ಕಡಿಮೆ ದರ, ಅನ್‌ಲಿಮಿಟೆಡ್‌ ಕರೆಗಳ ಯುಗಾಂತ್ಯ?


Team Udayavani, Dec 9, 2019, 6:09 AM IST

kadime-dara

ಅನಿಯಮಿತ ಕರೆ ಸೌಲಭ್ಯ, ಕಡಿಮೆ ದರಕ್ಕೆ ಹೆಚ್ಚು ಡಾಟಾ ನೀಡುತ್ತಿದ್ದ ಕಂಪೆನಿಗಳ ಕೊಡುಗೆಗಳು ಈಗ ಅಂತ್ಯವಾಗಿವೆ. ಜಿಯೋ, ಏರ್‌ಟೆಲ್‌, ವೊಡಾಫೋನ್‌ ಕಂಪೆನಿಗಳು ಈಗ ತಮ್ಮ ಕರೆ ದರಗಳನ್ನು ಶೇ. 40ರಷ್ಟು ಏರಿಕೆ ಮಾಡಿವೆ. ಹೊಸ ಪ್ಲಾನ್‌ಗಳು ಹೇಗಿವೆ? ಯಾವುದರಲ್ಲಿ ಎಷ್ಟು ದರ? ಇಲ್ಲಿದೆ ಮಾಹಿತಿ.

ಮೊಬೈಲ್‌ ನೆಟ್‌ವರ್ಕ್‌ ಕಂಪೆನಿಗಳು ಗ್ರಾಹಕರಿಗೆ ನೀಡುತ್ತಿದ್ದ ಅನ್‌ಲಿಮಿಟೆಡ್‌ ಕರೆಗಳು, ಕಡಿಮೆ ದರದ ಪ್ಲಾನ್‌ಗಳ ಯುಗ ಅಂತ್ಯಗೊಂಡಿದೆ. 2016ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ರಿಲಯನ್ಸ್‌ ಜಿಯೋ, “ಮೊದಲು ಪ್ರತಿಸ್ಪರ್ಧಿಯನ್ನು ದರ ಸಮರದಿಂದ ಮಣಿಸು, ನಂತರ ದರ ಏರಿಸು’ ಎಂಬ ತಂತ್ರ ಹೆಣೆದು, ಅದರಲ್ಲಿ ಯಶಸ್ವಿಯಾಗಿದೆ. ಉಚಿತ ಡಾಟಾ, ಅನ್‌ಲಿಮಿಟೆಡ್‌ ಕರೆಗಳನ್ನು ಆರಂಭದ ಕೆಲವು ತಿಂಗಳು ಉಚಿತವಾಗಿ, ನಂತರ ಅತ್ಯಂತ ಕಡಿಮೆ ದರದಲ್ಲಿ ನೀಡಿದ ಜಿಯೋ ಹೊಡೆತ ತಾಳಲಾರದೆ ದೈತ್ಯ ಕಂಪೆನಿಗಳಾದ ಏರ್‌ಟೆಲ್‌, ವೊಡಾಫೋನ್‌, ಐಡಿಯಾ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನಷ್ಟದ ಹಾದಿಯಲ್ಲಿವೆ.

ನಷ್ಟ ತಾಳಲಾರದೇ ಐಡಿಯಾ ವೊಡಾಫೋನ್‌ ಜೊತೆ ವಿಲೀನಗೊಂಡಿತು. ಆದಾಗ್ಯೂ ಅದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಟ ನಡೆಸಿದೆ. ಒಂದು ಕಾಲದ ನಂ.1 ಕಂಪೆನಿ ಏರ್‌ಟೆಲ್‌ ಏದುಸಿರು ಬಿಡುತ್ತಿದೆ. ದರ ಸಮರದಿಂದಾಗಿ ಅನೇಕ ಏರ್‌ಟೆಲ್‌ ಸ್ಟೋರ್‌ಗಳನ್ನು ಮುಚ್ಚಬೇಕಾಯಿತು. ಅನೇಕ ಗ್ರಾಹಕರು ಜಿಯೋಗೆ ಪೋರ್ಟ್‌ ಆದರು. ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಅಂತೂ ತೀವ್ರ ನಷ್ಟದಲ್ಲಿದೆ.

ಶೇ. 40ರಷ್ಟು ಏರಿಕೆ: ಎಲ್ಲ ಕಂಪೆನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುವ ಹಂತದಲ್ಲಿ ಜಿಯೋ ದಿಢೀರನೆ ಕರೆ ದರವನ್ನು ಏರಿಸಿದೆ. ಗ್ರಾಹಕರಿಗೆ ಅನಿಯಮಿತ ಕರೆಗಳ ರುಚಿ ತೋರಿಸಿದ್ದ ಜಿಯೋ, ಈಗ ಜಿಯೋದಿಂದ ಜಿಯೋಗೆ ಅನಿಯಮಿತ ಹಾಗೂ ಇತರ ನೆಟ್‌ವರ್ಕ್‌ಗಳಿಗೆ ಸೀಮಿತ ನಿಮಿಷಗಳ ಪ್ಲಾನ್‌ಅನ್ನು ಜಾರಿಗೆ ತಂದಿದೆ. ಜಿಯೋ ಕಂಪೆನಿ ಇತರ ನೆಟ್‌ವರ್ಕ್‌ಗಳಿಗೆ ಅನಿಯಮಿತ ಸೌಲಭ್ಯ ತೆಗೆದಾಗ, ನಮ್ಮಲ್ಲಿ ಅನಿಯಮಿತ ಕರೆ ಉಂಟು ಎಂದು ಹೇಳಿಕೊಂಡ ಏರ್‌ಟೆಲ್‌ ಎರಡು ಮೂರು ವಾರಕ್ಕೆ ತಾನೂ ಅನಿಯಮಿತ ಕರೆ ಸೌಲಭ್ಯ ತೆಗೆದುಹಾಕಿದೆ! ಬಿಎಸ್‌ಎನ್‌ಎಲ್‌ ಮಾತ್ರ ಇನ್ನೂ ದರ ಏರಿಕೆ ಮಾಡಿಲ್ಲ. ಡಿಸೆಂಬರ್‌ 3ರಿಂದ ಏರ್‌ಟೆಲ್‌, ವೊಡಾಫೋನ್‌ ಹಾಗೂ ಡಿ. 6ರಿಂದ ಜಿಯೋ ತಮ್ಮ ಕರೆದರಗಳನ್ನು ಶೇ. 40ರಷ್ಟು ಏರಿಕೆ ಮಾಡಿವೆ.

ಜಿಯೋ: ಜಿಯೋ ಪ್ಲಾನ್‌ಗಳು 199 ರೂ.ನಿಂದ ಆರಂಭವಾಗುತ್ತವೆ. 199 ರೂ.ಗೆ ರೀಚಾರ್ಜ್‌ ಮಾಡಿಸಿದರೆ 1 ತಿಂಗಳ (28 ದಿನಗಳ) ವಾಯಿದೆ, ಪ್ರತಿದಿನ 1.5 ಜಿಬಿ ಡಾಟಾ, ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳು, ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ಟಾಕ್‌ಟೈಮ್‌ ಉಚಿತ. 1 ಸಾವಿರ ನಿಮಿಷ ಮುಗಿದ ನಂತರ ಕರೆ ಮಾಡಲು ನಿಮಿಷಕ್ಕೆ 6 ಪೈಸೆ ತಗುಲುತ್ತದೆ. ಅದಕ್ಕಾಗಿ ನಿಮಗೆ ಅನುಕೂಲಕರವಾದ ಆ್ಯಡ್‌ ಆನ್‌ ಪ್ಯಾಕನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ 28 ದಿನಗಳ ವಾಯಿದೆಗೆ 249 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 2 ಜಿ.ಬಿ, 349 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 3 ಜಿ.ಬಿ ಡಾಟಾ ದೊರಕುತ್ತದೆ.

ಎರಡು ತಿಂಗಳ (56 ದಿನಗಳು) ವಾಯಿದೆ ಬೇಕೆನ್ನುವವರು 399 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 1.5 ಜಿ.ಬಿ ಡಾಟಾ, 444 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 2 ಜಿ.ಬಿ ಡಾಟಾ ದೊರಕುತ್ತದೆ. ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 2 ಸಾವಿರ ನಿಮಿಷಗಳ ಟಾಕ್‌ಟೈಮ್‌ ದೊರಕುತ್ತದೆ. 3 ತಿಂಗಳ (84 ದಿನಗಳು) ವಾಯಿದೆಗೆ 555 ರೂ. ರೀಚಾರ್ಜ್‌ ಮಾಡಿಸಿದರೆ ಪ್ರತಿದಿನ 1.5 ಜಿ.ಬಿ ಡಾಟಾ, 599 ರೂ.ಗೆ ಪ್ರತಿದಿನ 2 ಜಿ.ಬಿ ಡಾಟಾ, ಇತರ ನೆಟ್‌ವರ್ಕ್‌ಗೆ 3 ಸಾವಿರ ನಿಮಿಷಗಳ ಟಾಕ್‌ಟೈಮ್‌ ದೊರಕುತ್ತದೆ. ಒಂದು ವರ್ಷಕ್ಕೆ (365 ದಿನಗಳು) ಪೂರ್ತಿ ರೀಚಾರ್ಜ್‌ ಮಾಡಿಸುತ್ತೇನೆ ಎಂದುಕೊಂಡರೆ, 2199 ರೂ.ಗಳಿಗೆ ರೀಚಾರ್ಜ್‌ ಮಾಡಬೇಕು. ಇದರಲ್ಲಿ ಪ್ರತಿದಿನ 1.5 ಜಿ.ಬಿ ಡಾಟಾ, ಜಿಯೋ ದಿಂದ ಜಿಯೋ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 12,000 ನಿಮಿಷಗಳ ಉಚಿತ ಕರೆ ದೊರಕುತ್ತದೆ.

ಏರ್‌ಟೆಲ್‌: ಏರ್‌ಟೆಲ್‌ನಲ್ಲಿ 248 ರೂ. ನಿಂದ ಡಾಟಾ ಮತ್ತು ಕರೆಗಳ ಪ್ಯಾಕ್‌ ಆರಂಭವಾಗುತ್ತದೆ. 28 ದಿನಗಳ ವಾಯಿದೆ. 248 ರೂ.ಗಳಿಗೆ ಪ್ರತಿದಿನ 1.5 ಜಿಬಿ ಡಾಟಾ, ಏರ್‌ಟೆಲ್‌ ನೆಟ್‌ವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 1000 ನಿಮಿಷ (ಬಳಿಕ ನಿಮಿಷಕ್ಕೆ 6 ಪೈಸೆ, ಪ್ರತ್ಯೇಕ ಪ್ಯಾಕ್‌ ಹಾಕಿಸಿಕೊಳ್ಳಬೇಕು) ಪ್ರತಿದಿನ 2 ಜಿ.ಬಿ ಡಾಟಾ ಬೇಕೆಂದರೆ 298 ರೂ., ಪ್ರತಿದಿನ 3 ಜಿ.ಬಿ ಡಾಟಾಗೆ 398 ರೂ. ರೀಚಾರ್ಜ್‌ ಮಾಡಿಸಿಕೊಳ್ಳಬೇಕು.
3 ತಿಂಗಳ (84 ದಿನಗಳು) ವಾಯಿದೆಗೆ 598 ರೂ.ಗೆ ರೀಚಾರ್ಜ್‌ ಮಾಡಿಸಿದರೆ, ಪ್ರತಿದಿನ 1.5 ಜಿ.ಬಿ ಡಾಟಾ, ಏರ್‌ಟೆಲ್‌ಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 3,000 ನಿಮಿಷ ಉಚಿತ ಕರೆ ಸೌಲಭ್ಯ ಇದೆ. ಇದೇ ವಾಯಿದೆಗೆ ಪ್ರತಿದಿನ 2 ಜಿ.ಬಿ ಡಾಟಾ ಬೇಕೆಂದರೆ 698 ರೂ. ರೀಚಾರ್ಜ್‌ ಮಾಡಿಸಬೇಕು. ಒಂದು ವರ್ಷದ ಪ್ಯಾಕ್‌ ಹಾಕಿಸಬೇಕೆಂದರೆ ಈಗ 2398 ರೂ. ಕೊಡಬೇಕು (ಮುಂಚೆ ಇದಕ್ಕೆ 1699 ರೂ. ಇತ್ತು) ಇದರಲ್ಲಿ ಪ್ರತಿದಿನ 1.5 ಜಿ.ಬಿ ಡಾಟಾ, ಇತರ ನೆಟ್‌ವರ್ಕ್‌ಗಳಿಗೆ 12 ಸಾವಿರ ನಿಮಿಷಗಳು ಉಚಿತ. ಏರ್‌ಟೆಲ್‌ಗೆ ಅನಿಯಮಿತ ಉಚಿತ ಕರೆ ಇದೆ.

ವೊಡಾಫೋನ್‌-ಐಡಿಯಾ ದರ: ವೊಡಾಫೋನ್‌ ಮತ್ತು ಐಡಿಯಾ ಈಗಾಗಲೇ ವಿಲೀನವಾಗಿವೆ. ಇದರ ದರಗಳೂ ಒಂದು ರೂ.ಗಳಷ್ಟು ಹೆಚ್ಚು ಕಡಿಮೆ ಏರ್‌ಟೆಲ್‌ ರೀತಿಯೇ ಇವೆ. ಇದರಲ್ಲಿ ಮಿನಿಮಮ್‌ ಪ್ಯಾಕ್‌ (28 ದಿನಗಳ ವಾಯಿದೆ) 249 ರೂ. ಪ್ರತಿದಿನ 1.5 ಜಿ.ಬಿ ಡಾಟಾ, ಸ್ವಂತ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗೆ 1000 ನಿಮಿಷಗಳು ಉಚಿತ. ಪ್ರತಿದಿನ 2 ಜಿಬಿ ಡಾಟಾಕ್ಕೆ 299 ರೂ., ಪ್ರತಿದಿನ 3 ಜಿ.ಬಿ ಡಾಟಾಕ್ಕೆ 399 ರೂ. ರೀಚಾರ್ಜ್‌ ಇದೆ. 84 ದಿನಗಳ ವಾಯಿದೆಗೆ 599 ರೂ., ಪ್ರತಿದಿನ 1.5 ಜಿ.ಬಿ ಡಾಟಾ, ಸ್ವಂತ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 3 ಸಾವಿರ ನಿಮಿಷ ಉಚಿತ ಕರೆ, ಇದೇ ವಾಯಿದೆಗೆ 699 ರೂ.ಗೆ ಪ್ರತಿದಿನ 2 ಜಿ.ಬಿ ದೊರಕುತ್ತದೆ. ಒಂದು ವರ್ಷಕ್ಕೆ ರೀಚಾರ್ಜ್‌ ಮಾಡಿಸಿಬಿಡೋಣ ಅಂದರೆ, 2399 ರೂ. ಕೊಡಬೇಕು. ಪ್ರತಿದಿನ 1.5 ಜಿ.ಬಿ ಡಾಟಾ, 12 ಸಾವಿರ ನಿಮಿಷ ಇತರ ನೆಟ್‌ವರ್ಕ್‌ಗಳಿಗೆ ಉಚಿತ ಕರೆ ದೊರಕುತ್ತದೆ. ಸ್ವಂತ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ ಇರುತ್ತದೆ.

* ಕೆ. ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.