ವಿದ್ಯುತ್‌ ಬಳಸದೇ ನೀರು ಪೂರೈಕೆ!


Team Udayavani, Nov 25, 2019, 4:50 AM IST

NO-POWER-WATER

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ನಿಯಮಿತವಾಗಿ ಇರುವುದಿಲ್ಲ. ಬೆಳೆಗಳಿಗೆ ಸಕಾಲದಲ್ಲಿ ನೀರು ಪೂರೈಸಲು ಆಗುವುದಿಲ್ಲ. ಇಂಥ ಸಮಯದಲ್ಲಿ ನೆರವಾಗುವ ನಿಟ್ಟಿನಲ್ಲಿ ಈ ನೀರೆತ್ತುವ ಯಂತ್ರವನ್ನು ರೂಪಿಸಲಾಗಿದೆ. ಸರಳವಾಗಿರುವ ಈ ಯಂತ್ರವನ್ನು ಚಾಲೂ ಮಾಡಲು ವಿದ್ಯುತ್‌ ಅಗತ್ಯವಿಲ್ಲ. 2 ಎಕರೆ ವಿಸ್ತೀರ್ಣದ ಒಳಗಿನ ಹೊಲ  ಗದ್ದೆ ಹೊಂದಿರುವವರು ಈ ಯಂತ್ರವನ್ನು ಉಪಯೋಗಿಸಿ, ತೆರೆದ ಬಾವಿ, ಕೊಳವೆ ಬಾವಿಯಿಂದ ನೀರನ್ನು ಎತ್ತಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ, ನಗರಪ್ರದೇಶಗಳ ಜನರೂ ಇದನ್ನು ಬಳಸಿಕೊಳ್ಳಬಹುದು. ಬೆಳಿಗ್ಗೆ ವಿದ್ಯುತ್‌ ಕೈಕೊಟ್ಟಂಥ ಸಂದರ್ಭಗಳಲ್ಲಿ, ತುರ್ತು ಇದ್ದಾಗ ಈ ಉಪಕರಣವನ್ನು ಬಳಸಿ ತಾತ್ಕಾಲಿಕ ಅಗತ್ಯಗಳಿಗೆ ನೀರನ್ನು ಪಡೆದುಕೊಳ್ಳಬಹುದು.

ಈ ಯಂತ್ರ, ನೆಲದಿಂದ 100 ಅಡಿ ಆಳದಿಂದ ನೀರನ್ನು ಮೇಲೆತ್ತುತ್ತದೆ. ನೆಲಮಟ್ಟದಲ್ಲಿ ಸುಮಾರು 750 ಅಡಿ ದೂರದವರೆಗೂ ನೀರನ್ನು ಪಂಪ್‌ ಮಾಡಬಹುದು. ಸಣ್ಣಪುಟ್ಟ ಕೈತೋಟವಿದ್ದರೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ಮಹಡಿ ಮನೆಗಳಲ್ಲಾದರೆ ಮೂರನೇ ಅಂತಸ್ತಿನವರೆಗೂ ನೀರು ಪಂಪ್‌ ಮಾಡಬಹುದು.

ಯಂತ್ರದ ಕಾರ್ಯಾಚರಣೆ
ಈ ಯಂತ್ರದಲ್ಲಿ ಪೆಡಲ್‌ಗ‌ಳನ್ನು ಅಳವಡಿಸಲಾಗಿದೆ. ಸೈಕಲ್‌ ತುಳಿಯುವ ಮಾದರಿಯಲ್ಲಿಯೇ ಈ ಯಂತ್ರದಲ್ಲಿರುವ ಪೆಡಲ್‌ಗ‌ಳನ್ನು ತುಳಿದರೆ ಸಾಕು, ನೀರು ಪೂರೈಕೆಯಾಗುತ್ತದೆ. ಈ ನೀರೆತ್ತುವ ಯಂತ್ರವನ್ನು ಬಳಸುವುದರಿಂದ ವ್ಯಾಯಾಮವೂ ಆಗುತ್ತದೆ ಎನ್ನುವುದು ಹೆಗ್ಗಳಿಕೆ. ಹ್ಯಾಂಡ್‌ ಪಂಪ್‌ ಕಾರ್ಯಾಚರಿಸುವ ಮಾದರಿಯಲ್ಲಿಯೇ ಈ ಯಂತ್ರವೂ ಕೆಲಸ ಮಾಡುತ್ತದೆ. ಈ ಪೆಡಲ್‌ಗ‌ಳನ್ನು ನಿರಾಯಾಸವಾಗಿ ತುಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಅರ್ಧ ಗಂಟೆ ಪೆಡಲ್‌ ಮಾಡಿದರೆ ಮೂರು ಸಾವಿರ ಲೀಟರ್‌ ನೀರು ಪೂರೈಕೆಯಾಗುತ್ತದೆ ಎನ್ನಲಾಗಿದೆ! ಈ ಉಪಕರಣ “ಜೈಲಮ್‌’ ಎನ್ನುವ ಹೆಸರಿನಲ್ಲಿ ದೊರೆಯುತ್ತಿದೆ.
ಸಂಪರ್ಕ: 9448334131

 -ಕುಮಾರ ರೈತ

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.