ಸಗಣಿಯಿಂದ ಸಂಪತ್ತು! : ಕೊಪ್ಪಳದ ದಂಪತಿಯ ಯಶೋಗಾಥೆ


Team Udayavani, Mar 22, 2021, 6:27 PM IST

kr-market–sleeping-5

ಈ ದಿನಗಳಲ್ಲಿ ಎಲ್ಲೆಲ್ಲೂ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಉತ್ಪನ್ನಗಳು ಕಣ್ಣಿಗೆರಾಚುತ್ತವೆ. ಅವುಗಳ ಬಳಕೆಯೂ ಹೆಚ್ಚಾಗಿಯೇ ಇದೆ. ಹೀಗಾಗಿ ಪರಿಸರಕ್ಕೆ ಮತ್ತು ಮನುಷ್ಯನ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ, ದೇಸೀ ಉತ್ಪನ್ನಗಳ ತಯಾರಿಕೆಗೆಮುಂದಾಗಿರುವ ಶ್ರೀನಿವಾಸ ದಿವಾಕರ ಎಂಬ ಯುವಕನೊಬ್ಬ ಅದರಲ್ಲಿ ದೊಡ್ಡ ಯಶಸ್ಸು ಕಂಡಿದ್ದಾನೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದ ದಿವಾಕರ, ಡಿಪ್ಲೊಮಾಪದವೀಧರ. ಈತ ಆಯುರ್ವೇದ ಸಂಪನ್ಮೂಲಗಳನ್ನು ಕಚ್ಚಾವಸ್ತುಗಳನ್ನಾಗಿಬಳಸಿಕೊಂಡು ಹಸುವಿನ ಗೋಮಯದಿಂದ ಗೃಹ ಅಲಂಕಾರಿಕ ವಸ್ತುಗಳು ಹಾಗೂ ವಿಶಿಷ್ಟ ಬಗೆಯ ಹಲವು ಉತ್ಪನ್ನಗಳನ್ನು ಮನೆಯಲ್ಲೇ ತಯಾರಿಸಿ ಯಶಸ್ಸು ಕಂಡಿದ್ದಾನೆ. ಬಿ.ಕಾಂ ಪದವೀಧರೆಯಾಗಿರುವ ಪತ್ನಿ ಅಶ್ವಿ‌ನಿ, ಪತಿಯ ಎಲ್ಲಾ ಕೆಲಸದಲ್ಲೂ ಕೈ ಜೋಡಿಸುತ್ತಿದ್ದಾರೆ.

ಸಗಣಿಯಿಂದ ಅಗರಬತ್ತಿ ದೂಪದ ಬತ್ತಿ (ಅಗರಬತ್ತಿ): ದೇಶಿ ಹಸುವಿನ ಸಗಣಿಯನ್ನು ತಂದು ಅದನ್ನು ಮೂರು ದಿನ ಒಣಗಿಸಿ, ಬಳಿಕ ಅದನ್ನು ಮಿಶ್ರಣ ಯಂತ್ರದಲ್ಲಿ ಪುಡಿಮಾಡಿಕೊಂಡು, ಕೇರಳದಿಂದ ತಂದದೇಸೀ ಕೊಬ್ಬರಿ ಎಣ್ಣೆ,ಆಯುರ್ವೇದಯುಕ್ತ ಕರ್ಪೂರ,ಹಸುವಿನ ತುಪ್ಪ, ಲವಂಗದ ಪುಡಿ, ಅರಿಶಿಣ ಪುಡಿ, ಗುಗ್ಗಳ (ಲೋಬಾನಮಾದರಿಯದ್ದು), ಭದ್ರಮುಷ್ಟಿ ಎಂಬ ವಸ್ತುಗಳನ್ನುಮಿಶ್ರಣ ಮಾಡಿ ಹದವಾಗಿಸಿ ಅಗರಬತ್ತಿಯನ್ನು ತಯಾರು ಮಾಡುತ್ತಾರೆ.

ಗೋಮಯ ದಂತ ಮಂಜನ (ಹಲ್ಲಿನ ಪುಡಿ) : ಗೋವಿನ ಸಗಣಿಯಿಂದ ತಯಾರಿಸುವವಿಭೂತಿ, ಭಸ್ಮ ಆಧ್ಯಾತ್ಮಿಕವಾಗಿಯೂ,ಆರೋಗ್ಯಕ್ಕೂ ಒಳ್ಳೆಯದು. ಅದರಂತೆಯಾವುದೇ ರಾಸಾಯನಿಕ ವಸ್ತುಗಳಮಿಶ್ರಣ ಮಾಡದೆ ದಿನಬಳಕೆಯಸಾಮಾನ್ಯ ಸಾಮಗ್ರಿಗಳಾದ ಪುದಿನಾ,ಕರಿಬೇವು, ತುಳಸಿ, ಅಜ್ವಾನ, ಅರಿಶಿಣಮಿಶ್ರಣ ಮಾಡಿ ತಯಾರಿಸಿದ ಟೂತ್‌ಪೇಸ್ಟ್‌ ತಯಾರಿಸಲಾಗುತ್ತದೆ.

ಗೃಹ ಅಲಂಕಾರಿಕ ವಸ್ತುಗಳು: ಸಾಮಾನ್ಯವಾಗಿ ಮನೆಯನ್ನು ಅಂದವಾಗಿ ಮತ್ತು ಆಕರ್ಷಕವಾಗಿಕಾಣುವಂತೆ ಮಾಡಲು ಜನ ವಿವಿಧರೀತಿಯ ಅಲಂಕಾರಿಕ ವಸ್ತುಗಳನ್ನುಬಳಸುತ್ತಾರೆ. ಇದನ್ನು ಗಮನಿಸಿದದಿವಾಕರ ಅವರು, ಪ್ಲಾಸ್ಟಿಕ್‌ಉತ್ಪನ್ನಗಳ ಬದಲು ಗೋಮಯದಿಂದ ಮಾಡಿದ ವಸ್ತುಗಳನ್ನು ತಯಾರಿಸಿದ್ದಾರೆ. ಶ್ರೀ, ಓಂ, ಸ್ವಸ್ತಿಕ್‌ ಸೇರಿ ಹಲವುಚಿಹ್ನೆಗಳನ್ನು ಅಲಂಕಾರಿಕ ವಸ್ತುಗಳರೂಪದಲ್ಲಿ ತಯಾರಿಸಿದ್ದಾರೆ. ಉಲನ್‌ ದಾರ, ಬಟ್ಟೆ, ಕೆಲವುಧಾನ್ಯಗಳನ್ನು ಅಂಟಿಸಿ ಮಾಡಿದತೋರಣ, ಬಾಗಿಲು ಪಟ್ಟಿಗಳುಮನೆಗೆ ಒಂದು ವಿಶಿಷ್ಟ ಸೊಬಗು ತಂದು ಕೊಡುತ್ತವೆ.ಗೋಮಯದೊಂದಿಗೆಅನೇಕ ಆಯುರ್ವೇದಿಕ್‌ ಅಂಶವುಳ್ಳವಸ್ತುಗಳನ್ನು ಶುದ್ಧ ತುಪ್ಪ ಮತ್ತು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಮನೆಯಲ್ಲಿಯೇ ಧೂಪ ತಯಾರಿಸುತ್ತಿದ್ದಾರೆ. ವಿವರಗಳಿಗೆ- ಶ್ರೀನಿವಾಸ ದಿವಾಕರ್‌ ಮುರಡಿ, ಮೊ. 9449024192, 8105445112ಕ್ಕೆ ಸಂಪರ್ಕಿಸಬಹುದು.

ಭಾರತೀಯ ಸಂಸ್ಕೃತಿಯಲ್ಲಿ ಗೋವಿನ ಉತ್ಪನ್ನಗಳಿಗೆ ಬಹಳ ಮಹತ್ವವಿದೆ. ಶ್ರೀನಿವಾಸ್‌ ದಿವಾಕರ ದಂಪತಿಗೋಮಯದಿಂದ ಮಾಡಿರುವ ಹಲವಾರುಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಪರಿಸರಸ್ನೇಹಿ ಈ ಉತ್ಪನ್ನಗಳು ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗಲ್ಲ. ಆತ್ಮ ನಿರ್ಭರಭಾರತದ ಮಹತ್ವಾಕಾಂಕ್ಷೆಗೆ ಸ್ವದೇಶಿ ತಳಿಯಈ ಉತ್ಪನ್ನಗಳು ಸಹಕಾರಿ. -ಡಾ.ಪಿ.ಆರ್‌.ಬದರಿ ಪ್ರಸಾದ್‌, ಕೀಟಶಾಸ್ತ್ರ ವಿಜ್ಞಾನಿ, ಕೊಪ್ಪಳ.

 

– ಶ್ರೀನಾಥ ಮುರಕುಂಬಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.