ಏಲಕ್ಕಿ ಏನ್‌ ಲಕ್ಕಿ : ಅಡಿಕೆ ಮಧ್ಯೆ ಬಂಪರ್‌ ಬೆಳೆ


Team Udayavani, May 30, 2017, 1:46 AM IST

Isiri-Yalakki.jpg

ಮಲೆನಾಡಲ್ಲಿ ಅಡಿಕೆ, ತೆಂಗು ಬೆಳೆಗಳಿವೆ. ಉಪ ಆದಾಯಕ್ಕೆ ಮಧ್ಯೆ ಮಧ್ಯೆ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ದೇವನಹಳ್ಳಿಯ ಕೃಷಿಕ ಕಾರ್ತೀಕ ಕೂಡ ಹೀಗೇ ಮಾಡಿದ್ದಾರೆ. ಅಡಕೆ ತೋಟದಲ್ಲಿ ಏಲಕ್ಕಿ ನೆಟ್ಟು ಕೈ ತುಂಬ ಹಣ ಎಣಿಸುತ್ತಿದ್ದಾರೆ. ಹೆದ್ದಾರಿ ಪಕ್ಕದಲ್ಲಿಯೇ ಇವರ ಹೊಲವಿದೆ. ಅಡಿಕೆ ತೋಟ ನೋಡುಗರನ್ನು ಆಕರ್ಷಿಸುವಷ್ಟು ಹುಲುಸಾಗಿ ಬೆಳೆದಿದೆ. 

ಕೃಷಿ ಹೇಗೆ ?
ಕಾರ್ತೀಕರದ್ದು 2.5 ಎಕರೆ ಜಮೀನು. ಪೂರ್ತಿ ಅಡಿಕೆ ತೋಟವಿದೆ. ಇವರದು ಖುಷ್ಕಿ ಭೂಮಿ. ನೀರಿಗಾಗಿ ಕೊಳೆವೆ ಬಾವಿ ಇದೆ. ಗಿಡದಿಂದ ಗಿಡಕ್ಕೆ 8 ಅಡಿ ಅಂತರ ಬರುವಂತೆ ಒಟ್ಟು 1,300 ಅಡಿಕೆ ಮರ ಬೆಳೆಸಿದ್ದಾರೆ. ಗಿಡಗಳು ಈಗ 8 ವರ್ಷದ ಪ್ರಾಯದವು. ಉತ್ತಮ ಫ‌ಸಲು ನೀಡುತ್ತಿವೆ. ಬರೀ ಅಡಿಕೆ ನಂಬಿದರೆ ಹೇಗೆ ?ಎಂದು ಯೋಚಿಸಿ, ಏಲಕ್ಕಿ ಬೆಳೆಸಿದ್ದಾರೆ.

ಚಿಕ್ಕಮಗಳೂರಿನ ನರ್ಸರಿಯಿಂದ ಒಂದು ಗಿಡಕ್ಕೆ 5 ರೂ.ನಂತೆ ಏಲಕ್ಕಿ ಗಿಡ ಖರೀದಿಸಿ 4 ವರ್ಷಗಳ ಹಿಂದೆ ನೆಟ್ಟಿದ್ದರು. ಇವರು ಖರೀದಿಸಿದ ಏಲಕ್ಕಿ ಗಿಡಗಳು ಸಕಲೇಶಪುರ ಹಾಗೂ ಕೇರಳದ ನೆಲ್ಯಾಡಿ ತಳಿಗಳಾಗಿವೆ. ಗೊಬ್ಬರವನ್ನು ಇವರೇ ತಯಾರಿಸಿಕೊಳ್ಳುತ್ತಾರೆ. ಅದು ಹೀಗೆ ; ಸಗಣಿ ಗೊಬ್ಬರ ಮತ್ತು ಕಾಡಿನ ಗೋಡು ಮಣ್ಣು ಬಳಸಿ ಕೃಷಿ ಮಾಡುತ್ತಿದ್ದಾರೆ. ಅಡಿಕೆ ಮರಗಳ ನಡುವಿನ ಜಾಗದಲ್ಲಿ ಒಂದೂವರೆ ಅಡಿ ಆಳ ಮತ್ತು ಒಂದೂವರೆ ಅಡಿ ಅಗಲದ ಗುಂಡಿ ತೆಗೆದು ಅದರಲ್ಲಿ ಸಗಣಿಗೊಬ್ಬರ ಮತ್ತು ಕಾಡಿನ ತರಗೆಲೆಗಳನ್ನು ತುಂಬಿದರು. ಅರ್ಧ ಅಡಿ ಮಣ್ಣು ಮುಚ್ಚಿ ಗಿಡ ನೆಟ್ಟಿದ್ದರು. ಇದರಿಂದ ಎಲಕ್ಕಿ ಗಿಡಗಳ ಬೇರು ಚೆನ್ನಾಗಿ ಹರಡಿಕೊಳ್ಳುವಂತಾಗಿದೆ.ನಂತರ 2 ತಿಂಗಳಿಗೊಮ್ಮೆ ಸಗಣಿ ಗೊಬ್ಬರದ ಸ್ಲರಿ ಮತ್ತು ಆಗಾಗ ಎರೆಗೊಬ್ಬರ ಕೊಟ್ಟರು. 6 ತಿಂಗಳಿಗೊಮ್ಮೆ ಏಲಕ್ಕಿ ಗಿಡದ ಬುಡಕ್ಕೆ ಮಣ್ಣು ಏರಿಸುತ್ತಾರೆ. ಇದರಿಂದ ಗಿಡದ ಬೆಳವಣಿಗೆ ಉತ್ತಮವಾಗಿದೆಯಂತೆ. ಮಳೆಗಾಲದಲ್ಲಿ ಗಿಡದ ಬೇರುಗಳಿಗೆ ಕೊಳೆ ಬರದಂತೆ ಬೋಡೋ ದ್ರಾವಣ ಸಿಂಪಡಿಸುತ್ತಾರೆ. ಏಲಕ್ಕಿ ಗಿಡಗಳಿಗೆ 2 ವರ್ಷವಾಗುತ್ತಿದ್ದಂತೆ ಹೂ ಬಿಟ್ಟು ಫ‌ಸಲು ಆರಂಭವಾಗಿತ್ತು.  ಕಳೆದ ವರ್ಷ 3 ವರ್ಷ ಪ್ರಾಯ ತುಂಬಿದ್ದ ಈ ಏಲಕ್ಕಿ ಗಿಡಗಳಿಂದ ಉತ್ತಮ ಫ‌ಸಲು ದೊರೆತಿದೆ. 

ಲಾಭ ಎಷ್ಟು?
ಅಡಿಕೆ ಮರಗಳ ನಡುವಿನ ಖಾಲಿ ಸ್ಥಳವನ್ನು ಆಧರಿಸಿ 1,000 ಏಲಕ್ಕಿ ಗಿಡ ನಾಟಿಮಾಡಿದ್ದಾರೆ. ಇದಕ್ಕೆ 40 ಸಾವಿರ ರೂ.ವೆಚ್ಚ ತಗುಲಿದೆ. ಗಿಡ ನೆಟ್ಟ 2ನೇ ವರ್ಷ ಏಲಕ್ಕಿ ಫ‌ಸಲು ಬಂದು, ಮೊದಲ ವರ್ಷ ಪ್ರತಿ ಗಿಡದಿಂದ ಸರಾಸರಿ 50 ಕಿಲೋ.ನಷ್ಟು ಏಲಕ್ಕಿ ಫ‌ಸಲು ದೊರೆತಿತ್ತು. ಇದರಿಂದ 50 ಕಿ.ಗ್ರಾಂ. ಏಲಕ್ಕಿ ಮಾರಾಟವಾಗಿ ಇವರಿಗೆ ಸುಮಾರು 60 ಸಾವಿರ ಆದಾಯ ಬಂದಿತ್ತು.  ಕಳೆದ ವರ್ಷ ಮೇ ಅಂತ್ಯದ ವರೆಗೂ ಕಾರ್ತಿಕ್‌  ಏಲಕ್ಕಿ ಫ‌ಸಲು ಕೊಯ್ಲು ಮಾಡಿದ್ದರು. ಪ್ರತಿ ಗಿಡದಿಂದ ಸರಾಸರಿ 500 ಗ್ರಾಂ.ಫ‌ಸಲಂತೆ ಒಟ್ಟು 5 ಕ್ವಿಂಟಾಲ್‌ ಏಲಕ್ಕಿ ಫ‌ಸಲು ದೊರೆಯಿತು. ಕ್ವಿಂಟಾಲ್‌ ಒಂದಕ್ಕೆ 60 ಸಾವಿರ ಧಾರಣೆ ಇತ್ತು. 5 ಕ್ವಿಂಟಾಲ್‌ ಏಲಕ್ಕಿಯಿಂದ ಸುಮಾರು 3 ಲಕ್ಷ ರೂ ಆದಾಯ ದೊರೆತಿದೆ. ಅಡಿಕೆಯ ಜೊತೆಗೆ ಏಲಕ್ಕಿ ಕೃಷಿ ನಡೆಸುವುದರಿಂದ ಪ್ರತ್ಯೇಕ ಖರ್ಚು ಸಹ ಇಲ್ಲ. 

ಮಾಹಿತಿಗೆ – 9731853108 

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.