ಅರ್ಥಪೂರ್ಣ ಅಭಿವ್ಯಕ್ತಿಗೆ ಸಾಕ್ಷಿಯಾದ ದ್ರೌಪದಿ ಪ್ರತಾಪ

ಶಾರದಾ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಸ್ತುತಿ

Team Udayavani, Apr 5, 2019, 6:00 AM IST

d-9

ಎಲ್ಲಿಯೂ ಕೂಡಾ ಹೆಜ್ಜೆ, ನೃತ್ಯ, ಅರ್ಥ ಲೋಪ ಕಂಡು ಬರಲಿಲ್ಲ. ಅರ್ಜುನ ಭೀಮರ ಸೋದರ ಸಮರ, ಮುಂದೆ ಅಕ್ಕ -ತಂಗಿಯರ ಜಗಳ, ಅಣ್ಣ-ತಂಗಿಯ ಯುದ್ಧ, ಅತ್ತೆ-ಅಳಿಯ ಸಮರ ಹೀಗೆ ಸಾಗುತ್ತಾ ಯಾಜ್ಞಸೇನೆ ಜಯಸಿರಿಗೆ ಶಿವನೆ ಕೈಸೋತಾಗ ಶಿವೆಯೇ ಸಮರಕ್ಕೆ ಎದುರಾಗುವ
ಸನ್ನಿವೇಶವನ್ನು ಸುಂದರವಾಗಿ ಅಭಿನಯಿಸಿದ್ದಾರೆ.

ದ್ರೌಪದಿಯ ವೀರಾವೇಷ‌, ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸುತ್ತ ಮುನ್ನುಗ್ಗುವ ಪರಿ, ಸ್ಪರ್ಧಾತ್ಮಕವಾಗಿ ಪ್ರತಿಭೆಯನ್ನು ಹೊರಸೂಸುವ ಉತ್ಸಾಹ, ಪ್ರಬುದ್ಧ ಹಿಮ್ಮೇಳಕ್ಕೆ ಅಷ್ಟೇ ಸಮನಾತ್ಮಕವಾಗಿ ಸವಾಲು ನೀಡುವ ಮುಮ್ಮೇಳ… ಒಟ್ಟಂದದಲ್ಲಿ ಮಧ್ಯಾಹ್ನ ವೇಳೆಯಲೊಂದು ಅಪೂರ್ವ ಮನೋರಂಜನೆ ಒದಗಿಸಿ, ಭಲೇ ಭೇಷ್‌ ಎನ್ನುವ ಉದ್ಗಾರಕ್ಕೆ ಸಾಕ್ಷಿಯಾಗಿದ್ದು ಬಸ್ರೂರು ಶಾರದಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶ್ರೀ ಶಾರದಾ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ ಕಡಂದಲೆ ಬಿ.ರಾಮರಾವ್‌ ವಿರಚಿತ ದ್ರೌಪದಿ ಪ್ರತಾಪ.
ಯಕ್ಷಗುರು ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಅವರ ನಿರ್ದೇಶನ, ಶ್ರೀ ಶಾರದಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ರಾಘವೇಂದ್ರ ಶೆಟ್ಟಿ ಅವರ ಸಂಯೋಜನೆಯಲ್ಲಿ ಮೂಡಿ ಬಂದ ಈ ಪ್ರದರ್ಶನ ಪೂರ್ಣ ಪ್ರಮಾಣದ ಸಾರ್ಥಕ ಪ್ರಯತ್ನ.

ಪ್ರಾರಂಭದಿಂದ ಅಂತ್ಯದ ತನಕ ಎಲ್ಲಿಯೂ ಕೂಡಾ ಹೆಜ್ಜೆ, ನೃತ್ಯ, ಅರ್ಥ ಲೋಪ ಕಂಡು ಬರಲಿಲ್ಲ. ಅರ್ಜುನ ಭೀಮರ ಸೋದರ ಸಮರ, ಮುಂದೆ ಅಕ್ಕ -ತಂಗಿಯರ ಜಗಳ, ಅಣ್ಣ-ತಂಗಿಯ ಯುದ್ಧ, ಅತ್ತೆ-ಅಳಿಯ ಸಮರ ಹೀಗೆ ಸಾಗುತ್ತಾ ಯಾಜ್ಞಸೇನೆ ಜಯಸಿರಿಗೆ ಶಿವನೆ ಕೈಸೋತಾಗ ಶಿವೆಯೇ ಸಮರಕ್ಕೆ ಎದುರಾಗುವ ಸನ್ನಿವೇಶವನ್ನು ಸುಂದರವಾಗಿ ಒಂದೂವರೆ ತಾಸಿನಲ್ಲಿ ಅಭಿನಯಿಸಿದ್ದಾರೆ.

ಪ್ರಮುಖವಾಗಿ ಕಥಾನಾಯಕಿ ದ್ರೌಪದಿಯ ಪಾತ್ರ ನಿರ್ವಹಣೆ ಮಾಡಿದ ದ್ವಿತೀಯ ಬಿ.ಕಾಂನ ಕಾವ್ಯಾ ಮತ್ತು ಶ್ರುತಿ ಪ್ರಶಂಸೆಯ ಅಭಿನಯ ನೀಡಿದರೆ ವೀರಗಸೆಯ ದ್ರೌಪದಿ ಆವೇಶ ಉತ್ಸಾಹ ಮತ್ತು ಭಾವ ಪ್ರಕಟ, ನಿಲುವು ಪ್ರಖರವಾಗಿದ್ದವು. ಸುಭದ್ರೆಯಾಗಿ ತೃತೀಯ ಬಿಕಾಂನ ಅಕ್ಷತಾ ಮತ್ತು ರಂಜಿತಾ ಕೂಡಾ ಮಾತು ಹಾಗೂ ಕುಣಿತ ಮತ್ತು ರಸಾಭಿವ್ಯಕ್ತಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಭೀಮನಾಗಿ ತೃತೀಯ ಬಿ.ಎ ವಿದ್ಯಾರ್ಥಿ ನಿತಿನ್‌ ಪಾತ್ರಕ್ಕೆ ನಿಜವಾದ ನ್ಯಾಯ ಒದಗಿಸಿದ್ದರೆ, ಅರ್ಜುನನಾಗಿ ದ್ವಿತೀಯ ಬಿಕಾಂನ ಶ್ರೀನಿಧಿ ಹಾಗೂ ಸುಶ್ಮಿತಾ ವೀರೋಚಿತ ಅಭಿನಯದಿಂದ ಗೆದ್ದಿದ್ದಾರೆ. ಪುಟ್ಟ ಪಾತ್ರವಾದರೂ ಮನ್ಮಥನಾಗಿ ತೃತೀಯ ಬಿಎಯ ಜಯಕರ ದ್ರೌಪದಿಗೆ ಎದುರಾಗುವ ಸನ್ನಿವೇಶದಲ್ಲಿ ಅತ್ತೆ ಕೇಳು ಮೊಗೆಬೆಟ್ಟು ಅವರ ಸುಶ್ರಾವ್ಯ ಶೈಲಿಯ ಪದ್ಯಕ್ಕೆ ಅಷ್ಟೇ ಚೆನ್ನಾಗಿ ಕುಣಿದಿದ್ದಾರೆ. ನಡುನಡುವೆ ಹಿನ್ನಲೆ ಸ್ತಬ್ದತೆ ಹೊಸತನ ನೀಡಿತು. ಕೃಷ್ಣನ ಪಾತ್ರಧಾರಿ ತೃತೀಯ ಬಿ.ಕಾಂನ ಸ್ವಾತಿಯದ್ದು ಕೂಡಾ ಉತ್ತಮ ಅಭಿವ್ಯಕ್ತಿ. ಸೋದರಿಗೆ ಎದುರಾದ ಪದ್ಯಕ್ಕೆ ಕುಣಿದ ಪರಿ ಅನನ್ಯ. ಉಳಿದಂತೆ ಈಶ್ವರನಾಗಿ ಪ್ರಥಮ ಬಿ.ಕಾಂ ಶುಭಶ್ರೀ, ಸಾಂಬನಾಗಿ ತೃತೀಯ ಬಿ.ಕಾಂನ ಅರುಣರಾಜ್‌, ವೀರಭದ್ರನಾಗಿ ದ್ವಿತೀಯ ಬಿಕಾಂನ ಕಾರ್ತಿಕ್‌, ಭೃಂಗಿ-ಭೃಕುಟಿಯರಾಗಿ ತೃತೀಯ ಬಿಎಯ ಮೋಹನ್‌ ಮತ್ತು ಸುಕೇತ ಅಭಿನಯಿಸಿದ್ದಾರೆ.

ಬಾಲಗೋಪಾಲ ವೇಷದಲ್ಲಿ ದ್ವಿತೀಯ ಬಿಕಾಂನ ಸೌಭಾಗ್ಯ ಲಕ್ಷ್ಮೀ, ಪೂಜಾ, ನವಮಿ, ವಿದ್ಯಾಶ್ರೀ, ರಶ್ಮಿತಾ, ಪೀಠಿಕಾ ಸ್ತ್ರೀವೇಶದಲ್ಲಿ ತೃತೀಯ ಬಿಕಾಂನ ರೂಪಾ, ಪ್ರಥಮ ಬಿ.ಎ ವಿದ್ಯಾರ್ಥಿನಿಯರಾದ ಐಶ್ಚರ್ಯ, ಸ್ವಾತಿ, ಕಾವ್ಯ ಅಭಿನಯಿಸಿದ್ದಾರೆ. ವಿಶೇಷವೆಂದರೆ ಇಡೀ ಆಖ್ಯಾನದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾಕತಾಳೀಯವೆಂದರೆ ಆಯ್ದ ಕಥಾವಸ್ತು ಕೂಡಾ ಸ್ತ್ರೀಪ್ರಧಾನವೇ ಆಗಿದ್ದು ಕಾರ್ಯಕ್ರಮದ ವೈಶಿಷ್ಟ್ಯತೆ.
ಇಡೀ ಪ್ರಸಂಗದಲ್ಲಿ ಪ್ರತಿಯೊಂದು ಪದ್ಯಗಳನ್ನು ಕೂಡಾ ಚಿರಸ್ಥಾಯಿಯಾಗಿ ಕರ್ಣಂಗಳಿಗೆ ಕಟ್ಟಿಕೊಟ್ಟವರು ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು. ಏರುಸ್ಥಾಯಿಯಲ್ಲಿ ಛಂದೋಬದ್ದ ಪದ್ಯಗಳನ್ನು ಮತ್ತೆ ಮತ್ತೆ ಅನುರಣಿಸುವಂತೆ ಮಾಡಿದರು. ಮದ್ದಳೆಯಲ್ಲಿ ರಾಘವೇಂದ್ರ ರಾವ್‌ ಸಕ್ಕಟ್ಟು, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಹೆಮ್ಮಾಡಿ ಉತ್ತಮ ಸಾಥ್‌ ನೀಡಿದ್ದಾರೆ.

ನಾಗರಾಜ್‌ ಬಳಗೇರಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.