ಅಪೂರ್ವ ನಾಲ್ಕು ಪೌರಾಣಿಕ ಪ್ರಸಂಗಗಳ ಪ್ರದರ್ಶನ


Team Udayavani, Jan 10, 2020, 6:30 PM IST

2

ಸಾಲಿಗ್ರಾಮದಲ್ಲಿ ನಡೆದ ಹನುಮಗಿರಿ ಮೇಳದ ಪೌರಾಣಿಕ ಆಖ್ಯಾನ ಸೀತಾಪಹಾರ, ಚೂಡಾಮಣಿ, ಇಂದ್ರಜಿತು, ಮಹಿರಾವಣ ಕಾಳಗ ಪ್ರಸಂಗಗಳಿಗೆ ಸೇರಿದ್ದ ಅಪಾರ ಜನಸ್ತೋಮ ಪ್ರದರ್ಶನದ ಯಶಸ್ಸನ್ನು ಸಾಕ್ಷೀಕರಿಸಿತು.

ಚಿನ್ಮಯ ಕಲ್ಲಡ್ಕ ಭಾಗವತಿಕೆ, ಪಿ.ಟಿ. ಜಯರಾಮ ಭಟ್‌ ಮದ್ದಳೆ, ಪದ್ಯಾಣ ಶಂಕರನಾರಾಯಣ ಭಟ್‌ ಚೆಂಡೆಯಲ್ಲಿ ಸೀತಾಪಹಾರ ಪ್ರಸಂಗ ಪ್ರದರ್ಶನ ನಡೆಯಿತು. ರಾವಣನಾಗಿ ಶಿವರಾಮ ಜೋಗಿ, ಮಾರೀಚನಾಗಿ ಜಯಾನಂದ ಸಂಪಾಜೆ, ಶ್ರೀರಾಮನಾಗಿ ಪೆರ್ಲ ಜಗನ್ನಾಥ ಶೆಟ್ಟಿ, ಸೀತೆಯಾಗಿ ಸಂತೋಷ್‌ ಹಿಲಿಯಾಣ, ಲಕ್ಷ್ಮಣನಾಗಿ ಪ್ರಸಾದ್‌ ಸವಣೂರು, ರಾವಣ ಸನ್ಯಾಸಿಯಾಗಿ ಸೀತಾರಾಮ್‌ ಕುಮಾರ್‌, ಜಟಾಯುವಾಗಿ ಸದಾಶಿವ ಕುಲಾಲ್‌ ವೇಣೂರು ಅಭಿನಯಿಸಿದ್ದರು. ರಾವಣನಿಗೆ ಬುದ್ಧಿ ಹೇಳುವ ಸನ್ನಿವೇಶದಲ್ಲಿ ಮಾರೀಚ, ಇದು ನೈಜ ಮೃಗವಲ್ಲ ರಾಕ್ಷಸರ ಕಪಟ, ಜಿಂಕೆಗೆ ಗೊರಸುಗಳಿರುತ್ತವೆ ಬೆರಳುಗಳಿರುವುದಿಲ್ಲ ಎಂದು ಸೀತೆಗೆ ವಿವರಿಸುವ ರಾಮನ ಸಂಭಾಷಣೆ, ತಾನೇ ಹೋಗಿ ಜಿಂಕೆಯನ್ನು ಹಿಡಿದು ತರುತ್ತೇನೆ ಎನ್ನುವ ಲಕ್ಷ್ಮಣನಿಗೆ ಒಂದೊಮ್ಮೆ ಜಿಂಕೆಯನ್ನು ಜೀವಂತ ಹಿಡಿದು ತರಲಾಗದಿದ್ದರೆ ಜಿಂಕೆಯ ಚರ್ಮದಿಂದ ಕಂಚುಕವನ್ನು ಮಾಡಿ ಧರಿಸುತ್ತೇನೆ ಎಂದು ಸೀತೆ ಹೇಳಿದ್ದಾಳೆ. ಪತಿವ್ರತೆಗೆ ಕಂಚುಕವನ್ನು ಪತಿಯ ಹೊರತಾಗಿ ಇತರರು ಕೊಡಿಸಕೂಡದು ಎಂಬ ಮಾತುಗಳನ್ನಾಡುವ ಮೂಲಕ ತಾನೇ ಮಾಯಾ ಜಿಂಕೆಯ ಬೇಟೆಗೆ ಹೊರಡುವ ರಾಮನಾಗಿ ಪೆರ್ಲರದ್ದು ಅರ್ಥಗರ್ಭಿತವಾದ ಮಾತುಗಳು. ಚಿನ್ಮಯ ಕಲ್ಲಡ್ಕರ “ಇವನ ಕೈಯಲಿ ಸಾಯುವುದರಿಂದ ರಾಘವನ ಬಾಣದಿ ಮಡಿದೆನಾದರೆ ದಿವಿಜ ಲೋಕವನ್ನು ಪಾಲಿಸುವ ಶ್ರೀರಾಮ ತನಗೆಂದ…’ ಎಂಬ ಹಿಂದೋಳದ ಭಾಮಿನಿ ಸುಶ್ರಾವ್ಯವಾಗಿತ್ತು. ರಾವಣ ಜಟಾಯು ಜಟಾಪಟಿ ನಡೆದು ಜಟಾಯು ರಾಮನಿಗೆ ಸೀತಾಪಹಾರ ಮಾಡಿದ್ದು ರಾವಣ ಎಂದು ಸಮಾಚಾರ ತಿಳಿಸುವಲ್ಲಿಗೆ ಸೀತಾಪಹಾರವನ್ನು ಮುಗಿಸಿ ಎರಡನೆ ಪ್ರಸಂಗ ಆರಂಭಿಸಲಾಯಿತು.

ಚೂಡಾಮಣಿಯಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್‌, ಮದ್ದಳೆಯಲ್ಲಿ ಶ್ರೀಧರ ವಿಟ್ಲ, ಚೆಂಡೆಯಲ್ಲಿ ಚೈತನ್ಯಕೃಷ್ಣ ಪದ್ಯಾಣ ಅವರು ಅಚ್ಚುಕಟ್ಟಾಗಿ ಪ್ರಸಂಗವನ್ನು ನಡೆಸಿದರು. ಶೃಂಗಾರ ರಾವಣನಾಗಿ ಶಿವರಾಮ ಜೋಗಿ, ಹನೂಮಂತನಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ, ಸೀತೆಯಾಗಿ ಎಂ.ಕೆ. ರಮೇಶ ಆಚಾರ್ಯ, ದೂತನಾಗಿ ಬಂಟ್ವಾಳ ಜಯರಾಮ ಆಚಾರ್ಯ, ಅನುಕೂಲ ನಾರಿಯರಾಗಿ ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ, ಪ್ರಕಾಶ್‌ ನಾಯಕ್‌ ಅಭಿನಯಿಸಿದರು. ಯಾವುದೇ ಶಿರೋಭೂಷಣ ಆಭರಣಗಳಿಲ್ಲದೇ ಅಶೋಕವನದಲ್ಲಿ ಶೋಕತಪ್ತಳಾಗಿ ಇರುವ ಸೀತೆಯಾಗಿ ರಮೇಶ ಆಚಾರ್ಯರ ಮಾತುಗಾರಿಕೆ, ಅಭಿನಯ ಜತೆಗೆ ಹನೂಮಂತನಾಗಿ ಪೆರ್ಮುದೆಯವರ ಜೋಡಿ ಕಾಲಮಿತಿಯ ಪ್ರಸಂಗದ ಚುರುಕುನಡೆಗೆ ಮತ್ತಷ್ಟು ಪುಷ್ಟಿಯೊದಗಿಸಿತು. ಕ್ಷೇಮವೇನೈ ಹನುಮ ಎಂಬ ಪದ್ಯಾಣರ ಸುಶ್ರಾವ್ಯ ಭಾವಗತಿಕೆ ಅದಕ್ಕೆ ಪೂರಕವಾಗಿ ರಮೇಶ ಆಚಾರ್ಯರ ಭಾವಪೂರ್ಣ ಮಾತುಗಾರಿಕೆ, ಚಿತ್ರಕೂಟದಲ್ಲಿ ನೀವು ಜಲಕ್ರೀಡೆಯಾಗುವಾಗ ಎಂಬ ಚಂದದ ಪದ್ಯಕ್ಕೆ ಪೆರ್ಮುದೆಯವರು ಸಂಭಾಷಣೆ ಮಾಡಿದ್ದು ಒಂದು ಆಪ್ತ ಸನ್ನಿವೇಶದ ಸೃಷ್ಟಿಗೆ ಕಾರಣವಾಯಿತು.

ಇಂದ್ರಜಿತು ಪ್ರಸಂಗದಿಂದ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆಯವರು ಮುನ್ನಡೆಸಿದರು. ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಅವರ ಕೈಚಳಕವಿತ್ತು. ಜಗದಭಿರಾಮ ಪಡುಬಿದ್ರೆ ಇಂದ್ರಜಿತುವಾಗಿ, ಹನೂಮಂತನಾಗಿ ಪೆರ್ಮುದೆ, ರಾಮನಾಗಿ ಪೆರ್ಲ, ಮಾಯಾಸೀತೆಯಾಗಿ ಪ್ರಕಾಶ್‌ ನಾಯಕ್‌, ಜಾಂಬವಂತನಾಗಿ ಸೀತಾರಾಮ ಕುಮಾರ್‌ ಕಟೀಲ್‌, ಲಕ್ಷ್ಮಣನಾಗಿ ದಿವಾಕರ ಸಂಪಾಜೆ , ವಿಭೀಷಣನಾಗಿ ಜಯಕೀರ್ತಿ ಅವರು ಪ್ರದರ್ಶನದ ಓಘವನ್ನು ಕಾಯ್ದುಕೊಂಡರು. ಮಹಿರಾವಣ ಕಾಳಗದಲ್ಲಿ ರಾವಣನಾಗಿ ಸದಾಶಿವ ಶೆಟ್ಟಿಗಾರ್‌ ಸಿದ್ಧಕಟ್ಟೆ, ಮಹಿರಾವಣನಾಗಿ ಶಬರೀಶ ಮಾನ್ಯ ರಂಗವನ್ನು ತುಂಬಿದರು. ದುರ್ದುಂಡಿಯಾಗಿ ರಕ್ಷಿತ್‌ ಶೆಟ್ಟಿ , ಮತ್ಸವಾನರನಾಗಿ ಶಿವರಾಜ್‌ ಬಜಕೋಡ್ಲು, ದೂತನಾಗಿ ಜಯರಾಮ ಆಚಾರ್ಯ, ಜಾಂಬವನಾಗಿ ಸೀತಾರಾಮ್‌, ಹನೂಮಂತನಾಗಿ ಸುಬ್ರಾಯ ಹೊಳ್ಳ ಅವರ ಅಭಿನಯ ಉತ್ಕೃಷ್ಟವಾಗಿತ್ತು. ಪದ್ಯಾಣಶೈಲಿ, ಅಗರಿಶೈಲಿ, ಬಲಿಪಶೈಲಿ ಎಂದು ಯಕ್ಷಗಾನದ ವಿವಿಧ ಮಟ್ಟುಗಳ ಜತೆಗೆ ಸ್ವಂತ ಶೈಲಿಯ ಹಾಡುಗಳನ್ನು ಹಾಡಿ ಹೊಸತನದಲ್ಲಿ ಭಾಗವತರಾಗಿ ರಂಜಿಸಿದವರು ಕನ್ನಡಿಕಟ್ಟೆಯವರು. ಇಂದ್ರಜಿತುವಿನಲ್ಲಿ “ನೋಡಿದೆಯಯ್ಯೋ ಹನುಮ ದಾನವ ನಿನಗೆ ಮಾಡುವ ಸಾಕ್ಷಿಯ ನಿಸ್ಸೀಮ’ ಮೊದಲಾದ ಹಾಡುಗಳನ್ನು ಭಾವಪೂರ್ಣವಾಗಿ ಹಾಡಿದರು.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.