ಪುಸ್ತಕ ವಸಂತೋತ್ಸವ
Team Udayavani, Apr 13, 2019, 3:00 AM IST
ಸಾವಣ್ಣ ಪುಸ್ತಕ ಪ್ರಕಾಶನದ ವತಿಯಿಂದ “ಪುಸ್ತಕ ವಸಂತೋತ್ಸವ’ ನಡೆಯುತ್ತಿದೆ. ಐವರು ಲೇಖಕರು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಅವರೊಡನೆ ಸಂವಾದ ನಡೆಸುವ ಅವಕಾಶ ಪುಸ್ತಕ ಪ್ರೇಮಿಗಳಿದ್ದಾಗಲಿದೆ.
ಜಗದೀಶ ಶರ್ಮ ಸಂಪ, ಅಹೋರಾತ್ರ, ಗಂಗಾವತಿ ಪ್ರಾಣೇಶ್, ಕುಂಟಿನಿ ಗೋಪಾಲಕೃಷ್ಣ, ಜೋಗಿ, ಅಂದು ನಿಮ್ಮೊಡನಿರಲಿದ್ದಾರೆ. ಮುಖ್ಯಅತಿಥಿಗಳಾಗಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟ ರಮೇಶ್ ಅರವಿಂದ್ ಪಾಲ್ಗೊಳ್ಳಲಿದ್ದಾರೆ.
ಎಲ್ಲಿ?: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ವಾಡಿಯಾ ಸಭಾಂಗಣ, ಬಿಪಿ ವಾಡಿಯಾ ರಸ್ತೆ, ಬಸವನಗುಡಿ
ಯಾವಾಗ?: ಏ.14, ಭಾನುವಾರ ಬೆಳಗ್ಗೆ 10.30