ಗವಾಹ್‌ ಹೈ ಚಾಂದ್‌ ತಾರೇ ಗವಾಹ್‌ ಹೈ… 


Team Udayavani, Dec 25, 2018, 6:00 AM IST

raji.jpg

“ಪಿಜಿಗೆ ಬರುವುದು ಸ್ವಲ್ಪ ತಡವಾಯ್ತು. ಊಟವೂ ಇಲ್ಲ, ಸಂಜೆ ನಿನ್ನ ಜೊತೆ ಭೇಲ್‌ಪುರಿ ತಿಂದಿದ್ದಷ್ಟೆ. ವಿಪರೀತ ಹಸಿವು. ಎರಡು ಬಿಸ್ಕೆಟ್‌ ತಿಂದು ನೀರು ಕುಡಿದೆ’ ಜೋಲುಮೋರೆಯ ಇಮೋಜಿಯೊಂದಿಗೆ ಹೀಗೊಂದು ಸಂದೇಶವನ್ನೂ ಅವನಿಗೆ ಕಳುಹಿಸಿದಳು. ಅತ್ತ ಕಡೆಯಿಂದ ಸಾಂತ್ವನ ಬರಲಿಲ್ಲ. 

ನಸುಗೋಪದಿಂದಲೇ ಕಣ್ಮುಚ್ಚಿದಳು, ಎಫ್ಎಂ ರೇಡಿಯೋ ಹಚ್ಚಿ…

“ಕನಸಲಿ ನಡೆಸು ಬಿಸಿಲಾದರೆ ಒಲವನೆ  ಬಡಿಸು ಹಸಿವಾದರೆ 

ಜಗವ ಮರೆಸು ನಗುವ ಮುಡಿಸು ನೀ ನನ್ನ ಪ್ರೇಮಿ ಆದರೆ…’  

ಅವಳಿಷ್ಟದ ಹಾಡು ಕೇಳುತ್ತಾ ಕನಸು ಕಾಣತೊಡಗಿದಳು. ಮನಸ್ಸು ಬೆಚ್ಚಗಾಯಿತು. 

ಹತ್ತು ನಿಮಿಷಕ್ಕೆ ಅವನಿಂದ ಮೆಸೇಜ್‌- “ಮೊಬೈಲಿಗೆ ಊಟ ಇರಲಿಲ್ಲ, ತಡವಾದುದ್ದಕ್ಕೆ ಕ್ಷಮಿಸು, ಮಲಗಿಬಿಟ್ಯಾ?’ ಅವಳ ಕೋಪ ಒಮ್ಮೆಲೇ ಕರಗಿತು. “ಎಷ್ಟು ಸಲ ಹೇಳಿದ್ದೀನಿ, ಮೊಬೈಲ್‌ ಚಾರ್ಜ್‌ ವಿಷಯದಲ್ಲಿ ಯಾಮಾರಬೇಡ ಅಂತ. ನಿನ್ನಿಂದ ಉತ್ತರ ಬರದೇ ಹೋದರೆ ತಳಮಳ ಶುರುವಾಗಿಬಿಡುತ್ತೆ… ಇಲ್ಲ, ನಿದ್ದೆ ಹತ್ತಿರಲಿಲ್ಲ…ನೀನು ಬಂದಿದ್ಯಲ್ಲ …ಕನಸಿನಲ್ಲಿ’- ಇವಳು ಕೂತಲ್ಲೇ ನಾಚಿಕೊಂಡು, ತನ್ನಷ್ಟಕ್ಕೇ ನಗುತ್ತಾ, ಹಲ್ಕಿರಿವ ಇಮೋಜಿಯನ್ನೂ ರವಾನಿಸಿದಳು! 

ಅವನು ಹಗುರಾದ. 

ಹಿಂದೆಯೇ ಕೇಳಿದ: “ಏನು ಕನಸು ಕಾಣುತ್ತಿದ್ದೆ?’

“ಇನ್ನೇನು?ಈ ಪಿಜಿ ಸಹವಾಸ ಸಾಕಾಗಿದೆ. ನಮ್ಮದು ಅಂತ ಒಂದು ಗೂಡು ಆದರೆ ಎಷ್ಟು ಚಂದ. ನೀನು ಇಲ್ಲಿಗೆ ಬರೋದು ಯಾವಾಗ, “ನಾನು ನಿನ್ನವಳು’ ಅಂತ ತಲೆ ತಗ್ಗಿಸಿ, ನಾನು ನಾಚುವುದು ಯಾವಾಗ? ಐ ಮಿಸ್‌ ಯು, ಯು ನೋ ದಟ್‌..’
ಇವಳ ಪದಗಳಲ್ಲಿ ಪ್ರೀತಿ ತುಂಬಿತ್ತು. 

“ಇಷ್ಟು ದಿನವೇ ಕಾದಿದ್ದಾಗಿದೆ. ಇವತ್ತೂ ಅಮ್ಮ ಹೇಳಿದರು: “ಇನ್ನು ಒಂದು ತಿಂಗಳು ಕಾಯಿರಿ. ಪುಷ್ಯ ಮಾಸ ಕಳೀಲಿ, ಸಂಕ್ರಾಂತಿ ಬರ್ತಿದ್ದ ಹಾಗೆ ಓಲಗ ಊದಿಸೋಣ ಅಂತ’ ಅವನು ರಮಿಸಿದ..  

ಅವಳು ನರ್ತಿಸುವ ಬಾಲೆಯನ್ನು ರವಾನಿಸಿದಳು ತನ್ನ ಸಂಭ್ರಮವನ್ನು ವ್ಯಕ್ತಪಡಿಸಲು.

ರೇಡಿಯೋದಲ್ಲಿ ಅವಳ ಮೂಡ್‌ಗೆ ತಕ್ಕ ಹಾಡು… 

“ಗವಾಹ್‌ ಹೈ ಚಾಂದ್‌ ತಾರೇ ಗವಾಹ್‌ ಹೈ…’ 

ಅಲ್ಲವೇ, ನನ್ನ ನಿನ್ನ ಪ್ರೀತಿಗೆ ಆ ಚಂದ್ರ ತಾರೆಯರೇ ಸಾಕ್ಷಿ …

– ರಾಜಿ, ಬೆಂಗಳೂರು 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.