ಬಂತು ನೋಡಿ ವಿಲಿಯಮ್ಸ್‌ ಬಾಳೆ


Team Udayavani, Feb 25, 2019, 12:30 AM IST

williams-breedbanana-farming.jpg

ಬಾಳೆ ಬೆಳೆಯುವ ರೈತರು  ಸ್ವಲ್ಪ ಈ ಕಡೆ ನೋಡಿ. ಬೆಳ್ತಂಗಡಿಯ ಬೈಕುಡೆ ಶ್ಯಾಸುಂದರ ಭಟ್ಟರು ಇಸ್ರೇಲ್‌ನಿಂದ ಬಾಳೆ ತಳಿ ತರಿಸಿ, ಕಸಿ ಮಾಡಿ ಹೊಸ ಮಾದರಿಯ ಬಾಳೆ ಬೆಳೆಯುತ್ತಿದ್ದಾರೆ. ಇದನ್ನು ನೀವೂ ಟ್ರೈ ಮಾಡಬಹುದು. 

ಬಾಳೆ ಕೃಷಿಗೆ ಹೊಸ ತಳಿಯೊಂದು ಸೇರ್ಪಡೆಯಾಗುತ್ತಿದೆ. ಇದು ಭಾರತಕ್ಕೆ ಇಸ್ರೇಲ್‌ ದೇಶದಿಂದ ಬಂದಿದೆ. ಕಡಿಮೆ ನೀರು ಬಳೆಸಿ ಹೆಚ್ಚು ಬೆಳೆಯುವ ಆ ದೇಶದ ಕೌಶಲಕ್ಕೆ ಹೊಂದಿಕೊಂಡಿದ್ದ ಈ ತಳಿಗೆ ಅಲ್ಲಿ ಇರಿಸಿದ ಹೆಸರು ವಿಲಿಯಮ್ಸ್‌ ಬಾಳೆ. ಇಸ್ರೇಲ್‌ ಯಾತ್ರೆ ಮಾಡಿದವರ ಮೂಲಕ ಇದರ ಚಿಕ್ಕ ಗಿಡಗಳನ್ನು ತರಿಸಿದವರು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬೈಕುಡೆ ಶ್ಯಾಮಸುಂದರ ಭಟ್ಟರು. ಕಸಿ ಕಲೆಯಲ್ಲಿ ನಿಪುಣರಾದ ಅವರಿಗೆ, ಅಪಾರ ಸಸ್ಯ ಜಾnನವೂ ಇದೆ. ಹೀಗೆ ತಂದ ಗಿಡಗಳನ್ನು ಕೆಲವರಿಗೆ ಹಂಚಿದ್ದಾರೆ. ಆ ಪೈಕಿ ಅವರದೇ ಗ್ರಾಮದ ಪೆರ್ನಡ್ಕದ ಮಾರ್ಷಲ್‌ ವೇಗಸ್‌ ಅವರು ನೆಟ್ಟು ಬೆಳೆಸಿದ ಗಿಡ ಆರೇ ತಿಂಗಳಿಗೆ ಗೊನೆ ಹಾಕಿ ಒಂಭತ್ತನೆ ತಿಂಗಳಲ್ಲಿ ಕಟಾವಿಗೆ ಸಿದ್ಧವಾಗಿದೆ.

ವಿಲಿಯಮ್ಸ್‌ ತಳಿ ಸದ್ಯಕ್ಕೆ ಕರಾವಳಿಯ ಯಾವುದೇ ಮಣ್ಣಿಗೆ ಹೊಂದಿಕೊಳ್ಳುತ್ತದೆ. ಇಲ್ಲಿರುವ ಮಳೆ, ಬಿಸಿಲು ಅದರ ವ್ಯವಸಾಯಕ್ಕೆ ಅನುಕೂಲವಾಗಿದೆ ಎಂಬುದು ಸಾಬೀತಾಗಿದೆ. ಕಾಯಿಗಳು ಗಾತ್ರ ಮತ್ತು ಆಕೃತಿಯಲ್ಲಿ ಕ್ಯಾವೆಂಡಿಶ್‌ ತಳಿಯ ಹಾಗೆ ಇದ್ದರೂ ಹಣ್ಣು ಅದಕ್ಕಿಂತ ಭಿನ್ನವಾಗಿ ಹೆಚ್ಚು ಸಿಹಿ ಮತ್ತು ಸ್ವಾದಿಷ್ಟವಾಗಿದೆ. 

ಹಣ್ಣಾಗುವಾಗಲೇ ಚಿಪ್ಪಿನಿಂದ ಕದಲಿ ಉದುರುವುದಿಲ್ಲ. ಒಂದು ಗೊನೆಯಲ್ಲಿ ಎಂಟು ಚಿಪ್ಪುಗಳು ಬಂದಿದ್ದು 52 ಕಿ.ಲೋ ತೂಕವೂ ಇದೆಯೆಂಬುದು ಅಚ್ಚರಿಯ ವಿಷಯ. ಸುಮಾರು ನಾಲ್ಕು ಅಡಿ ಎತ್ತರವಾಗಿಯೂ ಇದೆ.

ಮಾರ್ಷಲ್‌ ಅವರು ಈ ಬಾಳೆಗೆ ಪ್ರತೀ ತಿಂಗಳೂ ಸೆಗಣಿ ಗೊಬ್ಬರ ಮತ್ತು ಸುಡುಮಣ್ಣು ಹೊರತು ಯಾವುದೇ ರಾಸಾಯನಿಕ ಗೊಬ್ಬರ ನೀಡಿಲ್ಲ. ಆದರೂ ಅದು ಎಲೆಗಳನ್ನು ಬಿಡುವ ವೇಗ ತ್ವರಿತವಾಗಿದೆ. ಕ್ಯಾವೆಂಡಿಶ್‌ ತಳಿಗಿಂತ ಎಷ್ಟೋ ಎತ್ತರವಾಗಿರುವ ಬಾಳೆ, ಯಾವುದೇ ರೀತಿಯ ಗಾಳಿಯ ಹೊಡೆತವನ್ನೂ ಸಹಿಸಿಕೊಳ್ಳುವಷ್ಟು ದೃಢವಾಗಿದೆ.  ಬೇರು ಮತ್ತು ಸುಳಿಯನ್ನು ಕಾಡುವ ರೋಗ ಹಾಗೂ ಕೀಟಗಳಿಂದ ಮುಕ್ತವಾಗಿದೆ. ಮುಂದಿನ ಕಂದು ಈಗಾಗಲೇ ಬೆಳೆಯುತ್ತಿದ್ದು ಎರಡನೆಯ ಗೊನೆ ಹಾಕಲು ಬೇಕಾಗುವ ಕಾಲಾವಧಿ ಇನ್ನೂ ಕಡಿಮೆ ಎನ್ನುತ್ತಾರೆ ಕಸಿ ಪರಿಣತ ಶ್ಯಾಮಸುಂದರ ಭಟ್ಟರು. ಕ್ರಮಬದ್ಧವಾಗಿ ವ್ಯವಸಾಯ ಮಾಡುವುದರಿಂದ ಆರೇ ತಿಂಗಳಲ್ಲಿ ಗೊನೆ ಹಾಕುವ ಈ ತಳಿ, ರೈತನಿಗೆ ಶೀಘ್ರ ಪ್ರತಿಫ‌ಲ ಕೊಡುವ ಕಾಮಧೇನುವಾಗಬಹುದು ಎಂಬ ನಿರೀಕ್ಷೆ ಮಾರ್ಷಲ್‌ ಅವರದು.

– ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.