‘ಗ್ರೂಪ್‌’ ತೇರಾ ಮಸ್ತಾನ

ಅಡ್ಮಿನ್‌ ಸ್ಟೇಷನ್ನಿನ ಕತೆಗಳು

Team Udayavani, May 7, 2019, 6:25 AM IST

Josh–Admin

ಎಷ್ಟೋ ಸಲ ಅಮ್ಮ ಬಯ್ತಾ ಇರ್ತಾರೆ… “ಬರೀ ಮೊಬೈಲ್‌ ಹಿಡ್ಕೊಂಡೇ ಇರ್ತೀಯಲ್ಲಾ… ಸ್ವಲ್ಪ ಓದಿನ ಕಡೆಗೆ ಗಮನ ಕೊಡು’ ಅಂತ. ನಾನೋ… ಸುಮ್‌ ಸುಮ್ಮನೆ ನಗ್ತಾ, ಕೈಯಲ್ಲಿ ಗೊಂಬೆ ಆಡಿಸಿದ ಹಾಗೆ ಮೊಬೈಲ್‌ ಹಿಡ್ಕೊಂಡು ಕೂತಿರ್ತೀನಿ. ಆದರೆ, “ನಮ್ಮ ಮುದ್ದು ಕುಟುಂಬ’ ವಾಟ್ಸ್ಯಾಪ್‌ ಗ್ರೂಪ್‌ ರಚನೆಯಾದ ಮೇಲೆ, ಆಗಿದ್ದೇ ಬೇರೆ.

ನಮ್ಮ ಅಮ್ಮನಿಂದ ಹಿಡಿದು ಎಲ್ಲರೂ ಆ ಗ್ರೂಪ್‌ನಲ್ಲಿದ್ದಾರೆ! ಅಮ್ಮನ ಬಳಿ ಕೇಳಿದ್ರೆ, “ಗೊತ್ತಿಲ್ಲ ಕಣೇ… ನಿಮ್ಮ ಅಕ್ಕನೇ ಆಡ್ಮಿನ್ನು… ಅವಳನ್ನೇ ಕೇಳು…’ ಅನ್ನೋ ಉತ್ತರ. ಅಂತೂ ಇಂತೂ ಗ್ರೂಪ್‌ ಸೇರಿಸಿದ್ದ ಮೇಲೆ, “ಹಾಯ್‌’ ಅಂತ ಮೆಸೇಜ್‌ ಹಾಕಲೇಬೇಕಲ್ಲಾ… ಹಾಗೆ ಮೆಸೇಜ್‌ ಮಾಡಿದ್ದೇ ತಡ, ಸಣ್ಣವರಿದ್ದಾಗ ನನ್ನನ್ನು ನೋಡಿದ್ದ ಸಂಬಂಧಿಕರೆಲ್ಲ, ಒಂದೇ ಸಮನೆ “ಹಾಯ್‌ ದೊಡ್ಡ ಪುಟ್ಟಿ… ಹೇಗಿದಿಯಾ?’ ಅಂತ ಮೆಸೇಜ್‌ ಮೇಲೆ ಮೆಸೇಜ್‌. ಇದೇನಪ್ಪಾ… ಎಲ್ಲರ ಮುಂದೆ ಪುಟ್ಟಿ ಅಂತಾದರೂ ಕರೆಯಬಹುದಿತ್ತು. “ದೊಡ್ಡ ಪುಟ್ಟಿ’ ಅಂತಾರಲ್ಲ ಅಂತ, ಅರೆಕ್ಷಣ ಮಂಡೆಬಿಸಿ ಆಯ್ತು.

ಎಲ್ಲರೂ ಒಂದೇ ಸಲ ಅಟ್ಯಾಕ್‌ ಮಾಡೇಬಿಟ್ರಾ. ಪ್ರತಿಯೊಬ್ಬರ ಮಾತಿನಲ್ಲೂ ನನ್ನ ಬಾಲ್ಯದ ದಿನಗಳ ನೆನಪೇ ಇದ್ದವು. ಒಂದೇ ಸಮನೆ ಮೆಸೇಜುಗಳನ್ನು ನೋಡಿ ಕಿರಿಕಿರಿಯಾದರೂ, ಅಡುಗೆ ರೆಸಿಪಿಯಿಂದ ಹಿಡಿದು ಏನೇನೆಲ್ಲಾ ಆ ದಿನ ಮಾಡಿದ್ವಿ ಎಂಬ ಅವರ ದಿನಚರಿ ಪಟ್ಟಿ ನೋಡಿದಾಗ, ತುಂಬಾ ಹಿತವೆನಿಸುತ್ತಿತ್ತು. ಈಗ ಹೊಸ ಬಟ್ಟೆ ಖರೀದಿಸಿದರೂ ಸಾಕು, “ಗ್ರೂಪ್‌ನಲ್ಲಿ ಹಾಕು’ ಅಂತಾರೆ ಅಮ್ಮ. ಅದೂ ಬಿಡಿ, ಒಂದು ದಿನ ಮೆಸೇಜ್‌ ಮಾಡಿಲ್ಲ ಅಂದ್ರೆ, “ಯಾಕೆ ಮಾಡ್ಲಿಲ್ಲ?’ ಅಂತ ಕೇಳುತ್ತಾರೆ. ಕುಟುಂಬದ ಹಳೇ ಫೋಟೋ ಇದ್ದರೂ ಅದನ್ನೂ ಗ್ರೂಪ್‌ಗೆ ಪೋಸ್ಟ್‌ ಮಾಡ್ತಾರೆ. ಈಗ ನನ್ನ ಅಮ್ಮ, ವಾಟ್ಸ್ಯಾಪ್‌ನಲ್ಲಿ ಅಷ್ಟೊಂದು ಬ್ಯುಸಿ.

— ಯಶಸ್ವಿ ದೇವಾಡಿಗ, ವಿಜಯಪುರ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.