ಹೃದಯವಂತರಿಗೆ ಯಕ್ಷರಾತ್ರಿ ಸಾಧಕ ಪುರಸ್ಕಾರ
Team Udayavani, Nov 16, 2018, 6:00 AM IST
ಸರಕಾರಿ ಆಸ್ಪತ್ರೆಗಳಿಗೆ ಉಚಿತ ECGಯಂತ್ರಗಳನ್ನು ಒದಗಿಸುವ ಮೂಲಕ ಸುದ್ದಿಯಲ್ಲಿರುವ ಕೆ.ಎಂ.ಸಿ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತರಿಗೆ ಯಕ್ಷಕಾಶಿ ಕುಂದಾಪುರದ ಯಕ್ಷರಾತ್ರಿ ವತಿಯಿಂದ ನ.16 ರಂದು ಕುಂದಾಪುರದಲ್ಲಿ ಹೃದಯವಂತ ಬಿರುದಿನೊಂದಿಗೆ ಯಕ್ಷರಾತ್ರಿ ಸಾಧಕ ಪುರಸ್ಕಾರ ಪ್ರದಾನವಾಗಲಿದೆ . ಯಕ್ಷರಾತ್ರಿಯ “ಶತಮಾನಂ ಭವತಿ’ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಡಾ| ಕಾಮತರನ್ನು ಮತ್ತು ಥಂಡಿಮನೆ ಶ್ರೀಪಾದ ಭಟ್ಟರನ್ನು ಸಮ್ಮಾನಿಸಲಾಗುವುದು. ಡಾ| ಪದ್ಮನಾಭ ಕಾಮತರು ಯಕ್ಷಗಾನ ಅಭಿಮಾನಿ, ಪೋಷಕರಾಗಿಯೂ ಪ್ರಸಿದ್ಧರು. ಬಾಲ್ಯದಿಂದಲೇ ಬಣ್ಣದ ವೇಷಗಳ ಸೆಳೆತಕ್ಕೆ ಒಳಗಾದವರು . ಲಕ್ಷಾಂತರ ಜನರ ಹೃದಯ ಮಿಡಿತ ಪರೀಕ್ಷಿಸಿರುವ ಡಾ| ಕಾಮತರ ಹೃದಯ ಮಿಡಿಯುತ್ತಿರುವುದು ಯಕ್ಷಗಾನಕ್ಕೆ. ಡಾ| ಕಾಮತರು ಕ್ಲಿಕ್ಕಿಸಿದ ಯಕ್ಷಗಾನದ ಛಾಯಾಚಿತ್ರಗಳು ಹತ್ತು ಸಾವಿರ ದಾಟಿದೆ. ಯಕ್ಷಮಿತ್ರರು ನಮ್ಮ ವೇದಿಕೆ ಎಂಬ ಯಕ್ಷಗಾನ ವಾಟ್ಸಪ್ ಗುಂಪಿನ ಮೂಲಕ ಯಕ್ಷಗಾನೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್