ಇಂಟ್ರೂಡೆರ್‌ ರೈಡ್‌ ಕಂಫ‌ರ್ಟ್‌


Team Udayavani, Jan 29, 2018, 12:15 PM IST

29-20.jpg

ವಿನ್ಯಾಸದಲ್ಲಿ ಯಾವುದೇ ಬೈಕ್‌ಗಳಿಗೆ ಸವಾಲೊಡ್ಡಬಲ್ಲ ಇಂಟ್ರೂಡೆರ್‌ 155ಸಿಸಿ ಸಾಮರ್ಥ್ಯ ಹೊಂದಿದೆ. ಇಂಟ್ರೂಡೆರ್‌ ಪರಿಚಯಿಸುವ ಮೂಲಕ 155ಪ್ಲಸ್‌ ಕ್ರೂಸರ್‌ ಸೆಗೆ¾ಂಟ್‌ ಬೈಕ್‌ಗಳ ತಯಾರಿಕೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿರುವ ಸುಜುಕಿ ಕಂಪನಿ ತನ್ನತನ ಉಳಿಸಿಕೊಳ್ಳುವ ಪಯತ್ನ ನಡೆಸಿದೆ. 

ಬೈಕ್‌, ಸ್ಕೂಟರ್‌ ಕೊಳ್ಳಬೇಕಾದ ಸಂದರ್ಭದಲ್ಲಿ ಸಾಮಾನ್ಯವಾಗಿ ಬೆಲೆಗಿಂತಲೂ ವಾಹನ ಕೊಳ್ಳುವವರ ಅಭಿರುಚಿಗೇ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಬಜೆಟ್‌ ಆಧರಿಸಿ ಅವರ ಆಯ್ಕೆ ಯಾವುದೆನ್ನುವುದು ನಿರ್ಧಾರವಾಗಲಿದೆ. ಗ್ರಾಹಕನ ಅಪೇಕ್ಷೆಯಂತೆ ಹಲವು ಬದಲಾವಣೆಯೊಂದಿಗೆ ಆಗಾಗ ಹೊಸ ಬೈಕ್‌ಗಳು ಪರಿಚಯವಾಗುತ್ತಲೇ ಇರುತ್ತವೆ. ಹೀಗೆ ಮರುಜೀವ ಪಡೆದಿರುವ ಬೈಕ್‌ಗಳ ಸಾಲಿನಲ್ಲಿ ಈಗ ಸುಜುಕಿ ಕಂಪನಿಯ ಇಂಟ್ರೂಡೆರ್‌ ಕೂಡ ಒಂದು.

ವಿನ್ಯಾಸದಲ್ಲಿ ಯಾವುದೇ ಬೈಕ್‌ಗಳಿಗೆ ಸವಾಲೊಡ್ಡಬಲ್ಲ ಇಂಟ್ರೂಡೆರ್‌ 155ಸಿಸಿ ಸಾಮರ್ಥ್ಯ ಹೊಂದಿದೆ. ಇಂಟ್ರೂಡೆರ್‌ ಪರಿಚಯಿಸುವ ಮೂಲಕ 155ಪ್ಲಸ್‌ ಕ್ರೂಸರ್‌ ಸೆಗೆ¾ಂಟ್‌ ಬೈಕ್‌ಗಳ ತಯಾರಿಕೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿರುವ ಸುಜುಕಿ ಕಂಪನಿ ತನ್ನತನ ಉಳಿಸಿಕೊಳ್ಳುವ ಪಯತ್ನ ನಡೆಸಿದೆ. ಜನಪ್ರಿಯತೆ ಗಳಿಸಿದ ಗಿಕ್ಸರ್‌ ಬೈಕ್‌ನಲ್ಲಿ ಬಳಸಲಾದ ಎಂಜಿನ್‌ನಲ್ಲಿಯೇ ಸಣ್ಣಪುಟ್ಟ ಬದಲಾವಣೆ ಮಾಡಿ ಇಂಟ್ರೂಡೆರ್‌ ಬೈಕ್‌ ಅನ್ನು ರಸ್ತೆಗಿಳಿಸಲಾಗಿದೆ.

ಅಷ್ಟಕ್ಕೂ ಇಂಟ್ರೂಡೆರ್‌ಗೆ ಬ್ರ್ಯಾಂಡ್‌ ಸೃಷ್ಟಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. 1985ರಲ್ಲಿಯೇ ತಯಾರಿಕೆ ಆರಂಭಿಸಿದ್ದ ಸುಜುಕಿ 2005ರ ತನಕವೂ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವಂತೆ ನೋಡಿಕೊಂಡು ಬಂದಿತ್ತು. ಈ ಅವಧಿಯಲ್ಲಿ ಹಲವು ಬಾರಿ ವಿನ್ಯಾಸದಲ್ಲಿ ಬದಲಾವಣೆ ಮಾಡಿದೆ.  ಆ ನಂತರದ ದಿನಗಳಲ್ಲಿ ತಯಾರಿಕೆ ನಿಲ್ಲಿಸಿದ್ದ ಸುಜುಕಿ ಕಂಪೆನಿ ಈಗ ಮತ್ತೆ ಭಾರತೀಯ ಗ್ರಾಹಕನ ಮನೆ ಬಾಗಿಲು ತಟ್ಟುತ್ತಿದೆ.  ಇಂಟ್ರೂಡೆರ್‌ ಬೈಕ್‌, ಗ್ಲಾಸ್‌ ಸ್ಪಾರ್ಕ್‌ ಬ್ಲ್ಯಾಕ್‌ ಹಾಗೂ ಮೆಟಾಲಿಕ್‌ ಒರ್ಟ್‌ ಗ್ರೇ ಹಾಗೂ ಮೆಟಾಲಿಕ್‌ ಬ್ಲ್ಯಾಕ್‌ ಬಣ್ಣಗಳಲ್ಲಿ ಲಭ್ಯವಿದೆ.

ಪವರ್‌ಫ‌ುಲ್‌ ಎಂಜಿನ್‌
4ಸ್ಟ್ರೋಕ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ನ 5ಸ್ಪೀಡ್‌ ಗೇರ್‌ಬಾಕ್ಸ್‌ ಹೊಂದಿರುವ ಇಂಟ್ರೂಡೆರ್‌ 14.59ಬಿಎಚ್‌ಪಿ ಪವರ್‌ ಹಾಗೂ 14ಎನ್‌ಎಂ ಟಾರ್ಕ್‌ನೊಂದಿಗೆ 155ಸಿಸಿ ಸಾಮರ್ಥ್ಯ ಹೊಂದಿದೆ. ಏರ್‌ಕೂಲ್ಡ್‌ ಎಂಜಿನ್‌ ಅಳವಡಿಸಿರುವುದರಿಂದ ಸಹಜವಾಗಿ ಎಂಜಿನ್‌ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ.

ಅತ್ಯಾಧುನಿಕ ಸುರಕ್ಷತೆ
ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ ಅಳವಡಿಸಲಾಗಿದೆ.  ಬ್ರೇಕ್‌ ಬಳಕೆ ಮಾಡುವಾಗ ಜಾಗ್ರತೆ ಬಹಳ ಮುಖ್ಯ. ಇದಲ್ಲದೇ, ಎಬಿಎಸ್‌ ವ್ಯವಸ್ಥೆ ಕೂಡ ಹೊಂದಿದೆ. ಮುಂಭಾಗದ ಸಸ್ಪೆನನ್‌ ಟೆಲಿಸ್ಕಾಪಿಕ್‌ ಆಗಿದ್ದು, ಹಿಂಭಾಗದಲ್ಲಿ ಸ್ವಿಂಗ್‌ ಆರ್ಮ್ ಮಾದರಿಯದ್ದಾಗಿದೆ. 

ಬೆಂಗಳೂರಿನಲ್ಲಿ ಶೋರೂಂ ಬೆಲೆ: 1.05 ಲಕ್ಷ ರೂ.
ಪ್ರತಿ ಲೀಟರ್‌ಗೆ ಮೈಲೇಜ್‌: 44 ಕಿ.ಮೀ.

ಹೇಗಿದೆ ಇಂಟ್ರೂಡೆರ್‌?
– ಕರ್ಬ್ ವೇಟ್‌ 148 ಕೆ.ಜಿ.
– ಉದ್ದ 2130ಮಿ.ಮೀ./ ಅಗಲ 805ಮಿ.ಮೀ./ ಎತ್ತರ 1095ಮಿ.ಮೀ.
– ಗ್ರೌಂಡ್‌ ಕ್ಲಿಯರೆನ್ಸ್‌ 170ಮಿ.ಮೀ.
– ಇಂಧನ ಶೇಖರಣೆ: ಗರಿಷ್ಠ 11 ಲೀ.

ಬೈಕ್‌, ಸ್ಕೂಟರ್‌ಗಳ ಬೆಲೆ ಹೆಚ್ಚಳ?
ಏಪ್ರಿಲ್‌ ವೇಳೆಗೆ ಹೊಸ ಬೈಕ್‌ ಹಾಗೂ ಸ್ಕೂಟರ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆ ಹೊಸ ಬೆಲೆಗೆ  ಗ್ರಾಹಕರನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಕಂಪನಿ ಈಗಾಗಲೇ ತಯಾರಿ ಆರಂಭಿಸಿದೆ. ಕಾಂಬಿ ಬ್ರೇಕಿಂಗ್‌ ಸಿಸ್ಟಮ್‌ ಹಾಗೂ ಎಬಿಎಸ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಏಪ್ರಿಲ್‌ 1ರಿಂದಲೇ ಇದು ಜಾರಿಗೆ ಬರಬೇಕೆಂದು ಹೇಳಿದ್ದರಿಂದ ದ್ವಿಚಕ್ರ ವಾಹನ ಕಂಪನಿಗಳು ಅನಿವಾರ್ಯವಾಗಿ ಬೆಲೆ ಹೆಚ್ಚಿಸುವ ಎಲ್ಲಾ ಸಾಧ್ಯತೆಗಳಿವೆ.

ಗಣಪತಿ ಅಗ್ನಿಹೋತ್ರಿ ಅಂತಲೇ ಇರಲಿ…

ಟಾಪ್ ನ್ಯೂಸ್

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.