ಪೇ ಕಟ್ ಪ್ಲ್ಯಾನ್


Team Udayavani, May 11, 2020, 3:41 PM IST

ಪೇ ಕಟ್ ಪ್ಲ್ಯಾನ್

ಸಾಂದರ್ಭಿಕ ಚಿತ್ರ

ಲಾಕ್‌ಡೌನ್‌ನಿಂದಾಗಿ, ದೇಶದ ಆರ್ಥಿಕತೆ ನಿಂತ ನೀರಾಗಿದೆ. ಉದ್ಯೋಗ ಕಡಿತ, ಸಂಬಳ ಕಡಿತದ ಸುದ್ದಿಗಳು, ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳು ನಿಜವಾಗುವ ಮುನ್ನ, ಎಂಥಾ ಪ್ರತಿಕೂಲ ಪರಿಸ್ಥಿತಿಯನ್ನಾದರೂ ಎದುರಿಸಲು, ನಾವು ಸಿದ್ಧರಿರಬೇಕು. ಅಂಥದೊಂದು ಸಿದ್ಧತೆ, ಬದುಕಿಗೆ ಧೈರ್ಯ ತುಂಬುತ್ತದೆ. ನಿರಾತಂಕದ ಜೀವನ, ಈ ಸಂದರ್ಭದಲ್ಲಿ ಅಗತ್ಯವಿದೆ. ಸಂಬಳ ಕಡಿತಗೊಂಡ ಸಮಯದಲ್ಲಿ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು, ಇಲ್ಲಿ ನೀಡುತ್ತಿದ್ದೇವೆ.

1 ಇ.ಎಂ.ಐ. ಮುಂದೂಡಿಕೆ
ಇಂಥಾ ಸಮಯದಲ್ಲಿ ಇಎಂಐ, ಸಾಲದ ಕಂತು ಕಟ್ಟುವುದು, ಹೊರೆಯಾಗಿ ಪರಿಣಮಿಸಬಹುದು. ಹೀಗಾಗಿ, ಮೊರಾಟೇರಿಯಂ (ಪೋಸ್ಟ್ ಫೋನ್‌ ಸವಲತ್ತು) ಆಯ್ಕೆಯನ್ನು ಆರಿಸಿಕೊಳ್ಳಬಹುದು. ಆರ್‌ಬಿಐ ಸೂಚನೆಯಂತೆ, ಬ್ಯಾಂಕುಗಳು ಈಗಾಗಲೇ ಮೂರು ತಿಂಗಳ ವಿನಾಯಿತಿ ಸವಲತ್ತನ್ನು ಗ್ರಾಹಕರಿಗೆ ಒದಗಿಸಿವೆ. ಒಂದು ವಿಚಾರವನ್ನು ಗ್ರಾಹಕರು ನೆನಪಿಡಬೇಕು. ಇದು ಇ.ಎಂ.ಐ. ಹಾಲಿಡೇ ಅಲ್ಲ. ಕಂತು ಕಟ್ಟುವುದಕ್ಕೆ ವಿನಾಯಿತಿ ನೀಡಲಾಗಿದ್ದರೂ, ತಿಂಗಳ ಬಡ್ಡಿಗೆ ವಿನಾಯಿತಿ ಇಲ್ಲ. ಅದು ಸೇರುತ್ತಾ ಹೋಗುತ್ತದೆ. ಹಾಗಿದ್ದೂ ಹಣದ ಅಗತ್ಯ, ತುರ್ತು ಇದ್ದವರಿಗೆ ಈ ಸವಲತ್ತು ಸಹಕಾರಿ.

2 ಹೂಡಿಕೆಗೆ ಅಲ್ಪವಿರಾಮ
ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಹೂಡಿಕೆ ಐಷಾರಾಮವೇ ಸರಿ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾದೆ, ಈ ಸಂದರ್ಭಕ್ಕೆ ಸರಿಹೊಂದುತ್ತದೆ. ಈ ಸಂದರ್ಭದಲ್ಲಿ, ಹೂಡಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸು ವುದರಿಂದ, ತೊಂದರೆ ಏನೂ ಒದಗಿ ಬರುವುದಿಲ್ಲ. ಆ ಹಣವನ್ನು ಮುಖ್ಯ ಸಂಗತಿಗಳಿಗೆಂದು ಮೀಸಲಿಡಬಹುದು. ಸಂಬಳ ಕಡಿತಗೊಂಡರೂ, ಅದು ತಾತ್ಕಾಲಿಕವಷ್ಟೇ. ನಾಳೆ ಮಾರುಕಟ್ಟೆ ಪ್ರಗತಿ ಕಂಡರೆ, ಕಡಿತಗೊಂಡ ಮೊತ್ತವನ್ನು ಮರುಪಾವತಿಸುವ ನಿಟ್ಟಿನಲ್ಲಿ ಸಂಸ್ಥೆಗಳು ವಿಚಾರ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ, ಕೈಯಲ್ಲಿ ಹಣ ಓಡಾಡುವ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಚೆನ್ನ.

3 ಚಿಕ್ಕ ಪುಟ್ಟ ಗುರಿ ಹಾಕಿಕೊಳ್ಳಿ
ನಮ್ಮಲ್ಲಿ ಅನೇಕರಿಗೆ, ದೀರ್ಘಾವಧಿಯ ಪ್ಲ್ಯಾನುಗಳನ್ನು ಮಾಡಿ ಅಭ್ಯಾಸ. ಅದು ನಿಜಕ್ಕೂ ಒಳ್ಳೆಯ ಅಭ್ಯಾಸವೇ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ, ಅದು ಹೊರೆಯಾಗಿ ಪರಿಣಮಿಸಬಹುದು. ಈ ಸಮಯದಲ್ಲಿ, ವರ್ಷದ ನಂತರ ಫ‌ಲ ನೀಡುವ ಯೋಜನೆಗಿಂತ, ಮುಂದಿನ ವಾರ, ಅಥವಾ ಮುಂದಿನ ತಿಂಗಳು ಉಪಯೋಗಕ್ಕೆ ಬರುವಂಥ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ. ಹೀಗಾಗಿ, ತಿಂಗಳ ಖರ್ಚು ಎಷ್ಟು ಎಂಬುದನ್ನು ಕುಳಿತು ಲೆಕ್ಕ ಮಾಡಿ. ಎಲ್ಲಾ ರೀತಿಯ ಚಿಂತನೆ ನಡೆಸುವುದಕ್ಕೆ ಇದು ಸರಿಯಾದ ಸಮಯ.

4 ಅನಗತ್ಯ ಖರ್ಚುಗಳಿಗೆ ಕತ್ತರಿ
ಯಾವುದು ಅಗತ್ಯ, ಯಾವುದು ಅನಗತ್ಯ ಎನ್ನುವುದನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಈ ಹಿಂದೆ ಅಗತ್ಯ ಎಂದು ತಿಳಿದಿದ್ದ ವೆಚ್ಚಗಳೆಲ್ಲವೂ, ಇಂದಿನ ಸಂದರ್ಭದಲ್ಲಿ ಅನಗತ್ಯ
ಎಂದು ತೋರಬಹುದು. ಹೀಗಾಗಿ, ಬಹಳ ಹಿಂದೆಯೇ ಇಂಥದ್ದೊಂದು ಪಟ್ಟಿ ತಯಾರಿಸಿಟ್ಟುಕೊಂಡಿದ್ದರೂ, ಇವತ್ತಿನ ದಿನದಲ್ಲಿ ಅದನ್ನು ಮರು ರೂಪಿಸಬೇಕಾದ ಅಗತ್ಯವಿದೆ. ಈ ದಿನಗಳಲ್ಲಿ ಕಂಫರ್ಟ್‌ ಗಿಂತಲೂ ಮೂಲಭೂತ ಸವಲತ್ತುಗಳತ್ತ ಗಮನ ಹರಿಸುವುದು ಒಳ್ಳೆಯದು.

ಟಾಪ್ ನ್ಯೂಸ್

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.