ಜೀನ್ಸ್‌ ಗೂಡಿಗೆ ಕೈ ಹಾಕಿ


Team Udayavani, Jun 26, 2018, 6:00 AM IST

t-6.jpg

ಜೀವಶಾಸ್ತ್ರೀಯ ವಿಜ್ಞಾನಿಗಳಿಗೆ ಪ್ರಾಣಿಗಳು ನಿತ್ಯ ಸಂಶೋಧನೆಯ ವಸ್ತು. ಅದರಲ್ಲೂ ಮನುಷ್ಯನ ವಿವಿಧ ಅಂಗರಚನೆ ವಿಷಯಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಉಂಟಾಗುವ ವಂಶವಾಹಿ ಬದಲಾವಣೆಯನ್ನು ಗಮನಿಸುವವರು ಅಥವಾ ಅದರ ಬಗ್ಗೆ ಅಧ್ಯಯನ ನಡೆಸಿ ವಂಶವಾಹಿ ಸಮಸ್ಯೆಗಳನ್ನು ನಿವಾರಿಸುವವರು ಜೆನೆಟಿಸಿಸ್ಟ್‌ಗಳು. 

ಮೊದಲು ಒಂದೇ ಆಗಿದ್ದು ಆನಂತರದಲ್ಲಿ ಟಿಸಿಲೊಡೆದು ಹಲವು ಗುಂಪು- ಪಂಗಡವೇ ಆಗಿ ಹೋಗಿರುವ ಮನುಷ್ಯನಿಗೆ, ಮೂಲಪುರುಷನಿದ್ದಾನೆ ಎಂದು ಸಂಶೋಧನೆಗಳನ್ನು ನಡೆಸಿದಾಗ ನಮಗೆ ದೊರೆತ ಮೂಲವಸ್ತುವೇ “ಬ್ರಹ್ಮಕಣ’. ಇದರಿಂದಲೇ ಮಾನವನ ಸಂತತಿ ಬೆಳೆದುಬಂದಿದೆ. ಇದು ಜಗತ್ತಿನಲ್ಲಿ ಹುಟ್ಟಿದ್ದಲ್ಲ, ಬೇರೆಲ್ಲಿಂದಲೋ ಬಂದಿರಬೇಕು ಎಂಬುದು ವಿಜ್ಞಾನಿಗಳು ತಿಳಿಸಿದ್ದು ಕೆಲವರಿಗೆ ನೆನಪಿರುತ್ತದೆ. ಆದರೆ ಈ ಮಾದರಿಯ ಸಂಶೋಧನೆಯನ್ನು ನಡೆಸಿದವರು ಯಾರು ಎಂದು ಕೇಳ ಬಯಸುವಿರಾದರೆ ಅವರೇ ಜೆನೆಟಿಸಿಸ್ಟ್‌ಗಳು.

ಮಾನವ ಅಥವಾ ಪ್ರಾಣಿಗಳ ಒಂದು ಪೀಳಿಗೆಯಿಂದ ಮತ್ತೂಂದು ಪೀಳಿಗೆಯ ವಂಶವಾಹಿ ಬದಲಾವಣೆಯ ಗುಣಲಕ್ಷಣಗಳ ಪ್ರವಹಿಸುವಿಕೆಯಿಂದ ಆದ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸುವವರು ಜೆನೆಟಿಸಿಸ್ಟ್‌ಗಳು. ಇವರು ಪ್ರಾಣಿ ಅಥವಾ ಮನುಷ್ಯನ ಡಿಎನ್‌ಎ ಮೂಲಕ ಆ ವ್ಯಕ್ತಿ ಅಥವಾ ಪ್ರಾಣಿ ಈ ಹಿಂದೆ ಎಲ್ಲೆಲ್ಲಿ ವಾಸವಾಗಿತ್ತು? ಎಂಥ ಪ್ರದೇಶದಲ್ಲಿ ನೆಲೆಸಿತ್ತು? ಅದರ ವಂಶವಾಹಿ ತಂತುಗಳು ಎಷ್ಟು ಪೀಳಿಗೆ ಅವಸ್ಥಾಂತರವನ್ನು ಕಂಡಿದೆ ಎಂಬುದನ್ನು ಸಂಶೋಧನೆ ಮಾಡಿ ತಿಳಿಸುತ್ತಾರೆ.

ಈ ಕೆಲಸದಲ್ಲಿ ಎಲೆಕ್ಟ್ರಾನ್‌ ಮೈಕ್ರೊಸ್ಕೋಪ್‌, ಸೂಪರ್‌ ಕಂಪ್ಯೂಟರ್‌ಗಳು ಮುಖ್ಯ ಪಾತ್ರ ವಹಿಸುತ್ತವೆ. ಇದಕ್ಕೆ ವರ್ಷಾಂತರ ಕಾಲ ಸಮಯವನ್ನು ಮುಡಿಪಿಟ್ಟು ವಿಜ್ಞಾನಿಗಳು, ಕಾರ್ಯ ನಿರ್ವಹಿಸುತ್ತಾರೆ. ಇವರಲ್ಲಿ ಸಸ್ಯ ಸಂಬಂಧಿತ ವಿಜ್ಞಾನಿಗಳೂ ಇದ್ದು, ಸಸ್ಯದ ತಳಿಗಳನ್ನೂ ಡಿಎನ್‌ಎಗಳನ್ನು ಬದಲಾಯಿಸಿ ಹೆಚ್ಚು ಇಳುವರಿ ತರುವ ತಳಿಗಳನ್ನು ತಯಾರಿಸಿಕೊಡುವುದುಂಟು.

ವಿದ್ಯಾಭ್ಯಾಸ ಹೀಗಿರಲಿ
ಜೆನೆಟಿಸಿಸ್ಟ್‌ ಆಗಲು ವಿಜ್ಞಾನ ವಿಷಯ ಕುರಿತ ಪಿಯುಸಿ ಬಳಿಕ ಜೆನೆಟಿಕ್‌/ಅಗ್ರಿಕಲ್ಚರ್‌/ ಹ್ಯೂಮನ್‌ ಬಯಾಲಜಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದು, ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಜೆನೆಟಿಕ್ಸ್‌ ಮತ್ತು ಪಿಎಚ್‌ಡಿ ಮಾಡಿದರೆ ಜೆನೆಟಿಸಿಸ್ಟ್‌ ಆಗಬಹುದು. ಇನ್ನೊಂದು ವಿಧಾನದಲ್ಲಿ ಪಿಯು ಬಳಿಕ ಹ್ಯೂಮನ್‌ ಬಯಾಲಜಿ ಪದವಿ ಪೂರೈಸಿ, ಜೆನೆಟಿಕ್ಸ್‌ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಮಾಡಿಯೂ ಗುರಿ ಸಾಧಿಸಬಹುದು. ಇದರಲ್ಲಿ ಪಾಪ್ಯುಲೇಷನ್‌ ಜೆನೆಟಿಸಿಸ್ಟ್‌, ಬಯೋ ಜೆನೆಟಿಸಿಸ್ಟ್‌, ಮೊಲಾಕ್ಯುಲರ್‌ ಜೆನೆಟಿಸಿಸ್ಟ್‌, ಸೈಟೋ ಜೆನೆಟಿಸಿಸ್ಟ್‌ ವಿವಿಧ ಮಾದರಿಗಳಿವೆ.

ಕೌಶಲಗಳೂ ಅಗತ್ಯ
ಮಾನವ ಅಥವಾ ಪ್ರಾಣಿವರ್ಗದ ಹುಟ್ಟು ಬೆಳವಣಿಗೆ ಇತಿಹಾಸದ ಅರಿವು ಜೈವಿಕ ಅವಸ್ಥಾಂತರದ ಬಗ್ಗೆ ತಿಳಿವಳಿಕೆ, ಆ ಕ್ಷೇತ್ರದ ಬಗ್ಗೆ ಹೆಚ್ಚಿನ ಅಧ್ಯಯನ ಉತ್ತಮ ಗಣಿತ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯ, ಸಂಶೋಧನೆಯಲ್ಲಿ ಕಾರ್ಯಕ್ಷಮತೆ ಮತ್ತು ಸಹನೆ ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಜವಾಬ್ದಾರಿ ಹೊರುವ ಮತ್ತು ಸವಾಲನ್ನು ಸ್ವೀಕರಿಸುವ ನಾಯಕತ್ವ ಪ್ರವೃತ್ತಿ ಅಗತ್ಯ

ಅವಕಾಶಗಳು
ಮೆಡಿಕಲ್‌ ಸೈನ್ಸ್‌ ಮತ್ತು ಅಗ್ರಿಕಲ್ಚರ್‌ ಸೈನ್ಸ್‌ ಇನ್ಸ್‌ಟಿಟ್ಯೂಟ್‌ ಪ್ರಯೋಗಾಲಯಗಳು
ರಾಷ್ಟ್ರೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಸಂಶೋಧನಾ ವಿಭಾಗ
ಜೆನೆಟಿಕ್‌ ಟೆಸ್ಟಿಂಗ್‌ ಲ್ಯಾಬ್‌ಗಳು
ಇಂಡಿಯನ್‌ ಕೌನ್ಸಿಲ್‌ ಆಫ್ ಮೆಡಿಕಲ್‌ ರೀಸರ್ಚ್‌

ಓದಲು ಕಾಲೇಜುಗಳು
ಆಕ್ಸ್‌ಫ‌ರ್ಡ್‌ ಕಾಲೇಜ್‌ ಆಫ್ ಸೈನ್ಸ್‌, ಎಚ್‌ಎಸ್‌ಆರ್‌ ಲೇಔಟ್‌, ಬೆಂಗಳೂರು
ಇಂಡಿಯನ್‌ ಅಕಾಡೆಮಿ ಡಿಗ್ರಿ ಕಾಲೇಜು, ಕಲ್ಯಾಣ ನಗರ, ಬೆಂಗಳೂರು
ಎಂ.ಎಸ್‌ ರಾಮಯ್ಯ ಕಾಲೇಜ್‌ ಆಫ್ ಆರ್ಟ್ಸ್, ಸೈನ್ಸ್‌ ಮತ್ತು ಕಾಮರ್ಸ್‌
ಬೆಂಗಳೂರು ಸಿಟಿ ಕಾಲೇಜು, ಕಲ್ಯಾಣ ನಗರ, ಬೆಂಗಳೂರು
ಸೆಂಟ್‌ ಜಾರ್ಜ್‌ ಕಾಲೇಜ್‌ ಆಫ್ ಮ್ಯಾನೇಜ್‌ಮೆಂಟ್‌, ಸೈನ್ಸ್‌ ಅಂಡ್‌ ನರ್ಸಿಂಗ್‌, ಬಾಣಸವಾಡಿ, ಬೆಂಗಳೂರು
ಆಲ್‌ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌, ನವದೆಹಲಿ

ಎನ್ ಅನಂತನಾಗ್

ಟಾಪ್ ನ್ಯೂಸ್

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.