ದೇವದಾಸರ ವರ್ಣವಿಲಾಸ


Team Udayavani, Sep 23, 2017, 12:55 PM IST

23-Kalavihara11.jpg

ಮುಂಬಯಿಯ ಕಲಾವಿದ ದೇವದಾಸ್‌ ಶೆಟ್ಟಿಯವರು ತನ್ನ 71ನೇ ವಯಸ್ಸಿನಲ್ಲಿ 45ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ 70ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರಿನಲ್ಲಿ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ನಡೆಸಿದ್ದಾರೆ. ಘಟನೆಗಳಿಂದ ಆಗುವ ವಿಭಜನೆಗಳನ್ನು, ಸಂವೇದನೆಗಳಿಂದ ಆಗುತ್ತಿರುವ ಜಟಿಲ ಸಂಕೀರ್ಣತೆಗಳನ್ನು, ಭಾವನಾತ್ಮಕ ಸ್ಪಂದನೆಯಲ್ಲಿಯೂ ಆಗಲಿರುವ ಕಠಿನ, ದೊರಗು ಸನ್ನಿವೇಶಗಳನ್ನು ವಿಷಯಕ್ಕನುಗುಣವಾಗಿ ಮಾರ್ಮಿಕವಾಗಿ ಬಣ್ಣಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಹಣತೆ ದೀಪವು ಕತ್ತಲೆಯ ಮನೆಗೆ ಬೆಳಕಾಗಲೂಬಹುದು, ಅದೇ ದೀಪವು ವಿಕಟವಾಗಿ ಬೆಳಕಾದ ಮನೆಯನ್ನು ಹೊತ್ತಿ ಉರಿಸುವ ಶಕ್ತಿಯೂ ಆಗಬಹುದು. ವಸ್ತು ಒಂದೇ, ಕ್ರಿಯೆಗಳು ವಿಭಿನ್ನ.
 
ಮಾನವ ಶಕ್ತಿಯ ಅಗಾಧತೆಯೂ ಇದೇ ರೀತಿ; ಪಾತಾಳ ಸೇರುವುದೋ, ಗಿರಿಯ ಗುರಿ ಮುಟ್ಟುವುದೋ ಎಂಬಂತಿದ್ದು ಸಂಘಟಿತವಾಗುವ ಮನಸ್ಸುಗಳ ಪರಿಕಲ್ಪನೆಗಳಿಗೆ ಸೀಮಿತವಾಗಿರುತ್ತದೆ. ಆಡನ್ನು ಹಿಡಿಯಲಾಗದವರು ಆನೆಯನ್ನು ಹಿಡಿದು ಪಳಗಿಸುವುದೆಂದರೆ ಇದು ಕ್ರಿಯಾತ್ಮಕ ಶಕ್ತಿಗಿಂತ ಮಾನಸಿಕ ಸ್ಥೈರ್ಯಕ್ಕೆ ನಿದರ್ಶನವಾಗುತ್ತದೆ. ದೇವದಾಸ ಶೆಟ್ಟರು ಇವೇ ತಣ್ತೀಗಳನ್ನು ಸಮಾಜದ ಅಗೋಚರ ವ್ಯವಸ್ಥೆಯಿಂದ ಹುಡುಕಿ ಕೃತಿರೂಪಕ್ಕಿಳಿಸಿ, ವೀಕ್ಷಕರು ತನ್ನ ಸುತ್ತಮುತ್ತಲಿನ ನಿಲುವು, ಧೋರಣೆಗಳನ್ನು ಪರದೆಯಾಚೆ ಗ್ರಹಿಸುವಂತೆ ರೂಪಿಸಿರುವರು. ವ್ಯಾಮೋಹಗಳೇ ಅತಿಯಾಗಿ ಬದುಕಿನ ಭದ್ರತೆಯನ್ನೇ ಕೆಡಿಸುವಂತಾಗಿ ತನ್ನತನವನ್ನು ಕಳೆದುಕೊಳ್ಳುವ ಚಿತ್ರಣಗಳು, ನಾರಿಯ ಭಾವುಕತೆಯನ್ನು ಸಂಗೀತದ ನಿನಾದಗಳಲ್ಲಿ ಹರಡಿಸುವ ತಲ್ಲಣಗಳು, ಮಮತೆ, ವಾತ್ಸಲ್ಯದ ಸಂಬಂಧಗಳು ಅರ್ಥ ಪೂರ್ಣವಾಗಿ ಅರ್ಥರಹಿತವಾಗುವ ದುರಂತಗಳನ್ನು ಇವರು ತನ್ನದೇ ಶೈಲಿಯ ರೇಖೆಗಳೊಂದಿಗೆ ಬಣ್ಣ ಹರಡಿ ಕೃತಿಕರ್ತನಾಗಿರುವುದರಿಂದ ಪ್ರದರ್ಶನದ ಕಲಾಕೃತಿಗಳು ಸಮಾಜಕ್ಕೆ ಪ್ರತಿಬಿಂಬವಾಗಿದ್ದು ವೀಕ್ಷಕ ಸಹಜವಾಗಿಯೇ ಸಮಾಜಮುಖೀಯಾಗುವಂತೆ ಪ್ರೇರೇಪಿಸುತ್ತವೆ. ಮನುಷ್ಯನ ಆಸೆಯ ಇತಿಮಿತಿಗಳಿಗೆ ಬಿಂದಿಗೆ, ಕೊಡೆ, ಚಕ್ರ, ದೀಪ, ಕೊಳಲು ಮುಂತಾದವುಗಳನ್ನು ಸಾಂಕೇತಿಕ ರೂಪವಾಗಿ ಬಳಸಿಕೊಂಡು ಕತ್ತಲೆಯಾಚೆಯ ಬೆಳಕನ್ನೂ ಶೂನ್ಯದಾಚೆಯ ಅನಂತರೂಪವನ್ನೂ ಬೀಜದಾಚೆೆಯ ಹೆಮ್ಮರವನ್ನೂ ಪ್ರತಿಕ್ರಿಯಿಸಿದ್ದಾರೆ. ಕರಾವಳಿಯ ದಸರಾಹುಲಿ, ಆನೆಯನ್ನು ಸೆರೆಹಿಡಿಯುವ ಖೆಡ್ಡಾ, ನೃತ್ಯಗಾರ, ಗೊಲ್ಲನ ಕೊಳಲಿಗೆ ಧ್ವನಿಯಾಗುವ ದನ‌ಗಳು, ಅಶ್ವಶಕ್ತಿಯ ಅಗಾಧತೆ ಇವೆಲ್ಲವೂ ದೇವದಾಸರ ವರ್ಣವಿಲಾಸಗಳಾಗಿದ್ದವು. 

ಇವರ ಕಲಾಕೃತಿಗಳು ವ್ಯಕ್ತಿಗತ ಹಾಗೂ ವಸ್ತುಹಿತಗಳಾಗಿ ಬಹುವರ್ಣದಲ್ಲಿ ರೇಖೆಗಳ ಸಂಚಯದಲ್ಲಿ ವೈಶಿಷ್ಟ್ಯತೆಯ ಮೆಟ್ಟಿಲೇರು ತ್ತವೆ. ಇವರ ಕಲಾಕೃತಿಗಳು ಏಕವಿಷಯಕ್ಕೆ ಸೀಮಿತವಾಗಿರದೆ ಹಲವು ವಿಚಾರಧಾರೆಗಳ ಸಂಗಮವಾಗಿರುತ್ತವೆ. ದೇವದಾಸರು ರೇಖಾ ಚಿತ್ರಗಳಲ್ಲೂ ವಿಶೇಷ ಪ್ರಬುದ್ಧರಾಗಿದ್ದು ಸಾಹಿತ್ಯ-ಸಂಗೀತಗಳನ್ನೂ ಆರಾಧಿಸುವ ಕಲಾವಿದರು. ಬಾಂಬೆ ಆರ್ಟ್‌ ಸೊಸೈಟಿ, ಶಾಂತಿನಿಕೇತನ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಕಲಾಭೂಷಣ, ಕರ್ನಾಟಕ ಕಲಾರತ್ನ, ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿಗಳು ಇವರ ಕಲಾ ಪ್ರತಿಭೆಗೆ ಸಂದಿರುವ ಗೌರವಗಳು. ರಾಷ್ಟ್ರದಾದ್ಯಂತ 70 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುವ ಹೆಗ್ಗಳಿಕೆ ಇವರದ್ದು. ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ಇದು ಇವರ 5ನೇ ಏಕವ್ಯಕ್ತಿ ಕಲಾಪ್ರದರ್ಶನ.  
 
ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.