ಮನವನ್ನು ಮೀಟಿದ ಬಾಲಕ


Team Udayavani, Jul 7, 2017, 4:05 PM IST

KALA-2.jpg

ಮಳೆಗಾಲದ ಮಧ್ಯ ತುಸುವೇ ಬಿಸಿಲು ಕಂಡ ಆಹ್ಲಾದ ಕರವಾದ ಇಳಿಹಗಲಿನಲ್ಲಿ ವೀಣೆಯ ನಾದ ಅಲೆಅಲೆಯಾಗಿ ತೇಲಿಬರುತ್ತಿತ್ತು. ಆರಭಿ ರಾಗದ ನಾದಸೌಖ್ಯದ ಸೆಳೆತಕ್ಕೊಳಗಾಗಿ ಸಭೆಯೊಳಗೆ ಪ್ರವೇಶಿಸಿದಾಗ ನಾವು ನಿರೀಕ್ಷಿಸಿದ್ದು ಹಲವು ವರ್ಷಗಳ ಅನುಭವವುಳ್ಳ ಪ್ರೌಢ ಕಲಾವಿದರನ್ನು; ಆದರೆ ವೇದಿಕೆಯಲ್ಲಿ ಕಂಡದ್ದು ಇನ್ನೂ ಹದಿನಾರು ತುಂಬದ ಬಾಲಕನನ್ನು! ಬೆಂಗಳೂರಿನ ಈ ಕಿಶೋರ ರಮಣ ಬಾಲಚಂದ್ರನ್‌. ಅಸಾಧಾರಣವೆನ್ನಬಹುದಾದ ಓರ್ವ ಬಾಲ ಪ್ರತಿಭೆ!

ಮಣಿಪಾಲದ “ಕಲಾ ಸ್ಪಂದನ’ ಸಂಸ್ಥೆಯ 22ನೆಯ ವಾರ್ಷಿಕೋತ್ಸವ ವೀಣಾ ವರ್ಷ ವೈಭವದ ಅಂಗವಾಗಿ ಈ ಕಲಾವಿದನ ಕಛೇರಿ ಉಡುಪಿಯ ರಾಜಾಂಗಣದಲ್ಲಿ   2-7-2017ರಂದು ನಡೆಯಿತು.

ರಮಣನದು ಚೂರೂ ಪಿಸಿರಿಲ್ಲದ ಶುದ್ಧವಾದ ನುಡಿಸಾಣಿಕೆ. ಸಾಹಿತ್ಯದ ಉತ್ತಮ ತಿಳಿವಳಿಕೆಯೊಂದಿಗೆ  ಕೃತಿಯ ಶಬ್ದರಚನೆಗೆ ಭಂಗ ಬಾರದಂತೆ ವಹಿಸುವ ಕಾಳಜಿ. ಪ್ರತಿಯೊಂದು ಮೀಟಿನಲ್ಲೂ  ದೀರ್ಘ‌ವಾಗಿ ಅನುರಣಿಸುವ ನಾದೋಲ್ಲಾಸ! ಆರಭಿ ರಾಗದ ಪ್ರಥಮ ಕೃತಿಯಲ್ಲೇ (ಗಣರಾಜೇನ) ರಸಿಕರನ್ನು ಸೆಳೆದಿಟ್ಟುಕೊಂಡ ಈ ವೈಣಿಕ ಬಹುದಾರಿ (ಭೊವಭಾರಮಾ), ಕಾಪಿನಾರಾಯಣ  (ಸರಸ ಸಾಮದಾನ), ಮನೋರಂಜನಿ ರಾಗಗಳನ್ನು ತ್ವರಿತಗತಿಯಲ್ಲಿ ಸೊಗಸಾದ ಸಂಗತಿಗಳೊಂದಿಗೆ ನುಡಿಸಿದರು. ಪ್ರತಿಯೊಂದು ಪ್ರಸ್ತುತಿಯಲ್ಲೂ ಆಗಾಗ ವೀಣೆಯೊಂದಿಗೆ ಧ್ವನಿಗೂಡಿಸುತ್ತಿದ್ದ ಕಲಾವಿದರು ಸಾಹಿತ್ಯ ಭಾವವನ್ನು ಅನುಸರಿಸಲು ಶ್ರೋತೃವಿಗೆ ಅನುವು ಮಾಡಿಕೊಟ್ಟರು.

ಕಮಾಚ್‌ ರಾಗದ (ಶ್ರೀಪತಿ ನಿನ್ನು) ಹೃದಯಸ್ಪರ್ಶಿಯಾದ ಆಲಾಪನೆ, ಕೃತಿ ಮತ್ತು ಸ್ವರಕಲ್ಪನೆಗಳು ಕೃತಕ ಅಬ್ಬರಗಳಿಲ್ಲದೆ ಸರಳ ಸುಂದರವಾಗಿ ಮೂಡಿಬಂದವು. ಅನಂತರ ಗಾಂಭೀರ್ಯ ಮತ್ತು ಮಾಧುರ್ಯದ ಸಮೀಕರಣ ಎಂಬಂತೆ ಹಿತವಾದ ಶಂಕರಾಭರಣ ಆಲಾಪನೆ. ಎರಡು ಸ್ಥಾಯಿಗಳಲ್ಲಿ  ಪರ್ಯಾಯವಾಗಿ ಸಂಚಾರಗಳನ್ನು ನುಡಿಸುತ್ತ ರಾಗವೈವಿಧ್ಯ ತೋರಿದ ಕಲಾವಿದರು ಪೋಗದಿರೆಲೋ ಪ್ರಸ್ತುತಿಯಲ್ಲಿ  (ಮಿಶ್ರ ಛಾಪು ತಾಳ) ಪ್ರಬುದ್ಧವಾದ ಕಲ್ಪನಾಸ್ವರಗಳು ಮತ್ತು ಸುದೀರ್ಘ‌ವಾದ ಮುಕ್ತಾಯಗಳನ್ನು ಸುಲಲಿತವಾಗಿ ನೀಡಿದರು. ಸಾಮಾನ್ಯವಾಗಿ ವಾದ್ಯ ಕಛೇರಿಗಳ ವೇದಿಕೆಯ ಪಕ್ಕದಲ್ಲಿ  ಅಥವಾ ಎದುರುಗಡೆ ಕಾಣಲು ಸಿಗುವ ತಾಳ ಸಹಕಾರದವರು ಈ ಕಛೇರಿಯಲ್ಲಿ ಇರಲಿಲ್ಲವೆನ್ನುವುದು ಗಮನಾರ್ಹ!

ತೋಡಿಯ ಸುಶ್ರಾವ್ಯವಾದ ಆಲಾಪನೆಯ ಅನಂತರ ನುಡಿಸಲಾದ ಚುಟುಕಾದ “ಚಿಟ್ಟೆ ತಾನಂ’, ಶ್ರೀ ಕೃಷ್ಣಂ ಭಜ ವಿಳಂಬ ಕಾಲ ಕೃತಿಗೆ ನೀಡಲಾದ ಖಚಿತವಾದ ಸ್ವರವಿನಿಕೆಗಳು, ಪ್ರತಿಯೊಂದು ಆವರ್ತದಲ್ಲೂ ಕುರೈಪ್ಪುಗಳಲ್ಲೂ  ಮೊಹರಾಗಳಲ್ಲೂ ವ್ಯಕ್ತವಾದ ಅವರ ಲಯಪ್ರಮಾಣದ ದೃಢತೆ!  ಗುಣಗ್ರಾಹಿ ಶ್ರೋತೃಗಳ ಮುಕ್ತ  ಪ್ರಶಂಸೆಯನ್ನು ಪಡೆದವು. ಈ ಪ್ರಸ್ತುತಿಯಲ್ಲಿ  ನುಡಿಸಲಾದ ರಾಗಮಾಲಿಕಾ ಸ್ವರವಿನಿಕೆಗಳು  (ವಲಚ, ರಸಾಳಿ, ಸುರಟಿ) ಹೃದ್ಯವಾಗಿದ್ದವು.

ದೇಶ್‌ (ಕುಲ ಕುಲವೆಂದು), ಬೆಹಾಗ್‌ (ಕಂಡು ಧನ್ಯ), ಯಮನ್‌ (ಕೃಷ್ಣಾ ನೀ ಬೇಗನೆ) ಲಘು ಪ್ರಸ್ತುತಿಗಳು, ಉನ್ನತ ಮಟ್ಟದ ನಾದ ಸಂಸ್ಕಾರದೊಂದಿಗೆ ಅತ್ಯಂತ ಮನೋಜ್ಞವಾಗಿ ಮೂಡಿಬಂದು ರಸಿಕರನ್ನು  ಪರವಶಗೊಳಿಸಿದವು.
ವೈಣಿಕರ ಇಂಗಿತವರಿತು ಮೃದುವಾಗಿ ಮೃದಂಗ ನುಡಿಸಿದ ನಿಕ್ಷಿತ್‌ ಪುತ್ತೂರು ಮತ್ತು ಘಟದಲ್ಲಿ ಸಹಕರಿಸಿದ ಕೊಟ್ಟಯಂ ಉನ್ನಿಕೃಷ್ಣನ್‌ ಮುಂದೆ ತನಿ ಆವರ್ತನದಲ್ಲಿ ಅತ್ಯುತ್ತಮವಾದ ಲಯಗಾರಿಕೆ ತೋರಿ ಸಭೆಯನ್ನು  ರಂಜಿಸಿದರು.

ಈ ಕಛೇರಿ ಅಂತೆಯೇ ಆ ದಿನಪೂರ್ತಿ ನಡೆದ, ವೀಣೆಗೆ ಸಂಬಂಧಿಸಿದಂತಹ ಇತರ ಎಲ್ಲ ಕಾರ್ಯಕ್ರಮಗಳನ್ನೂ  ಡಾ| ಪಳ್ಳತ್ತಡ್ಕ  ಕೇಶ ಭಟ್‌ ಮೆಮೋರಿಯಲ್‌ ಟ್ರಸ್ಟ್‌ (ರಿ.) ಮಣಿಪಾಲ ಆಯೋಜಿಸಿತ್ತು.

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.