ಮನೆ ಕಟ್ಟುವಾಗ ಅಭದ್ರತೆಯ ನೀಲ ನಕ್ಷೆ ಬೇಡವೇ ಬೇಡ


Team Udayavani, Jan 9, 2017, 3:45 AM IST

bara-ilisi.jpg

ಮನೋಹರ ನೀಲನಕ್ಷೆಗಳಿರುವ ಮನೆಗಳು ವಿನ್ಯಾಸದಲ್ಲಿ ಆಕರ್ಷತೆಯನ್ನು ಹೊಂದಿರುತ್ತದೆ. ಲಾನ್‌ಗಳು ಹೂಗಿಡ್ಗಳು ತರುಲತೆ ಈಜುಕೊಳ ಗಾಜಿನ ಸಂಯೋಜನೆಗಳೆಲ್ಲ ನೋಡಲು ಅದ್ಭುತ. ಆದರೆ ದಿಕ್ಕುಗಳ ವ್ಯತಿರಿಕ್ತ ಸಂಯೋಜನೆಗಳಿಂದ ಮನೆಯೊಳಗಿನ ಜೀವ ಧ್ವನಿಗಳಿಗೆ ದೈನಂದಿನ ಬದುಕಿಗೆ ಅರ್ಥಪೂರ್ಣ ತುಡಿತಗಳೇ ಇರದೆ ವಿಲವಿಲವೆಂಬ ಕನವರಿಕೆ ತುಂಬಿಕೊಂಡಿರುತ್ತದೆ. 

ನಿಮ್ಮ ಒಳಿತು ಕೆಡುಕುಗಳಲ್ಲಿ ಮನೆಯ ವಾಸ್ತು ಬಹು ಮುಖ್ಯ ಪಾತ್ರವಹಿಸುತ್ತದೆ ಎಂಬ ಕುರಿತು ಅನುಮಾನಗಳಿಲ್ಲ. ಆದರೆ ಕೆಲವರು ಸುಮ್ಮನೆ ವಿವಿಧ ರೀತಿಯ ಮನೆಯ ನೀಲನಕ್ಷೆಗಳನ್ನು ಒದಗಿಸುತ್ತಾರೆ. ನೋಡಲು ಸುಂದರವಾದ ಚೌಕಟ್ಟು ಆವರಣ ಸುಣ್ಣ ಬಣ್ಣಗಳಿಂದ ಅದ್ಭುತವಾಗಿಯೇ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನ ಬಹು ಪ್ರಮುಖ
ಪ್ರದೇಶವೊಂದರಲ್ಲಿ ಬಹು ರೀತಿಯ ಆಕರ್ಷಣೆ ತುಂಬಿದ ದೇವ ಮಂದಿರವನ್ನು ನಿರ್ಮಿಸಿದ್ದರು. ಆದರೆ ಆಗಮ ಶಾಸ್ತ್ರದ ರೀತ್ಯಾ ವಾಸ್ತು ಸಂಪನ್ನತೆಗಳು ದೇವಾಲಯದ ಕಟ್ಟೋಣದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಕೊಡುಗೈ ದೊರೆಯಾದ ಸಂಪನ್ಮೂಲ ವ್ಯಕ್ತಿಯೊಬ್ಬರು ಈ ದೇವಾಲಯದ ಕಟ್ಟೋಣದಲ್ಲಿ ಮುಖ್ಯವಾದ ಭೂಮಿಕೆಯನ್ನು ವಹಿಸಿದ ಹೊಣೆ ಹೊತ್ತ ಸರ್ವತ್ರವಾಗಿ ಸೌಹಾರ್ದಪೂರ್ಣ ವ್ಯಕ್ತಿ. ದೇವಾಲಯದ ವಿನ್ಯಾಸದಲ್ಲಿ ತೊಂದರೆ ಇದೆ ಎಂದು ಹೇಳಿದ್ದನ್ನು ಮೌನವಾಗಿಯೇ ಕೇಳಿಸಿಕೊಂಡರು.

ಮುಖ್ಯದೇವರ ಗೋಪುರವೇ ವಿನ್ಯಾಸದಲ್ಲಿ ಅಗತ್ಯವನ್ನು ಮೀರಿದ ಅಂಕುಡೊಂಕುಗಳ ವಾಸ್ತು ಅಳತೆಗೆ ಸರಿಹೊಂದದ ಗೋಪುರದೊಂದಿಗೆ ಅಸಮಂಜಸವಾಗಿತ್ತು. ಆದರೆ ದೋಷವಿದೆ ಎಂಬುದನ್ನು ಕೇಳಿಸಿಕೊಂಡರೂ ದೇವಾಲಯದ ನೀರಿನ ಬೇಡಿಕೆ ಪೂರೈಸುವ ಪ್ರಮುಖ ಕೊಳವೆಗಳು ಅನ್ಯರ ತ್ಯಾಜ್ಯ ಸಂಗ್ರಹದ ಸ್ಥಾವರವನ್ನು ಸುತ್ತಿ ವಾಮಭಾಗದಲ್ಲಿ ವಿಸ್ತಾರಗೊಂಡು ದೇವಾಲಯಕ್ಕೆ ಹರಿದು ಬರುತ್ತಿತ್ತು. ಅವರು ಸಲಹೆ ಕೇಳಿದ್ದರಿಂದ ವಾಸ್ತು ವಿನ್ಯಾಸವನ್ನು ಗ್ರಹಿಸಿ ಅವರಿಗೆ ಒಟ್ಟೂ ನಿಟ್ಟಿನ ಆಯ ಉದ್ದ ಅಗಲಗಳನ್ನು ಗಮನಿಸಿದಾಗ ಮುಖ್ಯ ದೇವರ ಸಂಪನ್ನ ಸ್ಪಂದನಕ್ಕೆ ದೋಷವಿದ್ದು ಅನೇಕ ರೀತಿಯ ತಲ್ಲಣ, ಬೇಸರ, ಖನ್ನತೆಗಳಿಗೆ ಮುಖ್ಯ ವ್ಯಕ್ತಿ ಒಳಗಾಗುತ್ತಾರೆ ಎಂಬುದು ಶಾಸ್ತ್ರ ಸಿದ್ಧಾಂತವಾಗಿದೆ ಎಂಬುದನ್ನು ಸದ್ದಿರದೆ ಕೇಳಿಸಿಕೊಂಡರು. ಇರುವ ಸಂಯೋಜನಾ ದೋಷದಿಂದಾಗಿ ಎದುರಾಗುವ ತೊಂದರೆಗಳನ್ನು ಗ್ರಹಿಸಿದವರೇ ಇಡೀ ದೇವಾಲಯವನ್ನು ಪುನರೂಪಿಸುವ ಸಂಕಲ್ಪಕ್ಕೆಬದ್ಧರಾದರು. ಅದೇ ಕಾರಣದಿಂದಾಗಿ ಸಂಪನ್ನವಾದ ದೇವಾಲಯ ತಲೆ ಎತ್ತಿತು. ಈಗ ಸುಂದರವಾದ ಪರಿಪೂರ್ಣತೆ ಒದಗಿದೆ.

ಈ ರೀತಿಯಾಗಿ ಪುನರೂÅಪಿಸಿದ ಮೇಲೆ ಹಿಂದಿನ ದಿನಗಳಿಗಿಂತಲೂ ಬಲಾಡ್ಯವಾದ ಹಣಕಾಸಿನ ಪ್ರಾಬಲ್ಯ ಈಗ ದೇವಾಲಯ ಕಟ್ಟಿಸಿದ ಗೃಹಸ್ಥನಿಗೆ ಒದಗಿ ಬಂದಿದೆ. ಯುಕ್ತವಾದ ರೀತಿಯಲ್ಲಿ ಶ್ರೀಚಕ್ರ ಸೂರ್ಯ ಪ್ರಭಾ ಮಂಡಲ ಕೂರ್ಮ ಕೇಂದ್ರ ಗ್ರಹಗಳನ್ನು ಪ್ರಬಲವಾಗಿಸಿದ ಪರಿಣಾಮವಾಗಿ ದೇವಾಲಯ ಕಟ್ಟಿಸಿದ ಗೃಹಸ್ಥರ ಅಸ್ಥಿರ ಮನಸ್ಸಿನ
ಮಗನಿಗೂ ಉತ್ತಮವಾದ ಕ್ರಿಯಾಶೀಲತೆ ಒದಗಿ ತಂದೆಯ ಜೊತೆ ವಹಿವಾಟಿನಲ್ಲಿ ಕೈ ಜೋಡಿಸಿದ. ಈಗ ಪಾದರಸದಂತೆ ಉತ್ತಮವೂ ಘನತೆಯುಕ್ತವೂ ಆದ ಲವಲವಿಕೆಯ ಹೆಚ್ಚಿನ ರೀತಿಯ ವರ್ಚಸ್ಸು ಸೃಷ್ಟಿಸಿದೆ. ಮನಸ್ಸು ಬಂದಂತೆ ಕಟ್ಟಡಗಳನ್ನಾಗಲೀ ಮನೆಯನ್ನು ಅಂದಗೊಳಿಸುವ ನೆಪದಲ್ಲಿ ಅಸ್ತವ್ಯಸ್ತವಾಗಬಾರದು.

ಈಗ ನಗರದಲ್ಲಿ ಜನರನ್ನು ಸೆಳೆಯುವ ದೃಷ್ಟಿಕೋನದಿಂದ ವಿವಿಧ ನಕ್ಷೆಯ ಆಕಾರದ ಓರೆಕೋರೆ ಇದ್ದರೂ ಸೌಂದರ್ಯ ಮಿಂಚುವ ಸುಹಾಸಕರತೆಯೊಂದಿಗೆ ಕಟ್ಟಡಗಳು ಮನೆಗಳು ಅಪಾರ್‌rಮೆಂಟ್‌ಗಳು ತಲೆ ಎತ್ತುತ್ತಿವೆ. ಹಣದ ಮೂಲ ಬಲವಾಗಿದ್ದು ಹಣದ ಹೊಳೆ ಹರಿದು ಬರುತ್ತದೆ. ಬ್ಯಾಂಕ್‌ಗಳು ಅತಿ ಶೀಘ್ರವಾಗಿ ಗೃಹಸಾಲ ನೀಡುವ ಯೋಜನೆಗಳ ಮೂಲಕ ಸಹಕರಿಸುತ್ತಾರೆ. ಆದರೆ ನೆನಪಿಡಬೇಕಾದದ್ದು ಈ ಮನೋಹರ ನೀಲನಕ್ಷೆಗಳಿರುವ ಮನೆಗಳು ವಿನ್ಯಾಸದಲ್ಲಿ ಆಕರ್ಷತೆಯನ್ನು ಹೊಂದಿರುತ್ತದೆ. ಲಾನ್‌ಗಳು ಹೂಗಿಡ್ಗಳು ತರುಲತೆ ಈಜುಕೊಳ ಗಾಜಿನ ಸಂಯೋಜನೆಗಳೆಲ್ಲ ನೋಡಲು ಅದ್ಭುತ. ಆದರೆ ದಿಕ್ಕುಗಳ ವ್ಯತಿರಿಕ್ತ ಸಂಯೋಜನೆಗಳಿಂದ ಮನೆಯೊಳಗಿನ ಜೀವ ಧ್ವನಿಗಳಿಗೆ ದೈನಂದಿನ ಬದುಕಿಗೆ ಅರ್ಥಪೂರ್ಣ ತುಡಿತಗಳೇ ಇರದೆ ವಿಲವಿಲವೆಂಬ ಕನವರಿಕೆ ತುಂಬಿಕೊಂಡಿರುತ್ತದೆ. ಅಭದ್ರತೆಯ ನೀಲನಕ್ಷೆಗಳ ಮೂಲಕ ಕಟ್ಟಲ್ಪಟ್ಟ ಈ ಎಲ್ಲಾ ಕಟ್ಟಡಗಳು ಅಥವಾ ಸಂಕೀರ್ಣಗಳು ವಸತಿಯ ಕಾರಣಕ್ಕೆ ಬೇಕಾದ ಸ್ಪಂದನಗಳಿಗೆ ನ್ಯಾಯ ಒದಗಿಸಲಾರವು. ಆದರೂ ಜನ ಅಭದ್ರತೆಯ ಕುರಿತು ಮೊದಲು ಯೋಚಿಸಲಾರರು.

ಕಾಲ ಮಿಂಚಿದ ಮೇಲೆ ಯೋಚಿಸಿದರೆ ಪ್ರಯೋಜನವೂ ಆಗಲಾರದು.

– ಅನಂತಶಾಸ್ತ್ರಿ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.