ನಿಧಿ ಇರುವ ಜಾಗವನ್ನು ತೋರಿಸಿದಾಗ ಜನರೆಲ್ಲ ಚಿನ್ನ ಅಗೆಯುತ್ತಿದ್ದಾಗ ರಾಜಭಟರು ಗಜಕರ್ಣನನ್ನು ಸೆರೆಹಿಡಿದು ರಾಜರ ಬಳಿಗೆ ಕರೆದಾಗ ಈ ಕತೆಯನ್ನು ರಾಜನ ಬಳಿ ಹೇಳುತ್ತಾನೆ.

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.