ದಂತಕ್ಷಯದ ಚಿಕಿತ್ಸಾ ವಿಧಾನಗಳು


Team Udayavani, Jan 5, 2020, 1:59 AM IST

39

“ದಂತಕ್ಷಯ’ ಅಥವಾ “ಕ್ಯಾವಿಟೀಸ್‌’ ಪ್ರಮುಖವಾಗಿ ಕಂಡುಬರುವಂತಹ ಬಾಯಿಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ವಯೋಮಿತಿ ಇಲ್ಲ. ಮಕ್ಕಳಿಂದ ದೊಡ್ಡವರ ತನಕ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ.

ದಂತಕ್ಷಯ ಹೇಗೆ ಉಂಟಾಗುತ್ತದೆ?
ನಾವು ತಿಂದ ಆಹಾರದಲ್ಲಿರುವ ಸಕ್ಕರೆಯ ಅಂಶವು ಹಲ್ಲಿನ ಪದರದಲ್ಲಿ ಶೇಖರಗೊಂಡಿರುತ್ತದೆ. ಬಾಯಿಯ ಬ್ಯಾಕ್ಟೀರಿಯಾಗಳಿಗೆ ಸಕ್ಕರೆಯೇ ಪ್ರಮುಖ ಆಹಾರ. ಬ್ಯಾಕ್ಟೀರಿಯಾ ಮತ್ತು ಆಹಾರ ಅವಶೇಷಗಳನ್ನು ಒಳಗೊಂಡಿರುವ ಹಲ್ಲಿನ ಮೇಲ್ಮೆಯ ಪದರವನ್ನು “ಪ್ಲಾಕ್‌’ ಎನ್ನುತ್ತೇವೆ. ನಿಯಮಿತವಾಗಿ ಬ್ರಷ್‌ ಮಾಡದಿದ್ದಾಗ ಈ ಪದರದಲ್ಲಿ ಬ್ಯಾಕ್ಟೀರಿಯಾಗಳು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲಿನ ಖನಿಜಾಂಶವನ್ನು ನಿರ್ನಾಮ ಮಾಡುತ್ತದೆ. ಇದರಿಂದ ದಂತ ಕ್ಷಯ ಅಥವಾ ದಂತಕುಳಿ ಉಂಟಾಗುತ್ತದೆ.

ದಂತಕ್ಷಯದ 4 ಹಂತಗಳು
1. ಹಲ್ಲಿನ ಮೊದಲ ಪದರ Enamel (ಎನಾಮಲ್‌) ಮೇಲೆ ದಾಳಿಯಿಂದ ಖನಿಜಾಂಶಗಳ ನಿರ್ನಾಮವಾಗುತ್ತದೆ.
2. ಎರಡನೆ ಪದರ Dentin (ಡೆಂಟಿನ್‌)ಗೆ ದಂತಕ್ಷಯ ಹರಡಿದಾಗ ಬಿಸಿ, ತಂಪು ಪಾನಿಯ, ಸಿಹಿ ತಿನಿಸುಗಳನ್ನು ತಿಂದಾಗ ಹಲ್ಲುಗಳು “”ಜುಂ” ಎನ್ನಲು ಶುರುವಾಗುತ್ತವೆ.
3. ಮೂರನೇ ಪದರ pulpಗೆ (ಹಲ್ಲಿನ ನರತಂತುಗಳು) ದಂತಕ್ಷಯ ಹರಡಿದಾಗ ಹಲ್ಲು ನೋವು ಉಂಟಾಗುತ್ತದೆ.
4. ಕೊನೆಯ ಹಂತದಲ್ಲಿ ದಂತಕ್ಷಯ ಹಲ್ಲಿನ ಬೇರುಗಳನ್ನು ತಲುಪಿ ಕೀವು ಉಂಟಾಗುತ್ತದೆ. ಹಾಗೂ ಹಲ್ಲಿನ ಬೇರಿನ ಭಾಗದಲ್ಲಿ ಊತ ಹಾಗೂ ಸಹಿಸಲಾಗದಷ್ಟು ವಿಪರೀತ ನೋವು ಉಂಟಾಗುತ್ತದೆ.

ಚಿಕಿತ್ಸಾ ವಿಧಾನಗಳು
1. ಮೊದಲೆರಡು ಹಂತಗಳಲ್ಲಿ ದಂತ ವೈದ್ಯರು ದಂತಕ್ಷಯ ಉಂಟಾದ ಭಾಗವನ್ನು ಸ್ವತ್ಛಗೊಳಿಸಿ ಹಲ್ಲಿಗೆ ಬೆಳ್ಳಿ (Silver Amalgam) ಅಥವಾ ಹಲ್ಲಿನ ಬಣ್ಣದ ಸಿಮೆಂಟ್‌ ತುಂಬಿ ಫಿಲ್ಲಿಂಗ್‌ ಮಾಡುತ್ತಾರೆ.
2. ದಂತಕ್ಷಯ ನರತಂತುಗಳು ಹಾಗೂ ಬೇರುಗಳಿಗೆ ಹರಡಿದಾಗ (ಹಂತ 3 ಮತ್ತು 4) ದಂತ ವೈದ್ಯರು ಹಲ್ಲಿನ ಬೇರುಗಳನ್ನು ರೂಟ್‌ ಕೆನಾಲ್‌ ಚಿಕಿತ್ಸೆ (Root Canal treatment) ಮೂಲಕ ಶುಚಿಗೊಳಿಸುತ್ತಾರೆ.
3. ಕೆಲವೊಮ್ಮೆ ದಂತಕ್ಷಯ ತೀವ್ರವಾಗಿ ಆಳವಾದ
ಕುಳಿಯಾದಾಗ
ಹಲ್ಲನ್ನು ಕೀಳಿಸ
ಬೇಕಾಗುತ್ತದೆ.

ದಂತಕ್ಷಯಕ್ಕೆ ಮೂಲಗಳು
1. ಐಸ್‌ಕ್ರೀಮ್‌, ಚಿಪ್ಸ್‌, ಬ್ರೆಡ್‌, ಕ್ಯಾಂಡಿಯಂತಹ ಸಿಹಿ ಹಾಗೂ ಜಿಗುಟು ಪದಾರ್ಥಗಳು.
2. ಅನುವಂಶಿಕ ಮತ್ತು ವಂಶಪಾರಂಪರ್ಯ ಕಾರಣಗಳು.
3. ಹಲ್ಲಿನ ಮೇಲ್ಮೆಯ ಪದರದಲ್ಲಿ ಆಳವಾದ ಚಡಿ ಹಾಗೂ ಗೀರುಗಳು (Pits and fissures)
4. ವಕ್ರದಂತತೆ
5. ಜೊಲ್ಲು ರಸ ಕಡಿಮೆಯಾಗಿ: ಮದ್ಯಪಾನ, ಧೂಮಪಾನದಿಂದ, ಹಾಗೂ ಕ್ಯಾನ್ಸರ್‌ ರೋಗಕ್ಕೆ ನೀಡುವ ಕ್ಷಕಿರಣ ಚಿಕಿತ್ಸೆಯಿಂದ “”ವಿಕಿರಣ ದಂತ ಕ್ಷಯ” ಉಂಟಾಗಬಹುದು.
6. ಎದೆಹಾಲಿನ ಬದಲಾಗಿ ಮಕ್ಕಳಿಗೆ ಸಕ್ಕರೆಯುಕ್ತ ಹಾಲನ್ನು ನೀಡಿದಾಗ ಹಲ್ಲಿನ ಸಂದಿಯಲ್ಲಿ ಸಕ್ಕರೆಯ ಅಂಶ ಸೇರಿಕೊಂಡು ದಂತಕ್ಷಯ ಉಂಟಾಗುತ್ತದೆ.

ದಂತ ಪರೀಕ್ಷೆಯ ಮಹತ್ವ
ಕ್ರಮಬದ್ಧ ಹಾಗೂ ನಿಯಮಿತವಾಗಿ ದಂತ ವೈದ್ಯರಲ್ಲಿ ಹೋಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದರಿಂದ ದಂತ ಕ್ಷಯವನ್ನು ತಡೆಗಟ್ಟಬಹುದು. ಇಂದಿನ ದಿನಗಳಲ್ಲಿ “ಬೈಟ್‌ ವಿಂಗ್‌’ x ray ಮೂಲಕ, “ಡಯಾಗ್ನೊಡೆಂಟ್‌ ಲೇಸರ್‌’ ಮತ್ತು ಹಲವಾರು ಹೊಸ ಆವಿಷ್ಕಾರಗಳಿಂದ ದಂತ ವೈದ್ಯರು ದಂತಕ್ಷಯವನ್ನು
ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ದಂತ ವಿಜ್ಞಾನದಲ್ಲಿ ಬಯೋಸಿರಾಮಿಕ್ಸ್‌
(Bioceramics) ನಂತಹ ಅದ್ಭುತ ಜೈವಿಕ ವಸ್ತುಗಳ ಬಳಕೆಯಿಂದ ಆಳವಾದ ಹುಳುಕಿನಿಂದ ಹಲ್ಲಿನ ನರತಂತು (Pulp) ಗಳನ್ನು ರಕ್ಷಿಸಬಹುದಾಗಿದೆ.

ದಂತಕ್ಷಯ ಹೇಗೆ ತಡೆಗಟ್ಟಬಹುದು?
1. ನಿಯಮಿತವಾಗಿ ಹಲ್ಲುಜ್ಜುವುದು ಹಾಗೂ ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸುವುದು.
2. ಪ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ ಬಳಕೆ.
3. ಹಲ್ಲಿನ ಸಂಧಿಗಳಲ್ಲಿ ಸಿಕ್ಕ ಆಹಾರವನ್ನು ಶುಚಿಗೊಳಿಸಲು ಪ್ಲೋಸ್‌ (Floss) ಅನ್ನು ಉಪಯೋಗಿಸುವುದು.
4. ವಿಟಮಿನ್‌, ಮಿನರಲ್‌ ಹಾಗೂ ಫೈಬರ್‌ಯುಕ್ತ ಸಮೃದ್ಧವಾದ ಸಮತೋಲನ ಆಹಾರ ಸೇವನೆ.
5. ನಿಯಮಿತ ಹಲ್ಲಿನ ತಪಾಸಣೆ.

ಡಾ| ನೀತಾ ಶೆಣೈ, MDS
ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಆ್ಯಂಡ್‌ ಎಂಡೊಡಾಂಟಿಕ್ಸ್‌, ಮಣಿಪಾಲ ದಂತ ವೈದ್ಯಕೀಯ ಕಾಲೇಜು,
ಮಣಿಪಾಲ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.