ಅಡಿಕೆ ನರ್ಸರಿ ನೋಡಿ “ಸ್ವಾಮಿ’ ನಾನು ಬೆಳೆಯೋದೇ ಹೀಗೆ


Team Udayavani, Jul 3, 2017, 3:50 AM IST

adike.jpg

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ದೇವರಹಳ್ಳಿ ಗ್ರಾಮದ ರೈತ ಕುಮಾರಸ್ವಾಮಿ ಕೂಡ ಎಲ್ಲರಂತೆ ಅಡಿಕೆ ಬೆಳೆಯುತ್ತಿದ್ದಾರೆ. ಆದಾಯ ಪಡೆಯುತ್ತಿದ್ದಾರೆ. ಇಷ್ಟೇ ಆಗಿದ್ದರೆ ವಿಶೇಷ ಏನೂ ಇರುತ್ತಿರಲಿಲ್ಲ. ಸ್ವಾಮಿಗಳು  ಅಡಿಕೆ ಮರಗಳ ನಡುವೆ ವೈವಿಧ್ಯಮಯ ಸಸಿ ತಯಾರಿಸಿ ಮಾರಾಟ ಮಾಡುವ ನರ್ಸರಿ ಮಾಡಿದ್ದಾರೆ.  ವರ್ಷವಿಡೀ ಆದಾಯ ಪಡೆದು ಸುತ್ತಮುತ್ತಲ ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿ ಹೇಗೆ?
ಶಿವಮೊಗ್ಗ -ಚೋರಡಿ ಮೂಲಕ ಶಿಕಾರಿಪುರ ಸಂಪರ್ಕಿಸುವ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ದೇವರಹಳ್ಳಿ ಗ್ರಾಮದಲ್ಲಿ ಇವರ ಹೊಲವಿದೆ. 8 ವರ್ಷದ ಹಿಂದೆ  ಖುಷ್ಕಿ ಜಮೀನಿನಲ್ಲಿ ಕೊಳವೆ ಬಾವಿ ತೆಗೆಸಿ ಅಡಿಕೆ ಸಸಿ ನೆಟ್ಟಿದ್ದರು. ಈಗ ಸಸಿಗಳು ಮರವಾಗಿ ಬೆಳೆದು ಫ‌ಸಲು ನೀಡುತ್ತಿವೆ. ಸಾಲಿನಿಂದ ಸಾಲಿಗೆ ಮತ್ತು ಮರದಿಂದ ಮರಕ್ಕೆ 10 ಅಡಿ ಅಂತರದಲ್ಲಿ ಅಡಿಕೆ ಮರಗಳಿವೆ.  ನಡುವೆ ಏಲಕ್ಕಿ, ಕಾಫಿ,ಕೋಕೊ, ಲವಂಗ ಮುಂತಾದ ಹಲವು ಬಗೆಯ ಬೇರೆ ಬೇರೆ ಸಸಿಗಳನ್ನು ಸಹ ಬೆಳೆಸಿದ್ದಾರೆ. ಅಡಿಕೆ ಮರದ ನಡುವಿನ ಖಾಲಿ ಸ್ಥಳದಲ್ಲಿ ನರ್ಸರಿ ಗಿಡಗಳಿವೆ. 

ಕಾಡಿನಿಂದ ಮಣ್ಣು ತರಿಸಿ ಎರೆಗೊಬ್ಬರ ಮಿಶ್ರಣ ಮಾಡಿ ಗಿಡದ ಪ್ಯಾಕೆಟ್‌ ತಯಾರಿಸಿಕೊಳ್ಳುತ್ತಾರೆ. ತೀರ್ಥಹಳ್ಳಿ, ಹೊಸನಗರ, ಸಾಗರದ ಕೆಳದಿ, ಸೊರಬ ತಾಲೂಕಿನ ಹೊಡಬಟ್ಟೆ, ಹರೀಶಿ ಇನ್ನಿತರ ಸ್ಥಳಗಳಿಂದ ಆಯ್ದ ರೈತರಿಂದ ಬೀಜದ ಅಡಿಕೆ ಖರೀದಿಸಿ ಸಸಿ ಬೆಳೆಸುತ್ತಾರೆ. ಪಣಿಯೂರು, ವೆಂಗುರಾÉ, ಕರಿಮುಂಡ ಇತ್ಯಾದಿ ತಳಿಯ ಕಾಳು ಮೆಣಸಿನ ಸಸಿ ತಯಾರಿಸುತ್ತಾರೆ. ನರ್ಸರಿ ಸಸಿಗಳಿಗೆ ಎರೆಗೊಬ್ಬರ ಹಾಕಿ ಸಸಿ ತಯಾರಿಸುವ ಕಾರಣ ಯಾವುದೇ ಹೊಸ ಪ್ರದೇಶದಲ್ಲಿ ಸಸಿ ನಾಟಿ ಮಾಡಿದರೂ ಆಯಾ ಪ್ರದೇಶಕ್ಕೆ ಹೊಂದಿಕೊಂಡು ಚೆನ್ನಾಗಿ ಬೆಳೆಯುತ್ತದೆ. ವಿಶೇಷ ತಳಿಯ ಮಾವು, ನೇರಳೆ,ನುಗ್ಗೆ ಸಸಿಗಳನ್ನು ಸಹ ಬೆಳೆಸಿ ಮಾರಾಟ ಮಾಡುತ್ತಾರೆ.

ಲಾಭದ ಲೆಕ್ಕಾಚಾರ
ನರ್ಸರಿ ಗಿಡಗಳಿಗೆ ಶೇಡ್‌ ನಟ್‌ ಇತ್ಯಾದಿ ರೂಪಿಸುವ ಖರ್ಚಿಲ್ಲ. ಅಡಿಕೆ ಮರಗಳೇ ನೆರಳು ಒದಗಿಸುತ್ತದೆ.  ಅಡಿಕೆ ತೋಟದ ಕೃಷಿಗೆ ಎರೆಗೊಬ್ಬರ ತಯಾರಿಸುವ ಇವರು ಇದೇ ಎರೆಗೊಬ್ಬರವನ್ನು ನರ್ಸರಿ ಸಸಿಗಳಿಗೂ ಬಳಸುತ್ತಾರೆ. ಪ್ರತಿ ವರ್ಷ ನವೆಂಬರ್‌ ,ಡಿಸೆಂಬರ್‌ ತಿಂಗಳಿನಲ್ಲಿ ನರ್ಸರಿ ಗಿಡ ಬೆಳೆಸಲು ಆರಂಭಿಸುತ್ತಾರೆ. ಮೇ ಅಂತ್ಯದಿಂದ ಆಗಸ್ಟ್‌ವರೆಗೂ ಗಿಡ ಮಾರಾಟವಾಗುತ್ತದೆ. ಇವರ ನರ್ಸರಿ ಗಿಡಗಳು ಉತ್ತಮ ತಳಿಯದೆಂಬ ದೃಢ ನಂಬಿಕೆ ಇದೆ.  ಈ ಕಾರಣಕ್ಕೆ ಬಹುದೂರದಿಂದ ಆಗಮಿಸಿ ಒಯ್ತುತ್ತಾರೆ. ಈ ವರ್ಷ 45 ಸಾವಿರ ಅಡಿಕೆ ಸಸಿ, 5 ಸಾವಿರ ಕಾಳು ಮೆಣಸಿನ ಸಸಿ, 1 ಸಾವಿರ ನುಗ್ಗೆ ಸಸಿ, 500 ನೇರಳೆ ಸಸಿ, 500 ಮಾವಿನ ಸಸಿ ತಯಾರಿಸಿದ್ದಾರೆ. ಅಡಿಕೆ ಸಸಿಗಳು ತಲಾ ಒಂದಕ್ಕೆ ರೂ.18 ರಂತೆ ಮಾರಾಟ ಮಾಡುತ್ತಿದ್ದಾರೆ.  ಜೂನ್‌ ಮೊದಲವಾರದ ವರೆಗೆ 20 ಸಾವಿರ ಅಡಿಕೆ ಸಸಿಗಳನ್ನು ಮಾರಾಟ ಮಾಡಿ  3 ಲಕ್ಷದ 60 ಸಾವಿರ  ಆದಾಯ ದೊರೆತಿದೆ. ಆಗಸ್ಟ್‌ ವೇಳೆಗೆ ಉಳಿದ 25 ಸಾವಿರ ಸಸ್ಯ ಮಾರಾಟವಾಗುತ್ತದೆ.  ಕಾಳು ಮೆಣಸಿನ ಸಸಿಗಳನ್ನು ಒಂದು ಗಿಡಕ್ಕೆ ತಲಾ ರೂ 30, ಮಾವಿನ ಸಸಿ ತಲಾ ರೂ.20, ನುಗ್ಗೆ ಸಸಿಗಳನ್ನು ರೂ.10 ರಂತೆ ಮಾರಾಟ ಮಾಡಿದ್ದಾರೆ.ಇವುಗಳ ಮಾರಾಟದಿಂದ ಈ ವರ್ಷ ರೂ. ರೂ.1 ಲಕ್ಷದ 70 ಸಾವಿರ ಆದಾಯ ದೊರೆತಿದೆ.  ವರ್ಷದ ಎಲ್ಲಾ ತಿಂಗಳಿನಲ್ಲಿಯೂ ಆಗಾಗ ಗ್ರಾಹಕರು ಆಗಮಿಸಿ ಅಡಿಕೆ ಸಸಿ ಖರೀದಿಸಿ ಒಯ್ಯುತ್ತಾರೆ.ಇದರಿಂದ ಇವರಿಗೆ ವರ್ಷವಿಡೀ ಆದಾಯ ದೊರೆಯುತ್ತಲೇ ಇರುತ್ತದೆ. 

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.