ಸಾಲದ ಸೋಲು : ಬೇಡಿಕೆ ಕಳೆದುಕೊಂಡ ಬ್ಯಾಂಕ್‌ ಸಾಲ


Team Udayavani, May 11, 2020, 12:38 PM IST

ಸಾಲದ ಸೋಲು : ಬೇಡಿಕೆ ಕಳೆದುಕೊಂಡ ಬ್ಯಾಂಕ್‌ ಸಾಲ

ಸಾಂದರ್ಭಿಕ ಚಿತ್ರ

ಬ್ಯಾಂಕುಗಳಲ್ಲಿ ಸಾಲ ದೊರಕುತ್ತಿಲ್ಲ. ಗ್ರಾಹಕರ ಸಾಲದ ಬೇಡಿಕೆಗೆ, ಬ್ಯಾಂಕುಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕೇಳಿದ ಪ್ರಮಾಣದಲ್ಲಿ ಸಾಲ ಮಂಜೂರಿ ಮಾಡುತ್ತಿಲ್ಲ…- ಇದು, ತೀರಾ ಇತ್ತಿಚಿನವರೆಗೆ ಕೇಳಿಬರುತ್ತಿದ್ದ ಸಾಮಾನ್ಯ ದೂರು. ಆದರೆ ಈಗಿನ ಸುದ್ದಿಯೇ ಬೇರೆ. ಈಗ ಬ್ಯಾಂಕ್‌ಗಳು ಉದ್ಯಮ ನಡೆಸುವವರಿಗೆ ಸಾಲ ಕೊಡಲು ಸಿದ್ಧವಾಗಿವೆ. ಆದರೆ, ಸಾಲ ಪಡೆಯಲು ಹೆಚ್ಚಿನ ಜನ ಉತ್ಸಾಹ ತೋರುತ್ತಿಲ್ಲ. ಕಾರಣವಿಷ್ಟೇ: ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದ ನಂತರ, ಔದ್ಯಮಿಕ ಚಟುವಟಿಕೆಗಳು, ಉದ್ದಿಮೆ ವ್ಯವಹಾರಗಳು ಕಳೆಗುಂದಿವೆ. ಸಣ್ಣಪುಟ್ಟ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ. ಪರಿಣಾಮ, ಕೈಗಾರಿಕಾ ವಲಯದ ಅರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಉತ್ಪಾದನೆ ನಿಂತಿದೆ.

ಗೋಡೌನ್‌ಗಳಲ್ಲಿರುವ ಸ್ಟಾಕ್‌ಗಳು ಕರಗುತ್ತಿಲ್ಲ. ನಿತ್ಯ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಬಿಟ್ಟು, ಬೇರೆ ವಸ್ತುಗಳಿಗೆ ಖರೀದಿದಾರರಿಲ್ಲ. ಉತ್ಪಾದನೆ- ಸಂಪಾದನೆ- ಲಾಭ- ಇದ್ಯಾವುದೂ ಇಲ್ಲದ ಕಾರಣದಿಂದ, ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ. ಅರ್ಥಿಕ ಮತ್ತು ಔದ್ಯಮಿಕ ಚಟುವಟಿಕೆಗಳು ಕ್ರಿಯಾಶೀಲವಾಗುವ ಬಗೆಗೆ, ದೃಢವಾದ ಮಾಹಿತಿ ಇಲ್ಲ. ಸಣ್ಣ ಉದ್ಯಮ ನಡೆಸುವವರಿಗೆ ಕೊಡುತ್ತಿದ್ದ ಸಾಲದ ಮಿತಿಯನ್ನು, ಬ್ಯಾಂಕ್‌ಗಳು ಆರು ತಿಂಗಳ ಹಿಂದೆಯೇ ಹೆಚ್ಚಿಸಿವೆ. ಆದರೆ, ಸಾಲ ಪಡೆಯಲು ಉದ್ಯಮಿಗಳೂ ಆಸಕ್ತಿ ತೋರಿಸಿಲ್ಲ. ಪರಿಣಾಮ, ಆ ಹಣ ಕೂಡ ಹಾಗೆಯೇ ಉಳಿದುಹೋಗಿದೆ. ಠೇವಣಿ ಹಣವೇ ಬಳಕೆಯಾಗದಿರುವುದು, ಬ್ಯಾಂಕಿನ ಆದಾಯದ ಮೇಲೆ ಬಾರೀ ಪರಿಣಾಮ ಬೀರಿದೆ. ಬ್ಯಾಂಕ್‌ಗಳು ರಿಸರ್ವ್‌ ಬ್ಯಾಂಕ್‌ನಲ್ಲಿ ರಿವರ್ಸ್‌ ರೆಪೋ ಇರಿಸುವುದು, ಅಥವಾ ತಮ್ಮಲ್ಲಿಯೇ ಸುಮ್ಮನೆ ಇಟ್ಟುಕೊಳ್ಳುವುದು, ಬ್ಯಾಂಕಿನ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ.

ಬ್ಯಾಂಕ್‌ಗೆ ಜಮಾ ಆದ ಹಣ, ರೊಟೇಷನ್‌ ರೀತಿಯಲ್ಲಿ ಖಾಲಿಯಾಗುತ್ತಾ ಇರಬೇಕು. ಆಗ ಮಾತ್ರ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿ ಇರುತ್ತದೆ. ಆದರೆ, ಈಗ
ಬ್ಯಾಂಕ್‌ಗಳೇ ಸಾಲ ಕೊಡುತ್ತೇವೆ ಅಂದರೂ ಅದನ್ನು ಪಡೆಯಲು ಸಣ್ಣ ಉದ್ಯಮದ ಜನರು ಮುಂದೆ ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲ ಪಡೆದರೆ, ಮುಂದಿನ ತಿಂಗಳಿಂದಲೇ ಕಂತು ಕಟ್ಟಬೇಕು. ಆದರೆ, ಉತ್ಪಾದನೆಯೇ ಇಲ್ಲದಿರುವಾಗ, ಕಂತು ಕಟ್ಟಲು ಹೇಗೆ ಸಾಧ್ಯ? ಈಗ ಸಾಲ ಪಡೆಯುವುದೂ ಬೇಡ, ನಂತರ ಒದ್ದಾಡುವುದೂ ಬೇಡ ಎಂಬುದು ಕೈಗಾರಿಕಾ ವಲಯದ
ಜನರ ಮಾತಾಗಿದೆ.

ಅಷ್ಟಾದರೂ ಬಡ್ಡಿ ಸಿಗಲಿ..!
ನಂಬಲರ್ಹ ಮೂಲಗಳ ಪ್ರಕಾರ, ಇಂದು 8.42 ಲಕ್ಷ ಕೋಟಿ ರೂಪಾಯಿಗಳನ್ನು ರಿಸರ್ವ್‌ ಬ್ಯಾಂಕ್‌ನಲ್ಲಿ “ರಿವರ್ಸ್‌ ರೆಪೋ’ ಅಡಿಯಲ್ಲಿ ಬ್ಯಾಂಕ್‌ಗಳು ಇರಿಸಿವೆಯಂತೆ. ಈ ಠೇವಣಿಗೆ ರಿಸರ್ವ್‌ ಬ್ಯಾಂಕ್‌ನಿಂದ ಕೇವಲ ಶೇ.3.75 ಬಡ್ಡಿಯನ್ನು ಪಡೆಯುತ್ತವೆ. ದುಡಿತವಿಲ್ಲದೇ, ಅದಾಯಗಳಿಸದೆ, ಸ್ಟಾಕ್‌ ರೀತಿಯಲ್ಲಿ ಬಿದ್ದಿರುವ ಈ ಹಣಕ್ಕೆ, ಕಿಂಚಿತ್ತಾದರೂ ಆದಾಯ ಬರಲಿ
ಉದ್ದೇಶದಿಂದಲೇ ರೆಪೋ ಅಡಿಯಲ್ಲಿ ಹಣ ಇಡಲಾಗಿದೆ ಎಂದು ಅರ್ಥಿಕ ತಜ್ಞರು ಹೇಳುತ್ತಿದ್ದಾರೆ. ಈ ಬೆಳವಣಿಗೆ, ಬ್ಯಾಂಕಿಂಗ್‌ ಇತಿಹಾಸದಲ್ಲೇ ಅಪರೂಪ ಎನ್ನಬಹುದು.

ರಮಾನಂದ ಶರ್ಮಾ

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.