![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
“ಆ್ಯಪಲ್’ನಿಂದ ದೂರವೇ ಉಳಿದು ಬಿಟ್ಟವ!
ವಿಂಡೋ ಸೀಟು
Team Udayavani, May 14, 2019, 6:00 AM IST
![13](https://www.udayavani.com/wp-content/uploads/2019/05/13-6-620x348.jpg)
ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಮಕ್ಕಳಿಗೆ ಬಹುಮಾನಗಳನ್ನು ಕೊಡುವುದು ರೂಢಿ. ಮುದ್ದಾದ ಕೈ ಬರಹ ಇರುವ ಮಕ್ಕಳನ್ನು, ಹೆಚ್ಚು ಅಂಕ ಪಡೆದವರನ್ನು, ಒಂದು ದಿನವೂ ರಜೆ ಹಾಕದವರನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅದರ ಉದ್ದೇಶ. ಈ ವರ್ಷ ತನಗೆ ಒಂದಾದರೂ ಬಹುಮಾನ ಸಿಗಬೇಕು ಎಂಬುದು ಪ್ರತಿ ವಿದ್ಯಾರ್ಥಿಯ ಕನಸಾಗಿರುತ್ತೆ.
ಇಂಗ್ಲೆಂಡ್ನ ಸ್ಯಾಮ್ ಸ್ಟನ್ನಾರ್ಡ್ಗೂ ಆ ಆಸೆಯಿತ್ತು. ಅವನ ಶಾಲೆಯಲ್ಲಿ, ಶೇ. 100ರಷ್ಟು ಹಾಜರಾತಿ ಇರುವ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷವೂ, “ಆ್ಯಪಲ್ ಐ ಪ್ಯಾಡ್’ ಅನ್ನು ಬಹುಮಾನವಾಗಿ ನೀಡುತ್ತಿದ್ದರು. ಸತತ ಐದು ವರ್ಷ, ಒಂದು ದಿನವೂ ಶಾಲೆಗೆ ಚಕ್ಕರ್ ಹೊಡೆಯದ ಸ್ಯಾಮ್ಗೆ ಮಾತ್ರ ಆ್ಯಪಲ್ ಐ ಪ್ಯಾಡ್ ಸಿಗಲೇ ಇಲ್ಲ.
ಯಾಕಂದ್ರೆ, ಶಾಲೆಯವರು ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತಿದ್ದರು. ದುರಾದೃಷ್ಟಕ್ಕೆ, ಮೊದಲ ನಾಲ್ಕು ವರ್ಷವೂ ಲಕ್ಕಿ ಡ್ರಾನಲ್ಲಿ, ಸ್ಯಾಮ್ನ ಹೆಸರು ಇರಲಿಲ್ಲ. ಕೊನೆಯ ವರ್ಷ, ಅವನ ಹೆಸರು ಆಯ್ಕೆಯಾದರೂ, ಶಾಲೆಯವರು ಆ ವರ್ಷ ಬಹುಮಾನವನ್ನೇ ಬದಲಿಸಿಬಿಟ್ಟಿದ್ದರಂತೆ! ಆ ವರ್ಷದ ವಿಜೇತರಿಗೆ ಸಿಕ್ಕಿದ್ದು, ಫೌಂಟನ್ ಪೆನ್ ಮತ್ತು ಸರ್ಟಿಫಿಕೇಟ್ ಮಾತ್ರ.
ಪಾಪ, ಸ್ಯಾಮ್ ಐದು ವರ್ಷಗಳಲ್ಲಿ ಒಂದು ದಿನವೂ ರಜೆ ಹಾಕಲಿಲ್ಲ. ಆತನ ಮನೆಯವರೆಲ್ಲ ಆಗಾಗ ಪ್ರವಾಸಕ್ಕೆ ಹೋಗುತ್ತಿದ್ದರು, ಪಾರ್ಟಿ ಮಾಡುತ್ತಿದ್ದರು. ಸ್ಯಾಮ್ ಅವನ್ನೆಲ್ಲ ಪಕ್ಕಕ್ಕಿಟ್ಟು ಐ ಪ್ಯಾಡ್ ಗೆಲ್ಲುವ ಹಠಕ್ಕೆ ಬಿದ್ದಿದ್ದನಂತೆ. ಪೆನ್ನು ಕೊಡ್ತಾರೆ ಅಂತ ಮೊದಲೇ ಗೊತ್ತಾಗಿದ್ದರೆ, ಈ ವರ್ಷವಾದರೂ ಹೆತ್ತವರ ಜೊತೆ ಟೂರ್ ಹೋಗುತ್ತಿದ್ದೆ ಅಂತ ಕೈ ಕೈ ಹಿಸುಕಿಕೊಳ್ತಾನೆ ಸ್ಯಾಮ್.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.