ಅಕಾಡೆಮಿ ಚಾವಡಿಯಲ್ಲಿ ತುಳು ಯಕ್ಷ ಸಿರಿಯ ಮಿನದನ


Team Udayavani, Dec 21, 2018, 6:05 AM IST

tulu-1.jpg

ತುಳುನಾಡಿಗರು ಗಾಢವಾಗಿ ನೆಚ್ಚಿರುವ ಎರಡು ಕ್ಷೇತ್ರಗಳೆಂದರೆ ಒಂದು ನಾಟಕ; ಮತ್ತೂಂದು ಯಕ್ಷಗಾನ. ಇವೆರಡಕ್ಕೂ ಮಣೆ ಹಾಕುವ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಸಕ್ತ ತಂಡ ಹೊಸಬಗೆಯ ಭರವಸೆಯನ್ನು ಮೂಡಿಸಿದೆ. ಕಳೆದ ವರ್ಷ ಮಂಗಳೂರು ಪುರಭವನದಲ್ಲಿ ಒಂದು ವಾರದ “ತುಳು ನಾಟಕ ಪಂತೊ’ ಏರ್ಪಡಿಸಿ ಹಳೆಯ ನಾಟಕಗಳ ಪ್ರದರ್ಶನ ಮತ್ತು ಅಗಲಿದ ನಾಟಕಕಾರರ ಸಂಸ್ಮರಣೆ ಮಾಡುವುದರೊಂದಿಗೆ ಒಂದು ಕಾಲದ ತುಳು ರಂಗಭೂಮಿಯನ್ನು ಮತ್ತೆ ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದೆ. ಇದೀಗ ಬೆಳ್ಳಿಹಬ್ಬದ ಸಡಗರದಲ್ಲಿ “ತುಳು ಯಕ್ಷಸಿರಿ’ಯ ಮಿನದನವನ್ನು ಸಾûಾತ್ಕರಿಸಿದ್ದು ಅಕಾಡೆಮಿಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. 

ಡಿ.2ರಿಂದ 9ರ ವರೆಗೆ ಉರ್ವಸ್ಟೋರ್‌ನಲ್ಲಿರುವ ತುಳು ಭವನದ ಸಿರಿ ಚಾವಡಿಯಲ್ಲಿ ಜರಗಿದ ಎಂಟು ದಿನಗಳ ತುಳು ಯಕ್ಷಸಿರಿ ನೆಂಪು-ತಮ್ಮನ ಮತ್ತು ಯಕ್ಷಗಾನ ಪ್ರದರ್ಶನಗಳಿಗೆ ಸಿಮೀತವಾಗಿತ್ತು. ಅದುವರೆಗೆ ಹಗಲಿನ ವೇಳೆ ನಿಗದಿತ ಪ್ರೇಕ್ಷಕರನ್ನಷ್ಟೇ ಗುರಿಯಾಗಿಸಿ ನಡೆಯುತ್ತಿದ್ದ ಚಾವಡಿ ಲೇಸ್‌ ಮತ್ತು ಸಭೆ ಸಮಾರಂಭಗಳಿಗೆ ಮೀಸಲಾಗಿದ್ದ ತುಳು ಚಾವಡಿ ರಾತ್ರಿ ಹೊತ್ತಿನಲ್ಲೂ ಅಧಿಕ ಸಂಖ್ಯೆಯ ಕಲಾಭಿಮಾನಿಗಳನ್ನು ಸೆಳೆಯಬಲ್ಲದು ಎಂಬುದಕ್ಕೆ ಇದು ಸಾಕ್ಷಿಯಾಯಿತು.ಪ್ರತಿದಿನ ಎರಡೂವರೆ ಗಂಟೆ ಅವಧಿಯ ಎಂಟು ತುಳು ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ಮೊದಲ ದಿನದ ಪ್ರಸಂಗ ತಾರಾನಾಥ ಬಲ್ಯಾಯ ವಿರಚಿತ “ಬ್ರಹ್ಮ ಬೈದ್ಯೆರ್‌’. ಇದರಲ್ಲಿ ಪೂರ್ಣಿಮಾ ಯತೀಶ್‌ ರೈ ನೇತೃತ್ವದ ಮಹಿಳಾ ಕಲಾವಿದೆಯರೇ ಪಾತ್ರವಹಿಸಿದುದು ವಿಶೇಷ. ಎರಡನೆಯ ದಿನ ಸೂಡ ಹರೀಶ್‌ ಶೆಟ್ಟಿ ಅವರ ರಚನೆಯ “ತುಳುನಾಡ ಸಿರಿ’ ಪ್ರದರ್ಶನಗೊಂಡಿತು. 

ಇದರಲ್ಲಿ ವೃತ್ತಿಪರ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಂಜಯ ಕುಮಾರ್‌ ಶೆಟ್ಟಿ ಗೋಣಿಬೀಡು, ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ, ಮೋಹನ ಮುಚ್ಚಾರು, ಕರುಣಾಕರ ಶೆಟ್ಟಿ ಬೆಳ್ತಂಗಡಿ ಮೊದಲಾದವರು ಪಾತ್ರವಹಿಸಿದ್ದರು. ಮೂರನೇಯದ್ದು ದಿ| ನಾರಂಪಾಡಿ ಸುಬ್ಬಯ್ಯ ಶೆಟ್ಟಿ ಅವರ “ಕೋರªಬ್ಬು ಬಾರಗ’. ಸದಾಶಿವ ಕುಲಾಲ್‌ ವೇಣೂರು, ಜಗದೀಶ್‌ ನಲ್ಕ, ಮುರಳೀಧರ ಕನ್ನಡಿಕಟ್ಟೆ, ರತ್ನಾಕರ ಆಚಾರ್ಯ, ಸುಂದರ ಬಂಗಾಡಿ, ಸುನೀಲ್‌ ಪಲ್ಲಮಜಲು, ಶಂಭುಕುಮಾರ್‌ ಮತ್ತಿತರರು ಪಾತ್ರಧಾರಿಗಳಾಗಿದ್ದರು.

ಕುಳಾಯಿ ಮಾಧವ ಭಂಡಾರಿಯವರ “ಅಬ್ಬರದ ಬಬ್ಬರ್ಯೆ’ ಪ್ರಸಂಗವನ್ನು ನಾಲ್ಕನೆಯ ದಿನ ಆಡಿತೋರಿಸಲಾಯ್ತು. ದಯಾನಂದ ಶೆಟ್ಟಿ ಜಪ್ಪು, ರಮೇಶ್‌ ಕುಲಶೇಖರ, ಲಕ್ಷ್ಮಣ ಕುಮಾರ್‌ ಮರಕಡ, ರಕ್ಷಿತ್‌ ಪಡ್ರೆ, ಸುರೇಶ್‌ ಕೊಲಕಾಡಿ, ನಾಗೇಶ್‌ ಕುಲಶೇಖರ್‌ ಮುಂತಾದವರು ವೇಷಧಾರಿಗಳಾಗಿದ್ದರು. ಯಕ್ಷಸಿರಿಯ ಐದನೇ ಪ್ರಸಂಗದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ “ಕುಡಿಯನ ಕಣ್‌¡’ ಸದಾಶಿವ ಆಳ್ವ ತಲಪಾಡಿ, ಪುಷ್ಪರಾಜ್‌ ಕುಕ್ಕಾಜೆ, ಪದ್ಮನಾಭ ಮಾಸ್ತರ್‌, ದಯಾನಂದ ಪಿಲಿಕೂರು ಇದರಲ್ಲಿ ಪಾತ್ರವಹಿಸಿದ್ದರು. ಒಂದು ಕಾಲದಲ್ಲಿ ಕರ್ನಾಟಕ ಮೇಳದಲ್ಲಿ ಜಯಭೇರಿಗಳಿಸಿದ್ದ “ಕೋಟಿ-ಚೆನ್ನಯ’ ಆರನೇ ದಿನ ಪ್ರದರ್ಶನಗೊಂಡಿತು. ಇದು ದಿ| ಪಂದಬೆಟ್ಟು ವೆಂಕಟರಾಯರ ಪ್ರಸಂಗವನ್ನು ಸಂಕ್ಷಿಪ್ತಗೊಳಿಸಿದ ಪ್ರಸ್ತುತಿ. ಕೆ.ಹೆಚ್‌. ದಾಸಪ್ಪ ರೈ, ಸರಪಾಡಿ ಅಶೋಕ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಮಹಾವೀರ ಪಾಂಡಿ, ಕದ್ರಿ ನವನೀತ ಶೆಟ್ಟಿ, ಗಣೇಶ್‌ ಕನ್ನಡಿಕಟ್ಟೆ, ದಿನೇಶ್‌ ಕೋಡಪದವು, ವಾಮನ್‌ ಕುಮಾರ್‌ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಏಳನೆಯ ಆಖ್ಯಾನ “ಬಾಲೆಮಾನಿ ಮಾಯಂದಾಲ್‌’. ಸಂತೋಷ್‌ ಪೂಜಾರಿ ಕರಂಬಾರ್‌ ರಚಿಸಿದ ಈ ಪ್ರಸಂಗದಲ್ಲಿ ಕೊಳ್ತಿಗೆ ನಾರಾಯಣ ಗೌಡ, ಗಣೇಶ ಚಂದ್ರಮಂಡಲ, ತಿಮ್ಮಪ್ಪ ಮಿಜಾರು, ಉದಯಕುಮಾರ್‌ ಧರ್ಮಸ್ಥಳ, ಶ್ರೀಧರ ಮಲ್ಲೂರು ಮೊದಲಾದವರು ಪಾತ್ರ ನಿರ್ವಹಿಸಿದರು. ಕೊನೆಯ ದಿನದ ಪ್ರಸಂಗ ಅನಂತರಾಮ ಬಂಗಾಡಿಯವರ “ಸಿರಿಕಿಟೆ¡ ಚಂದಪಾಲಿ’. ಸಂಜಯಕುಮಾರ್‌ ಶೆಟ್ಟಿ ಗೋಣಿಬೀಡು, ಅಂಬಾಪ್ರಸಾದ ಪಾತಾಳ, ಕಡಬ ದಿನೇಶ್‌ ಶೆಟ್ಟಿ, ಪ್ರಶಾಂತ್‌ ಸಿ.ಕೆ., ಅಶ್ವಥ್‌ ಆಚಾರ್ಯ, ವಿಶ್ವನಾಥ ಪದು¾ಂಜ, ಶಶಿಧರ ಬಾಚಕೆರೆ, ಸಂದೇಶ್‌ ಬೆಳ್ಳೂರು ಮೊದಲಾದವರು ವೇಷ ಧರಿಸಿದ್ದರು. ಪ್ರತಿದಿನವೂ ನುರಿತ ಕಲಾವಿದರ ಹಿಮ್ಮೇಳ ಗಮನಸೆಳೆಯಿತು. 

– ಭಾಸ್ಕರ ರೈ ಕುಕ್ಕುವಳ್ಳಿ 

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.