ಭಾವಪರವಶಗೊಳಿಸಿದ ತ್ರಿಜನ್ಮ ಮೋಕ್ಷ 


Team Udayavani, Oct 12, 2018, 6:00 AM IST

z-11.jpg

ಅಂದು ಹಿರಣ್ಯಾಕ್ಷ ಮಾಡಿದಂತೆ ಇಂದು ಪೃಕೃತಿಯಿಂದ ಮಳೆ ಬೆಳೆ ಪಡೆದು ಪ್ರತ್ಯುಪಕಾರವಾಗಿ ಮಾನವ ಮಾಡುತ್ತಿರುವುದೇನು? ಪ್ರಕೃತಿ ಮುನಿದರೆ ಮನುಕುಲ ಉಳಿದೀತೇ? ಪ್ರೇಕ್ಷಕರ ಮನಸ್ಸಿನಲ್ಲಿ ಆ ದೃಶ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು.

ಬೈಂದೂರು ಸೇನೇಶ್ವರ ದೇಗುಲದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರ “ತ್ರಿಜನ್ಮ ಮೋಕ್ಷ’ ಪ್ರಸಂಗ ವೀಕ್ಷಕರ ಕಣ್ಮನಗಳಿಗೆ ತಂಪೆರೆಯಿತು.ವಿಶಾಲ ಕಾಯ, ಬೀಭತ್ಸ ಮುಖ ಮುದ್ರೆಯ ಹಿರಣ್ಯಾಕ್ಷ-ಹಿರಣ್ಯಕಶಿಪುವಿನ ವೈಶಿಷ್ಟ್ಯಮಯ ಭಂಗಿ (ಗಣೇಶ ಶೆಟ್ಟಿ ಆರಣ್‌ ಮತ್ತು ಗೋವಿಂದ ಭಟ್‌ ನಿಡ್ಲೆ), ಸುರ ಸುಂದರಾಂಗಿಯಂತೆ ಮನ ಸೆಳೆವ ಅತ್ಯಾಕರ್ಷಕ ವಸ್ತ್ರಾಲಂಕಾರಗೊಂಡ ಕಯಾದು (ಕೆದಿಲ ಜಯರಾಮ ಭಟ್‌) ಪ್ರೇಕ್ಷಕರನ್ನು ಹಿಡಿದಿರಿಸಿದರು. ವರಾಹವತಾರಿ ವಿಷ್ಣುವಿನ (ಪದ್ಮನಾಭ ಶೆಟ್ಟಿ) ಹಾವಭಾವಗಳು ಪ್ರಶಂಸೆಗೆ ಪಾತ್ರವಾಯಿತು. 

ಹಿರಣ್ಯಕಶಿಪುವಿನ ಸರಸ,ಪುತ್ರ ವಾತ್ಸಲ್ಯ, ವಿಷ್ಣು ದ್ವೇಷದ ಜತೆಯಲ್ಲಿ ಆತನ ವ್ಯಕ್ತಿತ್ವದ ಆದರ್ಶಗಳನ್ನೊಳಗೊಂಡ ಬಹುಮುಖ ವ್ಯಕ್ತಿತ್ವವನ್ನು ತೆರೆದಿಡುವ ಪ್ರಾಮಾಣಿಕ ಪ್ರಯತ್ನ ಪ್ರಶಂಸನೀಯವಾಯಿತು. ಪ್ರಹ್ಲಾದನ (ಗೌತಮ ಶೆಟ್ಟಿ) ಮೋಹಕ ವ್ಯಕ್ತಿತ್ವ, ನಾರದನ (ಕುಂಬ್ಳೆ ಶ್ರೀಧರ ರಾವ್‌) ಪ್ರೌಢಿಮೆ ಭೇಷ್‌ ಎನಿಸಿಕೊಂಡಿತು. ಪ್ರಹ್ಲಾದನ ಗುರುಕುಲ ವಿದ್ಯಾಭ್ಯಾಸದ ದೃಶ್ಯಗಳಲ್ಲಿ ಬಂದ ಸಹಪಾಠಿಗಳ ತುಂಟತನ ನಗೆಗಡಲಲ್ಲಿ ತೇಲಿಸಿತು. 

ಹರಿಯನ್ನು ಅರಸುತ್ತಾ ಬಂದ ಹಿರಣ್ಯಾಕ್ಷನಿಗೆ ನಾರದರು ಭೂದೇವಿಯನ್ನು (ಪುತ್ತೂರು ಗಂಗಾಧರ ಜೋಗಿ) ಹಿಡಿದಿಟ್ಟರೆ ಆಕೆಯ ಪತಿಯಾದ ನಾರಾಯಣ ಬಂದೇ ಬರುತ್ತಾನೆ ಎನ್ನುವ ಸಲಹೆ ನೀಡುತ್ತಾರೆ. ಹಿರಣ್ಯಾಕ್ಷ ಭೂದೇವಿಯನ್ನು ಅಟ್ಟಿಕೊಂಡು ಅಟ್ಟಾಡಿಸುತ್ತಾನೆ. ಲೋಕ ಕಂಟಕ ರಾಕ್ಷಸರು ಅಂದೂ ಇದ್ದರು, ಅಸುರಿ ಪ್ರವೃತ್ತಿಯ ದಾನವರೂ ಇಂದೂ ಇದ್ದಾರೆ. ಭಯವಿಹ್ವಲಳಾದ ಭೂದೇವಿ ಆರ್ತನಾದ ಮಾಡುತ್ತಾ ಓಡುತ್ತಿರುವ ಆ ಅದ್ಭುತ ದೃಶ್ಯ ಆ ಕ್ಷಣ ಪ್ರಜ್ಞಾವಂತ ವೀಕ್ಷಕರ ಮನಸ್ಸಿನಲ್ಲಿ ತಳಮಳ ಉಂಟುಮಾಡಿದ್ದರಲ್ಲಿ ಸಂದೇಹವಿಲ್ಲ. ಅಂದು ಹಿರಣ್ಯಾಕ್ಷ ಮಾಡಿದಂತೆ ಇಂದು ಪೃಕೃತಿಯಿಂದ ಮಳೆ ಬೆಳೆ ಪಡೆದು ಪ್ರತ್ಯುಪಕಾರವಾಗಿ ಮಾನವ ಮಾಡುತ್ತಿರುವುದೇನು? ಪ್ರಕೃತಿ ಮುನಿದರೆ ಮನುಕುಲ ಉಳಿದೀತೇ? ಪ್ರೇಕ್ಷಕರ ಮನಸ್ಸಿನಲ್ಲಿ ಆ ದೃಶ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಅಷ್ಟೊಂದು ಪರಿಣಾಮಕಾರಿಯಾಗಿತ್ತು ಆ ದೃಶ್ಯ! ಹಿರಣ್ಯಾಕ್ಷ ಇಂದಿನ ಪೃಕೃತಿ ನಾಶಗೈಯ್ಯುತ್ತಿರುವ ದುರುಳರಂತೆ ಕಂಡ. 

    ಕರುಣಾಕರ ಶೆಟ್ಟಿಯವರ ಭಾಗವತಿಕೆಯ ಯಕ್ಷಗಾನ ಪ್ರಸಂಗಕ್ಕೆ ಪಡ್ರೆ ಶ್ರೀಧರ್‌ ಅವರ ಚೆಂಡೆ ಮತ್ತು ಗಣಪತಿ ನಾಯ್ಕ… ಅವರ ಮದ್ದಳೆ ಅಂದ ಹೆಚ್ಚಿಸಿತು. ಭಾಗವತರ ಭಾವಪರವಶ ಹಾಡುಗಾರಿಕೆ ಯಕ್ಷಗಾನ ಪ್ರೇಮಿಗಳ ಮನ ಗೆದ್ದಿತು.

ಬೈಂದೂರು ಚಂದ್ರಶೇಖರ ನಾವಡ 

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.