ರಘು-ವಸು ಚೊಚ್ಚಲ ಸೊಗಸು
Team Udayavani, Nov 2, 2019, 4:05 AM IST
ಅವರಿಬ್ಬರೂ ಮೇರು ಗಾಯಕರು. ಮಿಗಿಲಾಗಿ, ಅಣ್ಣ- ತಮ್ಮ. ಇಬ್ಬರೂ ತಮ್ಮದೇ ಬ್ಯಾಂಡ್ ಕಟ್ಟಿದವರು. ಜಾನಪದ ಗೀತೆಗಳಿಗೂ ಆಧುನಿಕ ಸ್ಪರ್ಶ ತುಂಬಿ, ಜಗತ್ತಿನಾದ್ಯಂತ ಸಂಗೀತಪ್ರಿಯರನ್ನು ತಲೆದೂಗುವಂತೆ ಮಾಡಿದವರು. ಆದರೂ, ಈ ಅಣ್ಣ- ತಮ್ಮನನ್ನು ಒಂದೇ ವೇದಿಕೆಯಲ್ಲಿ ಕಂಡಿದ್ದೀರಾ ಅಂದ್ರೆ ಎಲ್ಲರ ಉತ್ತರ “ಇಲ್ಲ’ ಅಂತಲೇ. ರಘು ದೀಕ್ಷಿತ್ ಮತ್ತು ವಸು ದೀಕ್ಷಿತ್, ಒಂದೇ ವೇದಿಕೆಯಲ್ಲಿ ಜಾನಪದ ಮತ್ತು ತಮ್ಮದೇ ರಚನೆಗಳಿಂದ ಕಿಕ್ ಏರಿಸಲು ಮುಂದಾಗಿದ್ದಾರೆ.
ರಘು ಅವರ “ದಿ ರಘು ದೀಕ್ಷಿತ್ ಪ್ರಾಜೆಕ್ಟ್’ ಮತ್ತು ವಸು ಅವರ “ಸ್ವರಾತ್ಮ’ ಮ್ಯೂಸಿಕ್ ಬ್ಯಾಂಡ್ಗಳು ಇದೇ ಮೊದಲ ಬಾರಿಗೆ ಒಟ್ಟಿಗೆ ಪ್ರದರ್ಶನ ನೀಡುತ್ತಿವೆ. “ನಿನ್ನ ಪೂಜೆಗೆ ಬಂದ ಮಾದೇಶ್ವರ’ ಮತ್ತು “ರಾಗೀ ತಂದೀರಾ, ಭಿಕ್ಷೆಗೆ ರಾಗೀ ತಂದೀರಾ…’ವನ್ನು ಒಂದೇ ಕಾರ್ಯಕ್ರಮದಲ್ಲಿ ಕೇಳುವ ಸುಯೋಗ. ರಾಜ್ಯೋತ್ಸವದ ಪ್ರಯುಕ್ತ ನಡೆಯುತ್ತಿರುವ ಈ ವಿಶೇಷ ಪ್ರದರ್ಶನದಲ್ಲಿ, ಜಾನಪದ ಗೀತೆಗಳನ್ನು ಕಿವಿಗಡಚಿಕ್ಕುವ ಸದ್ದಿನಲ್ಲಿ ಕೇಳಬಹುದು.
ಯಾವಾಗ?: ನ.2, ಶನಿವಾರ, ಸಂ.7
ಎಲ್ಲಿ?: ಸ್ಕೈ ಡೆಕ್- ವಿ.ಆರ್. ಬೆಂಗಳೂರು, ಐಟಿಪಿಎಲ್ ಮುಖ್ಯರಸ್ತೆ
ಪ್ರವೇಶ: 499 ರೂ. ಮೇಲ್ಪಟ್ಟು