ಸ್ವಿಫ್ಟ್ ನ್ಯೂ ಟೇಸ್ಟ್‌


Team Udayavani, Feb 19, 2018, 8:15 AM IST

b-6.jpg

ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಹಳೆಯ ಸ್ವಿಫ್ಟ್ಗಿಂತಲೂ ಉದ್ದದಲ್ಲಿ 100ಮಿ.ಮೀ. ಚಿಕ್ಕದು. ಅಗಲದಲ್ಲಿ 40ಮಿ.ಮೀ. ದೊಡ್ಡದಾಗಿದೆ. ಇನ್ನು ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಕಳೆದ ವಾರ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋ ಹೊಸ ಕಾರು, ಬೈಕ್‌, ಸ್ಕೂಟರ್‌ಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಯಿತು. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಗಟ್ಟಿಯಾಗಿ ತಳವೂರಿರುವ ಪ್ರತಿಷ್ಠಿತ ಕಂಪನಿಗಳು ಇದನ್ನು ತಮ್ಮ ಹೊಸ ಉತ್ಪಾದನೆಯ ವಾಹನಗಳ ಪ್ರಚಾರಕ್ಕೆ ಚೆನ್ನಾಗಿಯೇ ಉಪಯೋಗಿಸಿಕೊಂಡಿವೆ.

ಹಾಗೇ ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರುಗಳಲ್ಲಿ ಒಂದಾದ ಸ್ವಿಫ್ಟ್ನ ಹೊಸ ಆವೃತ್ತಿಯನ್ನು ಇದೇ ವೇದಿಕೆಯಲ್ಲಿ ಪರಿಚಯಿಸಿದೆ. ಬಹುದಿನಗಳಿಂದ ನಿರೀಕ್ಷಿಸಲಾಗಿದ್ದ ನ್ಯೂ ಸ್ವಿಫ್ಟ್, ಹೊರ ನೋಟಕ್ಕೆ ಆಕರ್ಷಣೀಯವಾಗಿದೆ. ಹೊಸ ಜನರೇಷನ್‌ನ ಬೇಡಿಕೆಗಳಿಗೆ ತಕ್ಕಂತೆ ಒಂದಿಷ್ಟು ಬದಲಾವಣೆಗಳೊಂದಿಗೆ ಇದನ್ನು ಪರಿಚಯಿಸಲಾಗಿದೆ. ಅತ್ಯಂತ ಗಮನಾರ್ಹ ಅಂಶ ಏನೆಂದರೆ, ಓಪನ್‌ ಟಾಪ್‌ ಕಾರಾಗಿಯೂ ಬಳಸಿಕೊಳ್ಳಬಹುದಾಗಿದೆ.

ಎಕ್ಸ್‌ಟೀರಿಯರ್‌/ಇಂಟೀರಿಯರ್‌
ಕಾರಿನ ಹೊರ ಕವಚದಲ್ಲಿ ಆಗಿರುವ ಬದಲಾವಣೆ ತಕ್ಷಣಕ್ಕೆ ಬೇರೆಯದೇ ಆದ ಅನುಭವ ನೀಡುತ್ತದೆ. ಕಾರಿನ ಮುಂಭಾಗದ ವಿನ್ಯಾಸ ಹಳೆಯ ಸ್ವಿಫ್ಟ್ಗಿಂತಲೂ ಆಕರ್ಷಕ ಮತ್ತು ಸ್ಫೋರ್ಟೀವ್‌. ಹೆಡ್‌ಲ್ಯಾಂಪ್‌, ಫಾಗ್‌ ಲ್ಯಾಂಪ್‌ ವಿನ್ಯಾಸ ಬದಲಾಯಿಸಲಾಗಿದೆ. ಇದಕ್ಕೆ ಹೊಂದಿಕೊಳ್ಳುವಂತೆ ಗ್ರಿಲ್‌ ವಿನ್ಯಾಸವನ್ನೂ ಬದಲಾಯಿಸಲಾಗಿದೆ. ಗ್ರಿಲ್‌ನಲ್ಲಿನ ಷಡಾjಕೃತಿಯ ಜೋಡಣೆ ಮುಂಭಾಗದ ಲುಕ್‌ ಬದಲಾಯಿಸಿದೆ. ಹಾಗೇ ಹಿಂಭಾಗದ ವಿನ್ಯಾಸ ಕೂಡ ಬದಲಾಗಿದ್ದು, ಲ್ಯಾಂಪ್‌ ವಿನ್ಯಾಸ ಮತ್ತು ಬೂಟ್‌ ಸ್ಪೇಸ್‌ನ ಡೋರ್‌ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಲಾಗಿದೆ.

ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಹಳೆಯ ಸ್ವಿಫ್ಟ್ಗಿಂತಲೂ ಉದ್ದದಲ್ಲಿ 100ಮಿ.ಮೀ. ಚಿಕ್ಕದು. ಅಗಲದಲ್ಲಿ 40ಮಿ.ಮೀ. ದೊಡ್ಡದಾಗಿದೆ. ಇನ್ನು ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗ್ರೌಂಡ್‌ ಕ್ಲಿಯರೆನ್ಸ್‌ 7ಮಿ.ಮೀ.ನಷ್ಟು ಕಡಿಮೆ ಮಾಡಲಾಗಿದ್ದರೆ. ಬೂಟ್‌ ಸ್ಪೇಸ್‌ ಮೊದಲಿಗಿಂತ 58 ಲೀಟರ್‌ನಷ್ಟು ಹೆಚ್ಚಿಸಲಾಗಿದೆ.
ಡ್ಯಾಷ್‌ಬೋರ್ಡ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನ ಬಳಕೆಗಾಗಿಯೇ ಒಂದಿಷ್ಟು ಬದಲಾವಣೆ ಮಾಡಿಕೊಂಡಿರುವಂತೆ ಕಾಣಿಸುತ್ತದೆ. ಕಾರಿನ ಉದ್ದಳತೆಯಲ್ಲಿ ಭಾರೀ ಬದಲಾವಣೆ ಮಾಡಿರದ ಕಾರಣ ಲೆಗ್‌ರೂಂನಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಡ್ಯಾಷ್‌ಬೋರ್ಡ್‌ನಲ್ಲಿ ಬದಲಾವಣೆ ಆಗಿರುವ ಕಾರಣ ಗ್ಲೋವ್‌ ಬಾಕ್ಸ್‌ ಈ ಮೊದಲಿನಷ್ಟು ಸ್ಪೇಸಿಯಸ್‌ ಅನಿಸುವುದಿಲ್ಲ.

ಏನೇನಿದೆ ಹೊಸ ತಂತ್ರಜ್ಞಾನ?
ತಂತ್ರಜ್ಞಾನ ಬಳಕೆಯಲ್ಲಿ ಪ್ರಬಲ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಒಂದಿಷ್ಟು ಹೊಸ ಅಳವಡಿಕೆ ಮಾಡಿರುವುದನ್ನು ಕಾಣಬಹುದು. ಎಂಜಿನ್‌ ಸ್ಟಾರ್ಟ್‌/ಆಫ್ಗೆ ಬಟನ್‌ ವ್ಯವಸ್ಥೆ ಮಾಡಲಾಗಿದೆ. ಸುಜುಕಿ ಉತ್ಪಾದನೆಯ 7 ಇಂಚು ಸುತ್ತಳತೆಯ ಸ್ಮಾರ್ಟ್‌ ಇನ್‌ಫೋಟೈನ್‌ಮೆಂಟ್‌ ವ್ಯವಸ್ಥೆ ಅಳವಡಿಸಲಾಗಿದೆ. ಅಂತೆಯೇ ಆಟೋ ಕ್ಲೈಮೇಟ್‌ ವ್ಯವಸ್ಥೆ ಅಳವಡಿಸಲಾಗಿದ್ದು, ಮ್ಯೂಸಿಕ್‌ ಸಿಸ್ಟಮ್‌ ಇನ್ನಷ್ಟು ಗುಣಮಟ್ಟದಿಂದ ಕೂಡಿದೆ. ಬ್ಲೂಟೂತ್‌, ಯುಎಸ್‌ಬಿಗೆ ಅವಕಾಶ ಇದ್ದು, ನೇವಿಗೇಷನ್‌ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಪಾರ್ಕಿಂಗ್‌ಗೆ ಅನುಕೂಲವಾಗುವಂತೆ ಹಿಂಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಇದರ ಚಿತ್ರಣವನ್ನು ಸ್ಕೀನ್‌ನಲ್ಲಿ ವೀಕ್ಷಿಸಲು ಸಾಧ್ಯ. 

ಸುರಕ್ಷತೆಗೆ ಏನೇನಿದೆ?
ಈ ಮೊದಲ ಸ್ವಿಫ್ಟ್ನಲ್ಲಿದ್ದ ಉಳಿದೆಲ್ಲಾ ಸುರಕ್ಷತಾ ವ್ಯವಸ್ಥೆ ಹೊಸ ಸ್ವಿಫ್ಟ್ನಲ್ಲಿಯೂ ಇದೆ. ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್‌ ಬ್ರೇಕ್‌ಫೋರ್ಸ್‌ ಡಿಸ್ಟ್ರಿಬ್ಯೂಷನ್‌ (ಇಬಿಡಿ) ವ್ಯವಸ್ಥೆಯಿಂದ ಕೂಡಿದ ಆ್ಯಂಟಿ ಬ್ರೇಕಿಂಗ್‌ ವ್ಯವಸ್ಥೆ ಹೊಂದಿದೆ. ಬ್ರೇಕ್‌ ಅಸಿಸ್ಟ್‌ ಕೂಡ ಇದ್ದು, ರೋಡ್‌ ಗ್ರಿಪ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 
ಎಂಜಿನ್‌ನಲ್ಲಿ ಬದಲಾವಣೆ ಇಲ್ಲ
ಎಂಜಿನ್‌ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 1.2ಲೀ. ಪೆಟ್ರೋಲ್‌, 1.3ಲೀ. ಡೀಸೆಲ್‌ ಎಂಜಿನ್‌ ಅನ್ನೇ ಉಳಿಸಿಕೊಳ್ಳಲಾಗಿದೆ. ಒಂದು ವಿಶೇಷ ಏನೆಂದರೆ ಹೊಸ ಸ್ವಿಫ್ಟ್ನಲ್ಲಿ ಆಟೋಮೇಟಿಕ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌ (ಎಎಂಟಿ) ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ವರ್ಷನ್‌ಗಳಲ್ಲಿ ಲಭ್ಯ. 

ಎಕ್ಸ್‌ ಶೋ ರೂಂ ಬೆಲೆ: 4.80 ಲಕ್ಷ ರೂ. ನಿಂದ 7.47 ಲಕ್ಷ ರೂ.
ಮೈಲೇಜ್‌: ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ 20 ರಿಂದ 25 ಕಿ.ಮೀ. 

ಹೈಲೈಟ್ಸ್‌
– ಭಾರ ಮೊದಲಿಗಿಂತ 85ಕೆ.ಜಿ.ಯಷ್ಟು ಕಡಿಮೆ
– ಬೆಲೆಯಲ್ಲಿ ಮೊದಲಿಗಿಂತ 20 ರಿಂದ 30 ಸಾವಿರ ರೂ. ಜಾಸ್ತಿ
– ಹುಂಡೈ ಎಲೈಟ್‌ ಐ20, ಗ್ರಾಂಡ್‌ ಐ10, ಡಾಟ್ಸನ್‌ ರೆಡಿಗೋ, ಹೋಂಡಾ ಡಬ್ಲ್ಯುಆರ್‌ವಿ, ರೆನೋ ಕ್ವಿಡ್‌ ಕಾರುಗಳಿಗೆ ನೇರ ಸ್ಪರ್ಧಿ
– ಒಟ್ಟು ಆರು ಬಣ್ಣಗಳಲ್ಲಿ ಲಭ್ಯ

ಗಣಪ‌ತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.