ಮಾದರಿಗಳ ಹಂಗು ತೊರೆದು ಕಂಗೊಳಿಸಿದ ತ್ರೀ ರೋಸಸ್‌     


Team Udayavani, Dec 23, 2017, 4:06 PM IST

258.jpg

ಅಭಿಜಾತ ಅಂಶಗಳನ್ನು ಒಳಗೊಂಡಿರುವುವುದು ಮಾತ್ರವೇ ನಾಟಕ ಎಂದುಕೊಂಡು ಕೆಲವು ಮಡಿವಂತರು ಇಂದಿಗೂ ಅದೇ ರೀತಿಯ ಪ್ರಯೋಗಗಳಿಗೆ ತೊಡಗುತ್ತಿದ್ದಾರೆ. ಉತ್ತಮ ನಾಟಕ ಎನ್ನುವುದು ಅದರ ಪಾತ್ರ ಸನ್ನಿವೇಶಗಳಲ್ಲಿ ಹಳತು ಅನಿಸಬಹುದು ಅಷ್ಟೆ; ಆದರೆ, ಅದರ ಆಶಯಗಳು ಸಾರ್ವತ್ರಿಕ ಎಂದು ಹಠಕ್ಕೆ ಬೀಳುವವರೂ ಇದ್ದಾರೆ. ಮತ್ತೂಂದೆಡೆ ಬೇರೆ ವಾದ ಆರಂಭವಾಗಿದೆ. ಇಂದು ಜನ ಜೀವನದ ಮಾದರಿ ಬದಲಾಗಿದೆ. ಸ್ಪಂದನೆ ಬದಲಾಗಿದೆ. ನೋಟಕ್ರಮ ಬದಲಾಗಿದೆ. ಅಷ್ಟೆಲ್ಲ ಆಳವಾಗಿ ಅರ್ಥೈಸಿಕೊಳ್ಳುವ ವ್ಯವಧಾನವೂ ಇಲ್ಲವಾಗಿದೆ. ಹಾಗಾಗಿ, ನಾಟಕದ ಆರ್ಟ್‌ ಫಾರಂ ಅನ್ನೂ ಒಂದು ಲೈಟ್‌ ಟೋನ್‌ನಲ್ಲಿ ಕಟ್ಟಿಕೊಟ್ಟು ರಂಜಿಸಿದರೆ ಸಾಕು ಎನ್ನುವವರ ಆಶಯಗಳಿಗೆ ಕೆಲವು ನಾಟಕ ತಂಡಗಳೂ ಬದ್ಧವಾಗಿವೆ.

ಆದರೆ, ಎರಡನೇ ವಾದಕ್ಕೆ ಕಿವಿಗೊಡುವವರಲ್ಲಿ ಚೂರು ಅಳುಕೂ ಇದೆ. ರಂಜನೆಯ ಗುರಿ ಇರಿಸಿಕೊಂಡು ಮುಂದುವರಿದರೆ ಎಲ್ಲಿ ತಮ್ಮ ಪ್ರಯೋಗಗಳನ್ನು ಕಲಾತ್ಮಕ ನಾಟಕಗಳ ಚುಕ್ಕಾಣಿ ಹಿಡಿದಿರುವವರು ತಿರಸ್ಕರಿಸಿ ವ್ಯಂಗ್ಯವಾಡುತ್ತಾರೋ ಎಂದು ಸಂದೇಹಿಸುತ್ತಲೇ ದ್ವಂದ್ವಕ್ಕೆ ಬೀಳುತ್ತಿದ್ದಾರೆ.

ಆದರೆ, ಈಚೆಗೆ ಹೊಸ ತಂಡವೊಂದು ಉದಯವಾಗಿದೆ. ತಕ್ಷ ಥಿಯೇಟ್ರಿಕ್ಸ್‌ ಅದರ ಹೆಸರು. ಈ ತಂಡದ ನಟರಿಗೆ ರಂಗದ ಮೇಲೆ ಅಭಿನಯಿಸುವ ಇರಾದೆ ಇದೆ, ಅದನ್ನು ಗೀಳು ಅಂತಲೂ ಅನ್ನಬಹುದು. ಆದರೆ, ಮೇಲಿನ ವಾದಗಳಲ್ಲಿ ಎಂದೂ ಜೀಕಬೇಕು ಅನಿಸಿಲ್ಲ. ಅದರ ಗೊಡವೆಗೂ ಹೋಗಿಲ್ಲ. ರಂಗಕರ್ಮಿಗಳು ಎತ್ತಬಹುದಾದ ಕೊಂಕು, ಚಕಾರಗಳನ್ನು ಈ ತಂಡದವರು ತಲೆಯಲ್ಲಿ ಇರಿಸಿಕೊಂಡೇ ಇಲ್ಲ. ಪ್ರಾಯಶಃ ಆ ತೆರನಾದ ವಾದಗಳಿಗೆ ಕಿವಿಗೊಡದ ದೂರದ ಸುರಕ್ಷಿತ ವಲಯದಲ್ಲಿ ಈ ತಂಡದ ಪ್ರತಿಯೊಬ್ಬರೂ ಇದ್ದಂತಿದೆ, ಅಥವಾ ಇದ್ದಾರೆ.

ಇದರ ಪರಿಣಾಮವು ತû… ಥಿಯೇಟ್ರಿಕ್ಸ್‌ ತಂಡ ಈಚೆಗೆ ಎಂ.ಜಿ. ರಸ್ತೆಯ ಮೆಟ್ರೋ ರಂಗೋಲಿ ಕೇಂದ್ರದಲ್ಲಿ ಪ್ರದರ್ಶಿಸಿದ “ತ್ರೀ ರೋಸಸ್‌’ ನಾಟಕದಲ್ಲಿ ಕಂಡಿತು. ತಂಡದ ಪ್ರತಿಯೊಬ್ಬರನ್ನು ಗಮನಿಸಿದರೆ ಎಲ್ಲರೂ ಹೊಸ ಕಾಲಮಾನಕ್ಕೆ ತೆರೆದುಕೊಂಡ ಹುಡುಗ ಹುಡುಗಿಯರು. ಇದು ಹವ್ಯಾಸಿ ತಂಡವಾಗಿರುವ ಕಾರಣ ಹೊಸ ಸವಾಲಿನ ಹುದ್ದೆಗಳಿಗೆ ತೆರೆದುಕೊಂಡಿರುವವರು. ಇವರಿಗೆ ನಾಟ್ಯಶಾಸ್ತ್ರ ಎಂಬುದು ದಿಕ್ಸೂಚಿ ಅನಿಸಿಲ್ಲ. ಕಲೆ ಎಂದರೆ ಸಲ್ಲದ ಗಾಂಭೀರ್ಯ ತಂದುಕೊಡಬೇಕೆನ್ನುವ ಹುಸಿ ಧಿಮಾಕೂ ಇವರಲಿಲ್ಲ. ಭಾಷೆಯ ವಿಚಾರದಲ್ಲೂ ಮಡಿವಂತಿಕೆ ಇರಿಸಿಕೊಳ್ಳಬೇಕೆನಿಸಿಲ್ಲ. ವಿಮರ್ಶಕರನ್ನು ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಬಹುಶಃ ಈ ರೂಢಿ ಕ್ರಮದ ಬಗ್ಗೆಯೂ ತಿಳಿದಂತಿಲ್ಲ.

ಭಾಷೆ ಎನ್ನುವುದು ಇಂದಿನದರ ಮಿಡಿತದಂತಿರಬೇಕು ಎಂದುಕೊಂಡು ಅದಕ್ಕೊಂದು ಸರಳ ಪ್ರೇಮಕಥಾನಕ ಹೆಣೆದಿದ್ದಾರೆ. ಇಲ್ಲಿ ತ್ರಿರೋಸಸ್‌ ಎಂದರೆ ಮೂರು ಪ್ರೇಮಿಗಳು ಮತ್ತು ಅವರುಗಳ ಪ್ರೇಮದ ಸಂಕೇತ. ಮತ್ತೂಬ್ಬರ ಪ್ರೇಮವಿಚಾರದಲ್ಲಿ ಮೂರನೇ ವ್ಯಕ್ತಿಯೊಬ್ಬ ಪ್ರವೇಶಿಸಿದರೆ ಏನೇನಾಗುತ್ತದೆ ಎನ್ನುವುದು ಇಲ್ಲಿರುವ ಒನ್‌ಲೈನ್‌ ಸ್ಟೋರಿ. ಇದಕ್ಕೆ ಹಿನ್ನೆಲೆಯಾಗಿ ಒಂದು ಕಾಲ್‌ ಸೆಂಟರ್‌ ಇದೆ. ಅದರಲ್ಲಿನ ಕೆಲಸಗಳ ಕ್ರಮದ ವಿವರಗಳು ಇದೆ. ಇದರೊಳಗೇ ಪ್ರೇಮದ ಕಥಾನಕವೂ ಅಡಕವಾಗಿದೆ.

ನಿರ್ದೇಶಕ ಅಕ್ಷಯ್‌ ಕಾರ್ತಿಕ್‌ ಮೊದಲಿಂದ ಕಡೆಯವರೆಗೆ ಕ್ಲಾಸಿಸಿಸಂನ ನೆರಳಿಗೆ ಸರಿದುಹೋಗಲಿಕ್ಕೆ ತಮ್ಮ ನಾಟಕವನ್ನು ಬಿಟ್ಟಿಲ್ಲ. ಪ್ರೇಮದ ಹೊಸ ಪರಿಭಾಷೆಯನ್ನು ನಾಟಕದಲ್ಲಿ ತಂದಿದ್ದಾರೆ. ಹಾಗೆಯೇ ಭರಪೂರ ನಗಿಸಿದ್ದಾರೆ. ಇಂದಿನ ವಸ್ತುಸ್ಥಿತಿ ಹೇಗಿದೆ ಎನ್ನುವುದನ್ನು ಪ್ರತಿ ಸನ್ನಿವೇಶದಲ್ಲಿ ಕಾಣಿಸಿದ್ದಾರೆ. ಕತೆಯಲ್ಲಿ ಗೋಜಲುಗಳಿಲ್ಲ. ಆದರೆ, ತೀರಾ ಸಂಪ್ರದಾಯಬದ್ಧ ನಾಟಕಗಳನ್ನು ನೋಡಿರುವವರಿಗೆ “ತ್ರಿ ರೋಸಸ್‌’ ನಾಟಕದ ಆರಂಭ ಚೂರು ಸಡಿಲ ಅನಿಸಬಹುದು. ವಾಚ್ಯ ಮೀರಬೇಕು ಎಂದು ವಾದಿಸುವವರು ಆರಂಭದಲ್ಲಿ ವಿವರಣೆ ಹೆಚ್ಚಾಯಿತು ಎನ್ನಬಹುದು. ಒಂದು ತಾಜಾ ಪ್ರೇಮಕಥಾನಕ ಇಂದಿನ ಕಂಗ್ಲಿಷ್‌ ಭಾಷೆಯಲ್ಲಿ ಅನಾವರಣಗೊಳ್ಳುವ ಪರಿ ಚೆಂದ. ಹುಡುಗರ ಅಭಿನಯ ಚೇತೋಹಾರಿ. ಹೆಣ್ಣುಮಕ್ಕಳಲ್ಲಿ ಇಂದಿನ ಸ್ಟೈಲಿಶ್‌ ಝಲಕ್‌ಗಳಿದ್ದವು. ಇಷ್ಟಾಗಿಯೂ ಈ ನಾಟಕ ಕೆಲವು ಕಡೆ ಚೂರು ಲಂಬಿಸಿದಂತೆ ಅನಿಸಿತು. ಮತ್ತೂಂದಿಷ್ಟು ಸಂಕಲಿಸಿ ಹುರಿಕಟ್ಟಿದರೆ ಮೂರು ಗುಲಾಬಿಗಳು ಮತ್ತಷ್ಟು ಚೆಂದ ಕಾಣುವುದರಲ್ಲಿ ಅನುಮಾನವಿಲ್ಲ.

ಎನ್‌.ಸಿ. ಮಹೇಶ್‌

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.