- Sunday 08 Dec 2019
ಮೊಟೊ ಯೋಗಾ! ಬೈಕ್ ರೈಡರ್ಗಳ ಫಿಟ್ನೆಸ್ ಮಂತ್ರ
Team Udayavani, Jun 22, 2019, 11:27 AM IST
ನಿನ್ನೆ ಇಡೀ ದಿನ ವಿಶ್ವದಾದ್ಯಂತ ಯೋಗದ್ದೇ ಧ್ಯಾನ. ಇಂದೂ ಅದು ತಣ್ಣಗಾಗಿಲ್ಲ. ಆದರೆ, ಇದು ಯೋಗದ ಇನ್ನೊಂದು ರೂಪ. “ಮೋಟೊ ಯೋಗ’! ಬೈಕರ್ಗಳಿಗೆ ಯೋಗದ ಮೂಲಕ ಫಿಟ್ನೆಸ್ ಮಂತ್ರ ಹೇಳುವ ವಿನೂತನ ವಿಧಾನ. ಇದನ್ನು ಜಗತ್ತಿಗೆ ಪರಿಚಯಿಸಿದ ಕನ್ನಡಿಗ, “ಯೋಗಬಂಧು ಪ್ರಶಾಂತ್’ ಇಂದು (ಜೂ.22) “ಮೋಟೊ ಯೋಗ ಡೇ’ ಅಂತಲೇ ಆಚರಿಸುತ್ತಿದ್ದಾರೆ…
ವೀಕೆಂಡ್ ಬರುತ್ತಿದ್ದಂತೆ, ಬೈಕಲ್ಲಿ ರೊಯ್ಯಂತ ಲಾಂಗ್ ರೈಡ್ ಹೊರಡುವವರನ್ನು ನೋಡಿರುತ್ತೀರಿ. ಬೈಕ್ನಲ್ಲಿ ಲೇಹ್-ಲಡಾಕ್ಗೆ ಟ್ರಿಪ್ ಹೋಗುವವರು, ಕನ್ಯಾಕುಮಾರಿಯಿಂದ ಕಾಶ್ಮೀರದ ನೆತ್ತಿ ಮುಟ್ಟಿ ಬರುವವರು ಹೀಗೆ, ಬೈಕೊಂದಿದ್ದರೆ ಸಾಕು ಅನ್ನುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಇನ್ನೂ ಕೆಲವರಿಗೆ ಆ ಆಸೆ ಇದ್ದರೂ, “ಅಯ್ಯೋ, ಅಷ್ಟೆಲ್ಲಾ ದೂರ ರೈಡ್ ಮಾಡೋಕಾಗುತ್ತಾ?’ ಅನ್ನೋ ಅಂಜಿಕೆಯಿಂದ ಸುಮ್ಮನಿರುತ್ತಾರೆ. ಯಾಕಂದ್ರೆ, ನೂರಾರು ಕಿಲೋಮೀಟರ್ ಬೈಕ್ ಓಡಿಸುವುದು, ಸುಲಭದ ಮಾತಲ್ಲ. ಬೈಕ್ ಟ್ರಿಪ್ನ ಥ್ರಿಲ್ ಜೊತೆಗೆ, ಕೈಕಾಲು ನೋವು, ಬೆನ್ನು ನೋವು ಎಂಬಿತ್ಯಾದಿ ಸಂಕಟಗಳು ಬೈಕರ್ಗಳನ್ನು ಡ್ರಿಲ್ ಮಾಡಿ ಬಿಡುತ್ತವೆ. ಅಂಥ, ಬೈಕರ್ಗಳಿಗೆ ಯೋಗದ ಮೂಲಕ ಫಿಟ್ನೆಸ್ ಮಂತ್ರ ಹೇಳುವ ಕಾರ್ಯಕ್ರಮವೊಂದು ನಗರದಲ್ಲಿ ನಡೆಯುತ್ತಿದೆ.
“ಬಿಗ್ ಬೈಕಿಂಗ್ ಕಮ್ಯೂನ್’ ತಂಡದ ವತಿಯಿಂದ, ಯೋಗಬಂಧು ಪ್ರಶಾಂತ್ ನೇತೃತ್ವದಲ್ಲಿ “ಮೋಟೊ ಯೋಗ ದಿನಾಚರಣೆ’ ಹಮ್ಮಿಕೊಳ್ಳಲಾಗಿದೆ. ಜೂನ್ 22ರನ್ನು “ಮೋಟೊ ಯೋಗ ಡೇ’ ಎಂದು ಘೋಷಿಸಿರುವ ಬಿಗ್ ಬೈಕಿಂಗ್ ಕಮ್ಯೂನ್, ಬೈಕ್ ಕ್ರೇಝ್ ಉಳ್ಳ ನೂರಾರು ಮಂದಿಯನ್ನು ಒಂದೆಡೆ ಸೇರಿಸಿ ಯೋಗ ತರಬೇತಿ ನೀಡಲಿದೆ.
ಏನಿದು ಮೋಟೊ ಯೋಗ?
ಯೋಗದ ಮೂಲಕ ಬೈಕ್ ರೈಡಿಂಗ್ ಅನ್ನು ಇನ್ನಷ್ಟು ಮಜವಾಗಿಸುವುದು ಹೇಗೆ ಎಂದು ತಿಳಿಸಿಕೊಡುವ ಕಾರ್ಯಕ್ರಮವಿದು. ಬೈಕ್ ಓಡಿಸುವಾಗ ಕಾಡುವ ಬೆನ್ನುನೋವು, ಮಂಡಿನೋವು, ಸ್ನಾಯು ಸೆಳೆತ ನಿವಾರಣೆಗೆ ಯಾವ ಆಸನ ಮಾಡಬೇಕು, ದೂರದ ಪ್ರದೇಶಗಳಿಗೆ ಬೈಕ್ ರೈಡ್ ಹೊರಡುವ ಮುನ್ನ ಹೇಗೆ ಫಿಟ್ನೆಸ್ ಕಾಪಾಡಿಕೊಳ್ಳಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ, ಕಾರ್ಯಾಗಾರ ನಡೆಯಲಿದೆ. ಬೈಕರ್ಗಳಾದ ವೀಣಾ ಶೆಟ್ಟಿ, ಸಮೀರಾ ದಹಿಯ ಮತ್ತು ವಿಶ್ವಾಸ್ ಎಸ್.ಡಿ. ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಕೆಲವರು ಸತತವಾಗಿ ಒಂದೆರಡು ತಿಂಗಳು ಬೈಕ್ನಲ್ಲಿ ಸುತ್ತುತ್ತಿರುತ್ತಾರೆ. ಅಂಥವರು ಬೈಕ್ ಅನ್ನು ಆಸರೆಯಾಗಿ ಹಿಡಿದು ಯಾವೆಲ್ಲಾ ಆಸನಗಳನ್ನು ಮಾಡಬಹುದು ಎಂದು ಯೋಗಬಂಧು ಪ್ರಶಾಂತ್ ತಿಳಿಸಿಕೊಡಲಿದ್ದಾರೆ. ಅವರು ಮೋಟಾರ್ ಬೈಕ್ ಮೇಲೆ ಕಠಿಣ ಆಸನಗಳನ್ನೂ ಲೀಲಾಜಾಲವಾಗಿ ಮಾಡಬಲ್ಲರು. ಜೊತೆಗೆ, ಧ್ಯಾನ, ಪ್ರಾಣಾಯಾಮ, ಆಕ್ಯುಪಂಕ್ಚರ್ ಬಗ್ಗೆ ಮಾಹಿತಿಯೂ ಇಲ್ಲಿ ಸಿಗಲಿದೆ. ಬೆನ್ನುನೋವು ಕಾಡದಂತೆ ತಡೆಯಲು ಯಾವ ಆಸನ, ಬೆನ್ನುನೋವು ಇರುವವರಿಗೆ ಯಾವ ಆಸನ ಎಂಬ ಮಾಹಿತಿಯನ್ನು ಪ್ರಶಾಂತ್ ನೀಡಲಿದ್ದಾರೆ.
12 ದೇಶ ಸುತ್ತಿರುವ ಯೋಗಬಂಧು
ಮೋಟೊ ಯೋಗ ದಿನದ ನೇತೃತ್ವ ವಹಿಸಿರುವ ಯೋಗಬಂಧು ಪ್ರಶಾಂತ್, ಜೆಪಿ ನಗರದ “ಓಜಸ್ ಯೋಗ ಅಕಾಡೆಮಿ’ಯ ಸ್ಥಾಪಕರು. ಮೂಲತಃ ಬೆಂಗಳೂರಿನವರೇ ಆದ ಪ್ರಶಾಂತ್ 15 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, 10 ವರ್ಷಗಳಿಂದ ಯೋಗ ಶಿಕ್ಷಕರಾಗಿದ್ದಾರೆ. ಜರ್ಮನಿ, ದುಬೈ, ಸಿಡ್ಜರ್ಲ್ಯಾಂಡ್, ಥಾಯ್ಲ್ಯಾಂಡ್ ಸೇರಿ 12 ದೇಶಗಳಲ್ಲಿ ಯೋಗ ಶಿಬಿರ ನಡೆಸಿರುವ ಖ್ಯಾತಿ ಇವರದ್ದು. ಯೋಗದ ಅತ್ಯಂತ ಕಠಿಣ ಆಸನಗಳನ್ನು ಮೋಟಾರ್ ಬೈಕ್ ಮೇಲೆ ಲೀಲಾಜಾಲವಾಗಿ ಮಾಡಬಲ್ಲ ಇವರು, ಬೈಕ್ ರೈಡರ್ಗಳಿಗೆ ಫಿಟ್ನೆಸ್ ಟಿಪ್ಸ್ ನೀಡಲಿದ್ದಾರೆ.
ಕನ್ಯಾಕುಮಾರಿ ಟು ಕಾಶ್ಮೀರ
ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯೋಗಬಂಧು ಪ್ರಶಾಂತ್ ಮತ್ತು ತಂಡದವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರ್ಯಾಲಿ ಹೊರಡಲಿದ್ದಾರೆ. ಈ ಪ್ರಯಾಣದ ಮಧ್ಯೆ ಅಲ್ಲಲ್ಲಿ ಉಚಿತ ಯೋಗ ಶಿಬಿರ, ಯೋಗದ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸರ್ಕಾರಿ ಶಾಲೆ, ಗ್ರಾಮ ಕೇಂದ್ರ ಮುಂತಾದೆಡೆ ಜನರನ್ನು ಸೇರಿಸಿ, ಶಿಬಿರ ನಡೆಸುವ ಇರಾದೆ ತಂಡಕ್ಕಿದೆ. ಜುಲೈ 1ರಂದು ಮೂರು ಬೈಕ್ಗಳಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿ, ಅಲ್ಲಿಂದ ಕಾಶ್ಮೀರಕ್ಕೆ ತಂಡ ಪ್ರಯಾಣ ಬೆಳೆಸಲಿದೆಯಂತೆ.
ಮೋಟೊ ಯೋಗ ಅಂದರೆ, ಬೈಕ್ ಮೇಲೆ ಯೋಗಾಸನ ಮಾಡುವುದಲ್ಲ. ಯೋಗದಲ್ಲಿ ಆ ರೀತಿಯ ಯಾವ ಆಸನಗಳೂ ಇಲ್ಲ. ಹತ್ತು ವರ್ಷಗಳಿಂದ ಅಭ್ಯಾಸ ಮಾಡಿದ್ದರ ಫಲವಾಗಿ ನಾನು ಬೈಕ್ ಮೇಲೆ ಬ್ಯಾಲೆನ್ಸ್ ಮಾಡುತ್ತಾ, ಯೋಗಾಸನ ಮಾಡಬಲ್ಲೆ ಅಷ್ಟೆ. ಮೋಟೊ ಯೋಗ ದಿನದ ಉದ್ದೇಶ, ಲಾಂಗ್ ರೈಡ್ ಹೋಗುವ ಬೈಕರ್ಗಳಿಗೆ ಯೋಗದ ಮೂಲಕ ಫಿಟ್ನೆಸ್ ಮಾಹಿತಿ ನೀಡುವುದು. ಹೇಗೆ, ಹಿರಿಯರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಅಂತ ಪ್ರತ್ಯೇಕವಾಗಿ ಯೋಗ ಕಮ್ಯುನಿಟಿ ಇರುತ್ತದೋ, ಹಾಗೇ ಇದು ಬೈಕ್ ಓಡಿಸುವವರಿಗೆ.
– ಯೋಗಬಂಧು ಪ್ರಶಾಂತ್, ಯೋಗ ಶಿಕ್ಷಕ
ಎಲ್ಲಿ?: ಮೆಜೆಸ್ಟೀನ್ ನ್ಪೋರ್ಟ್ಸ್, ಎಚ್ಎಸ್ಆರ್ ಲೇಔಟ್
ಯಾವಾಗ?: ಜೂ. 22, ಶನಿವಾರ, ಬೆಳಗ್ಗೆ 6.30ರಿಂದ
– ಪ್ರಿಯಾಂಕ
ಈ ವಿಭಾಗದಿಂದ ಇನ್ನಷ್ಟು
-
ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...
-
ಗಾಂಧಿ ಭವನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಸ್ಥಾಪನೆಯಾದ ಕಟ್ಟಡ. ಗಾಂಧಿ ತತ್ತ್ವವನ್ನು ಸಾರುವ ಸಲುವಾಗಿ "ಗಾಂಧಿ ಸ್ಮಾರಕ ನಿಧಿ' ಹೆಸರಿನಲ್ಲಿ...
-
ವೃದ್ಧ ತಂದೆ- ತಾಯಿಯನ್ನು ಹೊತ್ತು, ಯಾತ್ರೆ ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೀರಿ. ಅಂಥದ್ದೇ ಒಬ್ಬ ಅಪರೂಪದ ಮಗ ಮೈಸೂರಿನ ಕೃಷ್ಣಕುಮಾರ್. ಅಡುಗೆಮನೆಯೇ ಜಗತ್ತು...
-
ಮಿಥಿಲೆ ಪುರಾಣ ಗ್ರಂಥಗಳಿಂದ ಮಾತ್ರವೇ ನಮಗೆ ತಿಳಿದಿರುವ ನಗರ. ಸೀತೆ ಹುಟ್ಟಿದ್ದು, ಜನಕರಾಜನ ಅರಮನೆ ಇದ್ದಿದ್ದು ಇಲ್ಲಿಯೇ ಎಂದು ನಂಬಿದ್ದೇವೆ. ಮಿಥಿಲಾ ನಗರಿ ಈಗ...
-
ಟ್ರಾಫಿಕ್ ಪೊಲೀಸರು ದಿನವಿಡೀ ನಿಂತೇ ಇರಬೇಕು. ಜೊತೆಗೆ, ಟ್ರಾಫಿಕ್ನ ಅಬ್ಬರ, ನಿಯಮ ಮುರಿದು ತಲೆನೋವು ಕೊಡುವ ವಾಹನ ಚಾಲಕರು, ಬಿಸಿಲು, ಧೂಳು, ಹೊಗೆ, ಕಿವಿಗಡಚಿಕ್ಕುವ...
ಹೊಸ ಸೇರ್ಪಡೆ
-
ಕಾಂಗ್ರೆಸ್ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು? ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್ವೈಗೆ ವೈಯಕ್ತಿಕ ಹಿನ್ನಡೆ ಬೆಂಗಳೂರು:...
-
ಮಂಗಳೂರು: ಕರಾವಳಿ ರಕ್ಷಣಾ ಪಡೆಯನ್ನು ಸಜ್ಜುಗೊಳಿಸುವ ದೇಶದ ಮೊದಲ ತರಬೇತಿ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಗ್ರಾಮಾಂತರ ಮಂಗಳೂರಿನ...
-
ಹೊಸದಿಲ್ಲಿ: ಒಂದು ದೇಶ, ಒಂದು ತೆರಿಗೆ ಶಿರೋನಾಮೆಯಲ್ಲಿ ಆರಂಭಗೊಂಡಿದ್ದ ಜಿಎಸ್ಟಿ ಸದ್ಯದಲ್ಲೇ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಗಳು ಗೋಚರಿಸಿವೆ. 2017ರ ಜುಲೈಯಲ್ಲಿ...
-
ಪು. ತಿ. ನರಸಿಂಹಾಚಾರ್, ಕೆ. ಎಸ್. ನರಸಿಂಹಸ್ವಾಮಿ, ಜಿ. ಎಸ್. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ...
-
ಇತ್ತೀಚೆಗೆ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಣಿ ಅತ್ಯಾಚಾರಗಳು, ಕಿರುಕುಳಗಳು, ಕಳ್ಳತನ ಮೊದಲಾದ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿ...